ಪ್ರತಿಕ್ರಿಯೆಗಳ ಬೆಂಬತ್ತಿ ಹೋದಾಗ ನೆನಪಾದ ಕತೆ...!!!
ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಒಬ್ಬ ಯುವ ರೋಗಿ ಇದ್ದ.
ಆತ ಯಾವಾಗಲೂ ಗಾಳಿಪಟ ಹಾರಿಸುವ ಕನಸು ಕಾಣುತ್ತಲಿದ್ದ. ಮತ್ತು ಗಾಳಿಪಟ ಹಾರಿಸುವಂತೆ ನಟಿಸುತ್ತಲೂ ಇದ್ದ. ಸುಮಾರು ತಿಂಗಳ ಚಿಕಿತ್ಸೆಯ ನಂತರ ವೈದ್ಯರು ಅವನನ್ನು ಕೇಳಿದರು:
"ನಾನು ನಿನ್ನನ್ನು ನಾಳೆ ಮನೆಗೆ ಕಳುಹಿಸುತ್ತೇನೆ. ನೀನು ಮನೆಗೆ ಹೋಗಿ ಏನು ಮಾಡ್ತೀ?"
ರೋಗಿ: "ಡಾಕ್ಟ್ರೇ ನಾನು ಮದುವೆ ಆಗ್ತೀನಿ" ಈ ಉತ್ತರ ಕೇಳಿ ವೈದ್ಯರಿಗೆ ಸಂತಸ ಆಯ್ತು. ರೋಗಿ ತನ್ನ ವಯಸ್ಸಿಗೆ ಒಪ್ಪುವ ಮಾತನ್ನೇ ಆಡುತ್ತಾ ಇದ್ದಾನೆ. ಇನ್ನೂ ಕೆಲವು ಪ್ರಶ್ನೆ ಕೇಳೋಣ ಎಂದು ನಿರ್ಧರಿಸಿ ಮುಂದುವರೆದರು.
ವೈದ್ಯರು: "ಸರಿ ಮದುವೆ ಆದ ಮೇಲೆ ಏನು ಮಾಡ್ತಾರೆ ಗೊತ್ತಾ?"
ರೋಗಿ: "ಹೌದು ಹೌದು ಮೊದಲ ರಾತ್ರಿ..."
ವೈದ್ಯರು:"ಮೊದಲ ರಾತ್ರಿಗೆ ತಯಾರಿ ಹೇಗೆ ನಡೆಸುತ್ತೀ ನೀನು?"
ರೋಗಿ: "ಭೋಜನ ಎಲ್ಲಾ ಮುಗಿದ ಮೇಲೆ ... ಎಲ್ಲಾ ಮಲಗುವ ಸಮಯ ಆದಾಗ ನಾನು ನನ್ನ ವಧುವಿನೊಂದಿಗೆ ನನ್ನ ಮಲಗುವ ಕೋಣೆಗೆ ಹೋಗ್ತೇನೆ"
ವೈದ್ಯರು:"ಆಮೇಲೆ?"
ರೋಗಿ: "ದೀಪ ಆರಿಸ್ತೇನೆ..."
ವೈದ್ಯರು:"ಆಮೇಲೆ?"
ರೋಗಿ: "ಆಕೆಯ ಸೀರೆ ತೆಗೆದಿರಿಸಲು ಹೇಳ್ತೇನೆ"
ವೈದ್ಯರು:"ಆಮೇಲೆ"
ರೋಗಿ: "ಆಕೆಯ ಲಂಗದ ಲಾಡಿಯನ್ನು ತೆಗೆದು ನನಗೆ ನೀಡಲು ಹೇಳ್ತೇನೆ"
ವೈದ್ಯರು:"ಲಾಡಿ...?! ಯಾಕೆ?"
ರೋಗಿ: "ನನ್ನ ಗಾಳಿಪಟಕ್ಕೆ ಕಟ್ಟುವುದಕ್ಕೆ....ಆಮೇಲೆ ಇಡೀ ರಾತ್ರಿ ಗಾಳಿಪಟ ಹಾರಿಸುತ್ತೇನೆ..."
ವೈದ್ಯರು: "ಸರಿ ಒಳಗೆ ಹೋಗು ಇನ್ನು ಆರು ತಿಂಗಳು ನಿನ್ನನ್ನು ಮನೆಗೆ ಕಳುಹಿಸೋಲ್ಲ....ನೀನು ಇಲ್ಲೇ ಇರಬೇಕು..."
ಸಂಪದದಲ್ಲಿನ ಕೆಲವು ಪ್ರತಿಕ್ರಿಯೆಗಳ ಬೆಂಬತ್ತಿ ಹೋದಾಗ ನನಗೆ ಅದೇಕೋ ಈ ಕತೆ ನೆನಪಾಯ್ತು...ನಿಮ್ಮೊಂದಿಗೂ ಹಂಚಿಕೊಂಡೆ, ಅಷ್ಟೆ.
:)
- ಆತ್ರಾಡಿ ಸುರೇಶ ಹೆಗ್ಡೆ
Rating
Comments
ಉ: ಪ್ರತಿಕ್ರಿಯೆಗಳ ಬೆಂಬತ್ತಿ ಹೋದಾಗ ನೆನಪಾದ ಕತೆ...!!!