ಸಾಹಿತ್ಯ-ಸಂಗೀತಗಳು ಜುಟ್ಟಿಗೆ ಮಲ್ಲಿಗೆ ಹೂವೇ?

ಸಾಹಿತ್ಯ-ಸಂಗೀತಗಳು ಜುಟ್ಟಿಗೆ ಮಲ್ಲಿಗೆ ಹೂವೇ?

Comments

ಬರಹ

ಇತ್ತೀಚೆಗೆ ಹಲವು ಕಡೆ ಬರಹಗಳಲ್ಲಿ ಬ್ಲಾಗುಗಳಲ್ಲಿ ಈ ಬಗ್ಗೆ ಹಲವು ಬರಹಗಳನ್ನು ಓದಿದ್ದೇನೆ. ಹೆಚ್ಚಾಗಿ ಸಂಗೀತದ/ಸಾಹಿತ್ಯದ ಮೇಲೆ ನಡೆಸುವ ಈ ಮಾತಿನ ಬಾಣಗಳು ನನಗಂತೂ ಬೇಸರ ತಂದಿವೆ. ಒಂದು ಸಾಲಿನಲ್ಲಿ ಅವುಗಳ ಸಾರಾಂಶ ಹೇಳಬೇಕೆಂದರೆ "ಸಾಹಿತ್ಯ - ಸಂಗೀತ ಇವೆಲ್ಲ ಜುಟ್ಟಿಗೆ ಮಲ್ಲಿಗೆ ಹೂವಿದ್ದ ಹಾಗೆ. ಇವುಗಳಿಂದ ಯಾವ ಉಪಯೋಗವೂ ಇಲ್ಲ. ಏನಿದ್ದರೂ ಕನ್ನಡದಿಂದ ದುಡ್ಡು ಸಂಪಾದನೆಗೆ ದಾರಿ ಆಗಬೇಕು".

ಎಲ್ಲರದ್ದೂ ಹಣಕಾಸಿನ ಸ್ಥಿತಿ ಸುಧಾರಿಸಲಿ ಅನ್ನೋದು ಒಳ್ಳೇದೇನೇ. ಆದ್ರೆ, ಬರೀ ಹಣಕಾಸೊಂದಿದ್ರೆ ಸಾಕೇ?

ಮನುಷ್ಯನಿಗೆ ಬೇರೇನೂ ಬೇಡವೇ? ಅಥವಾ, ದುಡ್ಡು ಸಂಪಾದನೆಗೆ ದಾರಿ ಅಲ್ಲ ಅಂತ ಎಲ್ಲರೂ ಅವರವರಿಗಿಷ್ಟವಾದ್ದನ್ನ ಬಿಟ್ಟುಬಿಡ್ಬೇಕೇ? 

ಎಲ್ಲಕ್ಕೂ ಮುಂಚೆ ಹಿಂದಿಯವರು ಹೀಗೆ, ಮರಾಠಿಯವರು ಹೀಗೆ, ಬಂಗಾಳಿಗಳು ಹೀಗೆ - ಅವರು ಆರ್ಥಿಕವಾಗಿ ಮುಂದಿದಾರೆ ಅನ್ನೋವಾಗ, ಅವರು ಸಂಗೀತ ಸಾಹಿತ್ಯಗಳನ್ನು ಎಲ್ಲಿಟ್ಟಿದಾರೆ ಅನ್ನೋದನ್ನೂ ನೋಡಿದ್ರೆ ಒಂದು ಸ್ವಲ್ಪ ಒಳ್ಳೇದಲ್ಲವೇ ?

ಕನ್ನಡಕ್ಕೆ ಒಂದು ಪರಂಪರೆ ಇದೆ - ಹಣಕಾಸಿನ ಭರಾಟೇಲಿ, ಅದನ್ನ ಕಳೆದುಕೊಳ್ಳೋದು ಬೇಡ. ಅಲ್ವಾ?  

-ಹಂಸಾನಂದಿ

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet