ಆತ್ಮಕ್ಕೆ ಸಾವಿಲ್ಲ

ಆತ್ಮಕ್ಕೆ ಸಾವಿಲ್ಲ

Comments

Submitted by sasi.hebbar Mon, 01/07/2013 - 18:32

ಆತ್ಮಕ್ಕೆ ಸಾವಿಲ್ಲ ಎನ್ನುವುದು ಒಂದು ಪ್ರತಿಪಾದನೆ, ಮತ್ತು ಅದಕ್ಕೆ ತಳಹದಿಯಾಗಿ ಕರ್ಮ ಸಿದ್ದಾಂತ ಇದೆ. ಕರ್ಮ ಸಿದ್ದಾಂತದ ಹಿನ್ನೆಲೆಯಲ್ಲಿ ನೀವು ಹೇಳಿದ "ಶಿಕ್ಷೆ"ಯನ್ನು ಗಮನಿಸಿದರೆ, ಆ ಶಿಕ್ಷೆ ಸಿಗಬೇಕಾದದ್ದು ಆತ್ಮಕ್ಕೇ ಹೊರತು ದೇಹಕ್ಕೆ ಅಲ್ಲ. ಜೊತೆಗೆ "ಶಿಕ್ಷೆ" ಎನ್ನುವುದು ವಾಸ್ತವವಾಗಿ, ಎಷ್ಟೋ ಬಾರಿ ಶಿಕ್ಷೆ ಅಲ್ಲದೇ ಇರಬಹುದು (ಕೆಲವು ಶಿಕ್ಷೆಯೂ ಆಗಿರಬಹುದು), ಏಕೆಂದರೆ, ಆತ್ಮವು ಪ್ರಗತಿಹೊಂದುವ ದಾರಿಯಲ್ಲಿ ಈ ರೀತಿಯ ಕಷ್ಟಗಳು ಬರುತ್ತವೆ ಎನ್ನಲಾಗಿದೆ. ಈ ರೀತಿಯ ಶಿಕ್ಷೆ ಮತ್ತು ಕಷ್ಟಗಳು ಬಂದಾಗ ಮಾತ್ರ, ಆತ್ಮ ಪ್ರಗತಿ ಪಡೆಯಲು ಸಾಧ್ಯ, ಮತ್ತು ಹಲವಾರು ಜನ್ಮಗಳ ಮೂಲಕ ಪ್ರಗತಿಯನ್ನು ಸಾಧಿಸಿ, ಸಾಧಿಸಿ, ಕೊನೆಯಲ್ಲಿ ಮೋಕ್ಷವನ್ನು ಪಡೆದೀತು ಆ ಆತ್ಮ. ಹಲವಾರು ಎಂದರೆ, ಎಷ್ಟು? ಗೌತಮ ಬುದ್ಧನಂತಹ ಮಹಾನ್ ಜೀವಿ ಐನೂರು ಜನ್ಮಗಳನ್ನು ಎತ್ತಿದ್ದನಂತೆ (ಎರಡು ವಾರಗಳ ಹಿಂದಿನ ತರಂಗ ಪತ್ರಿಕೆಯ ಸಂಪಾದಕೀಯ ಈ ಕುರಿತು ವಿಚಾರವನ್ನು ಒಳಗೊಂಡಿದೆ). ಜನಸಾಮಾನ್ಯರಾದ ಇತರರಿಗೆ ಇನ್ನೂ ಹೆಚ್ಚಿನ ಜನ್ಮಗಳು ದೊರೆತಾಗ ಮಾತ್ರ, ಅಂತಹ ಜನ್ಮಗಳಲ್ಲಿ ನಾನಾ ರೀತಿಯ ಅನುಭವಗಳನ್ನು ಹೊಂದಿ, ಶಿಕ್ಷೆಯನ್ನೂ ಹೊಂದಿ, ಇತರರಿಗೆ ಸಹಾಯ ಮಾಡಿ, ಅಥವಾ ಇತರರಿಗೆ ಸಹಾಯ ಮಾಡುವಂತಹ ಆಸೆಯನ್ನಾದರೂ ಹೊಂದಿ, ಆತ್ಮವು ಪ್ರಗತಿ ಹೊಂದಬಹುದು ಎನ್ನಲಾಗಿದೆ. ನೀವು ಬರೆದಿದ್ದೀರಾ - ನಮ್ಮ ಕಣ್ಣ ಮುಂದೆ ಅನ್ಯಾಯ ಮಾಡಿದ ವ್ಯಕ್ತಿಗಳು ಸುಖವಾಗಿರುತ್ತಾರೆ ಅಂತ, ಒಳ್ಳೆಯ ಜನರು ಕಷ್ಟಗಳನ್ನು ಎದುರಿಸಬೇಕಾಗಿದೆ ಎಂದು -- ಕೆಲವು ಆತ್ಮಗಳು, ಬೇಗನೆ ಪ್ರಗತಿ ಹೊಂದಲೆಂದೇ ಹೆಚ್ಚು ಕಷ್ಟ ಉಳ್ಳ ಜೀವನವನ್ನು ಆಯ್ಕೆ ಮಾಡಿಕೊಂಡು ಹುಟ್ಟುತ್ತಾವಂತೆ. --------------ಬನ್ನಂಜೆಯವರು ಹೇಳಿದಂತೆ, ಒಂದು ಜನ್ಮದಲ್ಲಿ ಮಾಡಿದ ಕರ್ಮದ ( ಅದು ಕೆಟ್ಟದ್ದಾಗಿರಲೂ ಬಹುದು, ಒಳ್ಳೆಯದಾಗಿರಲೂ ಬಹುದು) ಫಲ ಸಿಗಲು ಹತ್ತಾರು ಜನ್ಮ ಕಾಯಬೇಕಾಗಬಹುದು. ಈ ಸರಣಿಯನ್ನು ಮುಂದುವರಿಸಿದಾಗ, ನೀವು ಕೇಳಿದ ಪ್ರಶ್ನೆಗೆ (ಕೆಲವರು ಕೆಟ್ಟದ್ದನ್ನು ಮಾಡಿದರೂ, ಸುಖವಾಗಿರ್ತಾರೆ, ಮತ್ತು ಕೆಲವರು ಒಳ್ಳೆಯವರಾದರೂ, ಜೀವನದುದ್ದಕ್ಕೂ ತುಳಿತಕ್ಕೆ ಒಳಗಾಗುತ್ತಾರೆ) ಉತ್ತರವೆಂದರೆ, ಹಲವು ಜನ್ಮಗಳ ಹಿಂದೆ ಮಾಡಿದ ಕರ್ಮದ ಫಲ ಈಗ ಉಣ್ಣುತ್ತಾರೆ ಎನ್ನಬಹುದು. ---- ಇಲ್ಲಿ ಮತ್ತೊಂದು ಸಂಗತಿ ಉಂಟು - ಈ ಕರ್ಮಫಲಗಳಿಂದ ದೂರವಾಗಬೇಕಾದರೆ, ಯಾವುದೇ "ಕರ್ಮ" ಮಾಡದೇ, +_ ಬ್ಯಾಲೆನ್ಸ ಇಲ್ಲದೇ ಜೀವನ ನಡೆಸುವಂತಹದ್ದು , ಆಗ ಫಲ ಉಣ್ಣುವ ಅನಿವಾರ್ಯತೆ ದೂರಾಗುವುದರಿಂದ, ಮೋಕ್ಷದ ದಾರಿ ಸುಗಮವಾದೀತು. ಆದರೆ, ಆರೀತಿ ಜೀವನ ನಡೆಸುವ ಮಾರ್ಗ ಯಾವುದು?

Submitted by kavinagaraj Tue, 01/08/2013 - 10:42

ಶೋಭಾರವರೇ, ಬಹುಚರ್ಚಿತ ವಿಷಯವಿದು. ಫೆಬ್ರವರಿ, 3ರಂದು ಬೆಂಗಳೂರಿನಲ್ಲಿ ಶ್ರೀ ಸುಧಾಕರ ಶರ್ಮರಿಂದ ಮಹಾಸಂವಾದ ಇದೆ. ಈ ಪ್ರಶ್ನೆಗೆ ಅವರಿಂದ ನೇರ ಉತ್ತರ ಪಡೆಯಲು ಅವಕಾಶವಿದೆ.

Submitted by ಆರ್ ಕೆ ದಿವಾಕರ Tue, 01/08/2013 - 16:16

‘ಆತ್ಮ’ ಎನ್ನುವ ‘ಭ್ರಮೆ’ ಬಿಟ್ಟುಬಿಡಿ. ಹುಟ್ಟೂ ಶರೀರಕ್ಕೆ; ಬದುಕೂ ಶರೀರಕ್ಕೆ; ಸಾವೂ ಶರೀರಕ್ಕೆ. ಶರೀರದಲ್ಲಿ ಚೈತನ್ಯವಿರುತ್ತದೆ. ಆ ಚೈತನ್ಯ ಅಧಿಭೌತಿಕವಾದದ್ದು ಮಾತ್ರವೇ. ಶರೀರದ ಯಾವುದೇ Bio ಚಟುವಟಿಕೆಗೆ ಅದರ Physics ಮತ್ತು Chemistry ಕಾರಣ. ಅದು ಉಂಟಾಗುವುದು, ಅಂಡ-ವೀರ್ಯಗಳ ಭೌತ-ರಾಯನಿಕ ಸಂಕಿರಣವಾಗಿಯೇ. ಈ Bio-spore ರಾಸಾನಿಕವಾಗಿ ಗುಣಿತಗೊಳ್ಳುವ ಒಂದು ಹಂತದಲ್ಲಿ, ಅದರಲ್ಲಿನ ಮೂಲಧಾತು – Genes –ಜಾಗೃತಗೊಂಡು, ಪಿಂಡ ಸಂದರ್ಭಕ್ಕೆ ತಕ್ಕಂತೆ ರೂಪುಗೊಳ್ಳಲು, ಒಂದು ಬಲಿಕೆ – Maturity - ನಂತರ, ವ್ಯಕ್ತಿತ್ವದ ವಿಶಿಷ್ಟತೆ ಅಡಕಗೊಳ್ಳಲು ಪ್ರೇರಣೆ ನೀಡುತ್ತದೆ. ಹೀಗಾಗಿ Genes ಎನ್ನುವುದೇ ಹುಟ್ಟುಗುಣವಲ್ಲ; ಜೀವದ ಆ ವ್ಯಕ್ತಿತ್ವ ವೈಶಿಷ್ಟ್ಯಗಳನ್ನು ಗರ್ಭಸ್ಥ ಹಂತದಲ್ಲೇ ಪರಿಪ್ರೇರಿಸುವ ಒಂದು ಸಾಧನ. ವ್ಯಕ್ತಿತ್ವದ ಸಾಧ್ಯತೆ – Potential – ಆದರೋ ಪರಿಸರವನ್ನವಲಂಬಿಸಿ ಆಗುವುದೇ. ತಾಯಿಯಂತೆ ಕೂದಲು, ತಂದೆಯಂತೆ ಮುಖ-ಮುಗು, ಅಜ್ಜನಂತೆ ಕಣ್ಣು ಹೊಂದಿದ್ದರೂ ನವಜಾತಶಿಶುವಿಗೆ, ಇದೆಲ್ಲವನ್ನೂ ಮೀರಿದ ತನ್ನತನ-ವಿಶಿಷ್ಟತೆಯ ಸತ್ವ, ಅದಗಲೇ ಇರುತ್ತದೆ. ಅದು ಆ ಜೀವದ ಚಲನೆ, ಈಕ್ಷಣೆ, ವೀಕ್ಷಣೆ, ಸಂವೇದನೆಗಳಿಗೆ ಆಧಾರ. ಭಾವ, ಬುದ್ಧಿ, ಮನಸ್ಸುಗಳು ನಂತರದ ದಿನಗಳಲ್ಲಿ, ಪರಿಸರ ಮತ್ತು ಸ್ಥತಿ-ಗತಿಗಳಿಗೆ ತಕ್ಕಂತೆ ನಿರ್ದಿಷ್ಟಗೊಂಡು ಒಂದು ಮಾನವ ವ್ಯಕ್ತಿತ್ವವಾಗುತ್ತದೆ.
ಅದು ಆ ಜೀವದ ‘ನಾನು’. ಇಹದಲ್ಲಿ ಬದುಕುವುದು ಆ ‘ನಾನು’. ಸಂದರ್ಭ-ಅವಕಾಶಗಳು ಹೇಗೆ ಹೇಗೆ ಬರುತ್ತದೋ ಅದು ಹಾಗೆ-ಹಾಗೆ ಮಾಡುತ್ತದೆ. ಹಾಗೆ-ಹಾಗೆ ಮಾಡಿದಾಗ ಏನೇನಾಗಬೇಕೋ ಅದದನ್ನದು ಅನುಭವಿಸುತ್ತದೆ.
ಹುಟ್ಟಿದ ನಂತರ ನಿರ್ದಿಷ್ಟಗೊಳ್ಳುವ ಈ ‘ನಾನು’, ಸಾಯುವವರೆಗಷ್ಟೇ ಇರುವಂಥದು. ಪಂಚಭೂತಗಳಿರುತ್ತವೆ; ಅದರ Permutation-Combination ಇರುತ್ತದೆ; ಅವು ಹೇಗೆ ಅಸ್ತಿತ್ವಕ್ಕೆ ಬಂದವೋ, ಎಲ್ಲಿಯವರೆಗೆ ಇರುವವೋ, ಹೇಗೆ ಕಲೆತು-ಕಳೆದು ಹೊಸ-ಹೊಸ ಸಂಕೀರ್ಣತೆ ತಳೆಯುತ್ತಾ-ಅಳಿಯುತಾ ಹೋಗುತ್ತದೋ – ಅದು ‘ನನ್ನ’ ಅಳವಿಗೆ, ಅಳತೆಗೆ ಸಿಗುವಂಥದಲ್ಲ. ಅದಕ್ಕೊಂದು ಮೂಲ ಸ್ರೊತ, ಸೂತ್ರ ಖಂಡಿತಾ ಇದ್ದೇ ಇದೆ. ಅದು ‘ನನಗೆ’ ಗೊತ್ತಾಗುವುದಲ್ಲ. ಅದು ಬ್ರಹ್ಮನಂತೆ; ಇದು ಜಗತ್ತಂತೆ. ‘ನಾನು’ ಮಾತ್ರಾ ಇಲ್ಲಿ ಇದ್ದವನೂ/ಳೂ ಅಲ್ಲ, ಇರುವವನೂ/ಳೂ ಅಲ್ಲ! ಆದ್ದರಿಂದ ಬ್ರಹ್ಮವೂ ‘ಸತ್ಯ’; ಜಗತ್ತೂ ‘ಸತ್ಯ’. ಆದರೂ ‘ನಾನು’ ಮಾತ್ರ ಮಿಥ್ಯವೇ! ಈ Temporal ಜೀವಿಗಳು, ‘ವಿವೇಕ’ ಎಂದುಕೊಂಡದ್ದನ್ನು ಉಪಯೋಗಿಸಿ ಏನಾದರೂ ಮಾಡುತ್ತವೆ; ಅದಕ್ಕೆ ತಕ್ಕಂತೆ ವಡೆಯನ್ನೋ, ಒದೆಯನ್ನೋ ತಿನ್ನುತ್ತವೆ! ‘ಒಳ್ಳೆಯದು’ ಎನ್ನುವುದರ ಬೆನ್ನುಹತ್ತುವುದು ವಿವೆಕವಲ್ಲ. ಏಕೆಂದರೆ ಅದು ಸಾಪೇಕ್ಷ. ‘ಸರಿ’ಯಾದದ್ದನ್ನು ಮಾಡಬೇಕು; ಮಾಡಿಕೊಂಡದ್ದನ್ನು ಅಲವೆತ್ತುಕೊಳ್ಳದೆ ಉಣ್ಣಬೇಕು. Insight ಬೆಳೆಸಿಕೊಂಡವರು ಸರಿ-ಸರಿಯಾಗಿ ಮಾಡಿ ಸತ್ಫಲ ಉಣ್ಣುತ್ತಾರೆ; ಇಲ್ಲದವರು Trial & Error ಪ್ರಯತ್ನದಿಂದಾಗಿ ಮಿಶ್ರಫಲ ಉಣ್ಣುತ್ತಾರೆ. ಅವರೂ ಸಾಯುತ್ತಾರೆ; ಇವರೂ ಸಾಯುತ್ತಾರೆ. ಇದು ಮಾತ್ರವೇ ಹುಟ್ಟಿನ ‘ಸತ್ಯ’!
ಇದು ನಿರಾಶಾವಾದವಲ್ಲ. ಆಶಾವಾದಕ್ಕೆ ಪ್ರೇರಣೆ ಎಂಬುದು ‘ನನ್ನ’ ಅನುಭಾವ.

Submitted by shreekant.mishrikoti Wed, 01/09/2013 - 00:44

In reply to by ಆರ್ ಕೆ ದಿವಾಕರ

ದಿವಾಕರರೇ

"ಸರಿ’ಯಾದದ್ದನ್ನು ಮಾಡಬೇಕು; ಮಾಡಿಕೊಂಡದ್ದನ್ನು ಅಲವೆತ್ತುಕೊಳ್ಳದೆ ಉಣ್ಣಬೇಕು. Insight ಬೆಳೆಸಿಕೊಂಡವರು ಸರಿ-ಸರಿಯಾಗಿ ಮಾಡಿ ಸತ್ಫಲ ಉಣ್ಣುತ್ತಾರೆ; ಇಲ್ಲದವರು Trial & Error ಪ್ರಯತ್ನದಿಂದಾಗಿ ಮಿಶ್ರಫಲ ಉಣ್ಣುತ್ತಾರೆ. "

ಅಂದರೆ ಈ ಫಲಗಳನ್ನು ಉಣ್ಣುವದು ಇದೇ ಬದುಕಿನಲ್ಲಿ/ಜನ್ಮದಲ್ಲಿ ಎಂದು ನಿಮ್ಮ ಅನಿಸಿಕೆಯೇ? ಬೇರೆ ಜನ್ಮಗಳ ಸಂಬಂಧ ಇಲ್ಲವೇ? ದಯವಿಟ್ಟು ತಿಳಿಸಿ.

Submitted by partha1059 Wed, 01/09/2013 - 08:47

In reply to by shreekant.mishrikoti

ಶ್ರೀಕಾಂತರೆ ದಿವಾಕರರ ಬದಲಾಗಿ ನಾನು ಮಾತನಾಡಿದರೆ ಅಕ್ಷೇಪಣೆ ಇಲ್ಲ ಅಂದುಕೊಳ್ಳುವೆ, ಪ್ರಕೃತಿಯ ನಿಯಮ ಗಮನಿಸಿದರೆ, ಒಂದು ವೇಳೆ ನಾವು ಹಿಂದಿನ ಜನ್ಮದ ಕ್ರಿಯೆಗೆ ಈಗ ಫಲ ಅನುಭವಿಸುವೆವೆ ಅನ್ನುವುದು ನಿಜವಾಗಿದ್ದರೆ ನಮಗೆ ಪ್ರಕೃತಿ ಹಿಂದಿನ ಜನ್ಮದ ನೆನಪನು ಆ ಫಲಕ್ಕೆ ಕಾರಣವಾದ ಕ್ರಿಯೆಯ ನೆನಪನ್ನು ಖಂಡಿತ ನೀಡುತ್ತಿತ್ತು ಅನ್ನಿಸುತ್ತೆ. ನಾವು ರೂಡಿಸಿಕೊಂಡಂತೆ ಜೀವನ ಮತ್ತು ಅದರ ಫಲಗಳು, ನಮ್ಮ ಜೀವನದ ಮೇಲೆ ನಮ್ಮ ತಂದೆ ತಾಯಿಯರ ಹಿರಿಯರ ಕರ್ಮ ಫಲ ಖಂಡೀತ ಇರುತ್ತದೆ. ಹಾಗೆ ನಮ್ಮ ಕ್ರಿಯೆಗಳು ನಮ್ಮ ಮುಂದಿನ ಜನಾಂಗದ ಮೇಲು ಪ್ರಭಾವ ಬೀರುತ್ತವೆ

Submitted by Shreekar Wed, 01/09/2013 - 12:08

In reply to by partha1059

@ ಪಾರ್ಥ

" ನಮ್ಮ ಜೀವನದ ಮೇಲೆ ನಮ್ಮ ತಂದೆ ತಾಯಿಯರ ಹಿರಿಯರ ಕರ್ಮ ಫಲ ಖಂಡೀತ ಇರುತ್ತದೆ. ಹಾಗೆ ನಮ್ಮ ಕ್ರಿಯೆಗಳು ನಮ್ಮ ಮುಂದಿನ ಜನಾಂಗದ ಮೇಲು ಪ್ರಭಾವ ಬೀರುತ್ತವೆ.."
ಇದನ್ನೇ ನಾನೂ ಹೇಳುವವನಿದ್ದೆ.
ನೋಡಿ: Bible - ಎಕ್ಸೋಡಸ್ 20:5 for I, the LORD your God, am a jealous God, punishing the children ಯುದ್ಧ for the sin of the fathers to the third and fourth generation of those who hate me,

Submitted by partha1059 Wed, 01/09/2013 - 13:02

In reply to by Shreekar

ಶ್ಱೀಕರ‌ ಹಾಗು ದಿವಾಕರರವರೆ
ನನ್ನ ಹೇಳಿಕೆ ಸ್ವಲ್ಪ ಮಟ್ಟಿಗೆ ತಪ್ಪು ಗ್ರಹಣವಾಗುವ‌ ರೀತಿ ಇದೆ . ನಾನು ಹೇಳಿರುವ‌ ಕರ್ಮಪಲ‌ ಅದ್ಯಾತ್ಮ ಅಥವ‌ ಪುರಾಣಗಲ‌ ಆದಾರದಲ್ಲಲ್ಲ , ನಮ್ಮ ಜೀವನದ‌ ನಿರ್ದಾರಗಳ‌, ಕ್ರಿಯೆಗಳು, ಯಶಸ್ಸು ಹಾಗು ಶ್ರಮ‌ ಮು0ದಿನ‌ ಪೀಳೆಗೆಗೆ ಉಪಯೋಗವಾಗಲು ಬಹುದು ಶಾಪವಾಗಲು ಬಹುದು, ಅದು ದೈಹಿಕ‌ ಕಾಯಿಲೆಯೆ ರೂಪವಾಗಲಿ, ಹಣದ‌ ರೂಪವಾಗಲಿ ಮತ್ತೆ ಯಾವುದೆ ರೂಪವಾಗಲಿ ಆಗಿರುತ್ತದೆ. ಕುಡುಕ‌ ಅಥವ‌ ರೌಡಿಯೊಬ್ಬನ‌ ಕ್ರಿಯೆಗಳು ಅವನ‌ ಮಕ್ಕಳ‌ ಮೇಲೆ ಧನಾತ್ಮಕ‌ ರುಣಾತ್ಮಕ‌ ಪರಿಣಾಮ‌ ಬೀರುತ್ತದೆ, ಹಾಗೆ ಅವನ‌ ಯಶಸ್ಸು ಸಹ‌ , ಅದನ್ನು ಪಾಪ‌ ಪುಣ್ಯವೆ0ದು ನೀವು ಭಾವಿಸಲು ಅಡ್ಡಿಯಿಲ್ಲ. ಅದರೆ ನಮ್ಮ ಜೀವನ‌ ಮು0ದಿನ‌ ಜನ್ಮದ‌ ಮೇಲೆ ಪರಿಣಾಮ‌ ಬೀರುತ್ತದೆ ಎನ್ನುವುದು ಮಾತ್ರ ತರ್ಕರಹಿತ‌ ಮಾತು.

