ದೀಪಕ್ ತಮ್ಮಯ್ಯ ಖ್ಯಾತ ಟಿ.ವಿ. ನಿರೂಪಕ ಇವರ ಹೇಳಿಕೆ.

ದೀಪಕ್ ತಮ್ಮಯ್ಯ ಖ್ಯಾತ ಟಿ.ವಿ. ನಿರೂಪಕ ಇವರ ಹೇಳಿಕೆ.

Comments

ಬರಹ

ಆಯಾ ಪ್ರದೇಶದ ಪ್ರಾದೇಶಿಕ ಕನ್ನಡ ಮಾತನಾಡುವವರು ಕೋಟ್ಯಾಂತರ ಮಂದಿ ಇದ್ದಾರೆ. ಆದರೆ ಟಿ.ವಿ. ಮಾಧ್ಯಮದಲ್ಲಿ ಬೆಂಗಳೂರು, ಮೈಸೂರು ಕನ್ನಡವೇ ಸವಾರಿ ಮಾಡುತ್ತದೆ.

ಇದು ಉದಯವಾಣಿಯ ರವಿವಾರ ೭-೧-೨೦೦೮ ರ ಸಂಚಿಕೆಯ ೬ನೇ ಪುಟದಲ್ಲಿ ಓದಿದ ನೆನಪು ಅಂಕಣದಲ್ಲಿ ಪ್ರಕಟವಾದ ಸುದ್ಧಿ.

ಇದರ ಬಗ್ಗೆ ನನ್ನ ಪ್ರತಿಕ್ರಿಯೆ:- ಈಗಾಗಲೇ ಕನ್ನಡ ಟಿ.ವಿ.ಚಾನೆಲ್ ಗಳಲ್ಲಿ ಕನ್ನಡ ಮತ್ತು ಇಂಗ್ಲೀಷ ಬೆರೆಸಿ ಪ್ರಚಾರ ಮಾಡಿ ಕನ್ನಡವನ್ನು ಕಡೆಗಣಿಸಿದಂತೆ ಕಾಣುತ್ತದೆ. ಇನ್ನು ದೀಪಕ್ ಹೇಳಿರುವಂತೆ ಎಲ್ಲಾ ಪ್ರದೇಶದ ಪ್ರಾದೇಶಿಕ ಕನ್ನಡವನ್ನು ಉಪಯೋಗಿಸಬೇಕಾದರೆ ಯಾವ ಕನ್ನಡ ಉಪಯೋಗಿಸುವುದೆಂದು ಸಲಹೆ ಕೊಟ್ಟರೆ ಒಳ್ಳೆಯದಿತ್ತು. ಯಾರಿಗೂ ನೋವಾಗದ ಹಾಗೆ ಆಗಬೇಕಾದರೆ ರಾಜ್ಯದಲ್ಲಿರುವ ಎಲ್ಲಾ ಪ್ರಾದೇಶಿಕ ಕನ್ನಡವನ್ನು ಒಟ್ಟು ಮಾಡಿ ಒಂದು ಚೌ ಚೌ ಕನ್ನಡದಲ್ಲಿ ಟಿ.ವಿ. ಮಾಧ್ಯಮದವರು ಪ್ರಚಾರ ಮಾಡಬೇಕಾದೀತು. ಆಗ ಯಾರಿಗೂ ಅರ್ಥ ಆಗಲಿಕ್ಕಿಲ್ಲಾ. ಈಗ ಉಪಯೋಗಿಸುವ ಕನ್ನಡ ಎಲ್ಲರಿಗೂ ಅರ್ಥ ಆಗುತ್ತದೆ.

ಮೊನ್ನೆ ಯಾರೋ ಹೇಳಿದ ಹಾಗೆ ಆಯಿತು:- ಶಾಂತಸಾಗರಕ್ಕೆ ಕಲ್ಲೆಸೆಯುವುದು.

ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet