ಯಮನ ಆಸ್ಥಾನದಲ್ಲಿ ವಕೀಲರ ಮುಷ್ಕರ .

ಯಮನ ಆಸ್ಥಾನದಲ್ಲಿ ವಕೀಲರ ಮುಷ್ಕರ .

ಧಿಕ್ಕಾರ ಧಿಕ್ಕಾರ , ಯಮಧರ್ಮ ರಾಜನಿಗೆ ಧಿಕ್ಕಾರ
ಗಧಾ ಭೂಷಣನಿಗೆ ಧಿಕ್ಕಾರ ಧಿಕ್ಕಾರ,
ಸದ್ದು ಸದ್ದು (ಮಾಡಬೇಕೋ ,ಮಾಡಬಾರದೋ . ಹಿ ಹೀ ) :D :D
" ಯಾಮಾದಿ ಯಮಹಃ , ರಾಜ ಮಾರ್ತಾಂಡ ,ಬೀಜ ತುರ್ತಾಂಡ,ಕೋಣ ಏರ್ತಾಂಡ ಯಮಧರ್ಮರಾಜರು ಆಗಮಿಸುತ್ತಿದ್ದಾರೆ "
ಆಸೀನನಾದ ಮೇಲೆ .
ಯಮ : ಚಿತ್ರಗುಪ್ತ
ಚಿ:ಪ್ರಭು
ಯಮ :ಏನದು ಹೊರಗಡೆ ಘಲಾಟೆ.
ಚಿ : ಭೂಲೋಕದ ರೆಸಿಶನ್ ನರಕಕ್ಕೂ ಹಬ್ಬಿದೆ ಮಹಾಪ್ರಭು .
ಯಮ :ಅಂದರೆ .
ಚಿ : ಯಾವಾಗಲು ಹೆಣಗಳ ರಾಶಿಯಿಂದ ನಳನಳಿಸುತಿದ್ದ ರಾಜ್ಯದ ಬೊಕ್ಕಸ ಇತ್ತೀಚಿಗೆ ಬರಿದಾಗುತ್ತಿದೆ ಮಹಾಸ್ವಾಮಿ .
ಯಮ :ಅದಕ್ಕೂ ಇವರು ಮುಷ್ಕರಕ್ಕೂ ಏನು ಸಂಭಂದ .
ಚಿ :ಹೆಣಗಳಿದ್ದರೆ ಅಲ್ಲವೇ ಸ್ವಾಮಿ ತಮ್ಮ ವಿಚಾರಣೆ , ಪಾಪ ಪುಣ್ಯಗಳ ಲೆಕ್ಕಾಚಾರ , ಹಾಗೆಯೇ ನಮ್ಮ ವಕೀಲರಿಗೆ ವಾದಿಸಲು client .
ಯಮ :ಅವರ ಪ್ರತಿನಿಧಿಯೋಬ್ಬನನ್ನು ಒಳ ಬರುವ ಹೇಳಿ .
ಚ : ಯಾರಲ್ಲಿ (ಯಾರು ಇಲ್ಲ ಇಲ್ಲಿ ,ಹಿ ಹೀ ),ಚಪ್ಪಾಳೆ ಸದ್ದು .
ಹಿರಿಯ ವಕೀಲನ ಆಗಮನ .
ವಕೀಲ :ಮಹಾಪ್ರಭು ,ಮಹಾಪ್ರಭು ನೀವೇ ನಮ್ಮನ್ನು ಕಾಪಾಡಬೇಕು (ಯಮನ ಕಾಲಿಗೆ ಉದ್ದಾಂಡ ಪ್ರಣಾಮ).
ಯಮ :ಎದ್ದೇಳಿ , ನಾವಿರುವವರೆಗೂ ಯಾರು ಹೆದರ ಬೇಕಾಗಿಲ್ಲ .
ವ :ಪ್ರಭು ಹಿಂದೆ ದಿನಕ್ಕೆ ಒಬ್ಬಬ್ಬರಿಗೆ ೨೦ ರಿಂದ ೩೦ ಸಿಗುತಿದ್ದ ಹೆಣಗಳ ಸಂಖ್ಯೆ ,ಇತ್ತಿಚೀಗೆಕೋ ೨ ರಿಂದ ೩ ಕ್ಕೆ ಬಂದಿದೆ .ಇದು ಹೀಗೆ ಮುಂದುವರಿದರೆ ಉನ್ನತ ಶಾಲೆಗೆಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನಮ್ಮ ಮಕ್ಕಳ ಗತಿ ಏನು ,ಸಾಲ ಮಾಡಿ ಕೊಂಡಿರುವ ಮನೆಗಳ ಕಥೆ ಬೇರೆ .
ಯಮ :ಹೆದರಿಕೊಳ್ಳಬೇಡಿ ನಾವಿದ್ದೇವೆ ,ಚಿತ್ರಗುಪ್ತ.
ಚಿ :ಸ್ವಾಮೀ .
ಯಮ :ಮಾನವ ಸಂಪನ್ಮೂಲ ಖಾತೆ ತಮ್ಮದೇ ಅಲ್ಲವೋ .
ಚಿ : ಹೌದು ಮಹಾಪ್ರಭು .
ಯಮ : ಏನೆನ್ನುವಿರಿ ನೀವು ಇದರ ಬಗ್ಗೆ .
ಚಿ : ಇದಕ್ಕೆಲ್ಲ ಹಲವು ಕಾರಣ ಗಳಿವೆ ಮಹಾಪ್ರಭು .ಒಂದು ಭಾರತ ಎಲೆಕ್ಷನ್ ಕಮಿಷನ್ , ಅಮೆರಿಕೆಯ ಒಬಾಮ , ಯಡಿಯೂರಪ್ಪ ,ಲಾಲು .........
ಯಮ : ಹೆಣಕ್ಕೂ ಅವರಿಗೂ ಏನು ಸಂಬಂಧ .
ಚಿ :ಈ ಭಾರಿ ಮಹಾಚುನಾವಣೆಯ ಹಿನ್ನಲೆಯಲ್ಲಿ ಭಾರಿ ಪ್ರಮಾಣದ ಮಧ್ಯ ವಶಪಡಿಸಿಕೊಂಡಿದ್ದರಿಂದ , ಕುಡಿದು ಸಾಯುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ವೋಕಾರ್ಡ್ ಇಂದ ಬಂದ ವರದಿ ಹೇಳುತ್ತಿದೆ .
ಹಾಗೆಯೇ ಒಬಾಮ ಸದ್ಯಕ್ಕೆ ಯಾವುದೇ ದೇಶದ ಮೇಲೆ ಬಂಡೆತ್ತಿ ಹೋಗದಿರುವುದು ಒಂದು ಕಾರಣ ಮಹಾಪ್ರಭು .
ಯಮ :ಯಡ್ಡಿ ಹೇಗೆ ಕಾರಣ ಚಿ .
ಚಿ :ಕಳಪೆ ದರ್ಜೆಯ ಕೀಟನಾಶಕ ಪುರೈಕೆಯಿಂದಾಗಿ ,ವಿಷ ಸೇವಿಸಿದ ರೈತರು ಬದುಕುತ್ತಿದ್ದಾರೆ ಮಹಾಪ್ರಭು .
ಯಮ : ಹೋ ಹಾಗೋ , ಗಂಭೀರವಾದ ವಿಷಯ . ಇದನ್ನು ಪರಿಹರಿಸಲು ತಜ್ಞರ ತಂಡವೊಂದನ್ನು ರಚಿಸಿ .
ಚಿ :ಯಾರ ಯಾರ ಅನ್ನು ತಂಡದಲ್ಲಿ ಸೇರಿಸಲಿ ಸ್ವಾಮಿ .
ಯಮ :ಮಣ್ಣಿನ ಮಗ ಗೌಡ್ರು , ಅಲೂ ಲಾಲು ,ಮನಮೋಹನ್ ಸಿಂಗ್ , ಮೋದಿ , ಪಾಸ್ವಾನ್ .
ಚಿ : ಹಾಗಾಗದು ಸ್ವಾಮಿ , ಇದರಲ್ಲಿ ಒಂದು ಸೀಟು ಮಹಿಳೆಯರಿಗೆ ,ಇನ್ನೊಂದು ಪರಿಶಿಷ್ಟ ಪಂಗಡದವರಿಗೆ ಮೀಸಲಾಗಿದೆ ಪ್ರಭು .
ಯಮ :ಹಾಗಾದರೆ ಒಂದು ಮಾಯಾವತಿಗೆ , ಇನ್ನೊಂದು ಮೇಡಂ ಗೆ ಬರಹೇಳಿ (ಮನಮೋಹನ ಬೇಡ , ಪಾಸ್ವಾನ್ ಬೇಡ ).
ಹಾಗಾದರೆ ಇದರ ಬಗ್ಗೆ ಚರ್ಚೆ ನಾಳೆ ಮುಂದುವರಿಸೋಣವೇ.
ವಕೀಲ :ಆಗಬಹುದು ಮಹಾಸ್ವಾಮಿ .
"ರಾಜಾದಿ ರಾಜ , ಅಖಿಲ ಮಾರ್ತಾಂಡ ,ಶ್ರೀ ಶ್ರೀ ಶ್ರೀ ಯಮಧರ್ಮ ರಾಜರು ದುರ್ಗಮಿಸುತ್ತಿದ್ದಾರೆ ಕ್ಷಮಿಸಿ ನಿರ್ಗಮಿಸುತಿದ್ದಾರೆ ".

ಮುಂದುವರೆಯುವುದು ............(ನಿಮಗಿಷ್ಟವಾದಲ್ಲಿ ಮಾತ್ರ )

Rating
No votes yet

Comments