ರಿಸೆಶ್ಶನ್ ಆನ್ ಬಾವಿಕಟ್ಟೆ..

ರಿಸೆಶ್ಶನ್ ಆನ್ ಬಾವಿಕಟ್ಟೆ..

ರಾಮಕ್ಕ : ಲಕ್ಷ್ಮಿ ಆಯ್ತ ಮನೆ ಕೆಲ್ಸಾ ಎಲ್ಲಾ ..
ಲಕ್ಷ್ಮಿ : ಆಯ್ತು ರಾಮಕ್ಕ.. ಹೊಲಕ್ಕೆ ಬುತ್ತಿ ತಗೊಂಡು ಹೋಗ್ಬೇಕು... ಮನೇಲಿ ಒಂಚೂರು ನೀರಿರ್ಲಿಲ್ಲಾ... ಅದ್ಕೆ ನಮ್ಮ male ಗೆ mail ಕಳಿಸಿ ಹಗ್ಗ ತರಕ್ಕೆ ಹೇಳ್ದೆ.. ಇನ್ನೂ ಬಂದಿಲ್ಲಾ .. ಹೊತ್ತಾಗೋಯ್ತು...
ರಾಮಕ್ಕ :ಹಗ್ಗ ತರಕ್ಕೆ ಹೇಳ್ದ ಯಾಕೆ ಎಕ್ಸ್ಟ್ರಾ ಮನೇಲಿಲ್ವಾ...
ಲಕ್ಶ್ಮಿ : ಇದೇ .. ಆದ್ರೆ ಅದನ್ನ ನಮ್ male ಅಟ್ಟದ್ ಮೇಲ್ ಇಟ್ಬುಟ್ಟಿದ್ದಾರೆ...
ರಾಮಕ್ಕ : ಅಟ್ಟದ್ ಮೇಲಾ.... ಅದ್ಯಾಕೆ....?
ಲಕ್ಷ್ಮಿ : ಅದೇನೊ recession ಅಂತೆ ... ಯಾವ್ದಕ್ಕೊ ಇರ್ಲಿ ಅಂತ ಅದನ್ನ ಮೇಲ್ ಎತ್ತಿಟ್ಟು ನೇಗಿಲ್ಗೆ ಕಟ್ಟಿರೋದನ್ನೇ ನೀರ್ಸೇದಕ್ಕೂ ಬಳಸು ಅಂತ ಆರ್ಡ್ರ್ ಮಾಡಿದಾರೆ...ಹೋಗ್ಲಿ ಬುಡು ನೀನಾದ್ರು ಸಿಕ್ದ್ಯಲ್ಲಾ... ನೀನ್ಯಾಕೆ ಇನ್ನೂ ನೀರ್ಸೇದ್ದೆ ಸುಮ್ನೆ ಕುಂತಿದೀಯಾ

ರಾಮಕ್ಕ : ಅಯ್ಯೋ ನನ್ಕಥೆ ಏನ್ ಹೇಳ್ಲಿ ಬುಡು... ನಿಮ್ male ಆದ್ರೂ ಪರವಾಗಿಲ್ಲಾ ಒಂದ್ ಹಗ್ಗ ಆದ್ರೂ ಬಳ್ಸ್ತಾ ಇದಾರೆ.. ನಮ್ male ಎರ್ಡ್ ಹಗ್ಗಾನೂ ಬ್ಯಾಂಕ್ ಲಾಕರ್ನಲ್ಲಿ ಬದ್ರವಾಗಿ ಎತ್ತಿಟ್ಟು.. ಟಿ.ವಿ ಯಲ್ಲಿ .. ಹಗ್ಗ ಬಳ್ಸದೇ ನೀರ್ ಸೇದೋದ್ ಹೇಗೆ ಅಂತಾ ಸರ್ಕಾರಿ sponsor program ಇದೆ... ನೋಡ್ಕೊಂಡ್ ಬಂದ್ ನೀರ್ ಸೇದ್ಕೊಡ್ತೀನಿ ಇರು ಅಂತ ಹೇಳ್ದ್ರು ಅದಕ್ಕೆ ಕಾಯ್ತಾ ಇದೀನಿ...

Rating
No votes yet

Comments