ಪ್ರತಾಪ ಸಿಂಹ ಒಳ್ಳೆಯ ಬರಹಗಾರ ಎರಡು ಮಾತಿಲ್ಲ!!!

ಪ್ರತಾಪ ಸಿಂಹ ಒಳ್ಳೆಯ ಬರಹಗಾರ ಎರಡು ಮಾತಿಲ್ಲ!!!

ಪ್ರತಾಪ ಸಿಂಹನ ಲೇಖನ ಓದಿ ಟೆಕ್ಕಿಗಳಿಗೀಗ ಸಿಟ್ಟು
ಇವನ ರಾಗ ಬೇರೆ, ಮೊದಲೇ ಉಣಲು ಇಲ್ಲಿಲ್ಲ ಹಿಟ್ಟು

ಜಾಣನಾಗಿದ್ದರೆ ಮುನ್ಸೂಚನೆ ನೀಡಿ ಎಚ್ಚರಿಸಬೇಕಿತ್ತು
ಗಾಯದ ಮೇಲೇಕೆ ಉಪ್ಪು ಸವರಿ ನೋಯಿಸಬೇಕಿತ್ತು

ಯಾರೂ ಅರಿತಿಲ್ಲ ಸ್ವಾಮಿ ನಾಳೆ ಏನಾಗುವುದೆಂದು
ನನಗರಿವೇ ಇಲ್ಲ ನಾ ನಾಳೆ ಬೆಳಗ ಕಾಣಬಹುದೆಂದು

ನಿನ್ನೆಯದಕೆ ಕೊರಗದಿರು ನಾಳೆಯ ಚಿಂತೆ ಮಾಡದಿರು
ಈ ವೇದವಾಕ್ಯವನು ಇಂದೇಕೆ ಎಲ್ಲರೂ ಮರೆತಂತಿಹರು

ಟೆಕ್ಕಿಗಳಷ್ಟೇ ಅಲ್ಲ ಸ್ವಾಮೀ ಮಾಡಿದ್ದು ಖರ್ಚು ದುಬಾರಿ
ಹೊಲಗದ್ದೆ ಮಾರಿದ್ದ ರೈತನಲ್ಲೂ ಇದೆ ಟಾಟಾ ಸಫಾರಿ

ಕೈಯಲ್ಲಿ ಹಣವಿದ್ರೆ ಯಾರು ಮಾಡೋಲ್ಲ ಹೇಳಿ ಖರ್ಚು
ಟೆಕ್ಕಿಗಳ ಕಂಡು ಅನ್ಯರಿಗೆ ಆಗಿರಬಹುದು ಹೊಟ್ಟೆಕಿಚ್ಚು

ಟೆಕ್ಕಿಗಳ ಖರ್ಚಿನಿಂದ ತುಂಬಿತ್ತು ಅನ್ಯರದೂ ತಿಜೋರಿ
ಈಗ ಏನು ಪ್ರಯೋಜನ ಹೇಳಿ ಟೆಕ್ಕಿಗಳನ್ನಷ್ಟೇ ದೂರಿ

ಸಮಸ್ಯೆಗೆ ಪರಿಹಾರ ಒದಗಿಸುವ ಸಲಹೆ ನೀಡಬೇಕು
ಅನ್ಯಥಾ ಏಕೆ ಲೇಖನದಲಿ ಹೀಗೆ ಮೂದಲಿಸಬೇಕು

ಪ್ರತಾಪ ಸಿಂಹ ಒಳ್ಳೆಯ ಬರಹಗಾರ ಎರಡು ಮಾತಿಲ್ಲ
ಸ್ವಲ್ಪ ಎಡವಿದ್ದಾನೆ, ಸರಿ, ಸುಧಾರಿಸಿಕೊಂಡರೆ ಚಿಂತಿಲ್ಲ
*****************************
http://athradi.wordpress.com

Rating
No votes yet

Comments