ಐ ಅಮ್ ಆಲ್ವೇಸ್ ಹ್ಯಾಟ್ಸ್‍ಆಫ್ ಎಂದ ಗಾನ ಗಾರುಡಿಗನಿಗೆ ಇದೋ ನಮ್ಮ ಅಂತಿಮ ನಮಸ್ಕಾರ.

ಐ ಅಮ್ ಆಲ್ವೇಸ್ ಹ್ಯಾಟ್ಸ್‍ಆಫ್ ಎಂದ ಗಾನ ಗಾರುಡಿಗನಿಗೆ ಇದೋ ನಮ್ಮ ಅಂತಿಮ ನಮಸ್ಕಾರ.

ಐ ಅಮ್ ಆಲ್ವೇಸ್ ಹ್ಯಾಟ್ಸ್‍ಆಫ್ ಎಂದ ಗಾನ ಗಾರುಡಿಗನಿಗೆ ಇದೋ ನಮ್ಮ ಅಂತಿಮ ನಮಸ್ಕಾರ.


ಪಿ.ಬಿ.ಎಸ್. "ನೊ ಮೋರ್" ಎಂದು ನಿನ್ನೆ ಮೆಸೇಜ್ ಬಂದಿತು. ದಿನ ನಿತ್ಯ ನಲ್ಲಿ ಕೇಳುವ ಕನ್ನಡ ಹಳೆಯ ಹಾಡುಗಳು ಇಂದು ಆ ಶರೀರ ಇಲ್ಲವಾದಾಗ ಅನಿಸುದ್ದು ಶರೀರ ನಶ್ವರ, ಇವರ ಶಾರೀರ ನಮ್ಮ ಜೀವನದ ನೆನಪುಗಳಲಿ ಶಾಶ್ವತ.


೨೦೧೦ ರಲ್ಲಿ ಸಿಂಗಪುರ ಹಾಗೂ ಹೃದಯವಾಹಿನಿ ಪತ್ರಿಕೆ ಮಂಗಳೂರು ನೇತೃತ್ವದಲಿ ನಡೆದ ವಿಶ್ವಕನ್ನಡ ಸಾಂಸ್ಕೃತಿಕ ಸಮ್ಮೇಳನದ ಸಂದರ್ಭದಲ್ಲಿ ಡಾ.ಪಿ. ಬಿ.ಶ್ರೀನಿವಾಸ ಅವರೊಂದಿಗೆ ಸಿಂಗಪುರದ ಸುದ್ಧಿವಾಹಿನಿ ತಂಡದವರು ನಡೆಸಿದ ಚಿಕ್ಕ ಸಂದರ್ಶನದಲ್ಲಿ 


ಸರ್, ಪಿ.ಬಿ.ಎಸ್. ಎಂದಾಕ್ಷಣ ಶ್ರೀಚರಣ, ಟೋಪಿ ಟ್ರೇಡ್‍ಮಾರ್ಕ್? ಎಂದೆ ಅದಕ್ಕೆ


ಪಿ.ಬಿ.ಎಸ್. ನಗುತ್ತಾ ಆ ಟೋಪಿ ನನಗೆ ಒಂದು ಸಮಾರಂಭದಲ್ಲಿ ನೀಡಿದ್ದು(ನೆನಪಿಲ್ಲ). ಅದನ್ನು ನೀಡುವಾಗ ಈ ಟೊಪ್ಪಿಯಲ್ಲಿ ಇರುವುದು  ನಿಮ್ಮ ಗಾನಮಾಧುರ್ಯಕ್ಕೆ ಮಣಿದ ರಸಿಕರ ಪ್ರೀತಿ, ಮೆಚ್ಚುಗೆ, ಪ್ರಶಂಸೆ, ಆದರಗೌರವಾಭಿಮಾನಗಳು ಎಂದರು. ಅದಕ್ಕಾಗಿ ಅದನ್ನು ನಾನು ಶಿರಸಾವಹಿಸಿ ಧರಿಸುತ್ತಿದ್ದೇನೆ.  ಐ ಅಮ್ ಆಲ್ವೇಸ್ ಹ್ಯಾಟ್ಸ್‍ಆಫ್ ಎಂದರು.


