ಮನವಿ ಪತ್ರ

ಮನವಿ ಪತ್ರ

ನನ್ನ ತಂದೆ ಡಾ ಪ್ರದೀಪ ಕುಮಾರ ಹೆಬ್ರಿ ಬಸವಣ್ಣನವರ ಬಗ್ಗೆ ಮಹಾಕಾವ್ಯವನ್ನು ರಚಿಸುತ್ತಿದ್ದಾರೆ..
ಸುಮಾರು ೧ ಲಕ್ಷ ಸಾಲುಗಳಲ್ಲಿ ಈ ಕೃತಿಯನ್ನು ಹೊರತರುವ ಆಲೋಚನೆಯನ್ನು ಹೊಂದಿದ್ದು ವರುಶಕ್ಕೊಂದರಂತೆ ೬ ಸಂಪುಟಗಳಲ್ಲಿ ಈ ಮಹಾಕಾವ್ಯವನ್ನು ಲೋಕಾರ್ಪಣೆ ಮಾಡುವ ಯೋಜನೆಯನ್ನು ರೂಪಿಸಿದ್ದಾರೆ. ಅದರಂತೆ ೨೦೦೭ ರಲ್ಲಿ ಮೊದಲ ಸಂಪುಟ "ಬಾಗೇವಾಡಿ ಕಾಂಡ" ಬಿಡುಗಡೆಯಾಗಿದ್ದು ಸುಮಾರು ೭೧೫ ಪುಟಗಳನ್ನು ೧೬೦೦೦ ಸಾಲುಗಳನ್ನು ಹೊಂದಿದೆ.

ದ್ವಿತೀಯ ಸಂಪುಟ "ಸಂಗಮ ಕಾಂಡ" ೨೦೦೮ ರಲ್ಲಿ ಲೋಕಾರ್ಪಣೆಯಾಗಿದೆ. ಇದು ಸುಮಾರು ೬೫೦ ಪುಟಗಳು ಹಾಗೂ ೧೬,೫೦೦ ಸಾಲುಗಳಿಂದ ಕೂಡಿದೆ.

ಇದೇ ಮೇ ೧೦ ರಂದು ಮೂರನೆ ಸಂಪುಟ "ಮಂಗಳ ಕಾಂಡ" ಮಂಡ್ಯದಲ್ಲಿ ಬಿಡುಗಡೆಯಾಗಲಿದೆ. ಇದು ಸುಮಾರು ೮೫೦ ಪುಟಗಳು ಹಾಗೂ ೧೮,೫೦೦ ಸಾಲುಗಳಿಂದ ಕೂಡಿದೆ.

ಮೊದಲ ಸಂಪುಟದ ಮುಖಬೆಲೆ ೬೦೦ ರೂಪಾಯಿಗಳಗಿದ್ದು ತಮಗೆ ೪೦೦ ರೂಪಾಯಿಗಳಲ್ಲಿ ದೊರಕುತ್ತದೆ.
ಎರಡನೇ ಸಂಪುಟದ ಮುಖಬೆಲೆ ೩೦೦ ರೂಪಾಯಿಗಳಾಗಿದ್ದು ತಮಗೆ ೨೦೦ ರೂಪಾಯಿಗಳಿಗೆ ದೊರಕುತ್ತದೆ.
ಮೂರನೆಯ ಸಂಪುಟದ ಮುಖಬೆಲೆ ೬೦೦ ರೂಪಾಯಿಗಳಾಗಿದ್ದು ತಮಗೆ ೩೦೦ ರೂಪಾಯಿಗಳಿಗೆ ದೊರಕುತ್ತದೆ.

ಕೊಳ್ಳುವ ಆಸಕ್ತಿ ಇದ್ದವರು ನನ್ನನ್ನು ಸಂಪರ್ಕಿಸಿದರೆ ತಮಗೆ ಪುಸ್ತಕವನ್ನು ತಲುಪಿಸುವೆ.

ನನ್ನಿ
ದೃಶ್ಯ ಪ್ರದೀಪ :)

Rating
No votes yet

Comments