ಸಹೃದಯತೆ

ಸಹೃದಯತೆ

ಬರಹಗಾರನೊಬ್ಬನಅನಿಸಿಕೆಯೊಂದಿಗೆ ನಮ್ಮ ಅನಿಸಿಕೆಯೂಏಕೀಭವಿಸಿದರೆ ಅಲ್ಲೊಂದು ಹೃದಯಸಂವಾದನಡೆಯುತ್ತದೆ. ಆಸಹೃದಯತೆ ಇದ್ದಲ್ಲಿಯೇ ಕಾವ್ಯದನಿಜ ರಸಾಸ್ವಾದನೆ ಸಾಧ್ಯವಾಗುವುದು.ಬರಹಗಾರನ ಹೆಸರು,ಕುಲ, ಗೋತ್ರ,ಬಣ್ಣ, ಚಹರೆಅಥವಾ ಬರಹದ ಶೈಲಿ ಧಾಟಿ ವಿಚಾರಗಳಕುರಿತು ಪೂರ್ವಾಗ್ರಹಗಳಿದ್ದಲ್ಲಿಇಂಥ ಹೃದಯಸಂವಾದ ಸಾಧ್ಯವಾಗುವುದಿಲ್ಲ.ಆ ಪೂರ್ವಾಗ್ರಹಗಳನ್ನುತೊರೆದು ನಿರ್ಮಲ ಮನಸ್ಸಿನಿಂದಸಾಹಿತ್ಯಾವಲೋಕನ ಮಾಡಿದರೆ ಸಹೃದಯತೆಸಾಧಿಸಬಹುದು. ಅದರಿಂದಮನವು ವಿಕಾಸಗೊಳ್ಳುವುದು.

ಅನಪೇಕ್ಷಿತ ಸಾಹಿತ್ಯವನ್ನುಹಳಸಿದನ್ನವನ್ನು ದೂರೀಕರಿಸಿದಂತೆದೂರವಿಟ್ಟರೆ ಆಯಿತು, ಅದನ್ನುಸ್ವೀಕರಿಸುವುದರಿಂದ ಜಿಹ್ವಾಬಂಧನವೂಅನಾರೋಗ್ಯವೂ ಪ್ರಾಪ್ತವಾಗುತ್ತದೆ,ಅಲ್ಲದೆ ಆ ಅನ್ನವನ್ನಾಗಲೀಅದಕ್ಕೆ ಕಾರಣರಾದವರನ್ನಾಗಲೀಬೈದಾಡುವುದರಿಂದ ಮನಸ್ಸೇಖತಿಗೊಳ್ಳುವುದು ಹೊರತು ಮತ್ಯಾವಲಾಭವಿಲ್ಲ.

ಇಲ್ಲೊಂದು ಲೇಖನವಿದೆ.ನನಗದು ಇಷ್ಟವಾಯಿತು.ಏಕೆಂದರೆ ಇದನ್ನು ಓದಿದನನಗೂ ಬರೆದಾತನಿಗೂ ನಡುವೆ ಸಹೃದಯತೆಇತ್ತು. ನಿಮಗೂ ಇದುಸಾಧ್ಯವಾಗಬೇಕೆಂದೇನೂ ಇಲ್ಲ.ಇಷ್ಟವಾದರೆ ಓದಬಹುದು.ಅದರ ಕೊಂಡಿ ಇಲ್ಲಿದೆ.ಕೊಂಡಿ ತೆರೆಯಲಾಗದವರಿಗಾಗಿಪಠ್ಯವನ್ನೂ ನೀಡಿದ್ದೇನೆ.http://www.prajavani.net/Content/Dec152008/dinesh20081214108113.asp

ದೇಶಪ್ರೇಮಿಗಳು’ಅಂತಾರಲ್ಲಾ ಅವರ ಬಗ್ಗೆ....

ಭಾರತದಲ್ಲಿದೇಶಭಕ್ತಿಯಷ್ಟುಸುಲಭದಲ್ಲಿಬೇರೇನನ್ನೂ ಸಾಬೀತುಪಡಿಸಲುಸಾಧ್ಯವಿಲ್ಲವೇನೋ? ಇದಕ್ಕಾಗಿಎಷ್ಟೊಂದು ಮಾರ್ಗಗಳು? ಎಸ್‌ಎಂಎಸ್ಕಳುಹಿಸಬಹುದು, ಟೀಶರ್ಟ್ಮೇಲೆ ದೇಶಭಕ್ತಿಯ ಘೋಷಣೆಗಳನ್ನುಪ್ರಿಂಟ್ ಹಾಕಿಸಿಕೊಳ್ಳಬಹುದು,ಕೈಕೈ ಹಿಡಿದು ಮಾನವಸರಪಳಿಕಟ್ಟಿಕೊಳ್ಳಬಹುದು, ಭಾರತದಭೂಪಟಕ್ಕೆ ದೇವತೆಯ ಚಿತ್ರಅಂಟಿಸಿಹೂಮಾಲೆ ಹಾಕಿ ಮೆರವಣಿಗೆ ಮಾಡಬಹುದು,ಗೋಡೆ ಬರಹಗಳನ್ನುಬರೆಯಬಹುದು, ಪತ್ರಿಕೆಗಳವಾಚಕರ ವಾಣಿ ವಿಭಾಗಕ್ಕೆ ಬೆಂಕಿಕಾರುವಪತ್ರಬರೆಯಬಹುದು, ಟಿವಿಚಾನೆಲ್‌ಗಳ ಮೈಕ್ ಮುಂದೆ ನಿಂತುರಾಜಕಾರಣಿಗಳಿಗೆ, ಪಾಕಿಸ್ತಾನಕ್ಕೆ,ಸಾಧ್ಯವಾದರೆ ಮುಸ್ಲಿಮರಿಗೆಮನಸಾರೆ ಬೈದುಬಿಡಬಹುದು,ಜತೆಗೆ, ಈಎಲ್ಲಾ ‘ದೇಶಭಕ್ತಿ’ಯ ಕೆಲಸಮಾಡದವರು ದೇಶದ್ರೋಹಿಗಳೆಂದುಹೀಯಾಳಿಸಬಹುದು, ಇವೆಲ್ಲಕ್ಕಿಂತಸುಲಭದ ಮಾರ್ಗವೆಂದರೆಕತ್ತಲಾಗುತ್ತ್ತಿದ್ದಂತೆಯೇನಾಲ್ಕುಬೀದಿ ಸೇರುವಸ್ಥಳದಲ್ಲಿಗೆಳೆಯ-ಗೆಳತಿಯರೊಂದಿಗೆಕೂಡಿ ರೂಪಾಯಿಗೆ ನಾಲ್ಕು ಸಿಗುವಒಂದಷ್ಟು ಕ್ಯಾಂಡಲ್‌ಗಳನ್ನುಹೊತ್ತಿಸಬಹುದು (ವಿ.ಸೂ.:ದಯವಿಟ್ಟುಟಿವಿ ಚಾನೆಲ್‌ಗಳಿಗೆ ಮೊದಲೇಕಾರ್ಯಕ್ರಮದ ಬಗ್ಗೆ ತಿಳಿಸಿ,ಡ್ರೆಸ್-ಮೇಕಪ್ಕ್ಯಾಮೆರಾ ಕಣ್ಣಿಗೆ ಒಪ್ಪುವಂತಿರಲಿ).ಅಲ್ಲಿಗೆ ದೇಶಭಕ್ತರೆಂದುಸಾಬೀತಾಗಿ ಹೋಯಿತು, ಮನೆಗೆಹೋಗಿ ಹೊಟ್ಟೆತುಂಬಾ ಊಟ ಮಾಡಿಸೊಂಪಾಗಿ ನಿದ್ದೆ ಮಾಡಬಹುದು.

