ಮರುಭೂಮಿಯ ಹೂ (ವಾರಿಸ್ ಡಿರಿ ಅವರ ‘ಡೆಸರ್ಟ್ ಪ್ಲವರ್’ ಆತ್ಮಕತೆ)

ಪುಸ್ತಕದ ಲೇಖಕ/ಕವಿಯ ಹೆಸರು
ಅನುವಾದ: ಡಾ. ಎನ್. ಜಗದೀಶ್ ಕೊಪ್ಪ
ಪ್ರಕಾಶಕರು
ಲಡಾಯಿ ಪ್ರಕಾಶನ, ಗದಗ
ಪುಸ್ತಕದ ಬೆಲೆ
ರೂ 140/-

ಸೋಮಾಲಿಯಾದ ಹೆಣ್ಣು ಮಗಳು ವಾರಿಸ್ ಡಿರಿಳ ಆತ್ಮಕಥೆ “ಮರುಭೂಮಿಯ ಹೂ”. ವಾರಿಸ್ ಡಿರಿ ಜಗತ್ತಿನ ಜಾಹಿರಾತು ಲೋಕದಲ್ಲಿ ಒಂದು ಅಚ್ಚಳಿಯದ ಹೆಸರು. ಆತ್ಮಕಥೆಯ ವಸ್ತು, ವಿವರ ಹಾಗೂ ಜಗತ್ ಪ್ರಸಿದ್ಧ ರೂಪದರ್ಶಿಯಾಗಿದ್ದುಕೊಂಡು ವಾರಿಸ್ ಡಿರಿ ತೆರೆದಿಟ್ಟ ತನ್ನ ಬದುಕಿನ ಬಡತನ, ಅಪಮಾನ, ಅತ್ಯಾಚಾರದಂತಹ ಸಂಗತಿಗಳು ಹಾಗೂ ಆಫ್ರಿಕಾದ ಬುಡಕಟ್ಟು ಜನಾಂಗಗಳಲ್ಲಿ ಆಚರಣೆಯಲ್ಲಿರುವ ಯೋನಿ ಛೇದನ ಎಂಬ ಕ್ರೂರ ಪದ್ಧತಿ ಇವೆಲ್ಲವುಗಳಿಂದಾಗಿ ಈ ಕೃತಿಯು ಓದುಗರನ್ನು ಕಾದಂಬರಿಯಂತೆ ಓದಿಸಿಕೊಂಡು ಹೋಗುವ ಗುಣವನ್ನು ಪಡೆದಿದೆ. ಆಕೆ ಅನುಭವಗಳನ್ನು ದಾಖಲಿಸುವ ರೀತಿ ಅನನ್ಯವಾದುದು.

ಬೆಳಗಿನ ಚಿಂತನ ಮತ್ತು ಒಂದು ಒಳ್ಳೆಯ ನುಡಿ

ಕಗ್ಗಂಟು

ನಾನೋರ್ವನೇ, ನನಗೆ ಯಾರೂ ಇಲ್ಲ, ನಾನು ಏಕಾಂಗಿ, ನನ್ನನ್ನು ಯಾರೂ ಗಮನಿಸುವುದಿಲ್ಲ, ಗುರುತವೇ ಇಲ್ಲ, ಪ್ರೀತಿ ಯಾರಿಗೂ ನನ್ನ ಮೇಲಿಲ್ಲ, ವಿಶ್ವಾಸ ಮೊದಲೇ ಇಲ್ಲ, ನನ್ನನ್ನು ಯಾರೂ ನಂಬುವುದಿಲ್ಲ ಎಂಬ ಕೀಳರಿಮೆ ಒಮ್ಮೊಮ್ಮೆ ಆವರಿಸಿಬಿಡುತ್ತದೆ.

Image

ನಮ್ಮ ಹೆಮ್ಮೆಯ ಭಾರತ (11 - 12)

೧೧. ಭಾರತದ ಅಪ್ರತಿಮ ಸಂವಿಧಾನ
ಭಾರತ ಸ್ವಾತಂತ್ರ್ಯ ಗಳಿಸಿದ್ದು ೧೯೪೭ರಲ್ಲಿ. ಅದಾಗಿ ಸುಮಾರು ಮೂರು ವರುಷಗಳಲ್ಲಿ ಭಾರತದ ಸಂವಿಧಾನವನ್ನು ಅಂತಿಮಗೊಳಿಸಲಾಯಿತು.

ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಮುಖ್ಯಸ್ಥರಾಗಿದ್ದ ಸಂವಿಧಾನ ರಚನಾ ಸಮಿತಿ ರಚಿಸಿದ ಸಂವಿಧಾನವು ೨೬ ಜನವರಿ ೧೯೫೬ರಂದು ಜ್ಯಾರಿಗೆ ಬಂತು. ಆ ದಿನವನ್ನು ಭಾರತದಲ್ಲಿ ಪ್ರತಿ ವರುಷ ಪ್ರಜಾಪ್ರಭುತ್ವ ದಿನವಾಗಿ ಆಚರಿಸಲಾಗುತ್ತದೆ. ಅವತ್ತು ನವದೆಹಲಿಯಲ್ಲಿ ರಾಜಪಥದಲ್ಲಿ ನಡೆಯುವ ಪಥಸಂಚಲನವು ಭಾರತದ ವೈವಿಧ್ಯತೆಯನ್ನೂ ವಿರಾಟ್ ಮಿಲಿಟರಿ ಶಕ್ತಿಯನ್ನೂ ಇಡೀ ಜಗತ್ತಿಗೆ ಅನಾವರಣಗೊಳಿಸುತ್ತದೆ.

Image

ಶಂಕರಾನಂದ ಹೆಬ್ಬಾಳರ ಮೂರು ಗಝಲ್ ಗಳು

ಗಝಲ್ ೧

ಒಳಗಿನ ಪ್ರೀತಿ ಹೇಳಾಕ ಕಾಯಕ ಹತ್ತಾಳ

ಇಲಕಲ್ಲ ಸೀರಿಯುಟ್ಟು|

ಅರಷಿಣ ಹಚ್ಕೊಂಡ ನಾಚ್ಕೊಂಡಾಳ

ಮೂಗಿನಮ್ಯಾಲೆ ನತ್ತಯಿಟ್ಟು||

 

ಶೆರ್ಲಾಕ್ ಹೋಮ್ಸ್ : ಸೃಷ್ಟಿಕರ್ತನನ್ನೇ ಮೀರಿ ಬೆಳೆದ ಪಾತ್ರ

ನೀವು ಪತ್ತೇದಾರಿ ಕಾದಂಬರಿಗಳ ಬಗ್ಗೆ ಆಸಕ್ತರಾಗಿದ್ದರೆ ನಿಮಗೆ ಶೆರ್ಲಾಕ್ ಹೋಮ್ಸ್ ಎಂಬ ಪತ್ತೇದಾರನ ಬಗ್ಗೆ ತಿಳಿದೇ ಇರುತ್ತದೆ. ಪತ್ತೇದಾರ ಶೆರ್ಲಾಕ್ ಹೋಮ್ಸ್ ಮತ್ತು ಅವನ ಗೆಳೆಯ ಡಾ.ವಾಟ್ಸನ್ ಬಗ್ಗೆ ತಿಳಿದಿರುವಷ್ಟು ನಮಗೆ ಅವರ ಸೃಷ್ಟಿಕರ್ತ ಲೇಖಕರ ಬಗ್ಗೆ ತಿಳಿಯದೇ ಇರೋದು ಸಾಹಿತ್ಯ ಲೋಕದ ಕುಚೋದ್ಯವೆಂದೇ ಹೇಳ ಬಹುದು. ಇಲ್ಲಿ ಪತ್ತೇದಾರನ ಪಾತ್ರವು ಅವನನ್ನು ಸೃಷ್ಟಿಸಿದ ಲೇಖಕನನ್ನೇ ಮೀರಿ ಬೆಳೆದಿದೆ. ಶೆರ್ಲಾಕ್ ಹೋಮ್ಸ್ ಎಂಬ ವ್ಯಕ್ತಿ ನಿಜವಾಗಿಯೇ ಇದ್ದಾನೆ ಎಂದು ಜನರು ನಂಬುವಷ್ಟು ಜೀವಂತವಾಗಿ ಚಿತ್ರಿಸಿದ್ದಾರೆ ಅದರ ಲೇಖಕರು. ಹಾಗಾದರೆ ಆ ಪಾತ್ರದ ಲೇಖಕರು ಯಾರು, ಏನಿದರ ಹಿನ್ನಲೆ? ಬನ್ನಿ ತಿಳಿದುಕೊಳ್ಳುವ. 

Image

ಶುಭದಿನಕ್ಕೊಂದು ಶುಭನುಡಿ

ಮರೆಯುವುದು ಎಂಬುದು ಒಳ್ಳೆಯ ಗುಣವೂ ಹೌದು, ಕೆಟ್ಟ ಗುಣವೂ ಹೌದು. ಮರೆತೇ ಹೋಯಿತು, ಎಷ್ಟೋ ಸಲ ಈ ಪದವನ್ನು ನಮ್ಮ ಜೀವನದಲ್ಲಿ ಬಳಸುತ್ತೇವೆ. ಇದು ಮಾನವ ಸಹಜ ಗುಣ. ಮನ್ನಿಸುವುದು ಅಥವಾ ಕ್ಷಮಿಸುವುದು ದೈವೀಗುಣ.To forget is Human.To forgive is Divine--ಇದು ಒಂದು ಆಂಗ್ಲ ಗಾದೆ.

Image

ಋಷ್ಯಶೃಂಗ

ಪುಸ್ತಕದ ಲೇಖಕ/ಕವಿಯ ಹೆಸರು
ಹರೀಶ ಹಾಗಲವಾಡಿ
ಪ್ರಕಾಶಕರು
ಛಂದ ಪುಸ್ತಕ, ಬನ್ನೇರುಘಟ್ಟ ರಸ್ತೆ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೨೫.೦೦ ಮೊದಲ ಮುದ್ರಣ: ೨೦೨೦

ಬೆಂಗಳೂರಿನ ಛಂದ ಪುಸ್ತಕದವರು ಪ್ರತೀ ವರ್ಷ ಉದಯೋನ್ಮುಖ ಬರಹಗಾರರ ಪುಸ್ತಕಗಳನ್ನು ಮುದ್ರಿಸುತ್ತಾರೆ. ೨೦೨೦ರ ಸಾಲಿನಲ್ಲಿ ಬಿಡುಗಡೆಯಾದ ೪ ಪುಸ್ತಕಗಳಲ್ಲಿ ಒಂದು ಪುಸ್ತಕವೇ ಹರೀಶ್ ಹಾಗಲವಾಡಿಯವರ ಕಾದಂಬರಿ ಋಷ್ಯಶೃಂಗ. ತುಮಕೂರಿನ ಬಳಿಯ ಹಾಗಲವಾಡಿಯವರಾದ ಹರೀಶ್ ಇವರಿಗೆ ವಿದ್ಯಾಭ್ಯಾಸದ ಕಾಲದಿಂದಲೂ ಸಂಸ್ಕೃತಿ, ಆಧ್ಯಾತ್ಮಗಳ ಸೆಳೆತ. ಈಗ ಪ್ರಸ್ತುತ ಸಂಸ್ಕೃತ ಅಧ್ಯಾಪಕರಾಗಿ, ಭಾರತೀಯ ಸಂಸ್ಕೃತಿಯ ಸಂಶೋಧಕ ವಿದ್ಯಾರ್ಥಿಯಾಗಿ ದುಡಿಯುತ್ತಾ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ‘ನ್ಯಾಸ' ಇವರ ಮೊದಲ ಕಾದಂಬರಿ.

ಸಂದರ್ಶನ ಮತ್ತು ಅದರ ರೀತಿ

 ಗಿರಿಧರ ಕಜೆ ಅವರ ಸಂದರ್ಶನವು ಚಂದನ ದೂರದರ್ಶನದಲ್ಲಿ ಬರುತ್ತಿತ್ತು. 

ಆರೋಗ್ಯ ಎಂದರೇನು ? ಪ್ರಸನ್ನ ಆತ್ಮ, ಮನ,  ಇಂದ್ರಿಯ ಅಂತೆ. ಕೇವಲ ರೋಗದ ಇಲ್ಲದಿರುವಿಕೆ ಅಲ್ಲ, ಜತೆಗೆ ಆತ್ಮ, ಮನಸ್ಸು ಮತ್ತು ಇಂದ್ರಿಯಗಳು ಪ್ರಸನ್ನವಾಗಿರಬೇಕಂತೆ. 

ಆರೋಗ್ಯ - ಆರೂ ಇಂದ್ರಿಯಗಳು ಯೋಗ್ಯ ಇರಬೇಕಂತೆ. 

ಐದು ಇಂದ್ರಿಯ ಗೊತ್ತು. ಆರನೆಯದು ಏನು? ಕೇಳುವಾಗ ತಪ್ಪಿಸಿಕೊಂಡೆ. 

ಸಂದರ್ಶನಗಳನ್ನು ಚರ್ಚೆಗಳನ್ನು ದೂರದರ್ಶನ, ರೇಡಿಯೋದಲ್ಲಿ ನೋಡುವಾಗ ಕೇಳುವಾಗ ಅನೇಕ ವಿಷಯಗಳನ್ನು ಗಮನಿಸಬಹುದು. 

ಜೇಡಗಳು ಹಾಗೂ ಅವುಗಳ ಬಲೆಗಳ ನಿಗೂಢ ಲೋಕ

ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಇಂದಿನ ಕಾಲದಲ್ಲಿ ಜೇಡರ ಬಲೆಯಿಲ್ಲದ ಮನೆಯಿಲ್ಲ. ಎಷ್ಟು ಸಲ ಬಲೆ ತೆಗೆದರೂ ಕೆಲವೇ ದಿನಗಳಲ್ಲಿ ಜೇಡವು ತನ್ನ ಬಲೆಯನ್ನು ಮತ್ತೆ ಕಟ್ಟಿಕೊಳ್ಳುತ್ತದೆ. ಜೇಡನ ಬಗ್ಗೆ ನಾವು ತಿಳಿದುಕೊಳ್ಳಬೇಕಾದ ಹಲವಾರು ಮಾಹಿತಿಗಳಿವೆ. ಬನ್ನಿ ಒಮ್ಮೆ ಜೇಡರ ಲೋಕಕ್ಕೆ ಹೋಗಿ ಬರುವ. 

Image