ಬ್ಯಾಗ್ ತುಂಬಾ ಪೆನ್ನುಗಳು, ಇಷ್ಟೋಂದು ಪೆನ್ನುಗಳು ಎಂದಾಗ ಒಂದೊಂದು ಪೆನ್ನು ಒಂದೊಂದು ಹಾಡಿನ ಸಂಕೇತ ಎಂದರು. ೮೦ರ ಇಳಿವಯಸ್ಸಿನಲ್ಲೂ ಕುಳಿತಲ್ಲೇ ಕೂತು ಹಾಡು ಬರೆದು ಬೆರಗು ಮೂಡಿಸಿದ್ದರು. ಕೆಲಹೊತ್ತು ಅವರೊಡನೆ ಕಳೆದದ್ದು ನಮ್ಮಗಳ ಪಾಲಿಗೆ ಮರೆಯಲಾಗದ ಅದೊಂದು ಅಮೃತ ಘಳಿಗೆಯಾಗಿತ್ತು. ಭಾಗ್ಯವಂತರು ನಾವೆ ಭಾಗ್ಯವಂತರು.


ಪಿ.ಬಿ.ಎಸ್. ಅವರು ಅನಂತ ಸಾಗರ, ಅವರ ಸುಮಧುರ ಧ್ವನಿಯಿಂದ ಮೂಡಿ ಬಂದಿರುವ ಸಾವಿರಾರು ಹಾಡುಗಳು ನಮ್ಮನ್ನು ಹಿಡಿದಿಟ್ಟು, ಗಂಟಲ್ಲುಬ್ಬಿ ಬರುತ್ತದ್ದೆ. ಕನ್ನಡ ಚಿತ್ರರಂಗಕ್ಕೆ ಶರೀರ ರಾಜ್‌ಕುಮಾರ್, ಶಾರೀರ ಪಿ.ಬಿ.ಶ್ರೀನಿವಾಸ್ - ಹಾಲು-ಜೇನು ಒಂದಾದ ಹಾಗೆ. ಒಂದು ಇನ್ನೊಂದನ್ನು ಬಿಟ್ಟು ಕಲ್ಪಿಸಲಾಗದು. ರಾಜ್‌ಗೆ ಹೇಳಿ ಮಾಡಿಸಿದಂತಿತ್ತು ಪಿ.ಬಿ.ಎಸ್ ಕಂಠಸಿರಿ. ರಾಜ್ ನಟನೆ, ಪಿ.ಬಿ.ಶ್ರೀನಿವಾಸ್ ಕಂಠದಲಿ ಬಂದ ಅಂದಿನ ಮೃದು-ಮಧುರ ಹಾಡುಗಳನ್ನು ಇಂದೂ MP3 ಯಲ್ಲಿ ದಿನಾ ಕೇಳಿ, ಮೆಲುಕು ಹಾಕಿಕೊಂಡು ಆರಾಧಿಸುವವರು ನನ್ನಂಥವರು.


ನಾವೆಲ್ಲಾ ರೇಡಿಯೋ ಜಮಾನದವರು. ನಾವು ಬೆಳೆಯುವ ಕಾಲದಲ್ಲಿ ರೇಡಿಯೋ, ದಿನಪತ್ರಿಕೆಗಳನ್ನು ಬಿಟ್ಟರೆ ಇನ್ಯಾವ ಮಾಧ್ಯಮಗಳೂ ಇರಲಿಲ್ಲ. ಹಳ್ಳಿ-ಹಳ್ಳಿಗಳಲ್ಲಿ ಸಿರಿವಂತ, ಬಡವ ಬಲ್ಲಿದ ಎಂಬ ಭೇದವಿಲ್ಲದೆ ಶ್ರೀಸಾಮಾನ್ಯನಿಗೆ ಮುಟ್ಟುತ್ತಿದ್ದುದು ಸಿನಿಮಾ ಮಾಧ್ಯಮ ಹಾಗೂ ರೇಡಿಯೋ. ರೇಡಿಯೋ ಇದ್ದಲ್ಲಿ ಅವನ ಮನೆಯಲಿ ಸುದ್ದಿ, ಸಿನಿಮಾ ಹಾಡುಗಳು ಕೇಳಲು ಸಂತೆ ಸೇರುತ್ತಿದ್ದ ಕಾಲವದು. ದಿನ ಬೆಳಿಗ್ಗೆ ರೇಡಿಯೋ ಉಲಿಯುತ್ತಿದ್ದ ಸುಪ್ರಭಾತದೊಂದಿಗೆ ರತ್ರಿ ಮುಕ್ತಾಯ ಹಾಡಿ ಶುಭರಾತ್ರಿ ಹೇಳುವವರೆಗೆ ಎಲ್ಲಾ ಕಾರ್ಯಕ್ರಮಗಳೂ ಚಾಚೂ ತಪ್ಪದೆ ಕೇಳುತ್ತಿದ್ದಳು ನನ್ನಮ್ಮ.


ಸಿನಿಮಾದಲಿ ರಾಜ್ ಸರಳ, ಸಜ್ಜನಿಕೆ, ದೇಶಪ್ರೇಮ, ಒಲವು, ಗೌರವ ಮೈಗೂಡಿಸಿಕೊಂಡ ಆದರ್ಶಪ್ರಾಯನಾದರೆ ಹಾಡುಗಳ ಮೂಲಕ ನೀತಿ, ಪ್ರೀತಿ, ಪ್ರೇಮ, ಮಮತೆಗಳನ್ನು ಬಿತ್ತರಿಸುತ್ತಿದ್ದ ಅಶರೀರವಾಣಿ ಪಿ.ಬಿ.ಎಸ್. ಕಂಠ. ಆ ಜಮಾನಾದ ಪ್ರಶಾಂತ ಗಾಯನ, ನೆಚ್ಚಿನ ಹೀರೋ ರಾಜ್‌ಕುಮಾರ್ ಕಲ್ಪನೆ, ಮನದಲಿ ಏಳುತ್ತಿದ್ದವು ನವಿರಾದ ಪ್ರೀತಿಯ ಭಾವನೆಗಳು, ಕಾಣದಿದ್ದ ಇನಿಯನ ಕಲ್ಪನೆಗಳು. ಈ ಕಾರಣಗಳಿಗಾಗಿಯೋ ಏನೋ ಕನ್ನಡದಲಿ ನನ್ನ ಮೆಚ್ಚಿನ ಗಾಯಕನ ಪಟ್ಟಿಯಲಿ ಪಿ.ಬಿ.ಎಸ್., ಹಿಂದಿಯಲ್ಲಿ ರಫಿ ಎಂದೆಂದೂ ಮೊದಲಿಗರು. ಇದು ನನ್ನೊಬ್ಬಳ ಅನಿಸಿಕೆ ಮಾತ್ರ ಅಲ್ಲ, ನಲವತ್ತು-ಐವತ್ತರ ಅಂಚಿನ ಎಲ್ಲರ ಅನಿಸಿಕೆಯೂ ಇರಬಹುದು.


ಇಂದು ಪಿ.ಬಿ.ಎಸ್. ನಮ್ಮೊಂದಿಗೆ ಇಲ್ಲ ಎಂಬುದು ಅರಗಿಸಿಕೊಳ್ಳುವುದು ಕಷ್ಟ. ಆದರೆ ಈ ಶತಮಾನ ಕಂಡ ಅದ್ಭುತ, ಪರಿಪೂರ್ಣ ಗಾಯಕ. ಬಾಗಿಲನು ತೆರೆದು, ಒಲವೆ ಜೀವನ ಸಾಕ್ಷಾತ್ಕಾರ, ಅಪಾರ ಕೀರ್ತಿ ಮೆರೆವ ಭವ್ಯ ನಾಡಿದು, ಇಳಿದು ಬಾ ತಾಯಿ, ಬಾರೆ, ಬಾರೆ, ಆಕಾಶವೆ ಬೀಳಲಿ ಮೇಲೆ ಹೀಗಿ ಬರೆಯುತ್ತಾ ಹೋದಲ್ಲಿ "ಪಿ.ಬಿ.ಎಸ್. ಅವರು ಹಾಡಿದ ನಮ್ಮ ಮೆಚ್ಚಿನ ಚಿತ್ರಗೀತೆಗಳ ಪಟ್ಟಿ ಬೆಳೆದೀತು.


