ಆಸ್ತ್ರೇಲಿಯಾದಲ್ಲಿನ ಜನಾಂಗೀಯ ದಾಳಿಗಳನ್ನು ವಿರೋಧಿಸುವವರು ಬೀಜೇಪಿಯವರು, ಸಮರ್ಥಿಸುವವರು........?

ಆಸ್ತ್ರೇಲಿಯಾದಲ್ಲಿನ ಜನಾಂಗೀಯ ದಾಳಿಗಳನ್ನು ವಿರೋಧಿಸುವವರು ಬೀಜೇಪಿಯವರು, ಸಮರ್ಥಿಸುವವರು........?

ಅಲ್ಲಿ ನಡೆಯುತ್ತಿರುವ ದಾಳಿ ಭಾರತೀಯರ ವಿರುದ್ದವಾದದ್ದೆ? ಇದೆಲ್ಲವೂ ಭಾರತದ ಮಾಧ್ಯಮದವರ ಅತಿರೇಕದ ಚಿತ್ರಣ ಅಂತದ್ದೇನೂ ನಡೆದಿಲ್ಲ ಅವೆಲ್ಲವೂ ಒಂದು ಸಾಮಾನ್ಯ ಅಪರಾಧಿ ಪ್ರಕರಣಗಳಷ್ಟೆ ಎಂದು ಆಸ್ತ್ರೇಲಿಯಾದವರ ಅಂಬೋಣ.

ಇಷ್ಟಕ್ಕೂ ನಡೆದಿರುವ ದಾಳಿಗಳಲ್ಲಿ ತಪ್ಪೇನಿದೆ? ಕರ್ನಾಟಕದಲ್ಲಿ ಕನ್ನಡೇತರರಿಗೆ ಉದ್ಯೋಗ ಸಿಗಬಾರ್ದು ಅದು ಕನ್ನಡಿಗರಿಗೆ ಮೀಸಲು ಎಂದಾಗ ಸಮರ್ಥಿಸುವ ನಾವು ಅದೇ ಆಸ್ಟೇಲಿಯದವ್ರು ಮಾಡಿದ್ರೆ ತಪ್ಪು ಎನ್ನುವುದು ಎಷ್ಟರಮಟ್ಟಿಗೆ ಸರಿ?
ಇದನ್ನು ಮುಚ್ಚಿ ಕೊಳ್ಳಲು ಟ್ಯಾಕ್ಸಿ ಚಾಲನ ಪರವಾನಗಿ ಮರಾಠಿಗರಿಗೆ ಮಾತ್ರ ಎಂದು ಹೇಳಿಕೆ ಕೊಡುವ ಮೂಲಕ ಪ್ರಚೋದಿಸಿ ನಂತರ ತಣ್ಣಗೆ ಇಲ್ಲ ಎಂದು ಕೂತು ಕೆರಳಿಸಿ ವಿವಾದ ಹುಟ್ಟು ಹಾಕಿ ದುಬಾರಿಯಾಗಿರುವ ಬೇಳೆ ಬೇಯಿಸಿಕೊಳ್ಳುವ ವಿಧಾನ ಸೂಪರ್

Rating
No votes yet

Comments