ರೈತರ ಆತ್ಮಹತ್ಯೆ

ರೈತರ ಆತ್ಮಹತ್ಯೆ

ರೈತರ ಆತ್ಮಹತ್ಯೆ : ತುಕ್ಕು ಹಿಡಿದ ಚರ್ಚೆ

ರೈತರ ಆತ್ಮಹತ್ಯೆ ತಡೆಯಲು ರಾಜ್ಯ ಸರ್ಕಾರ ಅಧ್ಯಯನ ಸಮಿತಿಯೊಂದನ್ನು ರಚಿಸಿದೆ. ಅದು, ಹೋದ ವಾರ ಮುಖ್ಯಮಂತ್ರಿಗಳು ಕರೆದಿದ್ದ ರೈತರೊಡನೆಯ ಸಂವಾದ ಕಾರ್ಯಕ್ರಮದಲ್ಲಿ ವ್ಕಕ್ತವಾದ ಸಲಹೆ-ಸೂಚನೆಗಳ ಆಧಾರದ ಮೇಲೆ ಅದು ಪರಿಹಾರ ಸಾಧ್ಯತೆಗಳನ್ನು ಪರಿಶೀಲಿಸುವುದಂತೆ. ಆದರೆ, ಈ ಕಾರ್ಯಕ್ರಮದಲ್ಲಿ ವ್ಯಕ್ತವಾದ ಸಲಹೆ-ಸೂಚನೆಗಳು ಎಷ್ಟರ ಮಟ್ಟಿಗೆ ಹೊಸವು ಮತ್ತು ಈವರೆಗೆ ಪರಿಶೀಲನೆಗೆ ಒಳಗಾಗಿಲ್ಲದಂತಹವೇ ಎಂಬ ಪ್ರಶ್ನೆ ಇದ್ದೇ ಇದೆ. ಈ ದೃಷ್ಟಿಯಿಂದ ನೋಡಿದಾಗ ಮತ್ತು ಸಂವಾದ ಕಾರ್ಯಕ್ರಮದ ಕೊನೆಯಲ್ಲಿ ಮುಖ್ಯಮಂತ್ರಿಗಳು ಆಡಿದ ಮಾತುಗಳು ವಿದಾಯ ಭಾಷಣದ ಶೈಲಿಯಲ್ಲಿದ್ದುದನ್ನು ಗಮನಿಸಿದಾಗ, ಇಡೀ ಕಾರ್ಯಕ್ರಮ ಯಾವುದೋ ತತ್ಕಾಲೀನ ರಾಜಕೀಯ ಬಿಕ್ಕಟ್ಟಿನಿಂದ ಬಚಾವಾಗುವ ಪ್ತಯತ್ನವೆಂಬಂತೆಯೂ ಕೆಲವರಿಗೆ ಕಂಡಿದ್ದರೆ ಆಶ್ಚರ್ಯವಿಲ್ಲ.
ರಾಷ್ಟ್ರದಲ್ಲಿ ಈವರೆಗೆ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಆರೇಳು ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಮುವ್ವತ್ತು ಸಾವಿರವನ್ನು ಮೀರಿದೆ. ಈ ಸರ್ಕಾರ ಬಂದ ಮೇಲೆ ಈ ಆತ್ಮಹತ್ಯೆ ಪ್ರವೃತ್ತಿ ಇನ್ನಷ್ಟು ತೀವ್ರಗೊಂಡಿರುವುದು ಇನ್ನೊಂದು ವಿಶೇಷ. ಅಲ್ಲದೆ, ಈವರೆಗೆ ಕೇಂದ್ರ ಹಾಗೂ ವಿವಿಧ ರಾಜ್ಯ ಸಕರ್ಾರಗಳು ಈ ಸಂಬಂಧ ಕೈಗೊಂಡ ಅಧ್ಯಯನಗಳು ಮಾಡಿದ ಶಿಫಾಸರ್ುಗಳ ಆಧಾರದ ಮೇಲೆ ಸಾಲ ಮನ್ನಾ, ಸುಲಭ ಬಡ್ಡಿ ದರದ ಸಾಲ ಸೌಲಭ್ಯ, ಬೀಜ ಪೂರೈಕೆ ಹಾಗೂ ಸಂಗ್ರಹ ಸಾಮಥ್ರ್ಯದ ಸುಧಾರಣೆ, ಕನಿಷ್ಠ ಮತ್ತು ಬೆಂಬಲ ಬೆಲೆ ಘೋಷಣೆ ಮುಂತಾದ ಪರಿಹಾರ ಕ್ರಮಗಳನ್ನು ಪ್ರಕಟಿಸುತ್ತಾ ಹೋದಂತೆ, ರೈತರ ಆತ್ಮಹತ್ಯೆ ಪ್ರಕರಣಗಳೂ ಹೆಚ್ಚುತ್ತಿರುವುದನ್ನೂ ಗಮನಿಸಬೇಕಿದೆ. ನಮ್ಮ ಮುಖ್ಯಮಂತ್ರಿಗಳ ಸಂವಾದ ಕಾರ್ಯಕ್ರಮ ನಡೆಯುತ್ತಿದ್ದ ಸಮಯದಲ್ಲೇ ಮತ್ತು ಆನಂತರವೂ ರಾಜ್ಯದ ಹಲವಾರು ಕಡೆಯಿಂದ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಇದೆಲ್ಲ ಏನನ್ನು ಸೂಚಿಸುತ್ತದೆ?

ರೈತರ ಸಮಸ್ಯೆ ಸಾಲ, ಬೀಜ ಪೂರೈಕೆ, ಬೆಳೆ ಬೆಲೆ ಮುಂತಾದ ಕಸುಬು ಸಂಬಂಧಿ ಸಮಸ್ಯೆಯಾಗಿ ಮಾತ್ರ ಉಳಿದಿಲ್ಲ. ಸಂವಾದದಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರೊಬ್ಬರು ಸೂಕ್ಷ್ಮವಾಗಿ ಹೇಳಿದಂತೆ, ರೈತರ ಆತ್ಮಬಲ ಕುಸಿದು ಹೋಗಿರುವುದೇ ಆತ್ಮಹತ್ಯೆಗೆ ಮೂಲ ಕಾರಣವಾಗಿದೆ. ಆದರೆ, ಈ ಸೂಚನೆ ನೀಡಿದ ಮುಖಂಡರು ಅದನ್ನು ವಿಸ್ತರಿಸಿ ವಿಶ್ಲೇಷಿಸಲು ಹೋಗಲಿಲ್ಲ. ನಮ್ಮ ರೈತ ಚಳುವಳಿಯಿಂದ ನಮ್ಮ ರೈತ ಮುಖಂಡರಿಗೆ ಬಳುವಳಿಯಾಗಿ ಬಂದ ದೌರ್ಬಲ್ಯವಿದು. ರೈತ ಚಳುವಳಿಯನ್ನು ಸ್ಥೂಲವಾಗಿ ಬೆಳೆ ಬೆಲೆ ಕೇಂದ್ರಿತವಾದ ಕಾರ್ಯಕ್ರಮವಾಗಿ ರೂಪಿಸಿದ ಅದರ ನಾಯಕರು, ರೈತನ ಸಮಸ್ಯೆ ಹೇಗೆ ಒಟ್ಟಾರೆ ವ್ಯವಸ್ಥೆಯ ಸಮಸ್ಯೆಯೇ ಆಗಿದೆ ಎಂಬುದನ್ನರಿತು ವಿವರಿಸಿ ಚಳುವಳಿಯನ್ನು ಕಟ್ಟುವ ವ್ಯವಧಾನವಿಲ್ಲದೆ, ಅದನ್ನು ಸಕರ್ಾರ ವಿರೋಧಿ ಕಾರ್ಯಕ್ರಮವನ್ನಾಗಿ ಬೆಳಸುವ ವೀರಾವೇಶದಲ್ಲೇ ತಮ್ಮೆಲ್ಲ ಶಕ್ತಿಯನ್ನು ವ್ಯಯಿಸಿಕೊಂಡರು. ಈ ಚಳುವಳಿ ಶಿಖರ ಸ್ಥಿತಿಯಲ್ಲಿದ್ದಾಗ, ಚಳುವಳಿಯ ಮುಖ್ಯ ನಾಯಕರೊಬ್ಬರು, ರೈತರೇಕೆ ಐ.ಎ.ಎಸ್. ಅಧಿಕಾರಿಗಳ ಜೀವನ ಶೈಲಿಗಾಗಿ ಆಸೆಪಡಬಾರದೆಂದು ಕೇಳಿ ನನ್ನನ್ನು ದಂಗುಬಡಿಸಿದ್ದರು. ತಮ್ಮ ದುಃಸ್ಥಿತಿಗೆ ಕಾರಣವಾದ ವ್ಯವಸ್ಥೆಯ ಬಗೆಗೇ ಸಿಟ್ಟಿಲ್ಲದ ಇವರು, ರೈತರ ಸಮಸ್ಯೆ ಬಗೆಗೆ ಮಾತ್ರ ಸಿಟ್ಟಾಗತೊಡಗಿದ್ದುದು ರೈತ ಚಳುವಳಿಯ ಮೂಲ ದೌರ್ಬಲ್ಯವಾಗಿತ್ತು.
