ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ

ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ

ಚಂದ್ರಶೇಖರ ಕಂಬಾರ - Chandrashekhara Kambara

ಡಾ. ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ ಎಂಬುದು ಸುದ್ದಿ. ಈ ಪ್ರಶಸ್ತಿಯೊಂದಿಗೆ ಕನ್ನಡಕ್ಕೆ ಒಟ್ಟು ಎಂಟು ಜ್ಞಾನಪೀಠ! ಎಲ್ಲ ಭಾರತೀಯ ಭಾಷೆಗಳಲ್ಲಿ ಕನ್ನಡಕ್ಕೇ ಅತಿ ಹೆಚ್ಚು.

ಸಾಹು ಜೈನ್ ಕುಟುಂಬ ಹುಟ್ಟುಹಾಕಿದ ಟ್ರಸ್ಟ್ - ಭಾರತೀಯ ಜ್ಞಾನಪೀಠ ಈ ಪ್ರಶಸ್ತಿಯನ್ನು ಕೊಡುತ್ತ ಬಂದಿದೆ. ಭಾರತದ ಸಾಹಿತ್ಯ ಲೋಕದಲ್ಲಿ ಅತ್ಯಂತ ಗೌರವದಿಂದ ಕಾಣಲಾಗುವ ಪ್ರಶಸ್ತಿ ಎಂಬ ಹೆಗ್ಗಳಿಕೆ ಇದರದ್ದು.

ಕನ್ನಡಕ್ಕೆ ಈ ಹಿಂದೆ ಲಭಿಸಿದ ಜ್ಞಾನಪೀಠ:
೧೯೬೭ರಲ್ಲಿ ಕುವೆಂಪು, ೧೯೭೩ರಲ್ಲಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ೧೯೭೭ ಶಿವರಾಮ ಕಾರಂತ, ೧೯೮೩ ಮಾಸ್ತಿ ವೆಂಕಟೇಶ ಐಯಂಗಾರ್, ೧೯೯೦ ವಿ ಕೃ ಗೋಕಾಕ್, ೧೯೯೪ ಯು ಆರ್ ಅನಂತಮೂರ್ತಿ, ೧೯೯೮, ಗಿರೀಶ್ ಕರ್ನಾಡ್

ಚಂದ್ರಶೇಖರ ಕಂಬಾರರೊಂದಿಗೆ ಸಂಪದ ಒಂದು ಸಂದರ್ಶನ ರೆಕಾರ್ಡ್ ಮಾಡಿತ್ತು. ಅದನ್ನು ಇಲ್ಲಿ ಕೇಳಬಹುದು:
http://sampada.net/article/635
 

ಚಿತ್ರ ಕೃಪೆ: ಭಾರತ್ ಭವನ್

Comments