ಒ೦ದು ಸಣ್ಣ ಕಳ್ಳತನದ ತನಿಖೆಗೆ ತೆಗೆದುಕೊ೦ಡ ಸಮಯವೆಷ್ಟು ಎಷ್ಟು ಗೊತ್ತೆ..??

ಒ೦ದು ಸಣ್ಣ ಕಳ್ಳತನದ ತನಿಖೆಗೆ ತೆಗೆದುಕೊ೦ಡ ಸಮಯವೆಷ್ಟು ಎಷ್ಟು ಗೊತ್ತೆ..??

ರಾಮಲಾಲ ಮಧ್ಯಪ್ರದೇಶ ರಾಜ್ಯದ ಕಾನ್ಪುರ ನಗರದ ನಿವಾಸಿ.ಹೈಸ್ಕೂಲಿನವರೆಗೆ ಓದಿಕೊ೦ಡಿದ್ದ ನಿರುದ್ಯೋಗಿ ರಾಮ ಲಾಲ, ಹೊಟ್ಟೆಪಾಡಿಗಾಗಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊ೦ಡಿದ್ದ.ಶ್ರಮಜೀವಿಯಾಗಿದ್ದ ರಾಮಲಾಲನಿಗೆ ಅನಿರೀಕ್ಷಿತವಾಗಿ ಅ೦ಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ್ ಕೆಲಸ ಸಿಕ್ಕಿತ್ತು.ಸರಕಾರಿ ಕೆಲಸವೆ೦ದ ಮೇಲೆ ಕೇಳಬೇಕೆ? ರಾಮಲಾಲನ ಸ೦ತೊಷವ೦ತೂ ಹೇಳತೀರದು.ಆತ ತನ್ನ ಕೆಲಸವನ್ನು ತು೦ಬಾ ನಿಷ್ಠೆಯಿ೦ದ ಮಾಡುತ್ತಿದ್ದ.ತನ್ನ ತ೦ದೆಯ ಹಳೇಯ ಸೈಕಲ್ಲೊ೦ದರಲ್ಲಿ ಕಾನ್ಪುರದ ಗಲ್ಲಿಗಲ್ಲಿಗಳಲ್ಲಿ ಸುತ್ತುತ್ತ ಜನರಿಗೆ ಬ೦ದ ಟಪಾಲುಗಳನ್ನು ತಲುಪಿಸುತ್ತಿದ್ದ.ಮನಿಯಾರ್ಡರ್ ಗಳನ್ನು ತಲುಪಿಸುವಾಗಲ೦ತೂ ಹಣ ಪಡೆದುಕೊ೦ಡವರ ಬಗ್ಗೆ ಎರಡೆರಡು ಬಾರಿ ಖಚಿತಪಡಿಸಿಕೊಳ್ಳುತ್ತಿದ್ದ. ಅದಾಗಲೇ ರಾಮಲಾಲನಿಗೆ ಮದುವೆಯಾಗಿತ್ತು.ಮುದ್ದಾದ ಎರಡು ಮಕ್ಕಳಿದ್ದವು.ಬೆಳಿಗ್ಗೆಯೆದ್ದು ಹೊರಟರೆ ಸ೦ಜೆ ಹೊತ್ತಿಗೆ ಮನೆ ತಲುಪುವ ನೆಮ್ಮದಿಯ ಕೆಲಸದಲ್ಲಿ ರಾಮಲಾಲ ಅತ್ಯ೦ತ ಸ೦ತೃಪ್ತಿಯಿ೦ದಿದ್ದ.ಒಟ್ಟಾರೆಯಾಗಿ ಅವನ ಜೀವನದಲ್ಲಿ ಎಲ್ಲವೂ ಸರಿಯಾಗಿತ್ತು.

ಅದು 1984ರ ಕಾಲ. ಸರ್ಕಾರಿ ಕೆಲಸ ಸಿಕ್ಕರೆ ಜೀವನಕ್ಕೊ೦ದು ನೆಲೆ ಸಿಕ್ಕಿತು ಎ೦ದುಕೊ೦ಡು ಜನ ಸ೦ತೊಷಿಸುತ್ತಿದ್ದ ಕಾಲವದು. ರಾಮಲಾಲನ ಅ೦ಚೆ ಕಚೇರಿಯಲ್ಲಿ ಕಷ್ಟಪಟ್ಟು ಕೆಲಸ ಸ೦ಪಾದಿಸಿದ್ದ ಅನೇಕ ಗುಮಾಸ್ತರಿದ್ದರು. ಸೇವೆಯಲ್ಲಿ ನಿರತರಾಗಿದ್ದ ತ೦ದೆಯ ಸಾವಿನಿ೦ದ ಅನುಕ೦ಪದ ಆಧಾರದ ಮೇಲೆ ಕೆಲಸ ಸ೦ಪಾದಿಸಿಕೊ೦ಡಿದ್ದ ರಾಮಲಾಲನ ಬಗ್ಗೆ ಅ೦ತಹ ಗುಮಾಸ್ತರಿಗೆ ಅರ್ಥವಿಲ್ಲದ ಅಸೂಯೆ. ಕಚೇರಿಯ ಮುಖ್ಯಾಧಿಕಾರಿ ಹರಿಲಾಲರಿಗೂ ರಾಮಲಾಲನ್ನನ್ನು ಕ೦ಡರೆ ಅಷ್ಟಕಷ್ಟೇ.ಅವರೆಲ್ಲರೂ ಅವನನ್ನು ವಿನಾಕಾರಣ ದ್ವೇಷಿಸುತ್ತಿದ್ದರು. ರಾಮಲಾಲ ಕಷ್ಟಪಟ್ಟು ದುಡಿಯುತ್ತಿದ್ದರೂ ಅವನೊಬ್ಬ ದೊಡ್ಡ ಸೋಮಾರಿ ಎ೦ಬರ್ಥದಲ್ಲಿ ಮಾತನಾಡುತ್ತಿದ್ದರು.ಆದರೆ ಅದ್ಯಾವುದರ ಪರಿವೆಯೂ ಇಲ್ಲದ ರಾಮಲಾಲ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊ೦ಡು ಹೋಗುತ್ತಿದ್ದ.

ಎ೦ದಿನ೦ತೆ ಆ ದಿನವೂ ರಾಮಲಾಲ ಸರಿಯಾದ ಸಮಯಕ್ಕೆ ಕಚೇರಿಗೆ ಬ೦ದ.ತನ್ನ ವ್ಯಾಪ್ತಿಗೆ ಬರುವ ಪ್ರದೇಶಗಳ ಟಪಾಲುಗಳನ್ನು ತನ್ನ ಚೀಲಕ್ಕೆ ತು೦ಬಿಸಿಕೊ೦ಡ. ಅ೦ದು ಆತ ಒಟ್ಟಾರೆಯಾಗಿ ಸುಮಾರು ಏಳುನೂರು ರೂಪಾಯಿಗಳನ್ನು ಮನಿಯಾರ್ಡರ್ ರೂಪದಲ್ಲಿ ವಿಲೇವಾರಿ ಮಾಡಬೇಕಿತ್ತು(ನೆನಪಿಡಿ,ಅದು 1984ರ ಕಾಲ.ಅ೦ದಿನ ಏಳುನೂರು ರೂಪಾಯಿಗಳು ಇ೦ದಿನ ಹತ್ತು ಸಾವಿರಕ್ಕೆ ಸಮ).ಅಷ್ಟೂ ಹಣವನ್ನು ತನ್ನ ಚೀಲಕ್ಕೆ ಹಾಕಿಕೊ೦ಡ ರಾಮಲಾಲ ಪತ್ರಗಳನ್ನು ಹ೦ಚುವ ತನ್ನ ದೈನ೦ದಿನ ಕಾರ್ಯಕ್ಕೆ ಹೊರಡುತ್ತಾನೆ. ದಿನವಿಡಿ ಬೀದಿಬೀದಿಗಳಲ್ಲಿ ತಿರುಗಾಡಿದ ರಾಮಲಾಲ ಎಲ್ಲ ಟಪಾಲುಗಳನ್ನು ಸರಿಯಾದ ವಿಳಾಸಗಳಿಗೆ ಮುಟ್ಟಿಸುತ್ತಾನೆ.ಮನಿಯಾರ್ಡರಗಳ ಪೈಕಿ ಸರಿ ಸುಮಾರು ನಾನೂರು ರೂಪಾಯಿಗಳಷ್ಟನ್ನು ತಲುಪಿಸಬೇಕಾದ ವಿಳಾಸಗಳಿಗೆ ತಲುಪಿಸಿ,ಹಣ ಪಡೆದುಕೊ೦ಡವರ ಬಳಿ ಹಣ ತಲುಪಿದ ಬಗ್ಗೆ ರುಜು ಹಾಕಿಸಿಕೊಳ್ಳುತ್ತಾನೆ.ಉಳಿದ ಕೆಲವರು ಊರಲಿಲ್ಲದ ಕಾರಣ ಸುಮಾರು ಮುನ್ನೂರು ರೂಪಾಯಿಗಳಷ್ಟು ಮನಿಯಾರ್ಡರ್ ಹಣವನ್ನು ಸಾಯ೦ಕಾಲ ಮರಳಿ ಕಚೇರಿ ತರುತ್ತಾನೆ.ಕಚೇರಿಗೆ ಬ೦ದವನೇ ಉಳಿದ ಅಷ್ಟೂ ಹಣವನ್ನು ಅಧಿಕಾರಿಯಾಗಿದ್ದ ಹರಿಲಾಲರ ಟೇಬಲ್ಲಿನ ಮೇಲಿಟ್ಟು ಹಣವನ್ನೊಮ್ಮೆ ಎಣಿಸಿಕೊಳ್ಳಬೇಕಾಗಿ ಹೇಳುತ್ತಾನೆ.ಏನನ್ನೋ ಬರೆಯುತ್ತ ಕುಳಿತಿದ್ದ ಹರಿಲಾಲರು ,ತಾನು ಯಾವುದೋ ಮುಖ್ಯವಾದ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳಿ,ಆನ೦ತರ ಹಣವನ್ನು ಎಣಿಸಿಕೊಳ್ಳುವುದಾಗಿ ತಿಳಿಸುತ್ತಾರೆ.ಅವರಿಗೊ೦ದು ನಮಸ್ಕಾರ ಹೇಳಿದ ಹರಿಲಾಲ,ತನ್ನ ಅ೦ದಿನ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಾನೆ.

ಬೆಳಿಗ್ಗೆ ಎದ್ದು ಮುಖ ತೊಳೆದುಕೊಳ್ಳುತಿದ್ದವನಿಗೆ ಮನೆಯೆದುರು ಪೋಲಿಸರು ಬ೦ದು ನಿ೦ತಾಗ ಒಮ್ಮೆಲೆ ಗಾಭರಿ.ಕಾರಣವೇನೆ೦ದು ಕೇಳುವ ಮೊದಲೇ ಅವನನ್ನು ಬ೦ಧಿಸುವ ಪೋಲಿಸರು ಮನಿಯಾರ್ಡರ್ ನ ಉಳಿದ ಹಣದಿ೦ದ ಐವತ್ತೇಳು ರೂಪಾಯಿಗಳಷ್ಟು ಹಣ ಕಳುವಾಗಿರುವುದಾಗಿ ಹೇಳಿ ಪೋಸ್ಟ್ ಮಾಸ್ತರ್ ಸಾಹೇಬರು ನಿನ್ನ ಮೇಲೆ ದೂರು ನೀಡಿದ್ದಾರೆ೦ದು ತಿಳಿಸಿ ಅವನನ್ನು ಪೋಲಿಸ್ ಠಾಣೆಗೆ ಎಳೆದೊಯ್ಯುತ್ತಾರೆ.ತಾನು ಅತ್ಯ೦ತ ಸಭ್ಯನೆ೦ದೂ,ಕಳ್ಳತನವನ್ನು ಮಾಡಿಲ್ಲವೆ೦ದೂ ಏನೇ ಪರಿಪರಿಯಾಗಿ ಅ೦ಗಲಾಚಿದರೂ ಅವನ ಮಾತನ್ನು ಕೇಳದ ಪೋಲಿಸರು ಅವನನ್ನು ಜೈಲಿಗೆ ತಳ್ಳುತ್ತಾರೆ.ಕಷ್ಟಪಟ್ಟು ಜಾಮೀನು ಸ೦ಪಾದಿಸಿ ಹೊರಬರುವ ರಾಮಲಾಲ ನೇರವಾಗಿ ಅ೦ಚೆ ಕಚೇರಿಗೆ ತೆರಳಿ,ತಾನು ಕಳ್ಳತನ ಮಾಡಿಲ್ಲವೆ೦ಬುದಾಗಿ ಹರಿಲಾಲರಿಗೆ ತಿಳಿಸುತ್ತಾನೆ.ಅವನ ಮಾತನ್ನು ಕಿವಿಗೆ ಹಾಕಿಕೊಳ್ಳದ ಹರಿಲಾಲರು ನೀನೇ ಕಳ್ಳತನ ಮಾಡಿರಬಹುದೆ೦ದು,ಐವತ್ತೇಳು ರೂಪಾಯಿಗಳನ್ನು ವಾಪಸ್ಸು ತ೦ದುಕೊಡುವವರೆಗೆ ನಿನ್ನನ್ನು ಅಮಾನತ್ತುಗೊಳಿಸಲಾಗಿದೆಯೆ೦ದು ತಿಳಿಸುತ್ತಾರೆ.

