ಹೃದಯವ ಕದ್ದವರ ಕಿವಿಗಳ ತಲುಪಬೇಕು ನಮ್ಮ ಮಾತು!!!

ಹೃದಯವ ಕದ್ದವರ ಕಿವಿಗಳ ತಲುಪಬೇಕು ನಮ್ಮ ಮಾತು!!!

ಉದ್ಯಾನ ನಗರಿಯ ಮರಗಳ ಉಳಿಸಲು ನಡೆದಿದೆ ಹೋರಾಟ
ಮತ್ತೆ ಮುಂದಿನ ಶನಿವಾರ ಜನ ಸೇರಲಿದ್ದಾರೆ ಬಿಡದಂತೆ ಹಟ

ಮರಗಳನು ಕಾಪಾಡಬೇಕೆಂಬುದಕೆ ತುಂಬುಮನದ ಬೆಂಬಲವಿದೆ
ಆದರೆ, ಕಿವುಡರಾಗಿರುವ ರಾಜಕಾರಣಿಗಳ ಮೇಲೆಲ್ಲಿ ನಂಬಿಕೆಯಿದೆ

ನಮ್ಮ ನಾಡಿನ ಮುಖ್ಯಮಂತ್ರಿಗಳ ಮನವೊಲಿಸುವುದೂ ಒಂದೇ
ಶ್ರವಣಬೆಳಗೊಳದ ಬಾಹುಬಲಿಯ ಮಾತನಾಡಿಸುವುದೂ ಒಂದೇ

ಮುಖ್ಯಮಂತ್ರಿಗಳ ಹೃದಯವನು ತಲುಪಬೇಕಿದ್ದರೆ ನಮ್ಮ ಮಾತು
ಅವರ ಹೃದಯವ ಕದ್ದವರ ಕಿವಿಗಳ ತಲುಪಬೇಕು ನಮ್ಮೀ ಮಾತು

ತಾನೇ ಸೋಲೊಪ್ಪಿಕೊಂಡವರ ಮಾತಿಗೆ ಕೊಡದಿರುತ್ತಾರೆಯೇ ಬೆಲೆ
ನಮ್ಮ ಕಾರ್ಯ ಸಿದ್ಧಿಯಾಗಬಹುದು ಅವರ ಮೂಲಕ ನೋಡಿ ಆಮೇಲೆ

ಬನ್ನಿ ನಮ್ಮ ಬೆಂಗಳೂರ ಶೋಭೆಯನು ಉಳಿಸಿ, ಶೋಭೆಯನು ಬೆಳಗಿ
ಬನ್ನಿ ನಮ್ಮ ಬೆಂಗಳೂರ ಶೋಭೆಯುಳಿಸಲು ಶೋಭೆಗೆ ಆರತಿಯ ಬೆಳಗಿ

Rating
No votes yet

Comments