ಮರೆಯಾದ ಸಿತಾರ್ ಮಾಂತ್ರಿಕ -ಪಂ: ರವಿ ಶಂಕರ್ (92)

ಮರೆಯಾದ ಸಿತಾರ್ ಮಾಂತ್ರಿಕ -ಪಂ: ರವಿ ಶಂಕರ್ (92)

ಚಿತ್ರ

 

 
ಮರೆಯಾದ ಸಿತಾರ್ ಮಾಂತ್ರಿಕ -ಪಂ: ರವಿ ಶಂಕರ್
=============================== 
 
 
 
ಸಿತಾರ್ ಮಾಂತ್ರಿಕ -ಪಂಡಿತ್ ರವಿ ಶಂಕರ್(92 ವರ್ಷ) ಅವರು  ನಮ್ಮನ್ನು ಅಗಲಿದ್ದಾರೆ.
 
ನಮ್ಮ ಸಂಗೀತವನ್ನು ಸಾಗರದಾಚೆ  ದಾಟಿಸಿ  ಶೋತೃಗಳನ್ನು  ಹೆಚ್ಚಿಸಿದವರಲ್ಲಿ  ಒಬ್ಬರು..
 
ಅವರ ಅಗಲಿಕೆ  ಭರಿಸುವ ಶಕ್ತಿ ಅವರ ಕುಟುಂಬಕ್ಕೆ  ಮತ್ತು ಅಭಿಮಾನಿ -ಶೋತೃ ವರ್ಗಕ್ಕೆ ಆ ಭಗವಂತ  ನೀಡಲಿ..
 
ಪಂಡಿತ್ ರವಿಶಂಕರ್  ಅವರ  ಆತ್ಮಕ್ಕೆ ಶಾಂತಿ ಸಿಗಲಿ ...
 
====================================
 
 
ಚಿತ್ರ ಮೂಲ: 
Rating
No votes yet

Comments

Submitted by H A Patil Thu, 12/13/2012 - 18:27

ವೆಂಕಟರವರಿಗೆ ವಂದನೆಗಳು
" ಸಿತಾರ ಮಾಂತ್ರಿಕ ಪಂ|| ರವಿ ಶಂಕರ " ಜಗತ್ತಿನ ಪ್ರಥಮ ಶ್ರೇಣಿಯ ಸಿತಾರ ವಾದಕ, ಅವರಿಗೆ ಗ್ರ್ಯಾಮಿ ಅವಾರ್ಡ ಸಹ ದೊರೆತಿತ್ತು, ಅವರು ಹಿಂದಿಯ ' ಅನುರಾಧ ' ಚಿತ್ರಕ್ಕೆ ಸಂಗೀತ ಸಂಯೋಜನೆ ಸಹ ಮಾಡಿದ್ದರು. ಅವರ ಆತ್ಮಕ್ಕೆ ಶಾಂತಿ ದೊರೆಯಲಿ,

Submitted by venkatb83 Thu, 12/13/2012 - 18:43

ಹಿರಿಯರೆ
ಪಂಡಿತ್ .ರವಿ ಶಂಕರ್ ಅವರ ಬಗ್ಗೆ ವಿಸ್ತೃತ ಬರಹ ಬರೆಯಬೇಕಾಗಿತ್ತು,ಆದರೆ ಸೀಮಿತ ಕಾಲವಾಕಾಶದಲ್ಲಿ ಅದು ಸಾಧ್ಯವಾಗದೆ ಬಹುಶ ನೀವು ಆ ಬಗ್ಗೆ ಬರೆಯಬಹುದೆಂದು ಕೆಲವೇ ಸಾಲುಗಳನ್ನು ಸೇರಿಸಿದೆ.

ಚಿತ್ರ ರಂಗದಲ್ಲಿ ಅವರ ಆಸಕ್ತಿ ಹೆಚ್ಚಾಗಿ ಇರಲಿಲ್ಲವೋ ಅಥವಾ ಸಂಗೀತ ನಿರ್ದೇಶಕರು ಬಳಸಿಕೊಳ್ಳಲಿಲ್ಲವೋ ತಿಳಿಯುತ್ತಿಲ್ಲ..ಅನುರಾಧ ಹೊರತಾಗಿ..!!

\|

Submitted by H A Patil Thu, 12/13/2012 - 19:05

In reply to by venkatb83

ವೆಂಕಟ ರವರಿಗೆ ವಂದನೆಗಳು
ನಿಮ್ಮ ಮರುಪ್ರತಿಕ್ರಿಯೆ ಓದಿದೆ, ರವಿಶಂಕರ ಮೂಲತಃ ಒಬ್ಬ ಶಾಸ್ತ್ರೀಯ ಗಾಯನ ಪರಂಪರೆಯ ಸಿತಾರವಾದಕ. 'ಅನುರಾಧ' ಚಿತ್ರಕ್ಕೆ ಅವರು ಒಪ್ಪಿಕೊಂಡದ್ದೂ ಸಹ ಆ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕರ ಒತ್ತಾಸೆಯ ಮೇರೆಗ, ಆ ಚಿತ್ರೆದ ಹಾಡುಗಳ ರಾಗ ಸಂಯೋಜನೆ ಬಹಳ ಸುಂದರವಾಗಿದೆ. ಸಿನೆಮಾದ ಮಿತಿ ಶಾಸ್ತ್ರೀಯ ಸಂಗೀತಗಾರರಿಗೆ ಮತ್ತು ವಾದ್ಯಗಾರರಿಗೆ ಬಹುಶಃ ಒಗ್ಗುವುದಿಲ್ಲ, ಸಿನೆಮಾದ ಪ್ರಭೃತ್ತಿಗಳಿಗೆ ಅವರವೆ ಆದ ಮಾನದಂಡಗಳಿರುತ್ತವೆ, ಮೇಲಾಗಿ ಅವರು ಸಾಮಾನ್ಯ ಪ್ರೇಕ್ಷಕರನ್ನು ರಂಜಿಸ ಬೇಕಿರುತ್ತದೆ, ಹೀಗಾಗಿ ವ್ಯಾಪಾರಿಕರಣದ ಸಿದ್ಧ ಸೂತ್ರಗಳು ಅಂತಹವರಿಗೆ ಒಗ್ಗುವುದಿಲ್ಲ. ಹೀಗಾಗಿ ಶಾಸ್ತ್ರೀಯ ಸಂಗೀತಗಾರರು ಸಿನೆಮಾ ಲೋಕದಲ್ಲಿ ಮಿಂಚಿದ್ದು ಕಡಿಮೆ, ಧನ್ಯವಾದಗಳು.

Submitted by venkatb83 Thu, 12/13/2012 - 19:17

In reply to by H A Patil

ಹಿರಿಯರೇ ತಮ್ಮ ತ್ವರಿತ‌ ಮರು ಪ್ರತಿಕ್ರಿಯೆಗೆ ನನ್ನಿ..

ನೀವ್ ಹೇಳಿದ್ದು ನಿಜ‌.....
ಚಲನ‌ ಚ್ಹಿತ್ರ ರ0ಗಕ್ಕೆ ಅದರದೇ ಆದ‌ ಕಟ್ಟುಪಾಡು ಇವೆ... ಕಲಾವಿದರಿಗೆ ಸ0ಗೀತಗಾರರಿಗೆ ಅದು ಒಗ್ಗೋಲ್ಲ‌...
\|

Submitted by venkatesh Fri, 12/14/2012 - 13:01

In reply to by venkatb83

ರೊಬೀಂದ್ರೊ ಶೊಂಕರ್ ಚೌಧರಿ ಎಂದು ಬಾಲ್ಯದಲ್ಲಿ ನಾಮಧೇಯರಾದ, ಸಿತಾರ್ ಮಾಂತ್ರಿಕ, ಪಂ. ರವಿಶಂಕರ್ ಗೆ ಜೀವಮಾನದ ಸಾಧನೆಗಾಗಿ ಮರಣೋತ್ತರ ಪ್ರತಿಷ್ಠಿತ ಗ್ರಾಮಿ ಪ್ರಶಸ್ತಿಯನ್ನು ಕೊಡಲಾಗುವುದು. ಮೊಟ್ಟಮೊದಲು ಭಾರತೀಯ ಕಲಾವಿದನೊಬ್ಬನಿಗೆ ಸಂದಾಯವಾಗುವ ಈ ಪ್ರತಿಷ್ಠಿತ ಪ್ರಶಸ್ತಿಗೆ ಅವರು ಭಾಜನರಾಗಿರುವುದು ನಮಗೆಲ್ಲಾ ಹೆಮ್ಮೆಯಾಗಿದೆ.

Submitted by venkatesh Fri, 12/14/2012 - 16:43

In reply to by venkatb83

ಪಂ. ರವಿಶಂಕರ್ ವಿಷಯ ಏನಾದರು ಹೆಚ್ಚಿಗೆ, ಹೊಸದನ್ನು ಹೇಳುವುದಾದರೆ ಬರೆಯಿರಿ. ಪಂಜೀ ಬಗ್ಗೆ ನೆಟ್ ನಲ್ಲಿ ಅಪಾರ ಮಾಹಿತಿ ಲಭ್ಯ. ಹೇಳಿದ್ದನ್ನೇ ಹೇಳುವುದು ಬೇಡ.

Submitted by venkatb83 Sat, 12/15/2012 - 16:15

In reply to by venkatesh

ಹಿರಿಯರೇ (ವೆಂಕಟೇಶ್ - ಹೊ ರ ಲಂ ವೆ )-

ಪಂಡಿತ್ ಜೀ ಅವರ ಬಗ್ಗೆ ನೆಟ್ನಲ್ಲಿ ಅಪಾರ ಮಾಹಿತಿ ಚಿತ್ರ ಲಭ್ಯ...
ಹೊಸತಾಗಿ ಬೇರಾರಿಗೂ ಗೊತ್ತಿರದ್ದು ಬರೆಯಲು ಕಷ್ಟ ಸಾಧ್ಯ.

ಹಾಗಾಗಿ ನಾ ಆ ಬಗ್ಗೆ ಬರೆಯದೆ ಅವರ ನಿದನದ ಬಗ್ಗೆ ಕೆಲವು ಸಾಲುಗಳನ್ನು ಬರೆದದ್ದು....
ಹಿರಿಯರಾದ ಹನುಮಂತ ಪಾಟೀಲರು ಈ ಬಗ್ಗೆ ಏನಾದರೂ ಹೇಳುವರೇ ನೋಡುವ..
ತಮ್ಮ ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ..

\|

Submitted by ಗಣೇಶ Tue, 12/25/2012 - 23:50

In reply to by venkatesh

ಪಂ.ರವಿಶಂಕರ್ ನಿಧನರಾದ ಕೂಡಲೇ ತಿಳಿಸಿ, ಸಂಪದಿಗರ ಪರವಾಗಿ ಅವರ ಆತ್ಮಕ್ಕೆ ಶಾಂತಿ ಕೋರಿದ ಸಪ್ತಗಿರಿವಾಸಿಗೆ ಧನ್ಯವಾದಗಳು.
ವೆಂಕಟೇಶರೆ,
>>>ಪಂ. ರವಿಶಂಕರ್ ವಿಷಯ ಏನಾದರು ಹೆಚ್ಚಿಗೆ, ಹೊಸದನ್ನು ಹೇಳುವುದಾದರೆ ಬರೆಯಿರಿ...---------ರವಿಶಂಕರ್ ಬೆಂಗಳೂರಲ್ಲಿ ಕೆಲ ಬಾರಿ ಸಿತಾರ್ ಕಛೇರಿ ನಡೆಸಿದರೂ,ನಾನು ಒಂದಕ್ಕೂ ಹೋಗಿಲ್ಲ!(ಇದು ನೆಟ್‌ನಲ್ಲಿ ಎಲ್ಲೂ ವರದಿಯಾಗಿಲ್ಲ:) ) ಪಾಪ ಜೂನಿಯರ್ ವೆಂಕಟೇಶ್ ಎರಡೆರಡು ಬಾರಿ ಪಾಟೀಲರಿಗೆ ರವಿಶಂಕರ್ ಬಗ್ಗೆ ಬರೆಯಿರಿ ಎಂದು ವಿನಂತಿಸಿದ್ದ. ಅವರೂ ವಿಷಯ ಸಂಗ್ರಹಿಸಿ ಬರೆಯುತ್ತಿದ್ದರೋ ಏನೋ? ನಿಮ್ಮ ಈ ಪ್ರತಿಕ್ರಿಯೆಯಿಂದ (ಹೇಳಿದ್ದನ್ನೇ ಹೇಳುವುದು ಬೇಡ!) ಅವರೂ ಸುಮ್ಮನಾದರು. ಇನ್ನಷ್ಟು ವಿವರ ಸಂಗ್ರಹಿಸಿ ಬರೆ ಎಂದು ಸಪ್ತಗಿರಿವಾಸಿಗೆ ಆದೇಶಿಸಿದ್ದರೆ, ಈಗ ಸಿನೆಮಾಗಳ ವಿಷಯ ಸಂಗ್ರಹಿಸಿ ಬರೆಯುತ್ತಿರುವಂತೆ ವ್ಯಕ್ತಿ ಪರಿಚಯವೂ ಆಸಕ್ತಿಯಿಂದ ಮಾಡುತ್ತಿದ್ದನೋ ಏನೋ...ಎಲ್ಲಕ್ಕೂ ತಣ್ಣೀರು ಹಾಕಿದಿರಿ.
-ಗಣೇಶ.

Submitted by santhu_lm Sat, 12/15/2012 - 16:38

:(