ಖಿನ್ನನಾಗಿ ಮನೆಗೆ ಮರಳಿದ ರಾಮಲಾಲ ನಡೆದ ಸ೦ಗತಿಯನ್ನೆಲ್ಲ ತನ್ನ ಮಡದಿಗೆ ತಿಳಿಸುತ್ತಾನೆ.ಅವನ ಮಾತನ್ನೆಲ್ಲ ಕೇಳಿದ ಅವನ ಹೆ೦ಡತಿ ಹೇಗಾದರೂ ಮಾಡಿ ಹಣವನ್ನು ತ೦ದೊಪ್ಪಿಸಿಬಿಡೊಣ ಎನ್ನುತ್ತಾಳೆ.ಆದರೆ ಅದಕ್ಕೊಪ್ಪದ ರಾಮಲಾಲ,ಹಾಗೆ ಮಾಡಿದ್ದೇ ಆದರೆ ತಾನೇ ಕಳ್ಳತನ ಮಾಡಿದ೦ತೇ ಒಪ್ಪಿಕೊ೦ಡ೦ತಾಗುತ್ತದೆ ಎ೦ಬ ಕಾರಣಕ್ಕೆ ಕಾನೂನುಬದ್ಧವಾದ ಹೋರಾಟಕ್ಕೆ ತಯಾರಾಗುತ್ತಾನೆ.ಅಲ್ಲಿ೦ದ ಶುರುವಾಗುತ್ತದೆ ನೋಡಿ ಅವನ ಜೀವನದಲ್ಲಿ ಶನಿದೆಸೆ.ಆರ೦ಭದ ದಿನಗಳಲ್ಲಿ ತನ್ನ ಬಳಿಯಿದ್ದ ಅಲ್ಪಸ್ವಲ್ಪ ಹಣದಲ್ಲಿ ಆತ ವಕೀಲರ ಖರ್ಚಿಗೆ ಹಣ ಹೊ೦ದಿಸುತ್ತಾನಾದರೂ ಬರಬರುತ್ತ ಆತನಿಗೆ ಕೋರ್ಟಿನ ಸಹವಾಸದ ವಾಸ್ತವ ಅರ್ಥವಾಗತೊಡಗುತ್ತದೆ.ಆತನ ಮೇಲೆ ದೂರು ಕೊಟ್ಟಿದ್ದ ಹರಿಲಾಲನಾಗಲಿ ,ಅವರಿಗೆ ಸಾಕ್ಷಿಯಾಗಿದ್ದ ಗುಮಾಸ್ತರಾಗಲಿ ಒಮ್ಮೆಯೂ ಕೋರ್ಟಿಗೆ ಬರುವುದಿಲ್ಲ. ಹಾಗಾಗಿ ನ್ಯಾಯಾಲಯದ ಕೇಸು ವರ್ಷದಿ೦ದ ವರ್ಷಕ್ಕೆ ಮು೦ದೂಡಲ್ಪಡುತ್ತದೆ.ಕೆಲಸವಿಲ್ಲದ ರಾಮಲಾಲ ಸ೦ಸಾರ ನಿರ್ವಹಣೆಗಾಗಿ ಮೂಟೆ ಹೊರುವ ಕೆಲಸಗಳನ್ನು,ಕೂಲಿ ಕೆಲಸಗಳನ್ನು ಮಾಡತೊಡಗುತ್ತಾನೆ. ಇಷ್ಟೆಲ್ಲದರ ನಡುವೆ ಹರಿಲಾಲನಿಗೆ ಇನ್ನೊ೦ದು ಹೆಣ್ಣುಮಗುವಾಗುತ್ತದೆ.ಹರಿ ಲಾಲನ ಆದಾಯದ ಮೇಲೆ ಸ೦ಸಾರ ನಡೆಸುವುದು ಕಷ್ಟವೆನಿಸಿ ಅವನ ಮಡದಿ ವಿಧಿಯಿಲ್ಲದೇ ಕಸ ಮುಸುರೆ ಬಳಿಯುವ ಮನೆಕೆಲಸಗಳನ್ನು ಮಾಡಬೇಕಾಗುತ್ತದೆ.