ಲ್ಯೆಂಗಿಕ ಶೋಷಣೆ ಕುಟುಂಬದಲ್ಲೇ ಯಾಕೆ ?

ಲ್ಯೆಂಗಿಕ ಶೋಷಣೆ ಕುಟುಂಬದಲ್ಲೇ ಯಾಕೆ ?

ಲ್ಯೆಂಗಿಕ ಶೋಷಣೆಯೆಂಬ ಪಿಡುಗು ಕುಟುಂಬದಲ್ಲೇ ಯಾಕೆ ಹೆಚ್ಚು ? ನನ್ನ ಗೆಳೆಯನ ಮನೆಯಲ್ಲಿ ಎಲ್ಲರೂ ತುಂಬಾ ಸಂಪ್ರದಾಯಸ್ಥ ಮನೆತನದವರು, ನನ್ನ ಗೆಳೆಯನ ಹೆಸರು ಸುಮುಖ್, ಅವನಿಗೊಬ್ಬಳು ಅಕ್ಕ, ಮತ್ತು ಸುಮುಖ್ ತಂದೆ - ತಾಯಿ ಅಷ್ಟೆ, ಬಹಳ ವರ್ಷಗಳ ಹಿಂದೆ ಮದುವೆಯಾದ ಸುಮುಖ್ ಅಕ್ಕಾ, ತನ್ನ ಗಂಡನ ಜೊತೆ ತುಂಬಾ ಹೊಂದಿಕೆಯಿಂದಿದ್ದಳು. ಅವರ ಮತ್ತು ಸುಮುಖ್ನ ಮನೆಗಳಲ್ಲಿ, ಸಮಾರಂಭ, ಸಂಭ್ರಮಕ್ಕೆ ಎಲ್ಲೆ ಇರಲಿಲ್ಲ,

ಕೆಲವು ವರ್ಷಗಳ ನಂತರ ಸುಮುಖ್ನ ಅಕ್ಕಇಗೆ ಎರಡು ಮುದ್ದಾದ ಹೆಣ್ಣು ಮಕ್ಕಳೂ ಆಯ್ತು, ಎಲ್ಲರ ಒಡನಾಟ, ಪೋಷಣೆಗಳಿಂದ ಮಕ್ಕಳು ತುಂಬಾ ಮುದ್ದಾಗಿ, ಬುದ್ದಿವಂತರಾಗಿ ಬೆಳೆಯುತ್ತಿದ್ದಾರೆ, ಸುಮುಖ್ನ ಭಾವ ಸುಶಾಂತ್(ಅಕ್ಕನ ಗಂಡ) ಹಾಗೂ ಸುಮುಖ್ನ ಒಡನಾಟವೂ ಜಾಸ್ತಿಯಾಯಿತು, ಈಗ ಸುಮುಖ್ ೨೮ರ ತರುಣ, ಅವನಿಗೆ ತನ್ನ ಕೆಲಸದ ಬಗ್ಗೆ ಅಪರಿಮಿತ ಪ್ರೀತಿ, ಮತ್ತು ಆಸ್ಥೆ, ಹಾಗೂ ಹೀಗೂ ಒಂದು ದೊಡ್ಡ ಎಮ್.ಎನ್. ಸಿ. ಕಂಪೆನಿಯಲ್ಲಿ ಜವಾಬ್ದಾರಿ ಹುದ್ದೆಯನ್ನೂ ನಿರ್ವಹಿಸುತ್ತಿದ್ದಾನೆ. ಈಗ ಸುಮುಖ್ನ ತಂದೆ ತಾಯಿ ಹಾಗೂ ಅಕ್ಕ-ಭಾವಂಗೆ ಸುಮುಖ್ನ ಮದುವೆಯ ಯೋಚನೆ, ಅವರುಗಳು ಸುಮುಖ್ನ ಮನಕ್ಕೊಪ್ಪುವ, ಹಾಗೂ ಮನೆಗೊಪ್ಪುವ ಕನ್ಯಾನ್ವೇಷಣೆಯಲ್ಲಿ ತೊಡಗಿರುತ್ತಾರೆ,

ಕನ್ವಾನ್ವೇಷಣೆಯ ಕೆಲಸದಲ್ಲಿ ಸುಮುಖ್ ಅಕ್ಕನ ಮನೆಗೆ ಹೋಗಿ ಬರುವುದು ಹೆಚ್ಚಾಯಿತು. ಹಾಗೂ ಎಷ್ಟೊ ರಾತ್ರಿಗಳಲ್ಲಿ ಅಕ್ಕನ ಮನೆಯಲ್ಲೇ ಉಳಿದುಕೊಳ್ಳಬೇಕಾಗಿ ಬಂತು, .....................................

