ಈ ದೀಪಾವಳಿ ಒಬ್ಬ ಜ್ಞಾನವೃದ್ಧರೊಡನೆ ಭೇಟಿ
ನಾನು ಈ ದೀಪಾವಳಿಯಲ್ಲಿ ಒಂದು ಅಳಿಯತನಕ್ಕೆ ಆಹ್ವಾನಿತನಾಗಿ ಹೋಗಿದ್ದೆ !!
ತುಂಬ ಚೆನ್ನಾಗಿತ್ತು , ಎಂಜಾಯ್ ಮಾಡಿದೆ.
ಅಲ್ಲಿ
ಒಬ್ಬ ಜ್ಞಾನವೃದ್ಧರ ಭೇಟಿ ಆಯಿತು. ತುಂಬ ಓದಿಕೊಂಡವರೂ , ತುಂಬ ತಿಳಿದವರೂ ಅವರು.
ಅವರು ಮಾತು ಮಾತಿನಲ್ಲಿ ಹೇಳಿದರು - you have to find your centre of happiness!!
ಮತ್ತೆ ಇನ್ನೂ ಒಂದು ಮಾತು ಹೇಳಿದರು. ನಾವು ಯಾವಾಗಲೂ ಸಂತೋಷದಿಂದ ಇರಬೇಕು . ಸಂತೋಶದಿಂದ ಕಾಲ ಕಳೆಯಲು ಪ್ರವಾಸ ಹೋದಾಗ ಸಿಟ್ಟು ಮಾಡಿ ಮೂಡ್ ಕೆಡಿಸಿಕೊಳ್ಳೋದು ಅರ್ಥವಿಲ್ಲ, ಅಲ್ಲವೇ ? ಹಾಗೆ ಈ ಜೀವನ .
ನಾವು ಈ ಜಗತ್ತು, ಜಗತ್ತಿನ ಜನರು ನಮಗೆ ಏನೇನು ಕೊಟ್ಟಿದೆ ಅದಕ್ಕೆಲ್ಲ ಋಣಿಯಾಗಿರಬೇಕು ; ನೀರು , ಗಾಳಿ , ಆಹಾರ, ಸಮಸ್ತಕ್ಕೂ , ದೇವರಿಗೂ .. ಅಂತ .
ನನಗೂ ನಿಮಗೂ ಏನ್ರೀ ಸಂಬಂಧ ? ಅಂತ ಕೇಳಿದ್ರು , ರಕ್ತ ಸಂಬಂಧವೋ , ಏನಾದರೂ ಕೊಡ ಕೊಳ್ಳುವ ವ್ಯವಹಾರವೋ , ಎರಡೂ ಅಲ್ಲ . ಮತ್ತೆ ? ನಾವು ಕಂಪಾಸ್ ಪೆಟ್ಟಿಗೆಯಲ್ಲಿರುವ ತ್ರಿಜ್ಯದ ಎರಡು ಕಾಲುಗಳ ತರಹ . ಎರಡನ್ನೂ ಸೇರಿಸುವ ಬಿಂದು ದೇವರು . ನಾವೆಲ್ಲ ದೇವರ ಮಕ್ಕಳು ಅದೇ ನಮ್ಮ ನಿಮ್ಮ ಮತ್ತು ಇನ್ನೆಲ್ಲರ ಜತೆಗಿನ ಸಂಬಂಧ .
ಹೆಚ್ಚಿಗೆ ಅವರ ಜತೆ ಕಾಲ ಕಳೆವ ಭಾಗ್ಯ ಇರಲಿಲ್ಲ ; ನನಗೆ ದೊರಕಿದ್ದು ಇಷ್ಟೇ . ನಿಮ್ಮೊಂದಿಗೆ ಹಂಚಿಕೊಳ್ಳ ಬೇಕೆನಿಸಿತು. ಇಲ್ಲಿ ಬರೆದಿದ್ದೇನೆ.
Comments
ಉ: ಈ ದೀಪಾವಳಿ ಒಬ್ಬ ಜ್ಞಾನವೃದ್ಧರೊಡನೆ ಭೇಟಿ
ಉ: ಈ ದೀಪಾವಳಿ ಒಬ್ಬ ಜ್ಞಾನವೃದ್ಧರೊಡನೆ ಭೇಟಿ