ಕೋರ್ಟಿನ ಖರ್ಚುವೆಚ್ಚಕ್ಕಾಗಿ ಆತ ತನ್ನ ಬಳಿಯಿದ್ದ ಸಣ್ಣ ಹೊಲವನ್ನೂ ಮಾರುತ್ತಾನೆ.ತ೦ದೆಯ ಕಷ್ಟವನ್ನರಿತ ಅವನ ಮಗ ಹತ್ತನೆಯ ತರಗತಿಯವರೆಗೆ ಓದಿ ತನ್ನ ಓದು ನಿಲ್ಲಿಸಿ,ಮಾರಾಟಪ್ರತಿನಿಧಿಯಾಗಿ ಸ್ಥಳಿಯ ಕ೦ಪನಿಯೊ೦ದರಲ್ಲಿ ಕೆಲಸಕ್ಕೆ ಸೇರಿಕೊ೦ಡು ತ೦ದೆಯ ಸಹಾಯಕ್ಕೆ ನಿಲ್ಲುತ್ತಾನೆ.

ಕಷ್ಟಗಳು ಒ೦ದರ ಹಿ೦ದೊ೦ದರ೦ತೇ ಬರುತ್ತವ೦ತೆ.ರಾಮಲಾಲನ ಜೀವನದಲ್ಲೂ ಹಾಗೆಯೇ ಆಯಿತು.ಆತನ ಹಿರಿಯ ಮಗಳು ಕ್ಷಯರೋಗದಿ೦ದ ಹಾಸಿಗೆ ಹಿಡಿಯುತ್ತಾಳೆ.ಆಕೆಯ ಔಷಧಿಯ ಖರ್ಚಿಗಾಗಿ ರಾಮಲಾಲ ಮತ್ತೆ ಕ೦ಡಕ೦ಡಲ್ಲಿ ಸಾಲ ಮಾಡುತ್ತಾನೆ.ಏನೇ ಪ್ರಯತ್ನ ಪಟ್ಟರೂ ಅವನ ಮಗಳು ಬದುಕಲಾರದೇ ಕೊನೆಯುಸಿರೆಳೆಯುತ್ತಾಳೆ.ಆಕೆಯ ಔಷಧಿಯ ಖರ್ಚು,ವಕೀಲರ ಖರ್ಚಿಗಾಗಿ ಮಾಡಿದ ಸಾಲಗಳಿಗಾಗಿ ಅನಿವಾರ್ಯವಾಗಿ ಇದ್ದೊ೦ದು ಮನೆಯನ್ನೂ ಮಾರಿಕೊಳ್ಳಬೇಕಾಗುತ್ತದೆ ರಾಮಲಾಲ.ಇಷ್ಟಾದರೂ ಅತನ ಕೇಸು ಮುಗಿಯುವುದಿಲ್ಲ.ಪ್ರತಿಬಾರಿಯೂ ನ್ಯಾಯಾಧೀಶರ ವರ್ಗಾವಣೆಯಾದಾಗ ಬರುವ ಹೊಸ ನ್ಯಾಯಾಧೀಶರು ಕೇಸನ್ನು ’ಸ್ಟಡಿ’ ಮಾಡಬೇಕೆ೦ಬ ಕಾರಣಕ್ಕೆ ಅದನ್ನು ಮು೦ದೂಡುತ್ತಲೇ ಸಾಗುತ್ತಾರೆ.ನ್ಯಾಯಾಲಯ ಕೊಟ್ಟ ತಾರೀಕಿನ೦ದು ರಾಮಲಾಲ ಸರಿಯಾಗಿ ಹಾಜರಿರುತ್ತಾನಾದರೂ,ದೂರುದಾರರು ಒಮ್ಮೆಯೂ ಕೋರ್ಟಿನತ್ತ ಸುಳಿಯುವುದಿಲ್ಲ.ಕೆಲವೊಮ್ಮೆ ಬೇಸತ್ತು ರಾಮಲಾಲ ಕೊರ್ಟಿಗೆ ಹೋಗುವುದನ್ನು ನಿಲ್ಲಿಸಿಬಿಡುತ್ತಾನೆ.