ಎರಡು ರಾಜಕೀಯ ಬೆಳವಣಿಗೆಗಳು... ಎತ್ತ ಸಾಗುತ್ತಿದ್ದೇವೆ ನಾವು?
೧) ಇಂದು ರೇಣುಕಾಚಾರ್ಯ ಸಂಪುಟ ಸೇರಿದ್ದಾರೆ... ಶಿಸ್ತಿನ ಪಕ್ಷ ಎಂದು ಹೆಸರುವಾಸಿಯಾಗಿ(ಯಾವಗ ಎನ್ನುವ ಪ್ರಶ್ನೆ ಬೇಡ:)) , ಈಗ ಆ ಪದಕ್ಕೆ ಮುಂದೆ "ಅ" ಸೇರಿಸಿಕೊಂಡು (ಕು ) ಖ್ಯಾತಿ ಪಡೆಯುತ್ತ ಮುಂದೆ ಸಾಗುತ್ತಿರವ ಬಾಜಪ ದ ಯೆಡ್ಡಿ ನೇತ್ರುತ್ವದ ಸರ್ಕಾರಕ್ಕೆ. ನರ್ಸ್ ಜಯ ಪ್ರಕರಣ,ಭಿನ್ನಮತ, ಶೊಭ ಅನ್ನುವ ಮಹಿಳೆ ಸಚಿವೆಯನ್ನು ಮಾಧ್ಯಮದಲ್ಲಿ ಕಾಮೆಂಟ್ ಮಾಡಿದ ರೀತಿ, ಬ್ಲ್ಕಾಕ್ ಮೇಲ್ ಮಾಡಿ ಮಂತ್ರಿಗಿರಿ ಪಡೆದುಕೊಂಡ ರೀತಿ ಇದೆಲ್ಲ ನೋಡಿದರೆ ಇವರು ಮಂತ್ರಿ/ಶಾಸಕ ಆಗಲು ಅರ್ಹರೆ ಅನ್ನುವ ಪ್ರಶ್ನೆ ಇಂದು ಜನರನ್ನ ಕಾಡುತ್ತಾ ಇದೆ.
೨) ಝಾರ್ಕಂಡ್ ರಾಜ್ಯದಲ್ಲಿ ಶಿಬು ಸೋರೆನ್ ಹಿಂದೆ ಬಿದ್ದಿರುವ ರಾಜಕೀಯ ಪಾರ್ಟಿಗಳು, ಅಧಿಕಾರಕ್ಕೆ ಯಾವ ಮಟ್ಟಕ್ಕೆ ಇಳೀಯಲೂ ಸಿದ್ದ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಶಿಬುಸೊರೇನ್ ರ ಮಾತು ಹೀಗಿದೆ ""My role is important for a stable and corruption free government in Jharkhand." ಬಹುಶಃ ನಾವೆಲ್ಲ ತಿಳಿದು ಕೊಂಡಿರುವ corruption ಅನ್ನುವ ಪದದ ಅರ್ಥ ಬೇರೆಯೆ ಇದೆ ಎನ್ನಿಸ್ಸುವುದಿಲ್ಲವೇ?ಕೊಲೆಯ ಆರೋಪಿಯಾಗಿರುವ ವ್ಯಕ್ತಿ "king" ಆಗುವ ಬಗ್ಗೆ ಮಾತನಾಡುತ್ತಿದ್ದಾರೆ.
ಹೀಗೆ ರೇಣುಕಾಚರ್ಯ/ ಸೊರೆನ್, ಇಂಥವರು ನಮನ್ನು ಆಳುವ ಮಟ್ಟಕ್ಕೆ ರಾಜಕೀಯ ಇಳಿದಿದೆ ಎಂದರೆ ನಾವು ಎತ್ತ ನಡೆದಿದ್ದೀವೆ? ಸಭ್ಯ ವ್ಯಕ್ತಿಗಳು ರಾಜಕೀಯದ ಕಡೆ ಮುಖ ತಿರುಗಿಸಲು ಆಗದಷ್ಟು ಹಳಸಿದೆಯಲ್ಲ? ಹೀಗೆ ಆದಲ್ಲಿ ನಮ್ಮ ದೇಶದ ಭವಿಷ್ಯವೇನು? ನಮನ್ನಾಳುವ ವ್ಯಕ್ತಿಗಳಿಂದ ಏನು ನಿರೀಕ್ಷಿಸಲಾದೀತು?
ಕೊಸರು: ನಾನೊಬ್ಬ ಬಾಜಪ ಬೆಂಬಲಿಗ ಹಾಗು ಅವಕಾಶವಾದಿ ಎಂದು ಹೇಳಿಕೊಂಡು ತಿರುಗುತ್ತಿರುವ ವ್ಯಕ್ತಿ/ಗುಂಪಿನ ಗಮನ ಸೆಳೆಯಲು ಬರೆದ ಲೇಖನ ಅಲ್ಲ ಇದು.
Comments
ಉ: ಎರಡು ರಾಜಕೀಯ ಬೆಳವಣಿಗೆಗಳು... ಎತ್ತ ಸಾಗುತ್ತಿದ್ದೇವೆ ನಾವು?
ಉ: ಎರಡು ರಾಜಕೀಯ ಬೆಳವಣಿಗೆಗಳು... ಎತ್ತ ಸಾಗುತ್ತಿದ್ದೇವೆ ನಾವು?
ಉ: ಎರಡು ರಾಜಕೀಯ ಬೆಳವಣಿಗೆಗಳು... ಎತ್ತ ಸಾಗುತ್ತಿದ್ದೇವೆ ನಾವು?