ಹಾಗಾಗಿಯೇ ಇಂದು ಕೂಡಾ ರೈತ ಮುಖಂಡರೆನಿಸಿಕೊಂಡವರು, ಈ ಆತ್ಮಹತ್ಯೆಗಳು ಏಕೆ ಕಳೆದ ಹತ್ತುವರ್ಷಗಳಿಂದೀಚೆಗೆ, ಅದೂ ನೀರಾವರಿ ಇರುವ ಪ್ರದೇಶಗಳಲ್ಲೇ ಹೆಚ್ಚು ಸಂಭವಿಸುತ್ತಿವೆ ಎಂಬ ಬಗ್ಗೆ ಆಲೋಚನೆಯನ್ನೇ ಮಾಡಿದಂತಿಲ್ಲ. ಅಂದಾಕ್ಷಣ ಹತ್ತು ವರ್ಷಗಳ ಹಿಂದೆ ಹಾಗೂ ನೀರಾವರಿ ಇಲ್ಲದ ಪ್ರದೇಶಗಳ ರೈತರು ಸುಖದಿಂದಿದ್ದರು ಅಥವಾ ಇದ್ದಾರೆ ಎಂದು ಇದರರ್ಥವಲ್ಲ. ಆದರೆ ಈ ಹಿಂದೆ ಕ್ಷಾಮ-ಡಾಮರಗಳ ಭಯಂಕರ ಬವಣೆಗಳನ್ನು ಎದುರಿಸಿದ ನಮ್ಮ ರೈತರು, ಆತ್ಮಹತ್ಯೆ ಅನಿವಾರ್ಯವಾಗುವಂತಹ ಮಹಾ ಸಂಕಟಕ್ಕೆ ಇತ್ತೀಚಿನ ವರ್ಷಗಳಲ್ಲಿ ಮಾತ್ರ ಮತ್ತು ಹೆಚ್ಚಾಗಿ ನೀರಾವರಿ ಬೆಳೆ ಪ್ರದೇಶದಲ್ಲೇ ಏಕೆ ತುತ್ತಾಗುತ್ತಿದ್ದಾರೆೆ ಎಂಬುದು ಚಿಂತನಾರ್ಹವಾಗಿದೆ ಎಂದಷ್ಟೇ ಹೇಳುತ್ತಿರುವೆ. ಹಸಿರು ಕ್ರಾಂತಿ ಪರಿಚಯಿಸಿದ ಕೃಷಿ ವ್ಯವಸ್ಥೆ ತನ್ನ ಶಿಖರ ಸ್ಥಿತಿ ಮುಟ್ಟಿ ಸ್ಥಗಿತಗೊಂಡಿರುವುದೇ ಇದಕ್ಕೆ ಮುಖ್ಯ ಕಾರಣವೆನಿಸುತ್ತದೆ. ಅದು ಸೃಷ್ಟಿಸಿದ ಆಧುನಿಕ ನೀರಾವರಿ ಮೂಲ ಸೌಲಭ್ಯಗಳು, ಕೃಷಿ ಪದ್ಧತಿಗಳು, ಹಣಕಾಸು ವ್ಯವಸ್ಥೆ ಹಾಗೂ ಅವುಗಳನ್ನಾಧರಿಸಿದ ರೈತರ ಜೀವನ ದರ್ಶನ ಮತ್ತು ಶೈಲಿ ಇಂದು ಸಂಪೂರ್ಣ ಬಿಕ್ಕಟ್ಟಿನಲ್ಲಿವೆ. ನೀರಿನ ಮೂಲಗಳು ಬತ್ತಿಹೋಗಿ, ಬೃಹತ್ ಜಲಾಶಯಗಳಲ್ಲಿ ಹೂಳು ತುಂಬಿ, ಕಾಲುವೆಗಳು ಶಿಥಿಲಗೊಂಡು, ಭೂಮಿ ವಿಷಯುಕ್ತವಾಗಿ ಬಂಜರುಗೊಂಡು, ಬೆಳೆ ಮತ್ತು ಬೆಲೆಗಳೆರೆಡೂ ಏರುಪೇರಾಗಿ, ಬಂಡವಾಳ ಹೂಡಿಕೆಯ ಚಕ್ರ ಸ್ಥಗಿತಗೊಂಡ ಪರಿಣಾಮವಾಗಿ ಸಾಲ ಮೈಮೇಲೆ ಬಿದ್ದು; ಹೊಸ ಆಥರ್ಿಕ ನೀತಿಗಳಿಂದಾಗಿ ಬದಲಾದ ಸಾರ್ವಜನಿಕ ಬದುಕಿನ ದರ್ಶನ ಹಾಗೂ ಶೈಲಿಗಳ ಮಧ್ಯೆ ಹೊರದಾರಿಗಳೇ ಇಲ್ಲದೆ ಅವನಿಗೆ ಉಸಿರುಗಟ್ಟಿದಂತಾಗಿದೆ. ಇದನ್ನರಿತೇ ವಿದರ್ಭದಲ್ಲಿ ಪ್ರಯೋಗಾತ್ಮಕವಾಗಿ ಆರಂಭಿಸಿದ ಮಾನಸಿಕ ಪುನರುಜ್ಜೀವನ ಚಿಕಿತ್ಸಾ ಕಾರ್ಯಕ್ರಮಗಳು ಅಷ್ಟಾಗಿ ಫಲ ನೀಡದೆ, ಆತ್ಮಹತ್ಯೆಗಳು ಮುಂದುವರೆದಿವೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮುಖ್ಯಮಂತ್ರಿಯೋ, ರೈತ ಮುಖಂಡರೋ ಕೈಮುಗಿದು 'ದಯವಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಡಿ' ಎಂದು ಬೇಡಿಕೊಂಡರೆ ಆತ್ಮಹತ್ಯೆ ನಿಂತಾವೆಯೇ?
ಅಲ್ಲದೆ, ಕೃಷಿ ಸಮಾಜವನ್ನು ಇದ್ದಕ್ಕಿದ್ದಂತೆ ಕೈಗಾರಿಕಾ ಸಮಾಜವನ್ನಾಗಿ ಪರಿವತರ್ಿಸುವ ವಿಶೇಷ ಆರ್ಥಿಕ ವಲಯ, ರೈತರ ಭಾಗವಹಿಸುವಿಕೆಯೇ ಇಲ್ಲದ ಜೈವಿಕ ಕೃಷಿ ತಂತ್ರಜ್ಞಾನ ಚಟುವಟಿಕೆಗಳ ವಿಸ್ತರಣೆ, ಬೃಹತ್ ಬೆಂಗಳೂರಿನಂತಹ ರೈತ ಸಂಸ್ಕೃತಿಯ ಬುಡವನ್ನೇ ಅಲ್ಲಾಡಿಸುವಂತಹ ಅತಿ ನಗರೀಕರಣದ ಯೋಜನೆಗಳನ್ನು ಹೊಸ ಬದುಕಿನ ನಾಂದಿ ಕಾರ್ಯಕ್ರಮಗಳಂತೆ ಯುದ್ಧೋಪಾದಿಯಲ್ಲಿ ಆರಂಭಿಸಿ, ಆ ಹೊಸ ಬದುಕಿನಲ್ಲಿ ಅವನ ಸ್ಥಾನವೇನು ಎಂಬುದು ಗೊತ್ತಾಗದ ರೀತಿಯಲ್ಲಿ ಅವನ್ನು ಜಾರಿಗೊಳಿಸುತ್ತಿರುವ ಸಂದರ್ಭದ ಒತ್ತಡವೂ ಆತನಲ್ಲಿ ತನ್ನ ಅಸ್ತಿತ್ವದ ಆಧ್ಯಾತ್ಮಿಕತೆಯನ್ನು ಸ್ಪರ್ಶಿಸಿದ್ದರೆ ಆಶ್ಚರ್ಯವಿಲ್ಲ. ರೈತನನ್ನು ಹಳೆಯ ಊಳಿಗಮಾನ್ಯ ವ್ಯವಸ್ಥೆಯ ಪ್ರತಿನಿಧಿಯನ್ನಾಗಿ ಮಾತ್ರ ನೋಡುವ ಆಧುನಿಕ ಮನಸ್ಸಿಗೆ ಈ ಸಂಕಟದ ಸಂಕೀರ್ಣತೆ ಅರ್ಥವಾಗದು. ಹಾಗೇ, ಚಳುವಳಿಯ ಯಶಸ್ಸಿನ ಮೇಲೆ ಮಾತ್ರ ಕಣ್ಣಿಟ್ಟು ರೈತನ ಬದುಕನ್ನು ಆರ್ಥಿಕ ಪ್ರಶ್ನೆಯ ನೆಲೆಗೇ ಇಳಿಸಿ ನೋಡುವಂತಹ ಚಳುವಳಿಕೋರ ರೈತ ನಾಯಕರ ಸಮೀಪ ದೃಷ್ಟಿಗೂ ಇದು ಸಿಗದು. ಲೆಕ್ಕ ಇಟ್ಟವನು ರೈತನಾಗಲಾರ ಎಂಬ ರೈತ ನಾಯಕ ಕಡಿದಾಳು ಶಾಮಣ್ಣ ಅವರ ಮಾತು ಇಂದಿನ ಸಂದರ್ಭದಲ್ಲಿ ಸ್ವಲ್ಪ ಉತ್ಪ್ರೇಕ್ಷೆಯ ಮಾತೆನ್ನಿಸಿದರೂ, ರೈತ ಬರಿ ಬೆಳೆ ಉತ್ಪಾದಕನಲ್ಲ;ಅವನೊಂದು ಜೀವನ ಕ್ರಮದ ಪ್ರತೀಕ ಎಂಬರ್ಥದಲ್ಲಿ ಅವರ ಮಾತನ್ನು ಅರ್ಥ ಮಾಡಿಕೊಂಡರೆ, ರೈತರ ಆತ್ಮಹತ್ಯೆ ಕುರಿತ ನಮ್ಮ ನೋಟಕ್ರಮ ಮೂಲಭೂತವಾಗಿ ಬದಲಾಗಬಲ್ಲದು. ರೈತರ ಆತ್ಮಹತ್ಯೆ ವಿದ್ಯಮಾನವನ್ನು ಒಟ್ಟಾರೆ, ಜಾಗತೀಕರಣದ ಒತ್ತಡಗಳು ನಿರ್ಮಿಸುತ್ತಿರುವ ಒಂದು ದೊಡ್ಡ ಸಾಮಾಜಿಕ-ಸಾಂಸ್ಕೃತಿಕ ಬಿಕ್ಕಟ್ಟನ್ನಾಗಿ ಪರಿಗ್ರಹಿಸಿದಾಗ ಮಾತ್ರ ಅದರ ಪರಿಹಾರಗಳೂ ಹೊಳೆದಾವು ಎನ್ನಿಸುತ್ತದೆ. ಹೀಗಾಗಿ ಇಂದಿನ ಮುಖ್ಯ ಪ್ರಶ್ನೆ, ಇಂದು ನಾವು ಕಾಣುತ್ತಿರುವ ದುಡಿಮೆ, ಈ ದುಡಿಮೆಯ ಗುರಿ, ದುಡಿಮೆಯ ಆನಂದ ಹಾಗೂ ಅವುಗಳಿಂದ ಹೊಮ್ಮುವ ಬದುಕಿನ ಸಾರ್ಥಕತೆಯ ಅರ್ಥ ಪಲ್ಲಟಗಳನ್ನು ನಾವು ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳಬಹುದು ಎಂಬುದೇ ಆಗಿದ್ದು ಅದಕ್ಕೆ ಸಿಗುವ ಉತ್ತರವನ್ನು ಆಧರಿಸಿಯೇ ಈ ಪರಿಹಾರಗಳ ಸ್ವರೂಪವನ್ನು ನಿರ್ಧರಿಸಬೇಕಾಗುತ್ತದೆ. ರೋಗ ಚಿಹ್ನೆಯನ್ನೇ ರೋಗವೆಂದು ಬಗೆವ ತಪ್ಪಾಗಬಾರದು.
ಸಾಲಮನ್ನಾ, ಸಾಲ ಸೌಲಭ್ಯ, ಬೀಜ ಸೌಲಭ್ಯ, ಸಕಾಲದಲ್ಲಿ ವಿದ್ಯುತ್ ಸರಬರಾಜು, ನ್ಯಾಯೋಚಿತ ಬೆಂಬಲ ಬೆಲೆ ಇತ್ಯಾದಿ ಪರಿಹಾರ ಕ್ರಮಗಳು ರೈತರನ್ನು ಮುಟ್ಟುವ ವೇಳೆಗೆ; ಅಧಿಕಾರಶಾಹಿಯ ಆಲಸ್ಯ, ತಾಂತ್ರಿಕ ಕೊಕ್ಕೆಗಳು ಮತ್ತು ಭ್ರಷ್ಟತೆಯಿಂದಾಗಿ ಅವು ತಮ್ಮ ಗುರಿ ಕಳೆದುಕೊಂಡು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಗಳು ರೈತ ಪ್ರತಿನಿಧಿಗಳ ಮಾತುಗಳ ಮೂಲಕ ಮಾತ್ರವಲ್ಲ, ಸ್ವತಃ ಮುಖ್ಯಮಂತ್ತಿಗಳ ಮಾತುಗಳ ಮೂಲಕವೇ ಅಂದಿನ ಸಂವಾದ ಸಭೆಯ ಸಂದರ್ಭದಲ್ಲಿ ದುರಂತಮಯವಾಗಿ ಮೂಡಿಬಂತು. ಮುಖ್ಯಮಂತಿಯೊಬ್ಬರು, ತಮ್ಮ ಸದುದ್ದೇಶದ ಯೋಜನೆಗಳೆಲ್ಲವೂ ಅಧಿಕಾರಶಾಹಿಯ ಮಧ್ಯಪ್ರವೇಶದಿಂದಾಗಿ ಹಾಳಾಗುವ ಸಾಧ್ಯತೆಗಳನ್ನು ಬಹಿರಂಗವಾಗಿ ಹೇಳಿಕೊಳ್ಳುವ ಸ್ಥಿತಿ ಉಂಟಾಗಿದೆಯೆಂದರೆ, ಈ ಮೇಲೆ ಪ್ರಸ್ತಾಪಿಸಿದ ಸಾಮಾಜಿಕ-ಸಾಂಸ್ಕೃತಿಕ ಬಿಕ್ಕಟ್ಟು ನಮ್ಮ ರಾಜಕಾರಣವನ್ನು ಎಷ್ಟು ದಿಕ್ಕೆಡಿಸಿದೆ ಎಂಬುದು ಗೊತ್ತಾಗುತ್ತದೆ. ಶಾಸಕಾಂಗ ತನ್ನ ಪರಮ ಭ್ರಷ್ಟತೆ, ಅದಕ್ಷತೆ ಹಾಗೂ ಕರ್ತವ್ಯ ವಿಮುಖತೆಗಳ ಮೂಲಕ ವಿಶ್ವಾಸಾರ್ಹತೆ ಕಳೆದುಕೊಂಡು, ಈ ವಿಷಯಗಳಲ್ಲಿ ಕಾರ್ಯಾಂಗದೊಂದಿಗೆ ಶಾಮೀಲಾಗಿರುವುದೇ, ಕಾರ್ಯಾಂಗವು ಶಾಸಕಾಂಗವನ್ನು -ಮುಖ್ಯಮಂತ್ರಿಗಳು ಹೀಗೆ ಬಹಿರಂಗವಾಗಿ ಅಲವತ್ತುಕೊಳ್ಳುವ ಮಟ್ಟದಲ್ಲಿ- ಯಾಮಾರಿಸುತ್ತಿರುವುದಕ್ಕೆ ಕಾರಣವಾಗಿದೆ. ಅಧಿಕಾರಿಗಳಿಗೆ ಕಟ್ಟುನಿಟ್ಟಾದ ನಿರ್ದೇಶನ ನೀಡಲು ಅಗತ್ಯವಾದಂತಹ ಒಂದು ರಾಜಕೀಯ ತಾತ್ವಿಕತೆಯ ಬೆನ್ನೆಲುಬಾಗಲೀ, ದೀರ್ಘ ರಾಜಕೀಯ ಅನುಭವ ತಂದುಕೊಡುವ ಆಡಳಿತಾತ್ಮಕ ತಿಳುವಳಿಕೆಯಾಗಲೀ, ಕೈ-ಬಾಯಿ ಶುದ್ಧವಾಗಿಟ್ಟುಕೊಂಡ ನೈತಿಕ ಸ್ಥೈರ್ಯವಾಗಲೀ ಮುಖ್ಯಮಂತ್ರಿಗಳಿಗೆ ಇಲ್ಲದೇ ಹೋಗಿರುವುದೇ ಶಾಸಕಾಂಗದ ಈ ವೈಫಲ್ಯಕ್ಕೆ್ಕೆ ಕಾರಣವಾಗಿದೆ.
ಜಾಗತೀಕರಣ ಒತ್ತಾಯಿಸುವ ಅಭಿವೃದ್ಧಿ ಮಾದರಿ ಹಾಗೂ ಆದ್ಯತೆಗಳು ಸಮಾಜದ ಆಯಕಟ್ಟಿನ ಸ್ಥಾನಗಳಲ್ಲಿರುವ ಜನರ ಪಾಲಿಗೆ, ದುಡಿಮೆ ಇಲ್ಲದೆಯೇ ಸುಲಭ ಹಾಗೂ ಲೆಕ್ಕಕ್ಕೆ ಸಿಗದ ಅಪಾರ ಹಣ ಗಳಿಸುವ ಭ್ರಷ್ಟಾಚಾರದ ದಿಡ್ಡಿ ಬಾಗಿಲುಗಳನ್ನು ತೆರೆದಿಟ್ಟಿರುವ ಈ ಸಂದರ್ಭದಲ್ಲಿ, ಕೋಟ್ಯಾಂತರ ರೂಪಾಯಿಗಳ ವೆಚ್ಚದ ರೆಸಾರ್ಟ್ ರಾಜಕಾರಣದ ಮೂಲಕ ಮುಖ್ಯಮಂತ್ರಿಯಾಗಿ ಮತ್ತು ಅದರ ಬಲದ ಮೇಲೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕಾಗಿರುವುದರಿಂದಾಗಿ ಅವರು ಅನುಭವಿಸಬೇಕಾಗಿರುವ ಅಸಹಾಯಕತೆ-ಅವಮಾನವಿದು! ಇದು ರಾಜ್ಯದ ಜನತೆ ಅನುಭವಿಸಬೇಕಾಗಿರುವ ಅಸಹಾಯಕತೆ-ಅವಮಾನವೂ ಆಗಿದೆ. ಇಂತಹ ಇಕ್ಕಟ್ಟಿನಲ್ಲಿರುವ ಮುಖ್ಯಮಂತ್ರಿಯಿಂದ, ರೈತರ ಆತ್ಮಹತ್ಯೆಗೆ ಕಾರಣವಾಗಿರುವ ವ್ಯವಸ್ಥೆಯ ಬದಲಾವಣೆಯನ್ನು ನಿರೀಕ್ಷಿಸುವುದು ಕಷ್ಟವೇ ಸರಿ. ಏಕೆಂದರೆ, ತಾವೂ ಭಾಗಿಯಾಗಿರುವ ಸಮಕಾಲೀನ ರಾಜಕಾರಣದ ಚಾರಿತ್ರ್ಯಹೀನತೆಯೇ ಈ ಎಲ್ಲ ದುರಂತಗಳಿಗೆ ಕಾರಣ ಎಂಬ ಮೂಲಭೂತ ಅರಿವೇ ಇಲ್ಲದವರು ಎಷ್ಟೇ ಜನಪರತೆಯ ಕಣ್ಣೀರು ಹರಿಸಿದರೂ ರೈತರ ಆತ್ಮಹತ್ಯೆ ಪ್ರತಿನಿಧಿಸುವ ಜನತೆಯ ಕಣ್ಣೀರು ನಿಲ್ಲಲಾರದು.
ಆದರೂ ಅಂದಿನ ಸಭೆಯಲ್ಲಿ ತಮ್ಮ ಗ್ರಾಮ ವಾಸ್ತವ್ಯ ಹಾಗೂ ಇತರೆ ಜನಪ್ರಿಯ ಕಾರ್ಯಕ್ರಮಗಳ ಸದುದ್ದೇಶಗಳ ಬಗ್ಗೆ ಏಕೋ ಏನೋ ದುರಂತ ನಾಯಕನಂತೆ, ಅತಿ ವಿಷಾದಿಂದಲೂ ಅತಿವಿನಯದಲ್ಲೂ ಮಾತನಾಡಲು ಯತ್ನಿಸಿದ ಮುಖ್ಯಮಂತ್ರಿಗಳು ಆ ವಿಷಾದ-ವಿನಯಗಳಲ್ಲಿ ಎಷ್ಟು ಮೈಮರೆತರೆಂದರೆ, ತಮ್ಮ ಸತ್ಯವಂತಿಕೆಗೆ ತಾವೇ ಅರ್ಹತಾ ಪತ್ರ ಕೊಟ್ಟುಕೊಳ್ಳುತ್ತಾ; ಬೆಂಗಳೂರಲ್ಲಿ ವಶಪಡಿಸಿಕೊಳ್ಳಲಾಗಿರುವ ಅತಿಕ್ರಮಿತ ಭೂಮಿಯನ್ನು ತಮ್ಮ ನಂತರ ಬರುವ ಮುಖ್ಯಮಂತ್ರಿಯು