ಪುಟ್ತಣ್ಣಯ್ಯನವರೇ get well soon!

ಪುಟ್ತಣ್ಣಯ್ಯನವರೇ get well soon!

ಇತ್ತೀಚೆಗೆ ರೈತ ಸಂಘದ ನಾಯಕರಾದ ಪುಟ್ಟಣ್ಣಯ್ಯನವರಿಗೆ ಹೃದಯಾಘಾತವಾಗಿ ಅಸ್ವಸ್ಥರಾಗಿದ್ದ ಸುದ್ಧಿ ತಿಳಿಯಿತು. ಪ್ರೋ:ನಂಜುಂಡಸ್ವಾಮಿಯವರ ನಂತರ ರೈತ ಸಂಘದ ಮುಂಚೂಣಿಯಲ್ಲಿದ್ದ ಪುಟ್ಟಣ್ಣಯ್ಯನವರು ರಾಜ್ಯದ ರೈತ ಹೋರಾಟಗಳಲ್ಲಿ ಸಕ್ರೀಯ ಪಾತ್ರವಹಿಸಿದವರು.ದೇಶದ ಬೆನ್ನೆಲುಬಾದ ರೈತನ ಅತಿಮುಖ್ಯ ಅವಶ್ಯಕತೆಗಳನ್ನು ಪೂರೈಸುವುದರಲ್ಲಿ ಯಾವುದೇ ಸರ್ಕಾರಗಳು ವಿಫಲವಾಗಿರುವಾಗ ಹೋರಾಟಗಳ ಮೂಲಕ ರೈತ ವರ್ಗಕ್ಕೆ ದನಿಯಾಗುತ್ತಿದ್ದವರು ಪುಟ್ಟಣ್ಣಯ್ಯನವರಂತಹ ರೈತನಾಯಕರು.ಜಾಗತೀಕರಣದಂತಹ ಇಂತಹ ಸಂದರ್ಭದಲ್ಲಿ ರೈತರ ಅಳಲು ಅರಣ್ಯರೋಧನವಾಗಿದೆ.ಆದ್ದರಿಂದ ಇಂತಹ ಸಂದರ್ಭದಲ್ಲಿ ಪುಟ್ಟಣ್ಣಯ್ಯನವರಂತಹ ನಾಯಕರ ಅವಶ್ಯಕತೆ ಖಂಡಿತ ಇದೆ,ಪುಟ್ಟಣ್ಣಯ್ಯನವರು ಆದಷ್ಟು ಬೇಗ ಚೇತರಿಸಿಕೊಳ್ಳಲೆಂದು ಆಶಿಸುತ್ತೇನೆ.

Rating
No votes yet

Comments