ಮನೋಹರ್ ಪರಿಕ್ಕರ್ ಹೇಳಿದ ಕಲ್ಲಂಗಡಿ ಕಥೆ

ಗೋವಾದ ವಿಮಾನ ನಿಲ್ದಾಣಕ್ಕೆ ಒಂದು ಟ್ಯಾಕ್ಸಿ ಬಂದು ನಿಲ್ಲುತ್ತೆ. ಅದರಿಂದ ಓರ್ವ ಮಧ್ಯ ವಯಸ್ಕ, ಸಾಧಾರಣ ಉಡುಪು ಧರಿಸಿದ ವ್ಯಕ್ತಿ ಸಣ್ಣ ಬ್ಯಾಗ್ ಹಿಡಿದುಕೊಂಡು ನೇರ ಒಳಗೆ ಬರುತ್ತಾರೆ. ಚೆಕ್ ಇನ್ ಮಾಡಿಸಿಕೊಂಡು ವಿಮಾನ ಏರಲು ಕುಳಿತುಕೊಂಡು ಬ್ಯಾಗ್ ಒಳಗಿನಿಂದ ಒಂದು ಪುಸ್ತಕ ತೆಗೆದು ಓದಲು ಶುರು ಮಾಡುತ್ತಾರೆ. ವಿಮಾನ ಏರಲು ಕರೆ ಬಂದಾಗಲೂ ಅಷ್ಟೇ ಸರದಿ ಸಾಲಿನಲ್ಲಿ ಹೋಗಿ ವಿಮಾನದಲ್ಲಿ ಕುಳಿತುಕೊಂಡು, ವಿಮಾನದಿಂದ ಇಳಿದಾಗಲೂ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಬಸ್ ಮೂಲಕವೇ ಪ್ರಯಾಣಿಸಿ ವಿಮಾನ ನಿಲ್ದಾಣದಿಂದ ಹೊರಗೆ ಬರುತ್ತಾರೆ. ಇವರು ಸಾಧಾರಣ ವ್ಯಕ್ತಿ ಎಂದು ತಿಳಿದಿರಾ?

Image

‘ಕಪಿಲ್ ಡೆವಿಲ್ಸ್’ ೧೯೮೩ರ ವಿಶ್ವಕಪ್ ವಿಜೇತರಾದದ್ದು ಹೇಗೆ ಗೊತ್ತಾ?

೧೯೮೩ರ ಕ್ರಿಕೆಟ್ ವಿಶ್ವಕಪ್ ಗಾಗಿ ಇಂಗ್ಲೆಂಡ್ ಗೆ ವಿಮಾನ ಹತ್ತುವ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ವಿದೇಶಕ್ಕೆ ಪಿಕ್ ನಿಕ್ ಹೋಗೋದು, ಚೆನ್ನಾಗಿ ತಿನ್ನೋದು, ತಿರುಗಾಡೋದು,ಮಜಾ ಮಾಡಿ ಭಾರತಕ್ಕೆ ಬರೋದು ಎಂದು ಕೊಂಡೇ ಹೋಗಿದ್ದರು. ಯಾಕೆಂದರೆ ಹಿಂದೆ ನಡೆದ ೨ ವಿಶ್ವಕಪ್ ಗಳಲ್ಲಿ ಭಾರತದ ಸಾಧನೆ ಸೊನ್ನೆ.  ಆದರೆ ಮೂರನೇ ವಿಶ್ವಕಪ್ ನಲ್ಲಿ ನಡೆದದ್ದೇ ಬೇರೆ. ಯಾವ ತಂಡಗಳು ಅತ್ಯಂತ ದುರ್ಬಲ ಎಂದು ಎಣಿಸಿದ್ದರೋ ಅವುಗಳು ಬಲಿಷ್ಟ ತಂಡಗಳ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದವು. ನಾವು ಮೊದಲಿಗೆ ೧೯೮೩ರ ವಿಶ್ವಕಪ್ ಮತ್ತು ಅದರಲ್ಲಿ ಆಟವಾಡಿದ ತಂಡಗಳ ಬಗ್ಗೆ ಗಮನಿಸುವ.