Submitted by partha1059 Wed, 01/09/2013 - 13:05

In reply to by partha1059

ಹಾಗೆ ಒ0ದು ಜೋಕ್ ಕೇಳಿಬಿಡಿ, ಹಿರಿಯರು ವಾಕಿ0ಗ್ ಹೋಗುವ‌ ಪಾರ್ಕಿನಲ್ಲಿ ನಡೆದಿದ್ದು
ವಯಸ್ಸಾದ‌ ಒಬ್ಬಾತ‌ ಹೇಳುತ್ತಿದ್ದರು , ನಮ್ಮ ಹಿರಿಯರು ಮಾಡಿದ‌ ಪುಣ್ಯ ನೋಡಿ ನನ್ನನ್ನು ಜೀವನ‌ ಪೂರ್ತಿ ಕಾಪಾಡಿತು, ಯಾವುದೆ ಸಮಸ್ಯೆ ಇಲ್ಲದೆ ಜೀವನದ‌ ಎಪ್ಪತ್ತು ವರ್ಷ‌ ಕಳೆದೆ ಎ0ದು, ಅದಕ್ಕೆ ಅವರ‌ ಸ್ನೇಹಿತರು ಉತ್ತರಿಸಿದರು, ನಿಮ್ಮ ಮಾತು ನಿಜ‌ ಬಿಡಿ, ಆದರೆ ನಿಮ್ಮ ಮೊಮ್ಮಕ್ಕಳು ಮಾತ್ರ ಅದ್ರುಷ್ಟ ಹೀನರು ನೋಡಿ, ಅವರನ್ನು ಕಾಯಲು ಯಾವ‌ ಪುಣ್ಯವು ಇಲ್ಲ, ಎ0ದರು, ಅವರ‌ ಮಾತು ಅರ್ಥವಾಗದ‌ ಹಿರಿಯರು ಮಾತ್ರ ಹೌದು ಹೌದು ಅನ್ನುತ್ತಿದ್ದರು, ....... ಹೋಗಲಿ ನಿಮಗೆ ಅರ್ಥವಾಯಿತ‌ ಜೋಕ್

Submitted by ಆರ್ ಕೆ ದಿವಾಕರ Wed, 01/09/2013 - 12:23

In reply to by Shreekar

ಪಾರ್ಥ ಮತ್ತು ಶ್ರೀಕರರಿಗೆ ಆಭಾರಗಳು.ಮಿಶ್ರಿಕೊಟಿಯವರ ಪ್ರಶ್ನೆಗೆ, ಖಚಿತವಾಗಿ Now & Here ಎನ್ನುವುದೇ ನನ್ನ ಅನಿಸಿಕೆ. ಜಗತ್ ಸತ್ಯ ಎನ್ನುತ್ತಾರೆ. ಅದು ಸರಿ. ಬ್ರಹ್ಮ ಸತ್ಯ ಎನ್ನುತ್ತಾರೆ. ಈ Hypothesis ಸಹ ‘ನನ್ನ’ Commonsense ಗೆ ಒಪ್ಪಿಗೆಯಗುವುದೇ. ಅವೆರಡೂ ಸತ್ಯ; ನಿತ್ಯ. ‘ನಾನು’ ಎನ್ನುವುದು ಮಿಥ್ಯೆಯಲ್ಲ ಆದರೆ ಅನಿತ್ಯ ಎಂದು ಈಗ ಹೊಳೆಯುತ್ತಿದೆ. ಹೊಳೆಸಿದ್ದಕ್ಕಾಗಿ ಸ್ನೇಹಿತರಿಗೆ ಮತ್ತೊಮ್ಮೆ ಧನ್ಯವಾದ. ಜಗತ್ತು ಎನ್ನುವುದು ಸೃಷ್ಟಿ. ಯಾರು ಸೃಷ್ಟಿಸಿದ್ದು ಎನ್ನುವುದು ‘ನನ್ನ’ಪ್ರಜ್ಞೆಯ ಪರಿವ್ಯಾಪ್ತಿಗೆ ಬರುವುದಲ್ಲ. ಈ ಸೃಷ್ಟಿ ಜಡವಾದದ್ದು, ಭೌತಿಕವಾದದ್ದು. ಐಹಿಕ Economic ಅರ್ಥದಲ್ಲಿ ಇದನ್ನು ಸಂಪನ್ಮೂಲ ಎನ್ನಬಹುದು. ಅಂದರೆ ‘ಪದಾರ್ಥ’. ಇದು ಸಂಪತ್ತಾಗಲು ಅಂದರೆ ‘ಪ್ರಸಾದ’ ಆಗಲು ಒಂದು ಸಂಯಂತ್ರ – ಅಂದರೆ - ಸಂಚಲನ ಬೇಕಲ್ಲಾ? ಅದು ‘ಕೃಷ್ಣತ್ವ’. ಬ್ರಹ್ಮ-ಶಿವ-ನಾರಯಣ ಎಂದೂ ಅನ್ನಬಹುದು. ‘ಕೃಷ್ಣ’ನೇ ಏಕೆಂದರೆ ಅದರ ಅರ್ಥ, ‘ಆಕರ್ಷಣೆ’ ಎಂದು. ಆಕರ್ಷಣೆಯೇ ‘ವಿಕರ್ಷಣ’ವೂ ಆಗುತ್ತದೆ. ಅದು ಮಾನವ ಸಮಾಜದ ಪರಸ್ಪರ ಸರಸ-ವಿರಸ ಸಂಬಂಧವಷ್ಟೇ ಅಲ್ಲ, ಗ್ರಹ, ತಾರಾಮಂಡಲಾದಿ ಇಡೀ ವಿಶ್ವದ ಸಂಚಲನಶೀಲತೆ. ಇದು ಅಮೂರ್ತ; ಅವ್ಯಕ್ತ ಮತ್ತು ಅನುಭವೈಕ ವೇದ್ಯ. ‘ನನ್ನ’ ಭೌತಿಕತೆ, Genes ಎಂಬ ಪಂಚಭೂತದ ಜಡದಿಂದ ತೊಡಗಿದರೂ, ಮೂರೈದು ತಿಂಗಳಲ್ಲಿ ಚಲನಶೀಲತೆ ಪಡೆಯುವುದು ಗರ್ಭ ಪರಿಸರದಲ್ಲಿ. ಆನಂತರದ ‘ಆರೈಕೆ’ – ತಿಳಿಯುವಿಕೆ – ಪ್ರತಿಕ್ರಿಯೆಗಳು ಸಹ ಬಾಹ್ಯ ಪರಿಸರದಲ್ಲಿ. ತಾಯಿ-ತಂದೆ-ಹಿರಿಯರ ವರ್ತನೆ, ಕ್ರಿಯಾಶೀಲತೆಗಳು ಬಾಲ್ಯ ಹಂತದಲ್ಲಿ ಗಾಢ ಪರಿಣಾಮ ಬೀರಬಹುದಾದರೂ, ಅನುಭವಾನುಭಾವಗಳು ‘ನನ್ನವೇ’. ಇದೆಲ್ಲಾ ಇದೇ ಜನ್ಮದ್ದೇ. ಪ್ರಜ್ಞೆಗೆ ಸಾಧ್ಯವಾಗುವಷ್ಟು ಮಟ್ಟಿಗೂ ಹಿಂದಕ್ಕೆ ಹೋಗಿ, ‘ನನ್ನ’ ವರ್ತನಾ ಸಂರಚನೆ – Behaviour Pattern – ತಿಳಿದುಕೊಳ್ಳುವದು, ಸಾಧ್ಯವಾದಷ್ಟನ್ನು ತಿದ್ದಿಕೊಳ್ಳುವುದೂ ‘ನನ್ನ’ ಕೈಲೇ ಇದೆ. ಹುಟ್ಟು ‘ನನ್ನ’ ಕ್ರಿಯೆಯಲ್ಲ; ಸಾವೂ, ಬಹುತೇಕ ‘ನನ್ನ’ ಕ್ರಿಯೆಯಲ್ಲ. ಆದರೆ ನಡುವಣ ಬದುಕು ಮಾತ್ರಾ ‘ನನ್ನದೇ’. ಸತ್ತ ನಂತರ, ಹುಟ್ಟಿಗೆ ಮುನ್ನಿನಂತೆಯೇ ‘ನಾನು’ ಇರುವುದಿಲ್ಲ.

