ಏಕೆ ಕನ್ನಡಿಗ ಶಿಲ್ಪಿಗಳನ್ನು ಕಡೆಗಣಿಸಲಾಗಿದೆ?

ಏಕೆ ಕನ್ನಡಿಗ ಶಿಲ್ಪಿಗಳನ್ನು ಕಡೆಗಣಿಸಲಾಗಿದೆ?

ಈಚೆಗೆ ನಾನು ಶೃಂಗೇರಿ ಮತ್ತು ಮುರುಡೇಶ್ವರ ಪ್ರವಾಸ ಮಾಡಿದಾಗ ನನ್ನ ಮನಸ್ಸಿನಲ್ಲಿ ಈ ಪ್ರಶ್ನೆ ಬಂದಿತ್ತು. ಕೆಲವು ದಿನಗಳ ನಂತರ ವಿಜಯ ಕರ್ನಾಟಕ ದಲ್ಲಿ(ದಿನಾಂಕ ನೆನಪಿಲ್ಲ) ಈ ಪ್ರಶ್ನೆಯನ್ನೇ ಕರ್ನಾಟಕದ ಹೆಸರಾಂತ ಶಿಲ್ಪಿಗಳು ಮಾಡಿರುವುದು ವರದಿಯಾಗಿತ್ತು. ಈ ಮೇಲಿನ ದೇವಳಗಳನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ.ಆದರೆ ಶಿಲ್ಪಿಗಳನ್ನು ತಮಿಳುನಾಡಿನಿಂದ ಕರೆಸಲಾಗಿದೆ ಹಾಗು ಶೃಂಗೇರಿ ದೇವಳದ ಮೇಲ್ಛಾವಣಿಯಲ್ಲಿ ನೀವು ತಮಿಳು ಲಿಪಿಯನ್ನು ಕಾಣಬಹುದು.
ಬೇಲೂರು -ಹಳೇಬೀಡಿನಂಥ ಇತಿಹಾಸವಿರುವ ನಮ್ಮ ನಾಡಿನಲ್ಲಿ ಶಿಲ್ಪಿಗಳಿಗೆ ಬರವೆ? "ಹಿತ್ತಲಿನ ಗಿಡ ಮದ್ದಲ್ಲ" ಎಂಬ ಗಾದೆಗೆ ಕಟ್ಟುಬಿದ್ದಿದ್ದೇವೆಯೇ?

ಕಲೆಗೆ ಯಾವ ಭಾಷೆಯ ಎಲ್ಲೆಯೂ ಇಲ್ಲ ಆದರೆ ನಾವು ನಮ್ಮ ಶಿಲ್ಪಿಗಳನ್ನು ಕಡೆಗಣಿಸುವುದು ಸರಿಯೆ? ನಮ್ಮಲ್ಲಿ ಆ ಸಾಮರ್ಥ್ಯವಿಲ್ಲದಿದ್ದಲ್ಲಿ ಬೇರೆಯವರನ್ನು ಕರೆಸುವುದು ಅವಶ್ಯಕ ಆದರೆ ನಮ್ಮಲ್ಲಿ ಒಳ್ಳೆಯ ಕಲೆಗಾರರಿದ್ದರೂ ಬೇರೆಯವರಿಗೆ ಮಣೆ ಹಾಕುವುದು ಸರಿಯಲ್ಲ ಎಂಬುದು ನನ್ನ ಭಾವನೆ

-ಜೈ ಕರ್ನಾಟಕ

Rating
No votes yet

Comments