ಟೀ ಅಂಗಡಿಯಿಂದ ಪ್ರಧಾನಿ ಅಭ್ಯರ್ಥಿವರೆಗೆ

ಟೀ ಅಂಗಡಿಯಿಂದ ಪ್ರಧಾನಿ ಅಭ್ಯರ್ಥಿವರೆಗೆ

1950ರಲ್ಲಿ ಜನಿಸಿದ ನರೇಂದ್ರ ದಾಮೋದರ ದಾಸ್ ಮೋದಿ ಎಂಬ ದೇಶ ಕಂಡ ಅಪ್ರತಿಮ ನಾಯಕ ಗುಜರಾತ್ ನ  ಇಂದಿನ ಮೂರನೇ ಬಾರಿಯ ಹ್ಯಾಟ್ರಿಕ್ ಮುಖ್ಯಮಂತ್ರಿ.

ತನ್ನ ಅಣ್ಣನ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತ ತನ್ನ ವಿಭಿನ್ನ ಶೈಲಿಯ ವಾಕ್ ಚಾತುರ್ಯದಿಂದ ಅಂಗಡಿಗೆ ಬರುವ ಗ್ರಾಹಕರನ್ನು ಆಕ್ರ್ಶಿಸುತಿದ್ದ ವ್ಯಕ್ತಿತ್ವ ಮೊದಿಯವರದ್ದು..ಆ ಸಮಯದಲ್ಲಿ ಅರ್ ಎಸ್ ಎಸ್ ನ ಸದಸ್ಯರ ಕಣ್ಣಿಗೆ ಬಿದ್ದ ಇವರು ಆ ವಯಸ್ಸಿನಲ್ಲಿಯೇ ದೇಶಭಾಕ್ತರಾಗಿದ್ದರು..ಸಂಘದ ಕಚೇರಿಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಾ ಇತರ ಸಣ್ಣ ಪುಟ್ಟ ಕೆಲಸಗಳಲ್ಲಿ ನೆರವಾಗುತ್ತ ಸಂಘದ ಸಕ್ರಿಯ ಕಾರ್ಯಕರ್ತರಾದರು..ಆನಂತರ ಗುಜರಾತ್ ನಲ್ಲಿ ಸಂಭವಿಸಿದ ನೆರೆಯ ಪರಿಸ್ತಿತಿಯಲ್ಲಿ ನಿರಾಶ್ರಿತರಿಗೆ ಸಹಾಯಾ ಮಾಡಿ ಜನಮನಕ್ಕೆ ಹತ್ತಿರವಾದರು...ಇದಾದ ನಂತರ ಕೇಶುಭಾಯ್ ಸರ್ಕಾರ ಅಧಿಕಾರದಲ್ಲಿದ್ದಾಗ ಸಂಭವಿಸಿದ ಗುಜರಾತ್ ಭೂಕಂಪದಲ್ಲಿ ಸಾವಿರಾರು ಜನರು ಮ್ರುತಪಟ್ಟರು .ಆಗ ಹೆಚ್ಚು ನಿರಾಶ್ರಿತರಿಗೆ ಸಹಾಯಾ ಮಾಡಿ ಜನಸೇವೆಗೆ ಟೊಂಕಕಟ್ಟಿ ನಿಂತು ಜನರಿಗಾಗಿ ದುಡಿದರು.ಇವರ ಜನಸೇವೆ ದೇಶಭಕ್ತಿ ಸಂಘತಾನೆ ಶಕ್ತಿ ಗುರುತಿಸಿದ ಪರಿವಾರದವರು ಬಿಜಿಪೆಗೆ ಸೇರುವಂತೆ ಸೂಚಿಸಿದರು.ಬಿಜೆಪಿಯಿಂದ ರಾಜಕೀಯ ಜೀವನ ಆರಂಭಿಸಿದ ಇವರಿಗೆ ಯಶಸ್ಸು ಹತ್ತಿರವಾಗುತ್ತ ಹೋಯಿತು. ಲಾಲ್ ಕೃಷ್ಣ ಅಡ್ವಾಣಿಯವರ ನೆಚ್ಚಿನ ಶಿಷ್ಯರಾದರು.  2002ರಲ್ಲಿ ಗುಜರಾತ್ನಲ್ಲಿ ಸಂಭವಿಸಿದ ಗೋಧ್ರಾ ಗಲಭೆ ಮೋದಿಯವರ ರಾಜಕೀಯ ಜೀವನದಲ್ಲಿ ಸ್ವಲ್ಪ ಹಿನ್ನೆದೆಯಾಗುವಂತೆ ಕಂಡಿತು.ಆದರೆ ಸಿಂಹದ ಮರಿಯಂತ ಮೋದಿ ಇಂತ ಆರೋಪಗಳಿಗೆ ತಕ್ಕ ಉತ್ತರ ನೀಡಿ ನ್ಯಾಯದೇವತೆಯೇ ಮುಂದೆ ನಿರಪರಾಧಿ ಎಂದು ಸಾಬಿತುಪದಿಸಿದರು..ಅಭಿವೃದ್ದಿ ಎಂಬ ಮಂತ್ರದಂಡದೊಂದಿಗೆ ಗುಜರಾತ್ ಅನ್ನು ದೇಶದ ನ೦ ೧ ರಾಜ್ಯವಾನ್ನಾಗಿಸಿ ಇಡೀ ದೇಶವೇ ಗುಜಾರಾತ್ ಅನ್ನು ಬೆರಗು ಕಣ್ಣುಗಳಿಂದ ನೋಡುವಂತೆ ಮಾಡಿದ ಮಹಾನ್ ಸಾಧಕರಾದರು..ಗೋವಾದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮುಂಬರುವ  2014ರ ಲೋಕಸಭಾ   ಚುನಾವಣೆಯ ಸಾರತ್ಯ  ವಹಿಸಿಕೊಂಡರು. ದಕ್ಷಿಣ ಭಾರತದ ಮೊದಲ ಚುನಾವಣಾರ್ಯಾಲಿ ಹ್ಯದರಬಾದ್ ನಲ್ಲಿ ನಡೆದಾಗ ಮೂರು ಲಕ್ಷಕ್ಕೂ ಅಧಿಕ ಜನ ಉತ್ತರ ಖಂಡ  ನೆರೆ  ಸಂತ್ರಸ್ತರಿಗಾಗಿ  ಐದು ರುಪಾಯಿ ಟಿಕೆಟ್ ಕೊಟ್ಟು ಖರೀದಿಸಿ ಹೊಸ ದಾಖಲೆ  ಬರೆದ ಸಮಾವೇಶ ಮಾಡಿದರು  ಸತತ  ಮೊರು ಬಾರಿ ಬಿಜೆಪಿಯನ್ನು ಭಾರಿ ಬಹುಮತದೊಂದಿಗೆ ಗೆಲ್ಲಿಸಿಕೊಟ್ಟರು.ಹ್ಯಾಟ್ರಿಕ್ ಮುಕ್ಯಮಂತ್ರಿ ಆಗಿ ಸೇವೆ ಸಲ್ಲಿಸುತ್ತಿರುವ ಮೊದಿಜಿ ಅವರು ಭಾರತದ ಪ್ರಧಾನ ಮಂತ್ರಿ ಆಗಬೇಕೆಂಬುದು ಇಡೀ ದೇಶ ಕಂಡ ಕನಸಾಗಿ ರೂಪುಗೊಂಡಿತು.ಇಡೀ ದೇಶದ ಯುವಸಮೂಹ ಮೋದಿಯವರನ್ನು ತಮ್ಮ ಮುಂದಿನ ಪ್ರಧಾನಿ ಆಗಲು ಆಶಿಸುತ್ತಿರುವುದು   ಇಂದಿನ ವಾಸ್ತವ.ಆದಕ್ಕೆ ಪೂರಕವಾಗಿ ಬಿಜೆಪಿ ಕೂಡ ಮೋದಿಯವರನ್ನು ಪ್ರಧಾನಿ ಅಭ್ಯರ್ತಿ ಆಗಿ ಸೆಪ್ಟಂಬರ್  ೧೩ ಶುಭ ಶುಕ್ರವಾರದಂದು ಬಿಜೆಪಿ ಸಂಸದೀಯ ಮಂಡಳಿಯ ಅನುಮೊದನೆಯೊಂದಿಗೆ  ಅಧಿಕೃತವಾಗಿ ಘೋಷಿಸಿತು.ಇಡೀ ದೇಶವೇ ಈ ಸುದ್ದಿ ಕೇಳಿ  ಸಂಭ್ರಮ ಪಟ್ಟಿತು..ಕೋಟ್ಯಂತರ ಭಾರತೀಯರ ಅಭಿಲಾಷೆಯಂತೆ ಮೊದಿಯವರು ಮುಂದಿನ ಪ್ರಧಾನಿ ಆಗಿ ಭಾರತವನ್ನು ಅಭಿವೃದ್ದಿ ಪತದತ್ತ ಕೊಂಡೊಯ್ಯುವುದನ್ನು ನೋಡಲು ಉತ್ಸುಕರಾಗಿದ್ದೇವೆ...ಈ ಭಾಗ್ಯ ಬರಬೇಕಾದರೆ ಪ್ರತಿಯೊಬ್ಬರೂ ಬಿಜೆಪಿಯನ್ನು ಬೆಂಬಲಿಸಿ ಮೋದಿ ಮೋಡಿ ಭಾರತಕ್ಕೆ ಆಗುವಂತೆ ಮಾಡಬೇಕು...ಈಗಾಗಲೇ ಸಾವಿರಾರು ನಮೋ ಬಿಗಗ್ರೇಡ್ ಗಳು ಭಾರತಾದ್ಯಂತ ಹುಟ್ಟಿಕೊಂಡಿವೆ ಇವು ಮೋದಿಯವರನ್ನು ಪ್ರಧಾನಿಯ ಆಗುವಂತೆ ಮಾಡಲು ಶ್ರಮಿಸುತ್ತಿವೆ..  ದೇಶಾದ್ಯಂತ ನಮೋ ಅಲೆ ಎದ್ದಿದ್ದು ಇದು ಮುಂದಿನ ಚುನಾವಣೆಯಲ್ಲಿ  ಉತ್ತರವಾಗಿ ಮೋದಿ ಪ್ರಧಾನಿ ಆಗಬೇಕೆಮ್ಬುದೆ ನಮ್ಮೆಲ್ಲರ ಆಶಯ ......

                               **********ವನ್ಸ್ ಅಗೈನ್ ಐ ವಾಂಟ್ ಮೈ ನೇಶನ್ ಮೊದಿಫೈಡ್****** 

Comments

Submitted by keshavmysore Mon, 11/11/2013 - 12:42

"...ದಕ್ಷಿಣ ಭಾರತದ ಮೊದಲ ಚುನಾವಣಾರ್ಯಾಲಿ ಹ್ಯದರಬಾದ್ ನಲ್ಲಿ ನಡೆದಾಗ......"
"ರ್ಯಾಲಿ" - ಇದನ್ನು ಬರಹ ತಂತ್ರಜ್ಞಾನದಲ್ಲಿ ಹೀಗೂ ಬರೆಯಬಹುದು - "ರ‍್ಯಾಲಿ"
- ಕೇಶವಮೈಸೂರು