Image

ಮಗುವಿನ ಮನಸ್ಸಿನ ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರಿಗೆ ಇಂದು ಜನ್ಮದಿನದ ಸಂಭ್ರಮ

ಸಾಹಿತ್ಯ ಲೋಕಕ್ಕೆ ಡಾ. ಎಚ್ಚೆಸ್ವಿ ಎಂದೇ ಚಿರಪರಿಚಿತರಾಗಿರುವ ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರಿಗಿಂದು ಜನ್ಮದಿನದ ಸಂಭ್ರಮ (ಜನನ: ೨೩-೦೬-೧೯೪೪). ಕವನಗಳು ನನ್ನಿಂದ ಮುನಿಸಿಕೊಂಡಿದ್ದರೂ ವೆಂಕಟೇಶಮೂರ್ತಿಯವರ ಬಗ್ಗೆ ಸ್ವಲ್ಪ ಸ್ವಲ್ಪ ಓದಿ ಕೊಂಡದ್ದಿದೆ. ನಾನಿಲ್ಲಿ ಅವರ ಕವನಗಳ ಬಗ್ಗೆ ಬರೆಯುದಿಲ್ಲ. ಆದರೆ ಅವರ ಬಗ್ಗೆ ಸ್ವಲ್ಪವಾದರೂ ಬರೆದರೆ ಅವರ ಜನ್ಮದಿನಕ್ಕೆ ಶುಭ ಕೋರಿದ ಹಾಗೆ ಆಗುತ್ತದೆ ಎಂಬ  ಕಿಂಚಿತ್ತು ನಂಬಿಕೆ ನನ್ನದು.

Image

ನುಗ್ಗೇಸೊಪ್ಪಿನ ಖಾರ ದೋಸೆ

Image

ತಯಾರಿಕಾ ವಿಧಾನ: ಮೊದಲಿಗೆ ತೊಗರಿ ಬೇಳೆ ಹಾಗೂ ಅಕ್ಕಿಯನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ನೆನೆಸಿದ ಅಕ್ಕಿ ಹಾಗೂ ಬೇಳೆ, ಮೆಣಸು, ಹುಣಸೆ ಹುಳಿ, ಇಂಗು, ಉಪ್ಪು, ಕಾಯಿ ತುರಿ ಎಲ್ಲವನ್ನೂ ಸೇರಿಸಿ ನಯವಾಗಿ ರುಬ್ಬಿರಿ.

ಬೇಕಿರುವ ಸಾಮಗ್ರಿ

ಬೇಕಾಗುವ ವಸ್ತುಗಳು: ಸ್ವಲ್ಪ ನುಗ್ಗೆ ಸೊಪ್ಪು, ಕೆಂಪು ಮೆಣಸು ೭-೮, ತೊಗರಿ ಬೇಳೆ ಹಾಗೂ ಬೆಳ್ತಿಗೆ ಅಕ್ಕಿ ತಲಾ ಅರ್ಧ ಪಾವು, ನೀರುಳ್ಳಿ ೧, ತೆಂಗಿನ ತುರಿ ೨ ದೊಡ್ಡ ಚಮಚ, ಹುಣಸೆ ಹುಳಿ ಸ್ವಲ್ಪ, ಇಂಗು, ರುಚಿಗೆ ಉಪ್ಪು, ಎಣ್ಣೆ.

 

ರಣಜಿ ಪಂದ್ಯಗಳಲ್ಲಿ ಗರಿಷ್ಟ ವಿಕೆಟ್ ದಾಖಲೆಯ ರಾಜೀಂದರ್ ಗೋಯೆಲ್

ಸಾಮಾಜಿಕ ಜಾಲತಾಣದಲ್ಲಿ ಹೀಗೆಯೇ ಕಣ್ಣಾಡಿಸುತ್ತಿರುವಾಗ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆಯವರ ಟ್ವೀಟ್ ಒಂದು ಗಮನ ಸೆಳೆಯಿತು. ಒಂದು ಕಾಲದಲ್ಲಿ ದೇಶೀಯ ಕ್ರಿಕೆಟ್ ಜಗತ್ತಿನ ಪ್ರಮುಖ ಆಧಾರ ಸ್ತಂಭವಾಗಿದ್ದ ರಾಜೀಂದರ್ ಗೊಯೆಲ್ ಅವರ ನಿಧನಕ್ಕೆ ಅಂತಿಮ ನಮನ ಸಲ್ಲಿಸುತ್ತಿದ್ದೇನೆ ಎಂಬುದು ಆ ಟ್ವೀಟ್ ನ ಸಾರ. ಅದನ್ನು ಗಮನಿಸಿದ ನನಗೆ ರಾಜೀಂದರ್ ಗೋಯೆಲ್ ಎಂಬ ವ್ಯಕ್ತಿಯ ಬಗ್ಗೆ ತಿಳಿಯುವ ಮನಸ್ಸಾಯಿತು.

