ವಸಂತನ ತಪ್ಪು
ವಸಂತದಲಿಂಪಾದ ಕೋಗಿಲೆಗಳ ಗಾನ
ಮಲೆನಾಡ ಗಿರಿಗಳಲಿ ಸುಳಿವ ತಂಗಾಳಿ
ಅಗಲಿ ನೊಂದವರ ಜೀವವನೇ ಸೆಳೆದಾವು
ಕೇಡುಗಾಲದಲಮೃತವೂ ಆದೀತು ನಂಜು!
ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ )
ಮಧುರಯಂ ಮಧುರೈರಪಿ ಕೋಕಿಲಾ-
ಕಲರವೈರ್ಮಲಯಸ್ಯ ಚ ವಾಯುಭಿಃ |
ವಿರಹಿಣಃ ಪ್ರಹಿಣಸ್ತಿ ಶರೀರಿಣೋಂ
ವಿಪದಿ ಹಂತ ಸುಧಾSಪಿ ವಿಷಾಯತೇ ||
-ಹಂಸಾನಂದಿ
ಕೊ: ಮೂರನೇ ಸಾಲಿನಲ್ಲಿ ಪ್ರಹಿಣಸ್ತಿ, ಪ್ರಣಿಹಂತಿ - ಹೀಗೆ ಎರಡು ಪಾಠಾಂತರಗಳು ಇದ್ದಹಾಗೆ ತೋರುತ್ತದೆ. ಹತ್ತಿರದಲ್ಲಿ ನಿಘಂಟು ಇಲ್ಲದ್ದಿಂದ, ಇದರಲ್ಲಿ ಯಾವುದು ಹೆಚ್ಚು ಸೂಕ್ತ ಎಂದು ತಿಳಿಯಲಾಗಲಿಲ್ಲ.
ಕೊ.ಕೊ: ಮಲಯಪರ್ವತದ ಗಾಳಿಯನ್ನು ನಾನು ಮಲೆನಾಡ ಗಾಳಿಯನ್ನಾಗಿ ಬದಲಾಯಿಸಿದ್ದೇನಾದರೂ, ಸಾರಾಂಶ ಅದೇ ಆಗಿದೆ.
Rating