ಕಮಲದ ತೆಕ್ಕೆಗೆ ಬಂಗಾರಪ್ಪ...!!!???

ಕಮಲದ ತೆಕ್ಕೆಗೆ ಬಂಗಾರಪ್ಪ...!!!???

ಮುದುಕನಾದ ಮೇಲೆ ಸೈಕಲ್ ಬಿಡುವ ದುಸ್ಸಾಹಸ ತಪ್ಪು
ಕೊನೆಗಾಲದಲಿ ಕೈಯ ಆಸರೆ ಸಿಕ್ಕರೆ ಮನಸಾರೆ ಒಪ್ಪು

ಇಂದು ಒಂದಾದರೂ ಹಿಂದೆ ನಿಮ್ಮದು ಒಡೆದ ಮನೆ-ಮನ
ರಾಘವೇಂದ್ರ ಹಾಗಲ್ಲ ಒಪ್ಪಿಸಿದ್ದಾನೆ ಅಪ್ಪನಿಗೇ ತನು ಮನ

ಮಗನಲ್ಲಿ ನೆಪಮಾತ್ರ ಯುದ್ಧ ಯಡ್ಯೂರಪ್ಪನವರದೇ ಅಲ್ಲಿ
ಸೋಲುಂಡರೆ ಮಾತ್ರ ಯಾರ ಶೋಭೆಯೂ ಉಳಿಯದಲ್ಲಿ

ಜನ ಸೇವೆ ನಾಡ ಸೇವೆ ಎಲ್ಲಾ ನಿಮ್ಮ ಬರಿಯ ಬಾಯಿ ಮಾತು
ಮಾಡಲಾಗದೇ ಸೇವೆ ಒಂದುವೇಳೆ ನೀವು ಹೋದರೂ ಸೋತು

{ಬಂಗಾರಪ್ಪನವರೇ ನಿಮಗುಳಿದಿರುವುದೊಂದೇ ಒಂದು ಪಕ್ಷ ಸೇರಲಿನ್ನು
ನಿರ್ಲಜ್ಜಾರಾಗಿ ಕಮಲದ ತೆಕ್ಕೆಗೆ ಹೋಗಿ ಚುನಾವಣೆಯಲಿ ಸೋತರಿನ್ನು}

ಬಂಗಾರಪ್ಪನವರೇ ಸಾಕು ನೀವು ಮಾಡಿರುವ ಸೇವೆ ನಮ್ಮ ನಾಡಿಗೆ
ಇನ್ನಾದರೂ ವಿಶ್ರಾಂತಿ ಪಡೆದು ಮಕ್ಕಳನ್ನು ಬಿಡಿ ಅವರವರ ಪಾಡಿಗೆ
***************************************

Rating
No votes yet

Comments