ಗೆಳೆಯನಿಗಾಗಿ

ಗೆಳೆಯನಿಗಾಗಿ

ನನ್ನಯ ಗೆಳೆಯ ಹಾಸ್ಯದ ಸರದಾರ
ತಿಳಿ ಹಾಸ್ಯ ಚುಟುಕುಗಳ ಹರಿಕಾರ
ಬಾನಂಗಳ ಕಾದ ಸುಮನಸ
ಹರಿಸುವರು ಸಂಪದದಿ ನವರಸ

ಮಾಡಿದರಿವರ ಸಹವಾಸ
ಅನ್ನುವರಿವರು ನಕ್ಕು ನಗಿಸುವುದಕೇ
ಸಮಯ ಸಾಲದಿರುವಾಗ
ದುಡುಕು ಬಿಗುಮಾನಗಳೇಕೆ ಸಖೀ

ಮತ್ತೊಮ್ಮೆ ಹೇಳುವರು
ತಡೆಯಲಾಗದೆ
ಚಿಣ್ಣರ ಸುಖವ ಕಂಡು
ಅಳಲಾಗದು ಸಖೀ…!!!
ಈ ಹಿರಿತನ ಏಕೆ ಬೇಕಿತ್ತು

ಸಾಕಿರುವರು ಮನೆಯಲಿ
ಕೋಗಿಲೆಯ ಮರಿಯ
ಗೊತ್ತಿಲ್ಲದೇ ಪಾಪ
ಅಳಿಯನೆಂಬ ಕಾಗೆ ಕಾಯುತಿದೆ
ಬರಲು ಮರಿ ಹೊರಗೆ

ಅಂದು ಅಂದರು
ನೀನಾರೋ ನಾನಾರೋ

ನಂತರದಲ್ಲಿ
ನಾನು ರವಾನಿಸೋ

ಪ್ರೀತಿಯ ಎಸ್ಸೆಮ್ಮೆಸ್ ಗಳಿಗೆ,
ನೀನು ಉತ್ತರಿಸದಿದ್ದರೂ ಚಿಂತಿಲ್ಲ,

ನನಗೆಳ್ಳಷ್ಟೂ ಬೇಸರವಿಲ್ಲ;

ಈಗ ಅಂತಾರೆ
ನೀ ನನ್ನ ಜೀವ

ನನಗೂ ಗೊತ್ತು
ಈ ಸಂಬಂಧಗಳೇ ಹೀಗೆ
ಬೆಳೆದು ಬಿಡುತ್ತವೆ ಎಲ್ಲಾದರೂ
ಮನ ಬಂದ ಹಾಗೆ

ಕಾಯುತ್ತಿರುವೆ,
ಎಂದನ್ನುವರೋ ಬಾ ಗೆಳೆಯ ನನ್ನೆದೆಯ ಅರಮನೆಗೆ
ನಿನಗಾಗಿ ತೆರೆದಿದೆ ಬಾಗಿಲು…

 

 

ನನ್ನ ಹಿರಿಯ ಗೆಳೆಯ ಆಸುಹೆಗ್ಡೆಯವರಿಗೆ ನಾನು ಬರೆದದ್ದು ಮತ್ತು ನನ್ನ ಪ್ರಥಮ ಕನ್ನಡ ಕವಿತೆ

ಇಲ್ಲಿ ಬಳಕೆಯಾಗಿರುವುದು “ಬೆಣ್ಣೆಮಸಾಲೆ ದೋಸೆ” ಲೋಹಿತರ “ಲೋಹಿತತ್ರಾಂಶ

ಮತ್ತಿಲ್ಲಿ ಬಳಸುವುದು ಲೋಹಿತತ್ರಾಂಶ

ಇನ್ನಷ್ಟು

Rating
No votes yet

Comments