ನಮ್ಮ ಸುಮುಖನ ವಿಷಮ ಜೀವನ ಶುರುವಾದದ್ದೇ ಇಲ್ಲಿಂದ, ತಾನಾಯಿತು ತನ್ನ ಮುದ್ದಿನ ಅಕ್ಕನ ಮಕ್ಕಳ ಜೊತೆ ಆಟವಾಯಿತು ಎಂಬಂತಿದ್ದ ಸುಮುಖನಿಗೆ ಕೆಲವು ರಾತ್ರಿಗಳು ಯಾವುದೇ ರೀತಿಯ ತೊಂದರೆಗಳಿರಲಿಲ್ಲ, ಸುಮುಖನ ಭಾವನ ನಿಜವಾದ ರಾಕ್ಷಸ ನಡತೆಯ ಪರಿಚಯವಾದದ್ದೇ ಎರಡು ರಾತ್ರಿಗಳು ಕಳೆದ ಮೇಲೆ, ಒಂದು ರಾತ್ರಿ ಸುಮುಖ್ ತನ್ನಕ್ಕನ ಮನೆಯ ಹಾಲಲ್ಲಿ ಮಲಗಿರುವಾಗ ಅವನ ಭಾವ ಸುಶಾಂತ್ ಆತನ ಬಳಿ ಬಂದು ಮಲಗುವಂತೆ ನಟಿಸುತ್ತಾ, ಲ್ಯೆಂಗಿಕವಾಗಿ ಆತನ್ನು ಹಿಂಸಿಸುತ್ತಿರುತ್ತಾನೆ, ಇದರ ಆಘಾತ ಸುಮುಖ್ನ ಜೀವನದಲ್ಲಿ ಯಾರ ಬಳಿಯೂ ಹೇಳಲಾಗದ, ಯಾರೊಂದಿಗೂ ಹಂಚಿಕೊಳ್ಳಲಾಗದ ನಿರ್ಭಾವುಕತೆ.

ಇಲ್ಲಿ ಸುಶಾಂತನ ಬಗ್ಗೆ ನಿಮಗೆ ಸ್ವಲ್ಪ ಪರಿಚಯ ಮಾಡಿಸುವುದು ಒಳಿತು. ಈತ ಸ್ವಭಾವತಃ ಎಲ್ಲರೆದುರಿಗೂ ತುಂಬಾ ಸಭ್ಯ, ಒಳ್ಳೆ ಕೆಲಸ, ಮತ್ತು ದೇವರು ಮಂತ್ರ, ಭಜನೆಯೆಂಬ ಸದಾಚಾರವನ್ನೇ ಮ್ಯೆಗೂಡಿಸಿಕೊಂಡವನು, ಅವನನ್ನು ಹೀಗೆ ಎಂದು ಬೊಟ್ಟು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಇನ್ನೂ ಮನೆಯಲ್ಲೂ ಸ್ವಭಾವತಃ ಬಹಳ ಜವಾಬ್ದಾರಿಯುತ ವ್ಯಕ್ತಿ.

ಈ ರೀತಿಯ ಶೋಷಣೆಗಳು ಕೇವಲ ಒಂದು ದಿನವಾಗಿದ್ದರೆ ಅಥವಾ ಮದುವೆಯಾದವರ (Absent Mind)ನ ಯೋಚನೆಗಳೆಂದು ಸುಮುಖನೂ ಸುಮ್ಮನಾಗಿದ್ದ, ಆದರೆ ದಿನಕಳೆದಂತೆ ಸುಶಾಂತನ ಕೀಟಲೆ ಜಾಸ್ತಿಯಾಗುತ್ತಲೇ ಇತ್ತು. ಹಗಲಲ್ಲಿ ಸಭ್ಯನಂತೆ ಸಂಧ್ಯಾವಂದನೆ, ದೇವರ ಪೂಜೆ, ಮತ್ತಿತರ ಧಾರ್ಮಿಕ ಕಾರ್ಯಗಳಲ್ಲಿ ಎಲ್ಲರ ಗಮನಸೆಳೆದಿದ್ದ ಸುಶಾಂತ ಈಗ್ಯಾಕೋ ಕೆಲವು ದಿನಗಳಿಂದ ರಾತ್ರಿಯಾದರೆ ಹೀಗೆ ನೀಡುತ್ತಿದ್ದ ಪ್ಯೆಶಾಚಿಕ ಹಿಂಸೆ ಸುಮುಖನಿಗೆ ನುಂಗಲಾರದ ಉಗುಳಲಾರದ ಬಿಸಿ ತುಪ್ಪದಂತೆ ಕಾಣಲಾರಂಭಿಸಿತು. ಸ್ವಭಾವತಃ ಬುದ್ದಿವಂತನಾಗಿದ್ದ, ಜವಾಬ್ದಾರಿವಂತನಾಗಿದ್ದ ಸುಮುಖ, ತನ್ನೆಲ್ಲಾ ಪ್ರಯತ್ನಗಳಿಂದಲೂ ಸುಶಾಂತನಿಗೆ ಬುದ್ದಿಹೇಳುತ್ತಾ ಅವನನ್ನು ತಿರಸ್ಕರಿಸುತ್ತಲೇ ಬಂದಿದ್ದ,

ಈಗ ಸುಮುಖ್ನ ಯೋಚನೆ ಹೀಗೆ ಎಲ್ಲರೆದುರು ಹೇಳಿದರೆ ತನ್ನ ಮನೆ ಮರ್ಯಾದೆ ಹೋಗುವ ಪ್ರಸಂಗ, ಮತ್ತೊಂದು ಕಡೆ ತನ್ ಭಾವ ಸುಶಾಂತನ ವಿಚಿತ್ರ ಆಸಕ್ತಿ, ಹಾಗೆ ಎಲ್ಲರೆದುರು ಹೇಳಲಾಗದ ಮನೋವೇದನೆ. ಹಾಗಂತ ದಿನವೂ ಸುಶಾಂತ್ ನೀಡುವ ದ್ಯೆಹಿಕ ಹಿಂಸೆ ಸಹಿಸಲಾಗದ ಇದಕ್ಕೆ ಇತಿಶ್ರೀ ಹಾಡುವುದು ಹೇಗೆಂಬ ನರಕ ಯಾತನೆ.

ಆಗ ಸುಮುಖ ಮತ್ಯಾವುದೋ ವಿಚಾರಗಳಿಗೆ ಸುಶಾಂತನೊಂದಿಗೆ ಎಲ್ಲಾರ ಸಮ್ಮುಖದಲ್ಲೇ ಜಗಳವಾಡಿ, ಆತನ ಒಡನಾಟವನ್ನೇ ಬಿಟ್ಟಿದ್ದ, ಸುಮುಖ ತಾನು ಈ ವಿಚಾರವನ್ನು ಯಾರ ಬಳಿಯೂ ಹೇಳಬಾರದೆಂದು, ಅದು ತನ್ನ ಮನೆ ಹಾಗೂ ತನ್ನ ಅಕ್ಕಳ ಜೀವನದ ಪ್ರಶ್ನೆಯೆಂದು ತನ್ನಲ್ಲೇ ಅದಕ್ಕೆ ಸಮಾಧಿಯನ್ನು ಕಟ್ಟಿದ್ದ. ಈ ಕಡೆ ಸುಮುಖನಿಗೆ ಮದುವೆಯ ಕೆಲವು ನಿಷ್ಕರ್ಷೆಗಳು ಬಂದು ಹೋಗಿದ್ದವು, ಕೆಲವು ಹುಡುಗೀರು ಸುಮುಖನಿಗೆ ಇಷ್ಟವಾಗಿದ್ದರೂ ಸಾಂಪ್ರಾದಾಯಿಕ ಮನೆತನದವರಾದ ಸುಮುಖನ ಕುಟುಂಬ ಜಾತಕ ಸರಿ ಹೊಂದುದ ಕಾರಣ ಕೆಲವನ್ನೂ ರಿಜೆಕ್ಟ್ ಕೂಡ ಮಾಡಿದ್ದರು,

ಇಲ್ಲಿಯವರೆಗೂ ಯಾವುದೇ ರೀತಿಯ ಕಹಿ ಘಟನೆಗಳು ಸುಮುಖನ ಮನೆಯಲ್ಲಾಗಲಿ, ಸುಶಾಂತನ ಮನೆಯಲ್ಲಾಗಲಿ ನಡೆದಿರಲಿಲ್ಲ, ಸುಮುಖ ಮತ್ತು ಸುಶಾಂತ ಒಬ್ಬರನ್ನೊಬ್ಬರು ಮಾತನಾಡಿಸದೇ ಇರುವುದು ಯಾರಿಗೂ ತೊಂದರೆಯೂ ಆಗಿರಲಿಲ್ಲ. ತನಗೆ ಸಹಕರಿಸಲಿಲ್ಲವೆಂಬ ಸೇಡಿನಿಂದ ಸುಶಾಂತ್ ಇಂತಹ ಸಮಯವನ್ನೇ ಎದುರು ನೋಡುತ್ತಿರುವಂತೆ, ಮೆಲ್ಲಗೆ ತನ್ನ ಹೆಂಡತಿ (ಸುಮುಖನ ಅಕ್ಕ) ಬಳಿ ಸುಮುಖನ ನಡತೆ ಸರಿಯಿಲ್ಲ, ಅವನು ನನ್ನನ್ನಾ ರಾತ್ರಿಗಳ ನೀರವತೆಯಲ್ಲಿ ಬೇಕಂತಲೇ ಕಾಡಿದ್ದ, ಅವನಿಗೆ ಮದುವೆ ಮಾಡಿಸುವುದರಿಂದ ಮನೆಗೆ ಬರುವ ಆ ಹೆಣ್ಣು ಮಗುವಿಗೆ ತೊಂದರೆ, ಅದು ................... ಇದು. ಎಂದು ಏನೇನೋ ಹೇಳಿ ಅವಳಲ್ಲಿ ಒಳ್ಳೆಯವನಾಗಿ ಬಿಟ್ಟಿದ್ದ.

ಇದ್ಯಾವುದರ ಯೋಚನೆಯೇ ಇಲ್ಲದ ಸುಮುಖ ತನ್ನ ಅಕ್ಕನೊಂದಿಗೆ, ಮತ್ತವಳ ಮಕ್ಕಳೊಂದಿಗೆ ನಗು ನಗುತಾ ಸಂತೋಷವಾಗೇ ಇದ್ದ, ಕೆಲವು ದಿನಗಳ ನಂತರ ಸುಹಾಸಿನಿ ಎಂಬ ಹುಡುಗಿಯ ಜಾತಕವೂ ಸರಿಹೊಂದಿ ಇಬ್ಬರೂ ಒಬ್ಬರನ್ನೊಬ್ಬರು ಮನಸಾರೆ ಒಪ್ಪಿ ಅವಳ ಮತ್ತು ಸುಮುಖನ ವಿವಾಹದ ನಿಷ್ಕರ್ಷೆ ಮಾಡುವ ಸಲುವಾಗಿ ಮನೆಯವರೆಲ್ಲಾರೀಗೆ ಹೇಳಿಕಳುಹಿಸಿದಾಗ, ಸುಶಾಂತ ತನ್ನ ವರಾತವನ್ನು ತೆಗೆದ.

ಈಗ ಹೇಳೀ ಸುಮಖನ ಮುಂದಿನ ಜೀವನ ಹೇಗೆ ??????????????????? ನಿಮ್ಮಲ್ಲಿ ಇದಕ್ಕೆ ಪರಿಹಾರವಿದೆಯೇ ? ಇದರಲ್ಲಿ ತಪ್ಪು ಯಾರದ್ದು ?? ಸುಮುಖನ ಪರಿಸ್ಥಿತಿಯ ಸುಧಾರಣೆ ಹೇಗೆ ????????????///

ಅರವಿಂದ್

Rating
No votes yet

Comments