ತಮ್ಮಂತಿರದೆ, ಆ ಭೂಮಿಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ತಮ್ಮ ಅಧಿಕಾರಾವಧಿಯಲ್ಲೇ ಅದರ 'ಸದುಪಯೋಗ' ಮಾಡುವ ಪ್ರಸ್ತಾವ ಮಂಡಿಸಿದರು.! ಆಶ್ಚರ್ಯವೆಂದರೆ ಅಂದು ಆ ಸಭೆಯಲ್ಲಿ ವಿರೋಧ ಪಕ್ಷದ ಹಲವು ಮುಖಂಡರು ಕಂಡರಾದರೂ, ರೈತ ನಾಯಕರೆಂದೇ ಸಾರ್ವಜನಿಕವಾಗಿ ಪ್ರತಿಬಿಂಬಿಸಲ್ಪಟ್ಟು ತಮ್ಮ ರಾಜಕೀಯ ಜೀವನವನ್ನು ಕಟ್ಟಿಕೊಂಡ ರಾಜ್ಯದ ಉಪಮುಖ್ಯಮಂತ್ರಿಯೂ ಮತ್ತು ರೈತರ ಆತ್ಮಹತ್ಯೆ ತಡೆಯುವ ಸಕರ್ಾರದ ಉದ್ದೇಶಿತ ಕಾರ್ಯಕ್ರಮಗಳಿಗೆ ಹಣಕಾಸಿನ ಸೌಲಭ್ಯ ಒದಗಿಸಬೇಕಾದ ಅರ್ಥಮಂತಿಯೂ ಆದ ಯಡಿಯೂರಪ್ಪನವರೂ ಸೇರಿದಂತೆ, ಮಿತ್ರ ಪಕ್ಷವಾದ ಬಿ.ಜೆ.ಪಿ.ಯ ಯಾವ ನಾಯಕರೂ ಅಲ್ಲಿ ಹಾಜರಿದ್ದಂತಿರಲಿಲ್ಲ. ಅವರದೇ ಏನೋ ಪ್ರತ್ಯೇಕ ಸಭೆ ನಡೆದಿತ್ತು ಇನ್ನೊಂದು ಕಡೆ!
ಅಂದಹಾಗೆ: ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ ರಾಜಕೀಯ ಪಕ್ಷಗಳೂ ಈಗ ರಾಷ್ಟ್ರಪತಿ ಆಯ್ಕೆಯೇ ಮಹಿಳಾ 'ಮೀಸಲಾತಿ'ಯ ಆಧಾರದ ಮೇಲೆ ನಡೆಯುತ್ತಿರುವುದನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ. ಏಕೆಂದರೆ, ಈಗ ಗೆಲ್ಲುವ ಕುದುರೆಯಾಗಿ ರಾಷ್ಟ್ರಪತಿ ಸ್ಥಾನಕ್ಕೆ ಆಳುವ ಪಕ್ಷಕೂಟದಿಂದ ಅಭ್ಯಥರ್ಿಯಾಗಿರುವ ಶ್ರೀಮತಿ ಪ್ರತಿಭಾ ಪಾಟೀಲರನ್ನು ಆ ಘನತವೆತ್ತ ಹಾಗೂ ಜವಾಬ್ದಾರಿಯುತ ಸ್ಥಾನಕ್ಕೆ ಒಯ್ಯುವ ಮುಖ್ಯ ಅರ್ಹತೆ, ಅವರು ಮಹಿಳೆಯಾಗಿದ್ದಾರೆ ಎಂಬುದೇ ಆಗಿದೆ. ಮಹಿಳಾ ಮೀಸಲಾತಿ, ಎಲ್ಲಿ ಸಾರ್ಥಕವಾಗಿ ಕೊನೆಗೊಳ್ಳಬೇಕಾಗಿತ್ತೋ, ಅದು ಆ ಸ್ಥಾನದಿಂದ ಆರಂಭವಾದಂತಿದೆ! ಮಹಿಳಾ ಮೀಸಲಾತಿಯನ್ನು ಇಷ್ಟು ಕಾಲ ವಿರೋಧಿಸಿದವರಿಗೆ ತಕ್ಕ ಶಾಸ್ತಿಯಾಗಿದೆ!

Rating
No votes yet

Comments