Submitted by Prabhu Murthy Thu, 01/10/2013 - 12:40

ಶೋಭಾ ಅವರೆ,

"ಆತ್ಮ‌ ಮತ್ತು ಶರೀರಗಳು ಒಮ್ದೇ ಅಲ್ಲ‌", "ಆತ್ಮಕ್ಕೆ ಸಾವಿಲ್ಲ‌", "ಶರೀರ‌ ನಶ್ವರ‌", "ಕರ್ಮಫಲಗಳ‌ ಅನುಭವ‌ ಜನ್ಮಾನ್ತರಗಳಲ್ಲಿ ಆಗಬಹುದು", ಇತ್ಯಾದಿ ಪ್ರಮೇಯಗಳನ್ನು ಒಪ್ಪಿಕೊಮ್ಡಿದ್ದೇ ಆದರೆ, ನನ್ನ‌ ಪ್ರಕಾರ‌, ಅವುಗಳ‌ ಬೆನ್ನಿಗೇ ಒಪ್ಪಿಕೊಳ್ಳಬೇಕಾದ‌ ಇನ್ನೊಮ್ದು ಪ್ರಮೇಯವೆಮ್ದರೆ "ಶರೀರವು ಜಡವಸ್ತು" ಎಮ್ಬುದು. ಹಾಗಾಗಿ, ಶರೀರಕ್ಕೆ "ಕರ್ತ್ರುತ್ವ‌" ಇರಲು ಸಾಧ್ಯವಿಲ್ಲ‌ ಅಲ್ಲವೇ? ಇನ್ನು ನೋವು‍ ನಲಿವುಗಳ‌ ಅನುಭವವು ಆಗುವುದು ಯಾವುದಕ್ಕೆ? ಅದೂ ಶರೀರಕ್ಕೆ ಅಲ್ಲ‌ ಅಲ್ಲವೆ? ಅನುಭವವು ಆಗುವುದೂ ಆತ್ಮಕ್ಕೆ ಎಮ್ಬುದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ.

ಪ್ರಭು

Submitted by sasi.hebbar Thu, 01/17/2013 - 14:23

ಮೋಕ್ಷ ಸಾಧನೆಗೆ ಇರುವ ಹಲವು ಮಾರ್ಗಗಳ ಕುರಿತು 24.01.2013ರ ತರಂಗದಲ್ಲಿ "ಸಂತ ಪರಂಪರೆ - ಮುಕ್ತಿ ಮಾರ್ಗದ ಪಥಿಕರು" ಎಂಬ ಬರಹ ಇದೆ, ನೋಡಿದಿರಾ?

Submitted by ಆರ್ ಕೆ ದಿವಾಕರ Sat, 01/19/2013 - 11:37

ಪ್ರಸವಪೂರ್ವದ ಕೆಲ ತಿಂಗಳಿಂದ ಹೆಣವಗುವವರೆಗಷ್ಟೇ ನಾನು. ಅಷ್ಟರವರೆಗಿನ ನಾನು "ಸತ್ಯ"ವೇ. ಶರೀರದಿಂದ ಇಂದ್ರಿಯ, ಪ್ರಾಣದಿಂದ ಅದಕ್ಕೆ ಚೈತನ್ಯ. ಅದರ ಜ್ಞಾನದಿಂದ ಮನಸ್ಸು. ಅದರ ಅನುಭವದಿಂದ ಪ್ರಜ್ಞೆ. ಪ್ರಜ್ಞೆಯಿಂದ ಸದಸದ್ವಿವೇಕ. ಈ ’ಸತ್’ ಮತ್ತು ’ಅಸತ್’ ಮೂಲಭೂತವಾಗಿ ಶರೀರ ಮತ್ತು ಮನಸ್ಸಿನ ಅನುಭೂತಿಯಿಂದಲೇ ನಿರ್ಣಯವಾಗುವುದು. ಅದರ ಉದಾತ್ತೀಕರಣ - Sublimation - ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಇತ್ಯಾದಿ ಸತ್ಕೀರ್ತಿ ಪಡೆದೀತು. ’ನಾನತ್ವ’ ನನಗೆ ಹಿಂದಿನ ಜನ್ಮಾಂತರಗಳಿಂದ ಬಂದಿದ್ದಲ್ಲ; ಮುಂದಿನ ಭವಾವಳಿಗೂ ಹೋಗುವುದಿಲ್ಲ. ನನ್ನಿಂದ ಯಾರಿಗಾದರೂ ಪ್ರಯೊಜನವಾಗಿದ್ದರೆ, ನಾನು ಸತ್ತಮೇಲೂ ಆ ಕೆಲವರು ಕೆಲಕಾಲ ನನ್ನನ್ನು ಸ್ಮರಿಸಿಯಾರು. ನೋವುಂಡವರು ಶಪಿಸಿಯಾರು. ಅದಕ್ಕೂ ನನಗೂ ಅದರ ಸಂಬಂಧವಿರುವುದಿಲ್ಲ.

