ಆಯಸ್ಸು .

ಆಯಸ್ಸು .

ಭುವಿಗೆನ್ನ ಕಳುಹಿಸುವ ಮುಂಚೆ

ದೇವನ ಜೊತೆ ಮಾತಿಗೆ ಕುಳಿತೆ.

ಒಂದಷ್ಟು ವಿಷಯ

ಫೈನಲೈಸ್ ಆಗಬೇಕಿತ್ತು ಬೇಗ.

ಪೂರ್ತಿ ನೂರು ವರುಷ

ಬದುಕಬೇಕು ನಾನು .

ಏಕೆ ಎಂದೂ ಕೇಳದೆ

ನೀಡಿದ ವರವನು ದೇವನು .

ಮತ್ತೆ ಕೇಳಿದ ,

ಭೂಮಿಯಲ್ಲಿ ಬದುಕಲು ಬಯಸುವೆ ಎಲ್ಲಿ ?

ನಾನು ಹೇಳಿದೆ,

ಕುರಿತೋದದೆಯುಂ ಕಾವ್ಯಪ್ರಯೋಗ

ಪರಿಣಿತಮತಿಗಳಿರುವ ಬೆಂಗಳೂರಲ್ಲಿ

ಹಾಗಿದ್ದರೆ ಮುರಿಯುವೆ ಹತ್ತು .

ಬೆಂಗಳೂರಲ್ಲಿ ಬದುಕುವ ಗತ್ತು .

ಹೋದರೆ ಹೋಯಿತು ಹತ್ತು .

ಬೆಂಗಳೂರಿನ ಗಮ್ಮತ್ತು

.. ಹತ್ತಕ್ಕೂ ಮಹತ್ತು .

 

ಮತ್ತೊಂದಿದೆ ಪ್ರಶ್ನೆ

ಬೇಕೆ ನಿನಗೆ ಸಿಗರೇಟು ?

ಸಾಕೆ ಬೆಂಗಳೂರಿನ ಹೊಗೆ ಘಾಟು..?

ಹುಟ್ಟಿದ ಮೇಲೆ ಸೇದದೆ ಹೋದರೆ ಸಿಗರೇಟು

ಬದುಕಿಗೆ ಏನಿದೆ ರೇಟು.

 

ಸರಿ ಹಾಗಾದರೆ ತೆಗೆಯುವ ಇನ್ನೈದೇ ವರ್ಷ .

ನನಗೋ ಬಲು ಹರುಷ .

 

ಬಸ್ಸಲಿ ಓಡಾಡುವೆಯೋ, ಇಲ್ಲ

ನಿನ್ನದೇ ವಾಹನ ಬೇಕೊ?

ಏನೇ ಆದರು ,

ಟ್ರಾಫಿಕ್ ಜಾಮಿಗೆ ಐದೇ ವರ್ಷದ ರೆಂಟು

ಹೋದರೆ ಐದು , ಕಳೆಯುವುದೇನು ಗಂಟು.

 

ಪಬ್ಬಿದೆ,ಬಾರಿದೆ, ಥರ ಥರ ಡ್ರಿಂಕ್ಸ್ ಇದೆ ..

ಬೇಕೆ ನಿನಗೆ ಗುಂಡು

ಕುಡಿಯದೆ ಉಳಿದರೆ

ನಾನಾಗುವೆನೆ ಬೆಂಗಳೂರಿನ ಗಂಡು ?

ಕುಡಿತ ಕೆಟ್ಟದು ಎನ್ನುವರು

ಕುಡಿದು ಬದುಕಿದರೆ ಲಾಂಗ್ ಲೈಫ್

ಬೇರೆಯವರಿಗದು ರಾಂಗ್ ಟೈಪ್

ಅದಕೇ ತೆಗೆಯುವೆ ಇನ್ನೂ ಹತ್ತು

ಉಳಿದಿದೆ ಇನ್ನೂ ಎಪ್ಪತ್ತು .

 

ಎಲ್ಲಾ ಓಕೆ. ಇನ್ನೊಂದೇ ಪ್ರಶ್ನೆ .

ಮದುವೆಯು ನಿನಗೆ ಬೇಕೆ.. ?

ಮದುವೆಯು ಇಲ್ಲದೆ ಬದುಕುವುದಾದರೆ

ಆ ಥರ ಬದುಕೇಕೆ ..?

ಸರಿ ಹಾಗಾದರೆ

ಮದುವೆಯ ಲೆಕ್ಕಕೆ ಮೂವತ್ತು.

ಉಳಿದಿದೆ ನಿನಗೆ ನಲವತ್ತು.

 

ಜ್ಞಾನೋದಯವಾಗುವ

ತನಕ ಮರೆತಿರು ಈ ಲೆಕ್ಕ

ಎಂದೇನೋ ಹೇಳಿ

ಭೂಮಿಗೆ ಕಳಿಸಿದ ಠಕ್ಕ.

 

ಮೊನ್ನೆ ತುಂಬಿತು ಮೂವತ್ತೇಳು.

ಲೆಕ್ಕವು ನೆನಪಿಗೆ ಬಂತು.

ಉಳಿದ ದಿನದಲ್ಲಿ ಏನಾದರು

ಸಾಧಿಸಲು ಮಡದಿ ಮಕ್ಕಳ ಗೋಳು .

Rating
No votes yet

Comments