ಉತ್ತರ ಕರ್ಣಾಟಕದವರಿಗೆ ಹೞಗನ್ನಡ ’ಱ’ ಮತ್ತು ’ೞ’ ಬಗೆಗಿನ ಅಱಿವು ಕಡಿಮೆ

ಉತ್ತರ ಕರ್ಣಾಟಕದವರಿಗೆ ಹೞಗನ್ನಡ ’ಱ’ ಮತ್ತು ’ೞ’ ಬಗೆಗಿನ ಅಱಿವು ಕಡಿಮೆ

Comments

ಬರಹ

ನಾನು ತಿಳಿದಂತೆ, ವಿಚಾರಿಸಿದಂತೆ, ಉತ್ತರ ಕರ್ಣಾಟಕದವರಿಗೆ ಹೞಗನ್ನಡದ ವಿಚಾರವಾಗಿ ಗೊತ್ತಿರುವುದು ಕಡಿಮೆ. ’ಱ’ ಮತ್ತು ’ೞ’ ಬಲುದೂರ. ಹೞಗನ್ನಡವೆಂದರೆ ಅದೇನು ತಮಿೞೋ ಎಂದುಕೊಳ್ಳುತ್ತಾರೆ. ಆದರೆ ಹೞಗನ್ನಡದ ಕವಿರಾಜಮಾರ್ಗಕಾರ, ಪಂಪ, ರನ್ನ, ಪೊನ್ನ, ನಾಗಚಂದ್ರ ಎಲ್ಲರೂ ಈ ಉತ್ತರಕರ್ಣಾಟಕದವರೇ ಎಂದರೆ ಒಮ್ಮೆಗೆ ಆಶ್ಚರ್ಯವಾಗುತ್ತದೆ. ಹಾಗೆಯೇ ತೊಱವೆ (ಬಿಜಾಪುರ) ನರಹರಿ ಬರೆದ ತೊಱವೆ ರಾಮಾಯಣ ಮತ್ತು ಗದುಗಿನ ನಾರಣಪ್ಪ ಬರೆದ ಕನ್ನಡ ಭಾರತವನ್ನು ಓದುವವರು ಹಾಗೂ ಅದಱಲ್ಲಿ ಆಸಕ್ತಿ ತೋಱಿಸುವವರು ದಕ್ಷಿಣ ಕರ್ಣಾಟಕದವರು. ಅಲ್ಲಿ ಇಲ್ಲಿ ಕೆಲವರು ಇರಬಹುದೇನೋ? ಆದರೆ ಹೆಚ್ಚಿನಂತೆ ಇವುಗಳಲ್ಲಿ ಆಸಕ್ತಿ ತೋಱುವವರು ದಕ್ಷಿಣ ಕರ್ಣಾಟಕದವರು. ಇದು ಹೀಗೇಕೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet