ರಜನೀಕಾಂತ್ ಇವರಿಗೆ ಏನನ್ನುತ್ತಾರೆ

ರಜನೀಕಾಂತ್ ಇವರಿಗೆ ಏನನ್ನುತ್ತಾರೆ

ಹೋದವಾರ ಸೇಲಮ್ ನಿಂದ ಬೆಂಗಳೂರಿಗೆ ಬರುತ್ತಿದ್ದೆವು
ಕಾವೇರಿ ಪಟ್ಟಣಮ್ ನ ಬಳಿಯಲ್ಲಿ ಟೀ ಕುಡಿಯಲು ಕಾರ್ ನಿಲ್ಲಿಸಿದ್ದೆವು.
ಟೀ ಕುಡಿದು ಹೊರಗೆ ಬರುತ್ತಿದ್ದ್ದಂತೆ
ನಮ್ಮ ಕೆ.ಎಸ್.ಅರ್.ಟಿ.ಸಿ ಶಿವಮೊಗ್ಗ ಹರಿಹರ ಕ್ಕೆ ಹೋಗುವ ಬಸ್ ಬಂದಿತು

ಆ ಪ್ರದೇಶದವನೇ ಇರಬೇಕು ಒಬ್ಬ
ಏನೋ ಮೂಟೆಯನ್ನು ಹೊತ್ತು ತಂದಿದ್ದ
ಬಸ್ ಕಂಡಕ್ಟರ್ ಕರ್ನಾಟಕದವನು ಆ ಮೂಟೆಯನ್ನು ಬಸ್ ಮೇಲಿಡಬೇಕೆಂದು ಹೇಳುತ್ತಿದ್ದ
ಈತ ಅದನ್ನು ಬಸ್ ನಲ್ಲಿಡಬೇಕೆಂದು ಹಠ ಮಾಡುತ್ತಿದ್ದ

ಕಂಡಕ್ಟರ್ ಒಪ್ಪದಾಗ
ಏನೋ ತಮಿಳಿನಲ್ಲಿ ಬೈಯ್ತಿದ್ದ
(ಇವರು ಹೇಳಿದ್ದು ನೀವು ಕನ್ನಡಾದವರು ಎಲ್ಲಾವುದಕ್ಕೂ ಗಲಾಟೆ ಮಾಡ್ತೀರ. ಮೊನ್ನೆ ನೀರು ಕೊಡಲ್ಲ ಅಂದಿರಿ, ನೆನ್ನೆ ಜಾಗ ಕೊಡಲ್ಲ ಅಂದ್ರಿ . ಈಗ ಬಸ್ ನಲ್ಲಿ ಜಾಗ ಬಿಡಲ್ಲ ಅಂತೀರಾ? ಅಂತ )
ಅಷ್ಟೆ ಅಲ್ಲದೆ ವಾಂಗೊ, ವಾಡ , ಅಂತ ಎಲ್ಲಾ ಸುತ್ತಮುತ್ತಲ್ಲಿದ್ದ ತಮಿಳಿನ ಜನರನ್ನ ಕರೆದು ಬಸ್ನ ಹ್ಯಾಗೊ ಮುಂದೆ ತಗೋತೀಯ್ ನೋಡೋಣ ಎಂದು ಸವಾಲ್ ಹಾಕಿದ. ಕನಡಕಾರ್ಂಗಳ್ ಆಂತ ಬೈತಾನೆ ಇದ್ದ. ಸುತ್ತ ಮುತ್ತಲಿನ ಎಲ್ಲಾ ಜನ ಅವನ ಬೆಂಬಲಕ್ಕೆ ನಿಂತರು.
ಪಾಪ ಕಂಡಕ್ಟರ ಹಾಗು ಡ್ರೈವರ್ ಅವರನ್ನು ರಮಿಸುವ ಪ್ರಯತ್ನ ಮಾಡುತ್ತಿದ್ದರು.
ನಾವು ಅವರ ಪರವಾಗಿ ಮಾತಾಡೋಣ ಅಂದುಕೊಳ್ಳುತ್ತಿದ್ದಂತೆ
"ಅಂಗೆ ಪಾರ ಡಾ . ಕರ್ನಾಟಕ ವಂಡಿ" ಅಂತ ಒಂದಷ್ಟು ಜನ ನಮ್ಮ ಕಾರಿನ ಬಳಿ ಬಂದರು (ನಮ್ಮದು ಕರ್ನಾಟಕ ರಿಜಿಸ್ತ್ರೇಶನ್)
ಕೂಡಲೆ ಗಾಡಿ ಸ್ಟಾರ್ಟ್ ಮಾಡಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದೆವು.
ಆಮೇಲಾನಾಯ್ತೊ ಅಂತ ತಿಳಿಯಲಿಲ್ಲ

ವಿವಾದದ ಸಮಯದಲ್ಲಿ ಕೊಂಚ ವಿರೋಧ ತೋರಿಸುವ ನಮ್ಮ ಚಳುವಳಿಕಾರರಿಗೆ ಒದೆಯಿರಿ ಎನ್ನುವ ರಜನಿಕಾಂತ್ ತಮ್ಮ ಬೇಳೆ ಬೇಸಿಕೊಳ್ಳಲು ಗಡಿ ನೆಪ ಮಾಡುವ ಇಂತಹ ಅವರ ತಮಿಳುನಾಡಿನ ಗಲಭೆಕೋರರಿಗೆ ಏನು ಮಾಡಬೇಕೆನ್ನುತ್ತಾರೆ?

Rating
No votes yet

Comments