ನೀನ್ಯಾರಿಗಾದೆಯೋ ಎಲೆ ಮಾನವ???

ನೀನ್ಯಾರಿಗಾದೆಯೋ ಎಲೆ ಮಾನವ???

ಸುಭಾಷಿತ ನನ್ನ ನೆನಪಿನ ಭಂಡಾರದಿಂದ.................

"ಕಾಕಾಹ್ವಯತೇ ಕಾಕಾನ್
ಯಾಚಕೋ ನತು ಯಾಚಕಾನ್
ಕಾಕಯಾಚಕಯೋರ್ಮಧ್ಯೇ
ವರಂ ಕಾಕೋ ನ ಯಾಚಕಃ"

ಭಾವಾನುವಾದ ಗದ್ಯದಲ್ಲಿ......

ಕಾಗೆಯು ತನಗೆ ಆಹಾರ ಸಿಕ್ಕಿದಲ್ಲಿ ತನ್ನ ಎಲ್ಲಾ ಬಳಗವನ್ನೂ ("ಕಾಕಾ, ಕಾಕಾ" ಎಂದು) ಕರೆದು, ಎಲ್ಲರಲ್ಲೂ ಹಂಚಿಕೊಂಡು ತಿನ್ನುತ್ತದೆ. ಆದರೆ, ಅದೇ ಭಿಕ್ಷುಕನಾದರೋ ತನಗೆ ಆಹಾರ ಸಿಕ್ಕಿದಲ್ಲಿ ಅನ್ಯ ಭಿಕ್ಷುಕರನ್ನು ಕರೆದು ಅವರಲ್ಲಿ ಹಂಚಿಕೊಳ್ಳುವುದಿಲ್ಲ. ಹೀಗೆ, ಕಾಗೆ, ಭಿಕ್ಷುಕನಲ್ಲಿ  ಕಾಗೆಯೇ ಶ್ರೇಷ್ಠವಾದುದು. ಬೆಳೆದ ಮೆದುಳನ್ನು ಹೊಂದಿದ  ಮಾನವರು ಆಹಾರ ಸಿಕ್ಕಾಗ ಹಂಚಿ ತಿನ್ನಬೇಕು ಎಂದು ಅರಿವು ಮೂಡಿಸುತ್ತೆ. ಇಲ್ಲದಿದ್ದಲ್ಲಿ ಪ್ರಾಣಿ-ಪಕ್ಷಿಗಳಿಗಿಂತಲೂ ಕದೆಯಾಗುವುದು ಖಂಡಿತ ಎನ್ನುವುದೇ ಇದರ ಸಾರ.

******************************************************************


ಈ ಸುಭಾಷಿತ ಓದಿದಾಗ, ನನಗೆ ನಮ್ಮ ಕನ್ನಡದ ಒಂದು ಪದ್ಯ (ಪಠ್ಯ ಪುಸ್ತಕದಲ್ಲಿದ್ದ) ನೆನಪಿಗೆ ಬಂತು. ಅದು ಹೀಗಿತ್ತು.......

ಇಟ್ಟರೇ ಸಗಣಿಯಾದೆ, ತಟ್ಟಿದರೆ ಕುರುಳಾದೆ

ಸುಟ್ಟರೇ ನೊಸಲಿಗೆ (ಹಣೆಗೆ) ವೀಭೂತಿಯಾದೆ
ತಟ್ಟದೇ ಹಾಕಿದರೆ ಮೇಲು ಗೊಬ್ಬರವಾದೆ

ನೀನ್ಯಾರಿಗಾದೆಯೋ ಎಲೆ ಮಾನವ???

ಈ ಪದ್ಯದ ಅರ್ಥ ಮೇಲಿಗಿಂತ ಬೇರೆಯಾದರೂ "ಮಾನವನೆನಿಸಿಕೊಂಡಮೇಲೆ ಬೇರೆಯವರಿಗೆ ನೆರವಾಗುವ (ಉಪಯೋಗವಾಗುವ) ಜೀವನ ನಡೆಸಬೇಕೆಂಬುದು ತಿಳಿಸುತ್ತದೆ.

**************************************************************************

Rating
No votes yet

Comments