ನರ್ಸಮ್ಮ ನಿನ್ನದು ಅದ್ಯಾಕೋ ಅತಿ ಆಯ್ತು ಅಲ್ವಾ?

ನರ್ಸಮ್ಮ ನಿನ್ನದು ಅದ್ಯಾಕೋ ಅತಿ ಆಯ್ತು ಅಲ್ವಾ?

ನರ್ಸಮ್ಮ ನಿನ್ನದು ಅದ್ಯಾಕೋ ಅತಿ ಆಯ್ತು ಅಲ್ವಾ?


ನ್ಯಾಯಾಲಯದಲ್ಲಿ ಕಟ್ಲೆ ಹೂಡಿ ರಸ್ತೆಗಿಳಿದಿದಿಯಲ್ವಾ?


 


ದಾವೆ ಹೂಡಿದಾಕೆಯೇ ನ್ಯಾಯಾಲಯದಲಿ ಇರಲಿಲ್ಲ


ನಿನಗೂ ಸಮನ್ಸ್ ಜಾರಿ ಅಲ್ಲಿ ಬೇರೆ ದಾರಿ ಇರಲಿಲ್ಲ


 


ದೂರದರ್ಶನಕೆ ಸಂದರ್ಶನ ನೀಡಲು ಸಮಯ ಇತ್ತು


ನ್ಯಾಯಾಲಯಕೆ ನೀ ಏಕೆ ಗೈರು ಹಾಜರಾಗ ಬೇಕಿತ್ತು


 


ಆತನೊಂದಿಗೆ ಅಂದಾಡಿದ ಆಟಕ್ಕೆ ಒಪ್ಪಿಗೆ ಪಡೆದಿಲ್ಲ


ಈಗ ಎಲ್ಲದಕ್ಕೂ  ಜನರ ಬೆಂಬಲ ಕೇಳುತಿಹೆಯಲ್ಲ


 


ಮುಚ್ಚಿದ ಕೋಣೆಯೊಳಗೆ ಬೆಚ್ಚಗೆ ಆ ಆಟವಾಡಿದ್ದೇಕೆ


ಚುಂಬಿಸಲು ಬಂದವಗೆ ತನ್ನ ಗಲ್ಲವನು ತಾ ಒಡ್ಡಿದ್ದೇಕೆ


 


ಕೈಯೊಂದು ತಾನೆಷ್ಟು ಆಡಿದರೂ ಚಪ್ಪಾಳೆ ಕೇಳಿಸದು


ಕೈಜೋಡಿಸಿದಾಕೆ ನೀ ಮರುಗಿದರೆ ಕನಿಕರವೇ ಬಾರದು


 


ಚಿತ್ರ ಪ್ರದರ್ಶಿಸಿ ಮರ್ಯಾದೆಯ ಮಾಡಿ ಮೂರಾಬಟ್ಟೆ


ಈಗ್ಯಾಕೆ ಹತ್ತಿ ಕೂತಿದ್ದೀಯ ಊರ ಪಂಚಾಯತಿ ಕಟ್ಟೆ


 


ನೈತಿಕತೆಯನು ಗಾಳಿಗೆ ತೂರಿ ಬಾಳನ್ನು ಮಾಡಿ ಚಿಂದಿ


ಈಗ ಅಳು ಏಕೆ, ನಿನ್ನಡುಗೆಯನ್ನೇ ತಾನೇ ನೀ ತಿಂದಿ


 


ನಿನ್ನ ಕರ್ಮಗಳಿಗೆ ನೀನೇ ಜವಾಬ್ದಾರಿ ನಾವ್ಯಾರೂ ಅಲ್ಲ


ನೀನು ಗಳಿಸಿದ ಆಸ್ತಿಯಲಿ ನಾವೇನೂ ಪಾಲುದಾರರಲ್ಲ!!!


*****************************


 


ಆತ್ರಾಡಿ ಸುರೇಶ ಹೆಗ್ಡೆ.

Rating
No votes yet

Comments