ಋಣಂ ಕೃತ್ವಾ ಘೃತಂ ಪಿಬೇತ್

ಋಣಂ ಕೃತ್ವಾ ಘೃತಂ ಪಿಬೇತ್

ಮರಳಿ ಬರುವ ದಾರಿಯಿದೆಯೆ
ಉರಿದು ಬೂದಿಯಾದ ಒಡಲು?
ಇರಲಿ ಅದಕೆ ಬಿಡದ ಜತುನ
ಎರವಲಲ್ಲೆ ತುಪ್ಪವುಣಲು!

ಉರಿದು ಬೂದಿಯಾದ ಒಡಲು
ಮರಳಿ ಬರುವ ದಾರಿಯೆಲ್ಲಿ?
ಇರಲೇಬೇಕು ಬಿಡದ ಜತುನ
ಎರವಲಲ್ಲೆ ತುಪ್ಪವುಣಲು!

ಸಂಸ್ಕೃತ ಮೂಲ (ಚಾರ್ವಾಕನದ್ದು ಎಂದು ಹೇಳುವುದುಂಟು- ಸರಿಯೋ ತಪ್ಪೋ ಕಾಣೆ):

ಭಸ್ಮೀಭೂತಸ್ಯ ದೇಹಸ್ಯ ಪುನರಾಗಮನಂ ಕುತಃ |
ತಸ್ಮಾತ್ ಸರ್ವ ಪ್ರಯತ್ನೇನ ಋಣಂ ಕೃತ್ವಾ ಘೃತಂ ಪಿಬೇತ್ ||

-ಹಂಸಾನಂದಿ

Rating
No votes yet

Comments