ಭ್ರ್ರಷ್ಟರ ಸಂಪತ್ತಿನ ಸದ್ವಿನಿಯೋಗ
ಈಗಿನ ರಾಜಕಾರಣಿಗಳ, ಅಧಿಕಾರಿಗಳ, ಆಡಳಿತ ವರ್ಗದವರ ಭ್ರಷ್ಟಾಚಾರ ಮಿತಿಮೀರಿದೆ. ಲೋಕಯುಕ್ತರ ತೆನಿಖೆಯಿಂದ ಕೋಟ್ಯಾಂತರ ರೂ ನಗದು ಹಾಗೂ ಆಸ್ತಿಪಾಸ್ತಿ ವಶಪಡಿಸಿಕೊಳ್ಳಲಾಗಿದೆ.ಈ ಸುದ್ದಿಗಳು ನಮ್ಮಂತಹ ಸಾಮಾನ್ಯ ನಾಗರಿಕರಿಗೆ ಸುದ್ಧಿ ಮಾಧ್ಯಮಗಳಿಂದ ತಿಳಿಯುತ್ತದೆ. ಆದರೆ ಆ ಹಣ, ವಸ್ತುಗಳು ಏನಾಯಿತು? ಎಂದು ಯಾರೂ ತಿಳಿಸುವುದಿಲ್ಲ. ಆ ಪ್ರಕರಣಗಳು ಇನ್ನೂ ತನಿಖಾ ಹಂತದಲ್ಲಿವ, ಆಪಾದಿತರನ್ನು ಹುದ್ದೆಯಿಂದ ವಜಾಮಾಡಲಾಗಿದೆ ಎಂಬ ಸುದ್ದಿಗಳೂ ತಿಳಿಯುತ್ತವೆ ಆದರೆ ಆ ಹಣ ಏನಾಯಿತು ಎಂದು ತಿಳಿಯುವುದಿಲ್ಲ. ತನಿಖೆ ಮುಗಿಯುವವರೆಗೂ ಆ ಹಣ, ಆಸ್ತಿಪಾಸ್ತಿಯನ್ನು ಭದ್ರವಾಗಿ ಇರಿಸುವುದರಿಂದ ಯಾರಿಗೂ ಲಾಭವಿಲ್ಲ ಆದರೆ ಅದನ್ನು ಸಾರ್ವಜನಿಕರ ಉಪಯೋಗಕ್ಕೆ ಅಂದರೆ ಉದಾಹರಣೆಗೆ ರಸ್ತೆ ರಿಪೇರಿ, ಶೌಚಾಲಯ ನಿರ್ಮಾಣ, ಶಾಲೆ, ಆಸ್ಪತ್ರೆ ಇತ್ಯಾದಿಗಳಿಗೆ ವಿನಿಯೋಗಿಸಿದರೆ ಉಚಿತವಲ್ಲವೇ? ಅಕಸ್ಮಾತ್ ಆಪಾದಿತರು ನ್ಯಾಯಾಲಯದಲ್ಲಿ ನಿರಪರಾಧಿ ಎಂದು ಸಾಬೀತಾದರೆ ಅವರೆಲ್ಲರ ಸ್ವತ್ತನ್ನು ಸರ್ಕಾರ ಹಿಂದಿರುಗಿಸಿದರಾಯಿತು. ಸಂಪತ್ತನ್ನು ಒಂದಡೆ ಮಿತಿಮೀರಿ ಸಂಗ್ರಹಿಸುವುದರಿಂದ ಅದರ ಮೌಲ್ಯ ನಷ್ಟವಾದಂತೆ ಅಲ್ಲವೇ?
Comments
ಉ: ಭ್ರ್ರಷ್ಟರ ಸಂಪತ್ತಿನ ಸದ್ವಿನಿಯೋಗ
ಉ: ಭ್ರ್ರಷ್ಟರ ಸಂಪತ್ತಿನ ಸದ್ವಿನಿಯೋಗ