ವೇದಾಂತಿ ಹೇಳಿದನು, ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ, ಎಂದೆಂದೂ ನಿನ್ನನು ಮರೆತು, ಆಕಾಶವೆ ಬೀಳಲಿ, ಆಗದು ಎಂದು ಕೈ ಕಟ್ಟಿ ಕುಳಿತರೆ, ಜನ್ಮ ಜನ್ಮದಾ ಅನುಬಂಧ ಎಂದು ಹಾಡುತ್ತಾ ನಮ್ಮೆಲ್ಲ ಕನ್ನಡಿಗರ ಬದುಕಿನ ಪುಟಗಳಲ್ಲಿ ಶಾಶ್ವತವಾಗಿ ತಮ್ಮ ಶಾರೀರವನು ಕೊಟ್ಟು ಹೋದ ಆ ಹಿರಿಯ ಚೇತನಕ್ಕೆ "ಆಲ್ವೇಸ್ ಹ್ಯಾಟ್ಸ್‍ಆಫ್" ...ಪದುಮನಾಭನ ಪಾದದೊಲುಮೆ ಎನಗಾಯಿತು ಎಂದು ಅಗಲಿದ ಆ ಗಾನಗಾರುಡಿಗನಿಗೆ ನಮ್ಮ ನಿಮ್ಮೆಲ್ಲರ ಅಂತಿಮ ನಮನ.

Comments

Submitted by lpitnal@gmail.com Mon, 04/15/2013 - 13:02

ಐ ಅಮ್ ಆಲ್ವೇಸ್ ಹ್ಯಾಟ್ಸ್‍ಆಫ್ ಎಂದ ಗಾನ ಗಾರುಡಿಗನಿಗೆ ಇದೋ ನಮ್ಮ ಅಂತಿಮ ನಮಸ್ಕಾರ. ವಾಣೀಯವರೇ, ನಮಸ್ಕಾರ. ಅಗಲಿದ ಚೇತನಕ್ಕೆ ನುಡಿನಮನ ಸಲ್ಲಿಸಿದ್ದು, ಅವರ ನೆನಪುಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು . ದೂರದ ಸಿಂಗಪೂರದಲ್ಲಿದ್ದರೂ ಕನ್ನಡ ನೆಲದ ಪ್ರೀತಿಯ ಕಾವು ಉಳಿಸಿಕೊಂಡದ್ದಕ್ಕೆ ಮೊದಲು ಕನ್ನಡಿಗನಾಗಿ ನಿಮಗೆ ಅಭಿನಂದಿಸುತ್ತೇನೆ.
Submitted by venkatb83 Mon, 04/15/2013 - 17:08

ಇಂದಿನ ಸಂಪದದಲ್ಲಿ ಪೀ ಬಿ ಶ್ರೀ ಅವರ ಬಗ್ಗೆ ಒಟ್ಟು ೩ ಬರಹಗಳು ಬಂದಿವೆ ,ನಾಡಿಗರು ಬರೆದದ್ದು ಓದಿ ಪ್ರತಿಕ್ರಿಯಿಸುವುದರೊಳಗೆ ಮತ್ತೆರಡು ಬರಹಗಳೂ ಸೇರಿದವು , ಈ ಎಲ್ಲ ನುಡಿ ನಮನಗಳಲ್ಲಿ ನನ್ನ ಪ್ರತಿಕ್ರಿಯೆ ನಮನ ಸಲ್ಲಿಸುವೆ ,,... ಆಗ ಸುಮಾರು ೧೪ - ೧೫ ಇರ್ಬೇಕು , ಹಳ್ಳಿಯಲ್ಲಿ ಇದ್ದ ಒಂದೋ ಎರಡು ಟಿ ವಿ ಇರುವ ಗೌಡರ ಮನೆಯಲ್ಲಿ ಶನಿವಾರ ಭಾನುವಾರ ಕನ್ನಡ ಹಿಂದಿ ಚಲನ ಚಿತ್ರಗಳನ್ನು ನೋಡಲು ಹೋಗುತ್ತಿದ್ದೆ ,ಆಗೊಮ್ಮೆ ನಾ ನೋಡಿದ್ದು ಬಭ್ರುವಾಹನ ಚಿತ್ರ. ಡಾ :ರಾಜ್ ಅವರು ದ್ವಿ ಪಾತ್ರಗಳಲ್ಲಿ ಎದುರು ಬದುರಾಗಿ ವಾಗ್ಯುದ್ಧ ಮಾಡುತ್ತಾ ಹಾಡುವ ಹಾಡು ನೋಡುತ್ತಾ ಕೇಳುತ್ತ ಅದು ಡಾ:ರಾಜ್ ಅವರೇ ಎರಡು ಧ್ವನಿಗಳಲ್ಲಿ ಹಾಡಿರುವರು ಎಂದು ಯೋಚಿಸಿದ್ದೆ , ಆದರೆ ಅದೊಮ್ಮೆ ಕ್ಯಾಸೆಟ್ ತಂದಾಗ ಅದರಲ್ಲಿ ಡಾ; ರಾಜ್ ಮತ್ತು ಪೀ ಬಿ ಶ್ರೀನಿವಾಸ್ ಎಂದು ಇರುವುದು ನೋಡಿ ಅಚ್ಚರಿ ಆಯ್ತು. ಆಮೇಲೆ ಗಂಧದ ಗುಡಿ , ಕಸ್ತೂರಿ ನಿವಾಸದ ಜನ ಪ್ರಿಯ ಹಾಡುಗಳನ್ನು ಕೇಳುವಾಗ ನೋಡುವಾಗ ರಾಜ್ ಅವರೇ ನೆನಪಿಗೆ ಬರುತ್ತಿದ್ದರು. ಒಂದೇ ರೀತಿ ಕೇಳಿಸುವ ಸ್ವರ ಧ್ವನಿ ಕಾರಣವಾಗಿ ಪೀ ಬಿ ಶ್ರೀ ಅವರಿಗಿಂತ ಡಾ ರಾಜ್ ಅವರೇ ಮಿಂಚಲು ಕಾರಣವಾಯ್ತೆ ? ಎಂಬುದು ನನ್ನ ಸಂಶಯ .. ಆದರೆ ನನತರ ರಾಜ್ ಆವರು ಪೀ ಬಿ ಶ್ರೀ ಅವರನ್ನ ತಮ್ಮ ಶಾರೀರ ಎಂದು -ರಾಜ್ ಅವರಿಗಾಗಿ ನಾವ್ ಹಾಡಿದ್ದು ತಮ್ಮ ಸೌಭಾಗ್ಯ ಎಂದೂ ಪೀ ಬಿ ಶ್ರೀ ತಮ್ಮ ತಮ್ಮ ಘನತೆ ಹಿರಿಮೆ ಔದಾರ್ಯ ಮೆರೆದರು ಜನ ಮಾನಸದಲ್ಲಿ ನೆಲೆಸಿದರು ... ಅದ್ಕೆ ಇರ್ಬೇಕು ಈಗಲೂ ಕೆಲ ರಾಜ್ ಪೀ ಬಿ ಶ್ರೀ ಹಾಡುಗಳನ್ನು ಕೇಳುವಾಗ ಫಕ್ಕನೆ ರಾಜ್ ಮತ್ತು ಪೀ ಬಿ ಶ್ರೀ ಇಬ್ಬರೂ ನೆನಪಾಗುವರು . ಇಂತಹ ಸೌಭಾಗ್ಯತೆ ಅಧ್ರುಸ್ಟ ಎಷ್ಟು