ಬರೆದರೇನಾಯ್ತು ಶ್ರೀ ರಾಮಾಯಣ ಮಹಾನ್ವೇಶಣಂ!!!

ಬರೆದರೇನಾಯ್ತು ಶ್ರೀ ರಾಮಾಯಣ ಮಹಾನ್ವೇಶಣಂ!!!

ಬರೆದರೇನಾಯ್ತು ಶ್ರೀ ರಾಮಾಯಣ ಮಹಾನ್ವೇಶಣಂ ಅನ್ನು
ಸ್ವೀಕರಿಸಲಾಗಲಿಲ್ಲ ಕನ್ನಡದಲ್ಲಿಂದು ಪರಮಾಣ ವಚನವನ್ನು

ಕಾನೂನು ಮಂತ್ರಿಗಳಿಗೆ ಜೊತೆ ನೀಡಿದರು ನೋಡಿ ಮುನಿಯಪ್ಪ
ಅನುಭವಿ ನೇತಾರನಾಗಿದ್ದರೂ ಈ ಕೆಟ್ಟ ಬುದ್ಧಿ ಬಂತು ಯಾಕಪ್ಪಾ

ಕನ್ನಡಿಗರಿಗೆ ಕನ್ನಡ ಬಳಸಿ ಎಂದು ಹೇಳೋ ಕಾಲವೂ ಬಂತೇ
ಮಾತೃಭಾಷೆಯ ಬಳಕೆ ನಾಚಿಕೆ ಎನಿಸೋ ದಿನವದೂ ಬಂತೇ

ಮರೆತೀರೆಂದರಿತೇ ಪತ್ರ ಬರೆದು ನೆನಪಿಸಿದುದಾಯ್ತೆ ದೊಡ್ಡ ತಪ್ಪು
ನೆನಪಿಸಿದವರು ರಾಜಕೀಯ ವಿರೊಧಿಗಳಾದರೂ ನೀನದನು ಒಪ್ಪು

ಕನ್ನಡಾಂಬೆಯ ನೆಲದಿ ವಿಜಯ ಪತಾಕೆ ಹಾರಿಸಿದವರು ನೀವು
ದಿಲ್ಲಿಯಲಿ ಕನ್ನಡವನೇ ಮರೆತರೆ ನಂಬಬೇಕೆಂತು ನಿಮ್ಮ ನಾವು

ನಾವು ನೀಡಿದ ಮತವ ನಿಮ್ಮಿಂದ ಹಿಂತಿರುಗಿ ಪಡೆಯ ಬಹುದು
ಶಾಶ್ವತವಲ್ಲ ಗೆಲುವು ಮತ್ತೆ ಕಣಕ್ಕಿಳಿಸಿ ಸೋಲಿಸಲೂ ಬಹುದು

ದಿಲ್ಲಿಯಲೇ ಮುಗಿದು ಹೋಗುವುದೆನ್ನದಿರಿ ನಿಮ್ಮ ಜೀವನವೆಲ್ಲಾ
ತಾಯ್ನಾಡಿಗೆ ಮರಳಲೇ ಬೇಕು ಕಾಲನ ಕರೆ ಬರುವ ಕಾಲಕ್ಕೆಲ್ಲಾ

Rating
No votes yet

Comments