ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ

ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ

ಇಂದು ವಿಜಯದಶಮಿ ಆದ್ದರಿಂದ ಅನೇಕ ಸ್ನೇಹಿತರು ಈಮೈಲ್ ಮುಖಾಂತರ ಶುಭಾಶಯಗಳನ್ನು ಕೋರುತ್ತಿದ್ದರು. ಬಹುದಿನಗಳಿಂದ ಸಿನೆಮ, ನಾಟಕ, ಸಾಹಿತ್ಯ ಇಂತಹ ವಿಷಯಗಳ ಬಗ್ಗೆ ಒಂದು ಬ್ಲಾಗ್ ಮಾಡಬೇಕು ಎಂದು ಕೊಂಡಿದ್ದೆ. ಇದಕ್ಕೆ ಸರಿಯಾಗಿ ನಿನ್ನೆ ಡಾ|| ಗುರುಲಿಂಗ ಕಾಪ್ಸೆ ಅವರನ್ನು ಸಂದರ್ಶನ ಮಾಡುವ ಸದಾವಕಾಶ ಒದಗಿ ಬಂತು. ಸುಮಾರು ಒಂದು ಮುಕ್ಕಾಲು ಗಂಟೆ ಅವರು ಕನ್ನಡ ಮತ್ತು ಸಾಹಿತ್ಯದ ಬಗ್ಗೆ ರಸವತ್ತಾಗಿ ಮಾತನಾಡಿದರು. ಇಂದು ಆ ವಿಡಿಯೊ ನೋಡುತ್ತಿದ್ದಾಗ ಈ ಆಲೋಚನೆ ಉಂಟಾಯಿತು. ಇದನ್ನೇಕೆ ಇತರೊಂದಿಗೆ ಹಂಚಿಕೊಳ್ಳಬಾರದು ಅಂತ ಅನಿಸಿತು. ಇದರ ಪ್ರತಿಫಲವೇ "ರಸಿಕರ ರಾಜ್ಯದ" ಸ್ಥಾಪನೆ. ಈ ಬ್ಲಾಗಿನಲ್ಲಿ ಚಲನ ಚಿತ್ರ, ನಾಟಕ, ಸಿನಿಮ ಇಂತಹ ವಿಷಯಗಳ ಬಗ್ಗೆ ಚರ್ಚಿಸುವ ಅವಕಾಷ ಇಲ್ಲಿದೆ.

ಮೊದಲಿಗೆ ಡಾ|| ಗುರುಲಿಂಗ ಕಾಪ್ಸೆ ಅವರಿಂದ ಈ ಬ್ಲಾಗಿಗೆ ಶುಭಕೊರಲು ಅವರು ಆಡಿದ ಒಂದೆರಡು ಮಾತು.
http://video.google.com/videoplay?docid=9214714658935676304

Rating
No votes yet

Comments