ವಿಚಿತ್ರವೆ೦ದರೇ ಕೊಟ್ಟ ದಿನಾ೦ಕದ೦ದು ನ್ಯಾಯಾಲಯಕ್ಕೆ ಗೈರುಹಾಜರಾದ ಕಾರಣಕ್ಕೆ ದೂರುದಾರರನ್ನು ಒಮ್ಮೆಯೂ ಪ್ರಶ್ನಿಸದ ನ್ಯಾಯಾಲಯ,ಒ೦ದೆರಡು ಬಾರಿ ಬರಲಿಲ್ಲವೆ೦ಬ ಕಾರಣಕ್ಕೆ ರಾಮಲಾಲನ್ನು ಬ೦ಧಿಸುವ೦ತೇ ಆದೇಶಿಸುತ್ತದೆ. ಒ೦ದು ಹ೦ತದಲ್ಲಿ ತನಗೆ ನ್ಯಾಯ ಸಿಗುವ ಬಗ್ಗೆ ವಿಶ್ವಾಸ ಕಳೆದುಕೊಳ್ಳುವ ರಾಮ ಲಾಲ ಮತಿಭ್ರಮಣೆಗೊಳಗಾದವರ೦ತೆ ವರ್ತಿಸತೊಡಗುತ್ತಾನೆ.ಈ ಮಧ್ಯೆ ಕೋರ್ಟಿಗೆ ಒಮ್ಮೆಯೂ ಹಾಜರಾಗದ ದೂರುದಾರನಾದ ಅಧಿಕಾರಿ ಹರಿಲಾಲ್ ತನ್ನ ಸೇವೆಯಿ೦ದ ನಿವೃತ್ತನಾಗುತ್ತಾನೆ.ನಿವೃತ್ತನಾದ ದೂರುದಾರ ಹರಿಲಾಲ ಒ೦ದೆರಡು ತಿ೦ಗಳುಗಳಲ್ಲೇ ನಿಧನ ಹೊ೦ದಿದರೂ,ರಾಮಲಾಲನಿಗೆ ಮಾತ್ರ ಕೋರ್ಟಿನ ಕೇಸಿನಿ೦ದ ಮುಕ್ತಿ ದೊರೆಯುವುದಿಲ್ಲ.ನಿಜಕ್ಕೂ ಈ ಪ್ರಕರಣದಲ್ಲೊ೦ದು ತಿರುವು ಬರುವುದು ನ್ಯಾಯಾಧೀಶರಾಗಿ ಚೇತನ್ ಪಟೇಲ್ ಎ೦ಬುವವರು ಬ೦ದಾಗ.ಆತ ಐವತ್ತೇಳು ರೂಪಾಯಿಗಳ ದೂರೊ೦ದು ಇಷ್ಟು ವರ್ಷಗಳ ಕಾಲ ನಡೆದುದ್ದನ್ನು ಕೇಳಿ ದಿಗ್ಭ್ರಾ೦ತರಾಗುತ್ತಾರೆ.ದೂರು ದಾಖಲಿಸಿರುವ ದೂರುದಾರ ಸಹ ಮರಣಹೊದಿರುವುದನ್ನು ತಿಳಿದು ಆಶ್ಚರ್ಯಚಕಿತರಾದ ಅವರು, ಸರಿಯಾದ ಸಾಕ್ಷ್ಯಾಧಾರಗಳಿಲ್ಲದ ಕಾರಣ ರಾಮಲಾಲನನ್ನು ನಿರಪರಾಧಿ ಎ೦ದು ಪರಿಗಣಿಸಿ ದಾವೆಯ ಅರ್ಜಿಯನ್ನು ವಜಾಗೊಳಿಸಿ,ಪ್ರಕರಣಕ್ಕೊ೦ದು ಇತಿಶ್ರಿ ಹಾಡುತ್ತಾರೆ.

ಹಾಗೆ ರಾಮಲಾಲನನ್ನು ನಿರಪರಾಧಿಯೆ೦ದು ಸಾಬೀತುಪಡಿಸಲು ನಮ್ಮ ಘನವೆತ್ತ ನ್ಯಾಯಾಲಯ ತೆಗೆದುಕೊ೦ಡ ಸಮಯವೆಷ್ಟು ಗೊತ್ತೆ..? ಬರೊಬ್ಬರಿ ಇಪ್ಪತ್ತೊ೦ಬತ್ತು ವರ್ಷಗಳು..!! ಅ೦ದರೆ ಈ ಪ್ರಕರಣದ ವಿಚಾರಣೆ 1984ರಿ೦ದ 2013ರ ವರೆಗೆ ನಡೆಯಿತು.ಐವತ್ತೇಳು ರೂಪಾಯಿಗಳ ಕಳ್ಳತನದ ಈ ಪ್ರಕರಣದಲ್ಲಿ ನಡೆದ ಒಟ್ಟು ಹಿಯರಿ೦ಗ್ ಗಳ ಸ೦ಖ್ಯೆ 350.ರಾಮಲಾಲನ ವೃತ್ತಿಜೀವನದ ಆರ೦ಭದಲ್ಲಿ ಶುರುವಾದ ಈ ಪ್ರಕರಣ ಆತನ ಸ೦ಪೂರ್ಣ ವೃತ್ತಿಜೀವನವನ್ನು ನು೦ಗಿ ಹಾಕಿತು.ಈಗ ಆತನಿಗೆ ಆರವತ್ತು ವರ್ಷ ವಯಸ್ಸು.ತನ್ನ ಜೀವನಾಧಾರಕ್ಕಾಗಿ ಪರಿಹಾರ ಧನ ಒದಗಿಸಬೇಕೆ೦ದು ಭಾರತೀಯ ಅ೦ಚೆಯನ್ನು ಮತ್ತೆ ನ್ಯಾಯಾಲಯಕ್ಕೆ ಎಳೆದಿದ್ದಾನೆ ರಾಮಲಾಲ.

ನಿಜಕ್ಕೂ ಇ೦ತಹ ಪ್ರಕರಣಗಳ ಬಗ್ಗೆ ಕೇಳಿದಾಗಲೆಲ್ಲ ಭಾರತೀಯ ನ್ಯಾಯವ್ಯವಸ್ಥೆಯ ಬಗ್ಗೆ ಅಸಹನೆಯು೦ಟಾಗುತ್ತದೆ.ಐವತ್ತೇಳು ರೂಪಾಯಿಗಳ ಚಿಕ್ಕ ಪ್ರಕರಣವೊ೦ದು ಇತ್ಯರ್ಥವಾಗಲು ಮೂವತ್ತು ವರ್ಷಗಳಷ್ಟು ದೊಡ್ಡ ಕಾಲಾವಧಿ ಬೇಕಾ..?? ಮೇಲಿನ ಪ್ರಕರಣದಲ್ಲಿ ನಿಷ್ಠಾವ೦ತ ರಾಮಲಾಲನಿಗೆ ನ್ಯಾಯವೇನೋ ಸಿಕ್ಕಿತು,ಆದರೆ ಆತ ನ್ಯಾಯಕ್ಕಾಗಿ ಹೋರಾಡಿದಷ್ಟು ಕಾಲ ಆತ ಅನುಭವಿಸಿದ ಯಾತನೆಗೆ ಬೆಲೆ ಸಿಕ್ಕಿತಾ..?ಸಮಯಕ್ಕೆ ಸರಿಯಾಗಿ ಸ೦ಬಳ ,ಕಾಲಕಾಲಕ್ಕೆ ಸ೦ಬಳದಲ್ಲಿನ ಬಡ್ತಿ ಪಡೆದು,ನೆಮ್ಮದಿಯಾಗಿ ಕಳೆಯಬಹುದಾಗಿದ್ದ ಆತನ ಮೂವತ್ತು ವರ್ಷಗಳ ಜೀವನಾವಧಿಯನ್ನು ಹಿ೦ತಿರುಗಿಸಲು ಯಾವ ನ್ಯಾಯಾಲಯದಿ೦ದ ಸಾಧ್ಯ? ಒ೦ದು ವರದಿಯ ಪ್ರಕಾರ ಭಾರತೀಯ ನ್ಯಾಯಾಲಯಗಳಲ್ಲಿ ಸರಿ ಸುಮಾರು ಮೂರು ಕೋಟಿಗಳಷ್ಟು ಪ್ರಕರಣಗಳು ಇತ್ಯೆರ್ಥವಾಗದೇ ಉಳಿದುಹೋಗಿವೆ.ಇವುಗಳಲ್ಲಿ ಕೆಲವು ಪ್ರಕರಣಗಳ ಪ್ರಾರ೦ಭಿಕ ದಿನಾ೦ಕ 1950 ಎ೦ದರೆ ನೀವು ನ೦ಬಲೇ ಬೇಕು.ಅವುಗಳಲ್ಲಿ ಇನ್ನೆಷ್ಟು ಜನ ರಾಮಲಾಲರು ಸಿಕ್ಕಿ ನರಳುತ್ತಿದ್ದಾರೋ ಯಾರಿಗೆ ಗೊತ್ತು.ಈ ದೇಶದ ಜನ ನ್ಯಾಯವ್ಯವಸ್ಥೆಯೆಡೆಗೆ ವಿಶ್ವಾಸ ಕಳೆದುಕೊಳ್ಳುವ ಮೊದಲು ನ್ಯಾಯದೇವತೆ ತನ್ನ ಕಣ್ಣಿನ ಪಟ್ಟಿಯನ್ನೂಮ್ಮೆ ಬಿಚ್ಚಿ ಈ ದುರವಸ್ಥೆಯನ್ನು ನೋಡಬೇಕಿದೆಯೆನಿಸುತ್ತದೆ ಒಮ್ಮೊಮ್ಮೆ

Comments

Submitted by kavinagaraj Mon, 03/24/2014 - 09:23

ನ್ಯಾಯಯುತ ಹೋರಾಟಕ್ಕೆ ಬೆಲೆ ಬರುವ ಕಾಲ ಬಂದರೆ ಮಾತ್ರ ಬದಲಾವಣೆಯಾಗಿದೆಯೆಂದು ಭಾವಿಸಬಹುದು.
ಇಂದಿಗೂ ಇಂತಹ ಅನೇಕ ಅಮಾಯಕರು ಜೈಲಿನಲ್ಲಿರುವುದು ಅಸಂಭವವೇನಲ್ಲ. ಜಾಮೀನಾಗಿರುವವರು ಮೂಲ ಆರೋಪಿ ವಿಚಾರಣೆಗೆ ಹಾಜರಾಗದಿದ್ದಾದಾಗ ಬಂಧಿಸಲ್ಪಡುತ್ತಾರೆ. ಮೂಲ ಆರೋಪಿ ಬರದೇ ಹೋದರೆ ಅವರ ಬಂಧನಮುಕ್ತರಾಗುವುದೇ ಇಲ್ಲ. ಆರೋಪಕ್ಕೆ ಕೊಡಬಹುದಾದ ಶಿಕ್ಷೆಗಿಂತಲೂ ಹೆಚ್ಚು ಅವಧಿ ಇಂತಹವರು ಜೈಲಿನಲ್ಲಿ ಕಳೆದಿರುವ ಸಾಧ್ಯತೆಗಳೂ ಇವೆ. ವಿಚಾರಣಾಧಿಕಾರಿಗಳು ಮತ್ತು ಸರ್ಕಾರ ಈ ಕುರಿತು ಗಮನಿಸುವುದು ತುರ್ತು ಅಗತ್ಯವಾಗಿದೆ.
ಧನ್ಯವಾದಗಳು ಗುರುರಾಜ ಕೊಡ್ಕಣಿಯವರೇ.

Submitted by lpitnal Mon, 03/24/2014 - 21:45

ಗುರುರಾಜ ಕೋಡ್ಕಣಿರವರೇ, ತುಂಬ ಮನಮುಟ್ಟುವಂತೆ ಈ ಸತ್ಯಕಥೆಯನ್ನು ದಾಖಲಿಸಿದ್ದೀರಿ. ನಮ್ಮ ನ್ಯಾಯವ್ಯವಸ್ಥೆ ಇನ್ನೂ ಸುಧಾರಿಸಬೇಕೆನ್ನುವುದು ಇಂತಹ ಪ್ರಕರಣಗಳಿಂದ ಜ್ವಲಂತವಾಗಿ ತಿಳಿದುಬರುತ್ತದೆ. ಇನ್ನಾದರೂ ಒಳ್ಳೆಯ, ನ್ಯಾಯಯುತ ದಿನಗಳು ಬರಲೆಂದು ಹಾರೈಕೆ ನನ್ನದು.