ಜನಕೆ ದಕ್ಕೀತು ... ಅದರಲ್ಲೂ ಕಸ್ತೂರಿ ನಿವಾಸ ಮತ್ತು ನಾವಾಡುವ ನುಡಿಯೇ, ಕನ್ನಡ ನಾಡಿನ ವೀರರ ಮಣಿಯ , ಮೂಲಕ ಪೀ ಬಿ ಶ್ರೀ ಸದಾ ಅಮರ .. ಕನ್ನಡ ನಾಡು ನುಡಿ ಸಂಸ್ಕೃತಿ ಮತ್ತು ಜನರ ಪ್ರೀತಿ ಪ್ರೆಮಾಧಾರಕ್ಕೆ ಸೋತ ಪೀ ಬಿ ಶ್ರೀ ಅನ್ದೊಮೆಮ್ ಮೈಸೂರು ಪೇಟದಲ್ಲಿ ಸನ್ಮಾನ ಮಾಡಿದ್ದು ಮರೆಯದೆ ಅದೇ ಪೇಟವನ್ನು ಸದಾ ಧರಿಸುತ್ತಾ ಕನ್ನಡ ನಾಡು ನುಡಿ ಜನರ ಬಗೆಗಿನ ಪ್ರೇಮ ಜಗ ಜ್ಜಾಹೀರು ಮಾಡಿದರು . ಬಹುಶ ಮೈಸೂರು ಪೇಟ ಧರಿಸಿ ಆ ಪೇಟಕ್ಕೂ ಮತ್ತು ತಮ್ಮ ವ್ಯಕ್ತಿತ್ವಕ್ಕೂ ಘನತೆ ಗೌರವ ತಂದುಕೊಟ್ಟ ಕಂಗೊಳಿಸಿದ ಮಹನೀಯರು ರಾಜ್ ಮತ್ತು ಪೀ ಬಿ ಶ್ರೀ .. ಇವರನ್ನು ಟೀ ವಿಯಲ್ಲಿ ಸನ್ಮಾನ ಸಭೆ ಸಮಾರಂಭಗಳಲಿ ಕರೆಯಿಸಿ ಹಾಡಲು ಮಾತಾಡಲು ಹೇಳುವಾಗ ಅದು ಕೇಳೋದು ನೋಡೋದು ಸೊಗಸಾಗಿತ್ತು... ರಾಜ್ ಅವರ ಮರಣಾನಂತರ ಅವರ ನೆನಪಿನಲ್ಲಿ ತಾವೇ ಸ್ವ ರಚಿಸಿ ವಾಚಿಸಿದ ರಾಜ್ ಬಗೆಗಿನ ಕವನ ಓದುವಾಗ ಅವರ ಸ್ವರ ಕಂಪಿಸುತ್ತಿದ್ದುದು ಈಗಲೂ ನೆನಪಿದೆ... ಕಲೆ - ಕಲೆಗಾರ ,ಸಾಹಿತಿ ,ಸಂಗೀತಗಾರ ಗಾಯಕರು ಭೌತಿಕವಾಗಿ ನಮ್ಮಿಂದ ಮರೆಯಾದರೂ ಅವರ ಕೊಡುಗೆ (ನಟನೆ-ಸಾಹಿತ್ಯ ಕೃಷಿ -ಸಂಗೀತ- ಚಿತ್ರ ಕಲೆ ಇತ್ಯಾದಿ)ಮೂಲಕ ಸದಾ ಅಮರ.. ನಾಡಿನ ಸಾಧಕರನ್ನು ಒಬ್ಬೊಬ್ಬರನ್ನಾಗಿ ತನ್ನೆಡೆಗೆ ಕರೆಸಿಕೊಳ್ಳುತ್ತಿರುವ ದೇವನ ದೇವ ಲೋಕದಲ್ಲಿ ಇವರೆಲ್ಲರ ಉಪಸ್ಥಿತಿ ಖಂಡಿತ ಅಲ್ಲಿ ಕಳೆ ಕಟ್ಟಲಿದೆ .... ದೇವಲೋಕದ ಹಿರಿಮೆ ಹೆಚ್ಚಲಿದೆ ... ಪೀ ಬಿ ಶ್ರೀ ಅವರ ಆತ್ಮಕ್ಕೆ ಶಾಂತಿ ಸಿಗಲಿ -ಅವರ ಕುಟುಂಬ ವರ್ಗ ಮತ್ತು ಅಭಿಮಾನಿ ಶೋತೃ ವರ್ಗಕೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತನು ನೀಡಲಿ .. \। /
Submitted by venkatb83 Mon, 04/15/2013 - 17:11

In reply to by venkatb83

ಕಲೆ - ಕಲೆಗಾರ ,ಸಾಹಿತಿ ,ಸಂಗೀತಗಾರ ಗಾಯಕರು ಭೌತಿಕವಾಗಿ ನಮ್ಮಿಂದ ಮರೆಯಾದರೂ ಅವರ ಕೊಡುಗೆ (ನಟನೆ-ಸಾಹಿತ್ಯ ಕೃಷಿ -ಸಂಗೀತ- ಚಿತ್ರ ಕಲೆ ಇತ್ಯಾದಿ)ಮೂಲಕ ಸದಾ ಅಮರ.. ನಾಡಿನ ಸಾಧಕರನ್ನು ಒಬ್ಬೊಬ್ಬರನ್ನಾಗಿ ತನ್ನೆಡೆಗೆ ಕರೆಸಿಕೊಳ್ಳುತ್ತಿರುವ ದೇವನ ದೇವ ಲೋಕದಲ್ಲಿ ಇವರೆಲ್ಲರ ಉಪಸ್ಥಿತಿ ಖಂಡಿತ ಅಲ್ಲಿ ಕಳೆ ಕಟ್ಟಲಿದೆ .... ದೇವಲೋಕದ ಹಿರಿಮೆ ಹೆಚ್ಚಲಿದೆ ... ಪೀ ಬಿ ಶ್ರೀ ಅವರ ಆತ್ಮಕ್ಕೆ ಶಾಂತಿ ಸಿಗಲಿ -ಅವರ ಕುಟುಂಬ ವರ್ಗ ಮತ್ತು ಅಭಿಮಾನಿ ಶೋತೃ ವರ್ಗಕೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತನು ನೀಡಲಿ .. \। /
Submitted by ramvani Tue, 04/16/2013 - 07:18

In reply to by venkatb83

ನಮಸ್ಕಾರ, ಪ್ರತಿಕ್ರಿಯೆಗೆ ವಂದನೆಗಳು. ಆ ಉತ್ತಮ ಗಾಯಕನಿಗೆ ನಾವೆಲ್ಲಾ ನೀಡುವ ಅಕ್ಷರಾಂಜಲಿ ಇದು..೮೩ ವರುಷ ತುಂಬು ಜೀವನ ನಡೆಸಿದರು ಪಿ.ಬಿ.ಎಸ್. ನಗು ನಗುತಾ ನಲೀ ನಲೀ ಎಂದ ಜೀವ ನರಳದೆ, ಪರಾಧೀನರಾಗದೆ ಇಹಲೋಕ ಯಾತ್ರೆ ಮುಗಿಸಿದರು
Submitted by Premashri Tue, 04/16/2013 - 15:24

In reply to by ramvani

<<ಪಿ.ಬಿ.ಎಸ್.ಅವರು ಅನಂತ ಸಾಗರ, ಅವರ ಸುಮಧುರ ಧ್ವನಿಯಿಂದ ಮೂಡಿ ಬಂದಿರುವ ಸಾವಿರಾರು ಹಾಡುಗಳು ನಮ್ಮನ್ನು ಹಿಡಿದಿಟ್ಟು,ಗಂಟಲುಬ್ಬಿ ಬರುತ್ತದೆ>> ನಿಜ ವಾಣಿಯವರೆ.ನುಡಿನಮನಕ್ಕೆ ಧನ್ಯವಾದಗಳು.ಗಾನ ಗಾರುಡಿಗ ಪೀ ಬಿ ಶ್ರೀ ಅವರ ಆತ್ಮಕ್ಕೆ ಶಾಂತಿ ಸಿಗಲಿ.
Submitted by rasikathe Wed, 04/17/2013 - 01:39

ವಾಣಿಯವರೆ, ಮಧುರವಾಗಿದೆ ನಿಮ್ಮ‌ ಲೇಖನ‌...ಹಾಡುಗಳ‌ ಸುರಿ ಮಳೆಯೇ ಇರುವಾಗ‌ ನೇವು ಹೇಳಿದ‌ ಹಾಗೆ "ಷರೇರವಿಲ್ಲದಿದ್ದರೂ ಅವರ‌ ಷಾರೀರ‌ ನಮ್ಮೊಡನೆ ಇಮ್ದೂ ಮುಮ್ದೂ ಇರುತ್ತೆ. ವಿಠಲಾ, ರಮ್ಗಾ ಎಲ್ಲಿ ಮರೆಯಾದೆ? ಮೀನಾ.
Submitted by bhalle Wed, 04/17/2013 - 06:28

ಹೀಗೊಂದು ನಮನ ನಮ್ಮ ಪಿ.ಬಿ.ಎಸ್’ಗೆ ಇಳಿದು ಬಾ ತಾಯೆ ಇಳಿದು ಬಾ ... ಇಳಿದು ಬಾ ತಾಯೆ ಇಳಿದು "ಬಾ"ರೆ ಬಾರೆ ಚೆಂದದ ಚೆಲುವಿನ ತಾರೆ ಆಕಾಶವೆ ಬೀಳಲಿ ಮೇಲೇ ನಾ "ನಿನ್ನ" ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನೂ, ನಿನ್ನ ಕಣ್ಣ ನೋಟದಲ್ಲಿ "ನೂರು" ವರುಷವಾಗಲಿ ಮರೆಯಲರೀನು ಎಂದೆಂದು ನಿನ್ನ ಅಗಲಿ "ನಾ" ಬೆಂಕಿಯಂತೆ ನಾ ಗಾಳಿಯಂತೆ ಈ ಜೋಡಿ ಮುಂದೆ ವೈರೀ ಉಳಿಯುವನೇ, "ನಾ"ನೇ ತಾಯಿ ನಾನೇ ತಂದೆ ನಿನ್ನ ಬಾಳಿಗೆ ನಾಳೆ ನೀನೆ ....
Submitted by makara Wed, 04/17/2013 - 07:30

ಆಂಧ್ರದ ಕಾಕಿನಾಡದಲ್ಲಿ ೧೯೩೦ ಜನ್ಮಿಸಿ ಕನ್ನಡದವರೇ ಆಗಿಹೋಗಿದ್ದವರು ಪ್ರತಿವಾದಿ ಭಯಂಕರ ಶ್ರೀನಿವಾಸ್ ಅವರು. ಬಹುಶಃ ಅವರಷ್ಟು ಸೊಗಸಾಗಿ ಕನ್ನಡದಲ್ಲಿ ಹಾಡಿದವರು ಬಹಳ ವಿರಳ. ಅವರನ್ನು ನೆನಪಿಸಿಕೊಳ್ಳುವಂತೆ ಮಾಡಿದ ನಿಮ್ಮ ಲೇಖನಕ್ಕೆ ಅಭಿನಂದನೆಗಳು.
Submitted by ramvani Wed, 04/17/2013 - 12:31

ನಮಸ್ಕಾರ ಎಲ್ಲರಿಗೂ ಲೇಖನ ಓದಿ, ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ವಂದನೆಗಳು. ನಮ್ಮ ಪೀಳಿಗೆ ಪಿ.ಬಿ.ಎಸ್., ಅಶ್ವಥ್, ಅನಂತಸಾಮಿ, ರಾಜು ಅನಂತಸ್ವಾಮಿ, ಕಿಶೋರ್, ರಫಿ, ಮನಾಡೆ, ಮುಖೇಶ್, ಹೇಮಂತ್, ಘಂಟಸಾಲ ಇಂಪಾದ, ಮನಕೆ ತಂಪು ನೀಡುವ ಅರ್ಥಪೂರ್ಣವಾದ ಹಾಡುಗಳನ್ನು ಅನುಭವಿಸುತ್ತಿರವ ಪೀಳಿಗೆ. ಅಂದಿನ ಬಹುತೇಕ ಗಾಯಕರು ಭಾಷೆಗೆ, ಭಾವಕ್ಕೆ, ಸ್ವರ, ಉಚ್ಚಾರಣೆಗೆ ಒತ್ತುಕೊಟ್ಟು, ಹಾಡುತ್ತಿದ್ದರು. ನಾವು ಭಾಗ್ಯವಂತರು, ಎಂದಿಗೂ ಗುನುಗುನಿಸುವಂತೆ ಮರೆಯಲಾಗದ ಹಲವಾರು ಇಂಪಾದ ಹಾಡನ್ನು ನೀಡಿದ ಚೇತನಗಳಿಗೆ ನಮ್ಮೆಲ್ಲರ ನಮನ. ವಿಶ್ವಾಸದಿಂದ ವಾಣಿ ರಾಮದಾಸ್