Submitted by shivthink Tue, 07/30/2013 - 07:53

 

ಪಾರ್ತರವರು ಅಂದಂತೆ ಒಂದು ವೇಳೆ ಹಿಂದಿನ ಜನ್ಮದ ಪಾಪದ ಫಲವನ್ನು ಮುಂದಿನ ಜನ್ಮದಲ್ಲಿ ಅನುಭವಿಸುವಂತಿದ್ದರೆ ಪ್ರಕೃತಿಯು ಆ ಫಲಕ್ಕೆ ಕಾರಣವಾದ ಪೂರ್ವಜನ್ಮದಲ್ಲಿ ಮಾಡಿದಂತಹ ಆ ಕ್ರಿಯೆಯ ನೆನಪನ್ನೂ ನೀಡುತ್ತಿತ್ತು ಎಂಬುದೇ ನನ್ನ ಅನಿಸಿಕೆ. ಆತ್ಮ, ಪೂರ್ವಜನ್ಮ ಎಂಬುದು ತರ್ಕರಹಿತ ಮಾತ್ರವಲ್ಲ ಆಧಾರರಹಿತ ಕೂಡ! ಒಂದು ವೇಳೆ ಇದನ್ನು ಸರಿ ಎಂದು ಒಪ್ಪಿದರೂ ಕೂಡ, ಭೂಮಿಯಲ್ಲಿರುವ ಪ್ರತಿಯೊಂದು ಜೀವಿಗೂ (ಜೀವಿಗೂ ಅಂದರೆ ಮಾನವ ಜೀವಿಗೆ!) ಒಂದೇ ತತ್ವ ಅನ್ವಯವಾಗಬೇಕಿತ್ತು. ಯಾಕೆಂದರೆ ಪ್ರತಿಯೊಬ್ಬ ಮಾನವನಿಗೂ ಬದುಕಲು ಅವಶ್ಯವಾದ ಮೂಲಭೂತ ವಸ್ತುಗಳು ಒಂದೇ! ಅದೇ ಗಾಳಿ, ಅದೇ ನೀರು, ಪ್ರತಿಯೊಬ್ಬನ ದೇಹವೂ ಒಂದೇ ರೀತಿ ಕಾರ್ಯನಿರ್ವಹಿಸುತ್ತದೆ. ಪ್ರತಿಯೊಬ್ಬನೂ ಹುಟ್ಟುತ್ತಾನೆ-ಸಾಯುತ್ತಾನೆ, ಆದರೆ ಸತ್ತ ನಂತರದ ಕಥೆಯೇ ಬೇರೆ! ಎಷ್ಟು ಧರ್ಮಗಳಿವೆಯೋ ಅಷ್ಟು ನಂಬಿಕೆಗಳೂ ಇವೆ! ಯಾಕೆಂದರೆ ಯಾರಿಗೂ ಈ ವಿಷಯದ ಬಗ್ಗೆ ಸ್ಪಷ್ಟತೆಯಿಲ್ಲ.  ಸತ್ತವರು ಯಾರೂ ಎದ್ದು ಬಂದು ಹೇಳಿಲ್ಲವಲ್ಲಾ! (ಸತ್ತು ಹೋದವ ಎದ್ದು ಬಂದು 'ಸ್ವರ್ಗಕ್ಕೆ ಹೋದೆ, ಜೀಸಸ್‍ನನ್ನು ನೋಡಿದೆ' ಅಂತೆಲ್ಲಾ ಹೇಳಿರುವುದು ಆಗಾಗ ಸುದ್ದಿಯಾಗುತ್ತಿರುತ್ತದೆ, ಇವುಗಳಲ್ಲಿ ಬಹುತೇಕ ಸುಳ್ಳೆಂದೂ, ಪ್ರಚಾರಕ್ಕಾಗಿಯೆಂದೂ ನಂತರ ತಿಳಿದರೂ ಅದು ಅಷ್ಟು ಸುದಿಯಾಗುವುದಿಲ್ಲ ಬಿಡಿ!) ಇಲ್ಲಿ ಕೂಡ ನಮಗೆ ಮನವರಿಕೆಯಾಗುವ ಅಂಶವೆಂದರೆ ಇಂತಹ ವ್ಯಕ್ತಿಗಳಿಗೆ ಆದಂತಹ ಅನುಭವ ಬಹುತೇಕ ಅವರ ಧರ್ಮದ ನಂಬಿಕೆಗಳಿಗನುಸಾರವಾಗಿರುತ್ತದೆ. "ನೀನು ಏನನ್ನು ನಂಬುತ್ತಿಯೋ, ಕೊನೆಯಲ್ಲಿ ಅದನ್ನೇ ಸೇರುತ್ತಿಯ" ಎನ್ನುವ ಭಗವದ್ಗೀತೆಯ ವಾಕ್ಯವನ್ನು ಇಲ್ಲಿ ಪ್ರಸ್ತಾಪಿಸಬಹುದು. ಭಗವದ್ಗೀತೆಯನ್ನು ಒಂದು ಧಾರ್ಮಿಕ ಗ್ರಂಥ ಎಂಬುವುದಕ್ಕಿಂತಲೂ, ಮಾನವನ ಜೀವನದ ಬಗ್ಗೆ, ಬದುಕಿನ ಮೌಲ್ಯಗಳ ವಿಶ್ಲೇಷಿಸುವ ಒಂದು ಅತ್ಯುತ್ತಮ ತತ್ವಶಾಸ್ತ್ರ ಎಂದು ನಾನು ನೋಡಬಯಸುತ್ತೇನೆ. 

 

ಪಾಪ ಕಾರ್ಯಗಳನ್ನು ಮಾಡಿದರೆ, ಮುಂದಿನ ಜನ್ಮದಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬುದು ಸರಿಯೋ? ಅಥವಾ ನರಕದಲ್ಲಿ ನಿಮಗೆ ಘೋರ ಶಿಕ್ಷೆ ಕಾದಿದೆ ಎಂಬುದು ಸರಿಯೋ? (ಗರುಡ ಪುರಾಣ ಓದಿದರೆ ನರಕದಲ್ಲಿ ನೀವು ಮಾಡಿದ ತಪ್ಪುಗಳಿಗನುಸಾರವಾಗಿ ಅನುಭವಿಸಬೇಕಾದ ಶಿಕ್ಷೆಯ ವಿವರವನ್ನು ಓದಿ ತಿಳಿಯಬಹುದು!). ಅಲ್ಲ ಎರಡೂ ಸರಿಯೋ?! ನರಕದಲ್ಲಿ ಒಂದು ಸುತ್ತಿನ ಶಿಕ್ಷೆ ಮುಗಿಸಿ, ನಂತರ ಪುನಃ ಭೂಮಿಯಲ್ಲಿ ಇನ್ನುಳಿದುದನ್ನು ಅನುಭವಿಸಬೇಕೇನು??!  ಮೋಕ್ಷ ಮಾನವ ಜೀವನದ ಗುರಿ ಎನ್ನುತ್ತಾರೆ, ಅಂದರೆ ಜನನ ಮರಣಗಳ ಚಕ್ರದಿಂದ ಬಿಡುಗಡೆ. ಹಾಗಾದರೆ ಇವೆಲ್ಲವನ್ನೂ ನಿಯಂತ್ರಿಸಲು ಒಂದು ಮೂಲ ನಿಯಮ ಅಥವಾ ನಿಯಾಮಕ ಇರಬೇಕು.  ಸರಳವಾದ ಭಾಷೆಯಲ್ಲಿ ಹೇಳುವುದಾದರೆ ಸೃಷ್ಥಿಕರ್ತ.  ಈ ಸೃಷ್ಥಿಕರ್ತನ ಉಗಮ ಹೇಗಾಯಿತು? ಶೂನ್ಯದಿಂದ ಏನೂ ಉದ್ಭವಿಸುವುದಿಲ್ಲ! ನಿರ್ಗುಣ-ನಿರಾಕಾರ ಪರಬ್ರಹ್ಮ ಎಂಬುದೇ ಸರಿ. ಅದಕ್ಕೆ ಗುಣವೂ ಇಲ್ಲ, ಆಕಾರವೂ ಇಲ್ಲ. ಅದು ನಮ್ಮ ಕ್ರಿಯಗಳನ್ನು ನಿಯಂತ್ರಿಸುವುದಿಲ್ಲ, ಆದರೆ ಅದು ಇದೆ. ಪ್ರಕೃತಿಯಂತೆ, ತನ್ನ ಪಾಡಿಗೆ!

 

ಬಹುಶಃ ಮನುಷ್ಯ ಕೆಟ್ಟ ಕೆಲಸ ಮಾಡದಂತಿರಲು ಈ ನರಕ-ಪೂರ್ವಜನ್ಮಗಳು ಹುಟ್ಟಿಕೊಂಡವೆಂದು ಕೆಲವೊಮ್ಮೆ ಅನಿಸುತ್ತವೆ! 

 

ಕೊನೆಯ ಮಾತು: "ಹಿಂದಿನ ಜನ್ಮದ ರಹಸ್ಯ ತಿಳ್ಕೋ, ಮುಂದಿನ ಜನ್ಮದ ಭವಿಷ್ಯ ತಿಳ್ಕೋ, ಈಗಿನ ಜನ್ಮ ಹಾಳಾಗಿ ಹೋಗ್ಲಿ" ಎಂದು ಯೋಗರಾಜ ಭಟ್ರು ಬರೆಂದಂತೆ, ಮಾನವನು  ಪೂರ್ವಾಪರ ಜನ್ಮಗಳ ಬಗ್ಗೆ ತಲೆಕೆಡಿಸಿಕೊಂಡು ಜೀವನ ಪೂರ್ತಿ ಹಾಳು ಮಾಡಿಕೊಳ್ಳುತ್ತಾನೆ.

 

 

 

ಶಿವ

 

ಬರಹ

ಆತ್ಮಕ್ಕೆ ಸಾವಿಲ್ಲ‌, ಆತ್ಮವು ಪ್ರತಿ ಜನ್ಮದಲ್ಲೂ ಹೊಸ‌ ಹೊಸ‌ ಶರೀರಗಳನ್ನು ಧರಿಸುತ್ತದೆ ಎನ್ನುತ್ತಾರೆ.. ಆದರೆ ಒoದು ಜನ್ಮದಲ್ಲಿ ಆ ಶರೀರ‌ ಮಾಡಿದ‌ ಪಾಪ‌ ಕರ್ಮಗಳಿಗೆ ಅದೇ ಜನ್ಮದಲ್ಲಿ ಶಿಕ್ಷೆದೊರಕುವುದು ಸರಿಯಲ್ಲವೇ? ಯಾವುದೋ ಶರೀರ‌ ಮಾಡಿದ‌ ಪಾಪ‌ ಕರ್ಮಗಳಿಗೆ ಬೇರೊoದು ಶರೀರವನ್ನು ಶಿಕ್ಶಿಸುವುದು ಎoತಹ‌ ನ್ಯಾಯ‌? ಇದು ಅನ್ಯಾಯವಲ್ಲವೇ? ನಮ್ಮ‌ ಕಣ್ಣ ಮುoದೆ ಅನ್ಯಾಯ‌ ಮಾಡಿದ‌ ವ್ಯಕ್ತಿಗಳು ಸುಖ‌ ಸ‌oತೋಷಗಳಿoದ‌ ಬದುಕುತ್ತಾರೆ, ನ್ಯಾಯ‌, ನೀತಿ, ಧರ್ಮ‌, ಎoದೆಲ್ಲ‌ ಆಚರಿಸುವ‌ ವ್ಯಕ್ತಿಗಳು ಜೀವನದುದ್ದಕ್ಕೂ ತುಳಿತಕ್ಕೆ ಒಳಗಾಗುತ್ತಾರಲ್ಲ‌. ಅoದ‌ ಮೇಲೆ ಪಾಪ‌ ಪುಣ್ಯಗಳೆಲ್ಲ‌ ಅರ್ಥ‌ ಹೀನ‌ ಅಲ್ಲವೆ?

ಈ ಪ್ರಶ್ನೆಗೆ ಬನ್ನ‌oಜೆ ಗೋವಿoದಾಚಾರ್ಯರು ಉತ್ತರ‌ ನೀಡಿದ್ದಾರೆ...(ವಿಜಯ‌ ಕರ್ನಾಟಕ‌, 29.12.2012, ಬೋಧಿವೃಕ್ಷ, ಸತ್ಸಂಗ ಕಾಲಂ) ಆದರೂ ಇನ್ನಷ್ಟು...ಮತ್ತಷ್ಟು ಉತ್ತರ‌ ಬೇಕು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet