ಬೀಜ ಮೂರನ್ನು ಬಿತ್ತಿ ಸಾಜಬೀಜವ ತೋರಿರಿ ಎಂಬ ಕನಕದಾಸರ ಮುಂಡಿಗೆ
ಬರಹ
ರಾಗ: ಸೌರಾಷ್ಟ್ರ
ತಾಳ: ಮಟ್ಟೆ
ಬೀಜ ಮೂರನ್ನು ಬಿತ್ತಿ ಸಾಜಬೀಜವ ತೋರಿರಿ
ರಾಜರಿಗೆ ಒಂದು ಫಲ ರಾಜ್ಯಕ್ಕೆ ಎರಡು ||
ಬೀಜ ಕರಿದಕೆ ಕಾಲು ಬೀಜ ಬಿಳಿದಕೆ ಮೋರೆ
ಬೀಜ ಮತ್ತೊಂದಕ್ಕೆ ಹದಿನೆಂಟು ಕಣ್ಣು
ರಂಜಕದ ಬೇರಿಗೆ ರಾಗ ಮುವತ್ತೆರಡು
ಕುಂಜರದಗಮನೆ ಕೋವಿದನರಸಿ ||
ಐದು ಮಾತಿನ ಮೇಲೆ ವೈದಿಕನೆಂಬರು
ಐದು ದೀವಿಗೆ ಗಾಳಿ ಮುಸುಕಿತೆಂದು
ಧೂಳಿಗೆ ಹಾರುವ ಮಣ್ಣ ಮೇಲೆ ಮುದ್ದೆಯ ಕಲಸಿ
ಲೋಲನಾಗಿದು ಸೊಬಗಾದ ಬೆಡಗು ||
ಎರಡು ನಂದಿಯ ಹೂಡಿ ಗರುಡವಾಹನನಾಗಿ
ಬರುತ ಭೋರಿಡುತ್ತಿದೆ ಅರಿಗೆ ಮೀರಿ
ಹರಿದಾಸಕನಕನು ಹಾಕಿದ ಮುಂಡಿಗೆ
ಸಿರಿಆದಿಕೇಶವನಾಣೆ ಬಲ್ಲವರು ಪೇಳಿ ||
ಮುಂಡಿಗೆ ಎಂದರೆ ಒಗಟು ಎಂದಿರಬಹುದು. ಸರಿಯಾಗಿ ಗೊತ್ತಿಲ್ಲಾ. ಇದರ ಅರ್ಥವು ನನಗೆ ತಿಳಿದಿಲ್ಲಾ. ಕನಕರೇ ಹೇಳಿದ ಹಾಗೆ ಬಲ್ಲವರು ಹೇಳಲಿ.
ಕನಕದಾಸ ಸುಳಾದಿ ಹರಿಯದಾಸ ಕನಕ ಹಾಕಿದ ಮುಂಡಿಗೆ ಅರ್ಥವಾಗುವುದು ಬಹಳ ಕಷ್ಟ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಬೀಜ ಮೂರನ್ನು ಬಿತ್ತಿ ಸಾಜಬೀಜವ ತೋರಿರಿ ಎಂಬ ಕನಕದಾಸರ ಮುಂಡಿಗೆ
In reply to ಉ: ಬೀಜ ಮೂರನ್ನು ಬಿತ್ತಿ ಸಾಜಬೀಜವ ತೋರಿರಿ ಎಂಬ ಕನಕದಾಸರ ಮುಂಡಿಗೆ by hamsanandi
ಉ: ಬೀಜ ಮೂರನ್ನು ಬಿತ್ತಿ ಸಾಜಬೀಜವ ತೋರಿರಿ ಎಂಬ ಕನಕದಾಸರ ಮುಂಡಿಗೆ