ಲಕ್ಷ್ಮೀ.. ಬಾರಮ್ಮಾ..

ಲಕ್ಷ್ಮೀ.. ಬಾರಮ್ಮಾ..

ಒಂದು ಹಳೇ ಕತೆ-
ಒಬ್ಬ ಹುಡುಗ ಗೆಳೆಯನ ಪೆನ್ಸಿಲ್ ಕದ್ದುತಂದ.
ತಾಯಿ ಜೋರು ಮಾಡಲಿಲ್ಲ.
ಹುಡುಗ ಕಳ್ಳತನ ಮುಂದುವರಿಸಿದ.
ದೊಡ್ಡ ದರೋಡೆಕೋರನಾದ.
ಸಿಕ್ಕಿಬಿದ್ದ-ಗಲ್ಲುಶಿಕ್ಷೆ-ತಾಯಿಯನ್ನು ಬಳಿ ಕರೆದು, ‘ಚಿಕ್ಕವನಿದ್ದಾಗ ಪೆನ್ಸಿಲ್ ಕದ್ದು ತಂದಾಗ ಬುದ್ಧಿಮಾತು ಹೇಳಿದ್ದರೆ ಈ ಕ್ಷಣ ಬರುತ್ತಿರಲಿಲ್ಲ’ ಎಂದನು.

ನಾನೂ ಚಿಕ್ಕವನಿದ್ದಾಗ-
ಸ್ಕೂಲ್‌ನಲ್ಲಿ ಭಾಷಣ ಸ್ಪರ್ಧೆ ಇತ್ತು-‘ಹಣ ಮೇಲೋ, ಗುಣ ಮೇಲೋ’.
ತಂದೆ ಬರೆದುಕೊಟ್ಟರು, ಕಂಠಪಾಠ ಮಾಡಿ ಒಪ್ಪಿಸಿದೆ.
ಬಹುಮಾನ ಬಂತು, ಟೀಚರ್‌ಗಳು ಮೆಚ್ಚಿ ಹೊಗಳಿದರು.
ಮಾಡಿದ ಭಾಷಣವನ್ನು ನಿಜವೆಂದು ನಂಬಿದೆ-ಗುಣಕ್ಕೆ, ವಿದ್ಯೆಗೆ ಪ್ರಾಮುಖ್ಯತೆ ಕೊಟ್ಟೆ.
ಹಣವನ್ನು ಕಡೆಗಣಿಸಿದೆ. ಕಡೆಗಣ್ಣಲ್ಲೂ ಲಕ್ಷ್ಮಿಯ ಫೋಟೋ ನೋಡಲಿಲ್ಲ.
ಓದಿದೆ..ಓದಿದೆ..
ಉಳಿದವರು ಲಕ್ಷ್ಮಿಪೂಜೆ ಮಾಡಿದರು, ಹಣ ಮಾಡಿದರು. ಪೂಜೆ ..ಹಣ..
ಊರಿಡೀ ಸೈಟು, ಮನೆ ಮಾಡಿಕೊಂಡರು..

...
‘ಹಣ ಮೇಲೋ ಗುಣ ಮೇಲೋ’-
ಹಣ ಫಿಮೇಲು, ಪ್ರೀತಿಸಿ/ಪೂಜಿಸಿದವರಿಗೇ ಒಲಿಯುವುದು.

-ಗಣೇಶ.

Rating
No votes yet

Comments