ಕಳೆದ ಹದಿನೆಂಟುದಿನಗಳಲ್ಲಿ ದೇಶದ ಬಹುತೇಕ ‘ಜಾಗೃತನಾಗರಿಕರು’ ಮಾಡಿದ್ದು ಇದನ್ನೇಅಲ್ಲವೇ? ಮೊನ್ನೆಸಂಸತ್ ಭವನದ ಪಕ್ಕದ ವಿಜಯ್ಚೌಕ್‌ನಲ್ಲಿ ಒಬ್ಬ ಯುವಕ ‘ಮೇರಾಏಕ್ ಬೈಟ್ ಲೇ ಲೋ’ ಎಂದು ಟಿವಿಚಾನೆಲ್‌ಗಳ ವರದಿಗಾರರರನ್ನುಗೋಗರೆಯುತ್ತ್ತಿದ್ದ. ‘ಯಾಕಯ್ಯಾ’ಎಂದು ಕೇಳಿದರೆ ಎದುರಿಗಿದ್ದಸಂಸತ್ ಭವನದ ಕಡೆ ತೋರಿಸಿ ‘ಮುಜೇನೇತಾಲೋಗೊಂಕೋ ಗಾಲಿ ದೇನಾ ಹೈ’ಎಂದು ಕಿರುಚಾಡತೊಡಗಿದ. ‘ಅವರೇನುಮಾಡಿದ್ದಾರೆ?’ ಎಂದುಪ್ರಶ್ನಿಸಿದರೆ ಹಿಂದಿ ಶಬ್ದಕೋಶದಲ್ಲಿರುವಎಲ್ಲ ಬೈಗುಳಗಳನ್ನು ಕಾರಿದ.‘ನೀನೇನು ಮಾಡಿದೆ’ ಎಂದುಕೆಣಕಿದರೆ ‘ಉನ್ಹೇ ಗಾಲಿ ದೇನೇಕೆ ಲಿಯೇ ಮುಂಬೈ ಸೇ ಆಯಾ ಹ್ಹೂಂ,ಯೆ ಕಮ್ ಹೈ ಕ್ಯಾ?’ಎಂದು ಮರುಪ್ರಶ್ನಿಸಿದ.ಅವನನ್ನು ಪಕ್ಕಕ್ಕೆಕರೆದು ‘ನೋಡು, ಮುಂಬೈದಾಳಿಯಲ್ಲಿ ಹದಿನಾಲ್ಕು ಪೊಲೀಸರುಸತ್ತಿದ್ದಾರಲ್ಲಾ, ಅವರಹೆಸರು ಹೇಳು’ ಎಂದರೆ ಮೊದಲ ಬಾರಿಆತ ದೆಹಲಿ ಚಳಿಯಲ್ಲಿಯೂ ಬೆವರತೊಡಗಿದ,ತಡವರಿಸತೊಡಗಿದ.‘..ಕರಕರೆಸಾಬ್,ಕಾಮ್ಟೆಸಾಬ್, ಸಾಲಸ್ಕರ್ಸಾಬ್......ಒಂಬ್ಲೆ....’ಅದರ ನಂತರ ಒಂದು ಹೆಸರೂಅವನ ಬಾಯಿಯಿಂದ ಹೊರಡಲಿಲ್ಲ.

ಎಂತಹ ಮೂರ್ಖ ಯುವಕಅಂತೀರಾ? ಹಾಗಿದ್ದರೆಹುತಾತ್ಮರಾದ ಉಳಿದ ಹತ್ತು ಪೊಲೀಸರಹೆಸರು ನೆನಪಿಗೆ ಬರುತ್ತಾ ನೋಡಿ.ಬಹುಶಃ ಹುತಾತ್ಮ ಪೊಲೀಸರಕುಟುಂಬವರ್ಗ, ಸಹದ್ಯೋಗಿಗಳುಮತ್ತು ಸ್ನೇಹಿತರನ್ನು ಹೊರತುಪಡಿಸಿಉಳಿದವರು ಯಾರಿಗೂ ಅವರ ಹೆಸರುತಿಳಿದಿಲ್ಲ. ಮರಾಠಿಪತ್ರಿಕೆಗಳನ್ನು ಹೊರತುಪಡಿಸಿಬೇರೆ ಪತ್ರಿಕೆಗಳು ಕೂಡಾ ಅವರಫೋಟೋಗಳನ್ನು ಸರಿಯಾಗಿ ಪ್ರಕಟಿಸಲಿಲ್ಲ,ಅವರ ಸಾವಿನಿಂದಾಗಿ ಅವರಕುಟುಂಬಕ್ಕಾದ ಕಷ್ಟ-ನಷ್ಟದಚಿತ್ರವನ್ನು ನೀಡಿಲ್ಲ. ಟಿವಿಕ್ಯಾಮೆರಾಗಳ ಮುಂದೆ ಪೊಲೀಸರತ್ಯಾಗವನ್ನು ಕೊಂಡಾಡಿದವರು,ಕಣ್ಣೀರು ಸುರಿಸಿ ಮೇಕಪ್ಕೆಡಿಸಿಕೊಂಡವರು ಯಾರೂ ಈ ‘ಅನಾಮಿಕಹುತಾತ್ಮರು’ ಯಾರು? ಅವರೆಲ್ಲಿದ್ದಾರೆ?ಮನೆ ಯಜಮಾನನ ಸಾವಿನ ನಂತರಅವರ ಮನೆ ಸ್ಥಿತಿ ಏನಾಗಿದೆ?ಎಂದು ತಿಳಿದುಕೊಳ್ಳುವಪ್ರಯತ್ನ ಮಾಡಿಲ್ಲ.

೨೬/೧೧ ಘಟನೆಯಮರುಗಳಿಗೆಯಲ್ಲಿಯೇ ರಾಜ್ಠಾಕ್ರೆಯನ್ನು ಗೇಲಿ ಮಾಡಿ’ಮುಂಬೈಯನ್ನು ರಕ್ಷಿಸಿದವರುಉತ್ತರ, ದಕ್ಷಿಣದರಾಜ್ಯಗಳ ಯೋಧರು, ಮರಾಠಿಗಳಲ್ಲ’ಎನ್ನುವ ಅರ್ಥದ ಎಸ್‌ಎಂಎಸ್‌ಗಳುಹರಿದಾಡತೊಡಗಿದವು. ಸತ್ಯಸಂಗತಿಏನೆಂದರೆ ಹುತಾತ್ಮ ಪೊಲೀಸರಾದಅಶೋಕ್ ಕಾಮ್ಟೆ, ವಿಜಯ್ಸಾಲಸ್ಕರ್, ಜಯವಂತ್ಪಾಟೀಲ್,ಮುಖೇಶ್ಜಾಧವ್, ಪ್ರಕಾಶ್ಮೋರೆ, ಆರ್.ಎಸ್.ಶಿಂಧೆ,ಶಶಾಂಕ್ ಶಿಂಧೆ, ವಿಜಯ್ಖಂಡೇಕರ್, .ಆರ್.ಚಿಂತೇ,ಅಂಬಾದಾಸ್ ಪವಾರ್,ಬಿ.ಸಿ.ಬೋಂಸ್ಲೆಮೊದಲಾದವರೆಲ್ಲರೂ ಮರಾಠಿಗರು.ಪಾಕಿಸ್ತಾನದ ಪಾತ್ರವನ್ನುಸಾಬೀತುಪಡಿಸುವ ಪ್ರಮುಖ ಸಾಕ್ಷಿಯಾಗಿರುವಭಯೋತ್ಪಾದಕ ಅಜ್ಮಲ್ ಕಸಬ್ ಬಂಧನಕ್ಕೆಕಾರಣರಾದ ಸಹಾಯಕ ಸಬ್‌ಇನ್‌ಸ್ಪೆಕ್ಟರ್ತುಕರಾಮ್ ಒಂಬ್ಲೆ ಕೂಡಾ ಮರಾಠಿಗ.ತನ್ನ ಗುಂಡಿಗೆಗೆ ಕಸಬ್ಗುಂಡು ಹೊಡೆಯುತ್ತಿದ್ದರೂಲೆಕ್ಕಿಸದೆ ಆತನನ್ನು ಹಿಡಿದಕೈಯ್ಯನ್ನು ಸಡಿಲಿಸದೆ ಪ್ರಾಣಬಿಟ್ಟವರು ಒಂಬ್ಲೆ.

