"ಕೆಲಸ ಮಾಡ್ಲಾಕ ಹತ್ಯಾನ ಮತ್ತು ಇವತ್ತುನಾಳೆ" ಈ ಪ್ರಯೋಗದಲ್ಲಿ ಹಿಂದಿ ಅಥವಾ ಉತ್ತರಭಾರತದ ಭಾಷೆಯ ಪ್ರಭಾವ

"ಕೆಲಸ ಮಾಡ್ಲಾಕ ಹತ್ಯಾನ ಮತ್ತು ಇವತ್ತುನಾಳೆ" ಈ ಪ್ರಯೋಗದಲ್ಲಿ ಹಿಂದಿ ಅಥವಾ ಉತ್ತರಭಾರತದ ಭಾಷೆಯ ಪ್ರಭಾವ

Comments

ಬರಹ

ಕರ್ಣಾಟಕದ ದಕ್ಷಿಣ ಭಾಗದವರು "ಅವನು ಕೆಲಸ ಮಾಡುತ್ತಿದ್ದಾನೆ" ಎಂಬುದನ್ನು ಧಾರವಾಡ (ಅದು ಅಚ್ಚಗನ್ನಡದ ಭಾಗವಾಗಿದ್ದರೂ) ಮತ್ತು ಅದಕ್ಕಿಂತ ಉತ್ತರದ ಕರ್ಣಾಟಕದವರು ಹೇೞುವುದು ಹೀಗೆ "ಅವಂ ಕೆಲಸ ಮಾಡಾಕ (ಮಾಡ್ಲಾಕ) ಹತ್ಯಾನ" ಮತ್ತು ಹಾಗೆಯೇ ಇತ್ತೀಚಿಗೆ(nowadays) ಅನ್ನುವುದಕ್ಕೆ ಕಲ್ಬುರ್ಗಿ ಮತ್ತು ಬೀದರದವರು ಹೇೞುವ "ಇವತ್ತುನಾಳೆ" ಹಿಂದಿಯ(ಮರಾಠಿ) "ವಹ್ ಕಾಮ್ ಕರನೇ ಲಗಾ ಹೈ" ಹಾಗೂ "ಆಜ್‍ಕಲ್" ನ ಯಥಾರ್ಥ ಅನುವಾದ. ಇದಕ್ಕೆ ಹೞಗನ್ನಡ ಅಥವಾ ನಡುಗನ್ನಡದ ಅಲ್ಲಿನ ಕವಿಗಳೇ ಬೞಸಿರುವ ಕುಱುಹು ಇಲ್ಲ. ಇದು ಬೇಱೆ ಭಾಷೆಯ ಪ್ರಭಾವ ಅನಗತ್ಯವಾಗಿ ಬಿದ್ದಿರುವುದಕ್ಕೆ ಸಾಕ್ಷಿಯಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet