ಪುಸ್ತಕ ನಿಧಿ - ಮಾಸ್ತಿ ವೆಂಕಟೇಶ ಅಯ್ಯಂಗಾರರ ಅದ್ಭುತ ಕತೆಗಳು

ಪುಸ್ತಕ ನಿಧಿ - ಮಾಸ್ತಿ ವೆಂಕಟೇಶ ಅಯ್ಯಂಗಾರರ ಅದ್ಭುತ ಕತೆಗಳು

ಈ ಪುಸ್ತಕದಲ್ಲಿ ನೀವು ಸ್ವಲ್ಪ ಮೋಸ ಹೋಗುವ ಸಾಧ್ಯತೆಗಳಿವೆ . ಇದು ನಿಜಕ್ಕೂ ಅನೇಕ ಕಥಾಸಂಕಲನಗಳ ಸಂಕಲನ . ಒಂದು ಪುಸ್ತಕ ಮುಗಿಯಿತು ಎಂದು ತಿಳಿಯಬಹುದು . ನಂತರ ಒಂದೆರಡು ಖಾಲಿ ಪುಟಗಳ ನಂತರ ಇನ್ನೊಂದು ಶುರುವಾಗುತ್ತದೆ ಆಯಾ ಭಾಗದ ಪರಿವಿಡಿಗಳೂ ಬೇರೆ. ಒಟ್ಟು ೫೬೭ ಪುಟಗಳ ಪುಸ್ತಕ ಎಂಬುದನ್ನು ಮರೆಯಬೇಡಿ.

ಮಾಸ್ತಿಯವರ ಬರವಣಿಗೆಯೇ ಸುಖಕರ . ಏನು ತಿಳಿವಳಿಕೆ , ಏನು ವಿಶಾಲಹೃದಯ , ಏನು ಕರುಣೆ? . ನಾನು ಎಂದೂ ಮರೆಯದ ಅನೇಕ ಕತೆಗಳು ಇಲ್ಲಿವೆ . ಪರಿವಿಡಿಗಳು ೧೨ , ೧೮೦ , ೨೬೪ , ೩೨೭ , ೪೨೬ ಪುಟಗಳಲ್ಲಿವೆ ಎಂಬುದನ್ನು ಮರೆಯದಿರಿ.

ನನ್ನ ಮೆಚ್ಚಿನ ಕತೆಗಳು ಇವು .

೧. ರಂಗಸ್ವಾಮಿಯ ಅವಿವೇಕ

೨. ಬಾದಷಹನ ದಂಡನೆ

೩. ಮಸುಮತ್ತಿ

೪. ಸಾರಿಪುತ್ರನ ಕಡೆಯ ದಿನಗಳು

೫. ಜೋಗ್ಯೊರ ಅಂಜಪ್ಪನ ಕೋಳಿ ಕತೆ

೬. ಮಲೆನಾಡಿನ ಒಂದು ಪಿಶಾಚ - ನಿಮ್ಮ ಗುಂಡಿಗೆ ಗಟ್ಟಿ ಇದ್ದರೆ ಓದಿ

೭ ಹೇಮಕೂಟದಿಂದ ಬಂದ ಮೇಲೆ

ಎಲ್ಲ ಕತೆಗಳನ್ನು ಓದಿದರೆ ಒಳ್ಳೇದು . ಆದರೆ ಇವನ್ನು ಮಾತ್ರ ಓದಲೇಬೇಕು ಎಂದು ನನ್ನ ಶಿಫಾರ್ಸು! ಈ ಪುಸ್ತಕ ಇಲ್ಲಿದೆ.

Rating
No votes yet

Comments