ಪ್ರಾಣ ಕಳೆದುಕೊಂಡರೇನಾಯಿತು,ಸರ್ಕಾರ ಪರಿಹಾರನೀಡುವುದಿಲ್ಲವೇ? ಎಂದುಕೇಳಬಹುದು. ಸಂಸತ್ಭವನದ ಮೇಲೆ ಭಯೋತ್ಪಾದಕರು ದಾಳಿನಡೆಸಿ ಕಳೆದ ಶನಿವಾರಕ್ಕೆ ಏಳುವರ್ಷಗಳಾಯಿತು. ಆಘಟನೆಯಲ್ಲಿ ಗುಂಡಿಗೆ ಎದೆಕೊಟ್ಟುನಮ್ಮ ಜನಪ್ರತಿನಿಧಿಗಳನ್ನುಉಳಿಸಿದವರು ಭದ್ರತಾಪಡೆಯ ಏಳುಅಧಿಕಾರಿಗಳು. ಅವರಲ್ಲೊಬ್ಬರುಎಎಸ್‌ಐ ನಾನಕ್ ಚಂದ್.ಹುತಾತ್ಮರಾದವರೆಲ್ಲರಿಗೂಪರಿಹಾರದ ಜತೆ ಪೆಟ್ರೋಲ್ ಪಂಪ್ಲೈಸೆನ್ಸ್ ನೀಡುವುದಾಗಿ ಆಗಿನಕೇಂದ್ರ ಸರ್ಕಾರ ಘೋಷಿಸಿತ್ತು.

ಆರು ವರ್ಷಗಳ ಕಾಲಕಚೇರಿಯಿಂದ ಕಚೇರಿಗೆ ಅಲೆದಾಡಿ,ಸಾಲಮಾಡಿ ದುಡ್ಡುತಂದುಲಂಚಕೊಟ್ಟ ನಂತರ (ಪತ್ರಿಕೆಗಳಿಗೆನಿನ್ನೆ ಆ ಕುಟುಂಬವೇ ಹೇಳಿಕೊಂಡಿದೆ)ಕಳೆದ ವರ್ಷ ಸೋನೆಪತ್‌ನಲ್ಲಿರುವಕುಟುಂಬಕ್ಕೆ ದೂರದ ಗುಡ್‌ಗಾಂವ್‌ನಎಲ್ಲೋ ಮೂಲೆಯಲ್ಲಿ ಪೆಟ್ರೋಲ್ಪಂಪ್ ಮಂಜೂರು ಮಾಡಿದೆ. ಆನಿವೇಶನದಲ್ಲಿನೀರು-ಚರಂಡಿವ್ಯವಸ್ಥೆ ಯಾವುದೂ ಸರಿ ಇಲ್ಲ.ಮತ್ತೊಬ್ಬ ಭದ್ರತಾ ಸಹಾಯಕಮಾಥುರ್‌ ಸಿಂಗ್ ಕುಟುಂಬಕ್ಕೆಕೇಂದ್ರ ಸರ್ಕಾರ ಹತ್ತು ಲಕ್ಷರೂಪಾಯಿ ಪರಿಹಾರ ನೀಡಿಕೈತೊಳೆದುಕೊಂಡುಬಿಟ್ಟಿದೆ.ದೆಹಲಿಯಲ್ಲಿಯೇ ಈ ಗತಿಯಾದರೆಉಳಿದ ಕಡೆ ಕರ್ತವ್ಯನಿರತರಾಗಿದ್ದಾಗಹುತಾತ್ಮರಾದ ಪೊಲೀಸರ ಕುಟುಂಬಗಳಗತಿ ಏನಾಗಿರಬಹದು?

ಮುಂಬೈ ಮೇಲಿನ ಭಯೋತ್ಪಾದಕರದಾಳಿಯ ನಂತರ ಇದ್ದಕ್ಕಿದ್ದಂತೆಎಲ್ಲರೂ ಪೊಲೀಸರು ಮತ್ತು ಸೇನೆಯನ್ನುಕೊಂಡಾಡತೊಡಗಿದ್ದಾರೆ.ಭಯೋತ್ಪಾದಕರನ್ನುಹೊಡೆದುರುಳಿಸಿದ ಎನ್‌ಎಸ್‌ಜಿಕಮಾಂಡೋಗಳ ಬಗ್ಗೆ ಪ್ರೀತಿ-ಅಭಿಮಾನಉಕ್ಕಿ ಹರಿಯತೊಡಗಿದೆ. ಇತ್ತೀಚೆಗೆಕೇಂದ್ರ ಸರ್ಕಾರ ಜಾರಿಗೆ ತಂದಆರನೇ ವೇತನ ಆಯೋಗದ ವರದಿಯಲ್ಲಿತಮಗೆ ಅನ್ಯಾಯವಾಗಿದೆ ಎಂದು ಈಎರಡೂ ವರ್ಗಗಳು ಗೋಳಾಡುತ್ತಿದ್ದಾಗಇದೇ ಜನತೆಯಿಂದ ಕನಿಷ್ಠ ಅನುಕಂಪವ್ಯಕ್ತವಾಗಿಲ್ಲ. ಆಗಎಸ್‌ಎಂಎಸ್, ಮಾನವಸರಪಳಿ,ಕ್ಯಾಂಡಲ್‌ಲೈಟ್....ಎಲ್ಲಿಂದಲೂಅವರಿಗೆ ಬೆಂಬಲ ವ್ಯಕ್ತವಾಗಲಿಲ್ಲ.ಯಾರೋ ಪೊಲೀಸ್ ಅಧಿಕಾರಿಯೊಬ್ಬಕಾನ್‌ಸ್ಟೇಬಲ್‌ಗಳಿಗೆ ವೇತನಆಯೋಗದಿಂದ ಎಷ್ಟ್ಲೆಲಾ ಅನ್ಯಾಯವಾಗಿದೆಎಂದು ಪತ್ರಿಕೆಗೆ ಲೇಖನ ಬರೆದರೆಮೇಲಾಧಿಕಾರಿಗಳು ಆತನಿಂದ ವಿವರಣೆಬಯಸಿ ನೋಟೀಸ್ ನೀಡಿದ್ದರು.

ಭಾರತದ ಎನ್‌ಎಸ್‌ಜಿಮತ್ತು ಈ ಪಡೆಗೆ ಸ್ಫೂರ್ತಿಯಾಗಿರುವಬ್ರಿಟನ್‌ನ ‘ಸ್ಪೆಷಲ್ ಏರ್ಸ್ಕಾಡ್ರನ್’ (ಎಸ್‌ಎಎಸ್)ನತರಬೇತಿ ಮತ್ತು ಸಂಬಳ-ಸವಲತ್ತುಗಳನ್ನುಹೋಲಿಸಿ ಇಂಗ್ಲಿಷ್ ದಿನಪತ್ರಿಕೆಯೊಂದುವರದಿ ಮಾಡಿದೆ. ಅದರಪ್ರಕಾರ ಎನ್‌ಎಸ್‌ಜಿ ಕಮಾಂಡೋದಲ್ಲಿನಯೋಧನಿಗೆ ಮಾಸಿಕ ಹದಿನೈದು ಸಾವಿರಮತ್ತು ಅಧಿಕಾರಿಗೆ ೪೫,೦೦೦ರೂಪಾಯಿ ಸಂಬಳ ನೀಡಲಾಗುತ್ತಿದೆ.

ಆದರೆ ಬ್ರಿಟನ್‌ನಎಸ್‌ಎಎಸ್ ಯೋಧ ಮಾಸಿಕ ೩೨ ಲಕ್ಷರೂಪಾಯಿ ಮತ್ತು ಮೇಜರ್ ೫೧ ಲಕ್ಷರೂಪಾಯಿ ವೇತನ ಪಡೆಯುತ್ತಿದ್ದಾರೆ.ಅಂದರೆ ಹುತಾತ್ಮರಾದಎನ್‌ಎಸ್‌ಜಿ ಹವಲ್ದಾರ್ಗಜೇಂದ್ರಸಿಂಗ್‌ಗೆ ಸಿಗುತ್ತ್ತಿದ್ದತಿಂಗಳ ಸಂಬಳ ಕೇವಲ ಹದಿನೈದು ಸಾವಿರರೂಪಾಯಿ. ದೇಶದಿಂದದೇಶಕ್ಕೆ ಜೀವದ ಬೆಲೆಯಲ್ಲಿಎಷ್ಟೊಂದು ವ್ಯತ್ಯಾಸ? ಪ್ರಾಣದಹಂಗಿಲ್ಲದ ಶಸ್ತ್ರಧಾರಿ ಭಯೋತ್ಪಾದಕನಎದುರು ಯೋಧನೊಬ್ಬ ನಿಂತ್ತಿದ್ದಾನೆಎಂದಿಟ್ಟುಕೊಳ್ಳಿ. ಇಬ್ಬರಲ್ಲಿಒಬ್ಬನ ಸಾವು ನಿರ್ಧಾರವಾಗುವಕ್ಷಣಗಳು ಅವು. ಆಗಬಂದೂಕು ಹಿಡಿದ ಯೋಧನ ಮನಸ್ಸುಒಂದು ಕ್ಷಣ ತಾನಿಲ್ಲದ ತನ್ನಕುಟುಂಬದ ಸ್ಥಿತಿಯನ್ನು ನೆನೆಸಿಕೊಂಡರೆ,ಅನಾಥರಾಗಲಿರುವತಾಯಿ-ಹೆಂಡತಿ-ಮಕ್ಕಳಚಿತ್ರ ಕಣ್ಣಮುಂದೆ ಸುಳಿದರೆ ಆತನಕೈಗಳು ಕಂಪಿಸವೇ? ಮನಸ್ಸುತೊಯ್ದಾಡದೇ?

