ಬದುಕ ಬದಲಿಸುವ ತಾಕತ್ತು ಯಾರಿಗಿದೆ ?

ಬದುಕ ಬದಲಿಸುವ ತಾಕತ್ತು ಯಾರಿಗಿದೆ ?

Comments

ಬರಹ

            ಇಂಥ ಒಂದು ಪ್ರಶ್ನೆಗೆ ಉತ್ತರಕ್ಕಾಗಿ ತಡಕಾಡಿ ಕಡೆಗೆ ಬಂದು ನಿಲ್ಲುವುದು 'ಸಾಂದರ್ಭಿಕ ಘಟನೆಗಳು ಮತ್ತು ಪುಸ್ತಕಗಳ' ಹತ್ತಿರ. ಹೌದು, ಅಕ್ಬರ್ ಬಾದಷಹ ಸಹ ಹುಟ್ಟಿದಾಗ ಮಗುವೇ ಆಗಿದ್ದ. ಬದುಕು ಸಾಕಷ್ಟು ಕಲಿಸಿತು. ಚಕ್ರವರ್ತಿಯಾದ. ಜೀವನದ ನೂರಾರು ಅನುಭವಗಳನ್ನು ಒಂದು ಹೊತ್ತಿಗೆ ಸಂಗ್ರಹಿಸಿಟ್ಟುಕೊಂಡಿರುತ್ತದೆ. ಎಲ್ಲವನ್ನೂ ನಾವೇ ಅನುಭವಿಸಿ ಕಲಿಯಬೇಕಿಲ್ಲ. ಇನ್ನೊಬ್ಬರ ಅನುಭವಗಳು ನಮ್ಮ ಜೀವನಕ್ಕೆ ದಾರಿಯಾಗಬಲ್ಲವು. ಬೆಂಕಿ ಮುಟ್ಟಿದರೆ ಸುಡುತ್ತೆ ಅಂತ ಅಮ್ಮ ಹೇಳ್ತಾಳೆ ಯಾಕಂದರೆ ಆಕೆಗೆ ಅದರ ಅನುಭವವಿದೆ. ನಾವು ಯಾವತ್ತೂ ಅದನ್ನು ಪರೀಕ್ಷಿಸಹೋಗುವುದಿಲ್ಲ.


           ಇರಲಿ, ನಿಮ್ಮನ್ನು ತೀವ್ರವಾಗಿ ಕಾಡಿದ, ಕೆಣಕಿದ, ಸತಾಯಿಸಿ ಸೋಲೋಪ್ಪಿದ ಪುಸ್ತಕಗಳು ನಿಮ್ಮ ಮಸ್ತಕದಲ್ಲಿರಬಹುದು. ಅವುಗಳ ವಿಶೇಷತೆಯೊಂದಿಗೆ ಅದರ ಪರಿಚಯ ಮಾಡಿಸಿದರೆ ಇತರ ಸಂಪದಿಗರು ಅವುಗಳನ್ನು ಓದಬಹುದು. ಸಾಕಷ್ಟು ಸಾಧನೆ ಮಾಡಿದ ಮಹನೀಯರು ಸಂಪದದಲ್ಲಿದ್ದಾರೆ. ಅವರನ್ನು ಧನಾತ್ಮಕವಾಗಿ ಪ್ರೇರಿಪಿಸಿದ ಪುಸ್ತಕಗಳ ಅಥವಾ ಘಟನೆಗಳ ಬಗ್ಗೆ ಮಾಹಿತಿ ಕೊಟ್ಟರೆ ಕಿರಿಯರಿಗೆ ಸಹಾಯವಾಗುತ್ತದೆ. ನೋಡೋಣ ಯಾವ ಪುಸ್ತಕ ಯಾರನ್ನು ಎಷ್ಟು ಕಾಡಿದೆ ಅಂತ...  ಎಲ್ಲರಿಗೂ ಮುಕ್ತ ಆಹ್ವಾನ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet