ಪಿಕಳಾರನ ಸಂಸಾರ

ಪಿಕಳಾರನ ಸಂಸಾರ

 ಪಿಕಳಾರನ ಸಂಸಾರ


     ಶಿವಮೊಗ್ಗದ ನನ್ನ ತಮ್ಮ ಕವಿಸುರೇಶನ ಮನೆಯಲ್ಲಿ ಪಿಕಳಾರವೊಂದು ಮೊಟ್ಟೆಯಿಟ್ಟು ಅದರಿಂದ ಮರಿಗಳು ಜೀವಸೆಲೆ ಪಡೆದು ಹಾರಿಹೋಗುವ ಮುನ್ನ ಮನೆಮಂದಿ ಮುತುವರ್ಜಿಯಿಂದ ಕೋಣೆಯನ್ನೇ ತೆರವು ಮಾಡಿ ನೆರವು ನೀಡಿದರು. ಈ ಕುರಿತು ಶಿವಮೊಗ್ಗದ 'ಜನಹೋರಾಟ' ಪತ್ರಿಕೆಯಲ್ಲಿ ನನ್ನ ತಮ್ಮ ಬರೆದ ಸಚಿತ್ರ ಲೇಖನ ಆಧರಿಸಿ ಈ ಚಿತ್ರಕವನ ರಚಿಸಿದೆ. ಫೋಟೋಗಳನ್ನು ಕ್ಲಿಕ್ಕಿಸಿದವನು ತಮ್ಮನ ಮಗ ಡಾ. ಬಿ.ಎಸ್.ಆರ್. ದೀಪಕ್. 




 


 



 


 


 



 






 


 


 


 


ಹಕ್ಕಿಯೊಂದು ಹಾರಿ ಬಂದು ಕಿಟಕಿಯಲ್ಲಿ ಕುಳಿತಿತು


ಸುತ್ತಮುತ್ತ ಹಾರಿತು ಅತ್ತ ಇತ್ತ ನೋಡಿತು |


ಸರಿಯೆಂದು ಕಂಡಿತು ಗೂಡನೊಂದು ಕಟ್ಟಿತು


ಕಾಲ ಕೂಡಿ ಬಂದಿತು ಮೊಟ್ಟೆ ಮೂರು ಇಟ್ಟಿತು ||




ಹಕ್ಕಿಗಾಗಿ ಕೋಣೆ ತೆರವು ಮನೆಮಂದಿಯಲ್ಲ ನೆರವು


ತಾಯಿಗಿಲ್ಲ ತಲೆಭಾರ ಜೀವಸೆಲೆಗೆ ಉಪಕಾರ |


ಬಿಟ್ಟ ಬಾಣದಂತೆ ಹಾರಿ ಬಂದವರನು ಹೆದರಿಸಿತು


ಕಾವಲಿದ್ದು ಕಾವು ಕೊಟ್ಟು ತಾಯಿತನವ ಮೆರೆಯಿತು||




ಮೊಟ್ಟೆ ಬಿರಿದು ಬೊಮ್ಮಟೆಗಳು ಬಂದವು


ತ್ರಾಣವಿಲ್ಲ ಕಾಣದೆಲ್ಲ ಕಿಚಿಪಿಚಿ ಕದಲಿದವು |


ನಾವು ತಾಳಲಾರೆವು ಅಮ್ಮ ಹಸಿವೆ ಅಮ್ಮ ಹಸಿವೆ


ಬಂದೆ ತಡಿ ಇಗೋ ಹಿಡಿ ಪ್ರೀತಿ ಎಲ್ಲ ಸುರಿವೆ ||




ಹಾ ಸರಿ ಹೀಗೆ ಮರಿ ಎಲ್ಲಿ ಹಾರು ನೋಡುವ


ಹಾರುವುದ ಕಲಿತ ಮೇಲೆ ಭರ್ ಎಂದು ಹಾರುವ|


ನಿಮ್ಮ ನೆರವು ನಮ್ಮ ನಲಿವು ಎನಿತು ಮಧುರ ಸಂಬಂಧ


ದ್ವೇಷ ಬಿಡಿ ಪ್ರೀತಿಸಿರಿ ಅನಿತು ಬಾಳು ಚೆಂದ ||


****************


-ಕ.ವೆಂ. ನಾಗರಾಜ್.  


 

Rating
No votes yet

Comments