ಮುಂಬೈ ಮೇಲೆ ಭಯೋತ್ಪಾದಕರುದಾಳಿ ನಡೆಸಿದ ನಂತರದ ದಿನಗಳಲ್ಲಿಭಾರತ ಸರ್ಕಾರ ಏನು ಮಾಡಬೇಕೆಂಬಬಗ್ಗೆ ಪುಂಖಾನುಪುಂಖ ಸಲಹೆಗಳುಕೇಳಿಬರುತ್ತಿವೆ. ಅವುಗಳಲ್ಲಿಪ್ರಮುಖವಾದದ್ದು ಪಾಕಿಸ್ತಾನದವಿರುದ್ಧ ಯುದ್ಧ ಘೋಷಣೆ. ಆದರೆಅಂತಹ ಯುದ್ಧದಲ್ಲಿಪ್ರಾಣಕಳೆದುಕೊಳ್ಳುವವರು ಯಾರು?ಸೇನೆ ಸೇರುವಾಗಲೇ ಸಾವುಕಾದಿದೆ ಎಂದು ಸೈನಿಕರಿಗೆಗೊತ್ತಿರುತ್ತದೆ ಎಂದು ಹೇಳಬಹುದು,ವೈರಿ ಗುಂಡಿಗೆ ಬಲಿಯಾದರೆದೇಶಕ್ಕೆ ಮಾಡಿದ ಬಲಿದಾನ ಎಂದುಅವರ ದೇಶಪ್ರೇಮವನ್ನು ವೈಭವೀಕರಿಸಲೂಬಹುದು.ಹುತಾತ್ಮ ಯೋಧರೆಲ್ಲರಬಲಿದಾನವನ್ನು ಗೌರವಿಸುತ್ತಲೇಹೇಳಬಹುದಾದರೆ ಬಹುತೇಕ ಯುವಕರುಸೇನೆ ಸೇರುವುದಕ್ಕೆ ಕಾರಣನಿರುದ್ಯೋಗವೇ ಹೊರತು ದೇಶಪ್ರೇಮವಲ್ಲಈಗಲೂಸೇನೆ ಭರ್ತಿಗೆ ಸಂದರ್ಶನ ನಡೆದಾಗಲೆಲ್ಲಾನೂಕುನುಗ್ಗಲಿನಿಂದ ಸಾವಿಗೀಡಾಗುವಘಟನೆಗಳು ನಡೆಯುತ್ತಿರುವುದುಇದೇ ಕಾರಣಕ್ಕೆ.

ಟಿವಿ ಸ್ಟುಡಿಯೋದಲ್ಲಿಕೂತುಯುದ್ಧ ಘೋಷಿಸುವ ಸಿನಿಮಾ ತಾರೆಯರು,ಉದ್ಯಮಿಗಳು, ಬುದ್ಧಿಜೀವಿಗಳುಯಾರೂ ತಮ್ಮ ಮಕ್ಕಳನ್ನು ಸೇನೆಗೆಸೇರಿಸುವುದಿಲ್ಲ. ಕಾರ್ಗಿಲ್ಯುದ್ಧದ ಸಮಯದಲ್ಲಿರಣರಂಗದಿಂದರವಾನೆಯಾದ ಹುತಾತ್ಮ ಯೋಧರಶವಪೆಟ್ಟಿಗೆಗಳು ‘ಕ್ಯಾಂಡಲ್‌ವಾಲಾ’ಗಳಮನೆಗಾಗಲಿ, ನಸುಕಿನಲ್ಲಿಯೇಹುಡುಗರನ್ನು ಎಬ್ಬಿಸಿ ಲಾಠಿತಿರುಗಿಸಲು ಹೇಳಿಕೊಡುವ ಮೂಲಕಹಿಂದೂಗಳ ರಕ್ಷಣೆಗೆ ಯುವಕರನ್ನುಅಣಿಗೊಳಿಸುವ ದೇಶಪ್ರೇಮಿಗಳಮನೆಗಾಗಲಿ ಹೋಗಿರಲಿಲ್ಲ.ಅವೆಲ್ಲವೂ ಹೋಗಿರುವುದುಯಾವುದೋ ಹಳ್ಳಿಯ ಬಡ ರೈತ-ಕೂಲಿಕಾರ್ಮಿಕರಮನೆಗಳಿಗೆ. ಕಾರ್ಗಿಲ್ಯುದ್ಧದಲ್ಲಿಮಡಿದವರಲ್ಲಿ ಕರ್ನಾಟಕದ ಯೋಧರೂ ಇದ್ದರು.ಶವಪೆಟ್ಟಿಗೆಗಳನ್ನುಅವರ ಮನೆಗೆ ತಲುಪಿಸಿದ ನಂತರತಿರುಗಿ ಆ ಮನೆ ಕಡೆ ಯಾರಾದರೂನೋಡಿದ್ದಾರಾ? - ದಿನೇಶ್ಅಮಿನ್ ಮಟ್ಟು

 

ಪ್ರೀತಿಯಿಂದ

ಸಿ ಮರಿಜೋಸೆಫ್

Rating
No votes yet

Comments