Image

ಭಾರತೀಯ ಚಿತ್ರಕಲೆ ಭಾಗ೬: ಹಸೆ ಚಿತ್ತಾರಗಳು

ನಮ್ಮ ಗ್ರಾಮೀಣ ಜನರ ಜೀವನಪ್ರೀತಿ ದೊಡ್ಡದು. ಪ್ರಕೃತಿಯನ್ನು ಗಮನಿಸುತ್ತಲೇ ಅವರು ಬದುಕಿದರು. ಪ್ರಕೃತಿಯ ಆಗುಹೋಗುಗಳಿಗೆ ಸ್ಪಂದಿಸುತ್ತ ಚಿತ್ರ ಬರೆದರು; ತಮ್ಮ ನೋವುನಲಿವುಗಳನ್ನು ಹಾಡುಗಳನ್ನಾಗಿಸಿದರು. ಅವರು ಬರೆದ ಚಿತ್ರಗಳು ಅವರ ಮನಸ್ಸಿನ ಭಾವನೆಗಳಿಗೆ ಆಕೃತಿ ಕೊಡುವ ಪ್ರಯತ್ನಗಳು.

Image

ಅಂತರಾಷ್ಟ್ರೀಯ ಯೋಗ ದಿನ ; ನಿತ್ಯ ಯೋಗ ಮಾಡಿ, ಆರೋಗ್ಯವಂತರಾಗಿರಿ

ಯೋಗ ಎನ್ನುವ ಒಂದು ಕಾಯಕವನ್ನು ನಾವು ಅನಾದಿ ಕಾಲದಿಂದಲೂ ಮಾಡುತ್ತಾ ಬಂದಿದ್ದೇವೆ. ಭಾರತೀಯರ ಪಾಲಿಗಂತೂ ಯೋಗ ಎನ್ನುವುದು ಹೊಸ ವಿಚಾರ ಅಲ್ಲವೇ ಅಲ್ಲ. ನಮ್ಮ ಋಷಿ ಮುನಿಗಳ ಕಾಲದಿಂದಲೂ ಆರೋಗ್ಯ ಮತ್ತು ಮಾನಸಿಕ ಧೃಡತೆಗಾಗಿ ನಾವು ಕಾಪಾಡಿಕೊಂಡು ಬಂದ ದಿವ್ಯ ಸಂಜೀವಿನಿ ವಿದ್ಯೆಯೇ ಯೋಗ. ಯೋಗ ಮಾಡಿ ನಿರೋಗಿಯಾಗಿ ಎನ್ನುವುದು ಇತ್ತೀಚಿನ ಮಾತಲ್ಲ. ತಲತಲಾಂತರದಿಂದ ಬಂದ ಒಂದು ಪ್ರಾಚೀನ ವಿದ್ಯೆ ಅದು. ಹಲವಾರು ಆಸನಗಳು.

Image

ಮನಸ್ಸಿನ ಮ್ಯಾಜಿಕ್

ಪುಸ್ತಕದ ಲೇಖಕ/ಕವಿಯ ಹೆಸರು
ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈ.ಲಿ., ಕ್ರೆಸೆಂಟ್ ರಸ್ತೆ, ಬೆಂಗಳೂರು
ಪುಸ್ತಕದ ಬೆಲೆ
ರೂ: ೫೦.೦೦ ಮುದ್ರಣ : ೨೦೧೪

ನವಕರ್ನಾಟಕ ಪ್ರಕಾಶನದವರು ಡಾ. ಸಿ.ಆರ್. ಚಂದ್ರಶೇಖರ್ ಇವರ ಸಂಪಾದಕತ್ವದಲ್ಲಿ ವ್ಯಕ್ತಿ ವಿಕಸನ ಮಾಲೆ ಈ ಮಾಲಿಕೆಯಲ್ಲಿ ಹೊರತಂದ ಪುಸ್ತಕವೇ ‘ಮನಸ್ಸಿನ ಮ್ಯಾಜಿಕ್'. ವೃತ್ತಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿದ್ದ ಅಡ್ಡೂರು ಕೃಷ್ಣ ರಾವ್ ಇವರ ಪ್ರವೃತ್ತಿ ಬರವಣಿಗೆ. ಮಂಗಳೂರಿನ ಬಳಕೆದಾರರ ವೇದಿಕೆಯ ಸಂಚಾಲಕರಾಗಿ ಹಲವಾರು ಮಂದಿಗೆ ಸಲಹೆ ಸಹಾಯ, ಮಾರ್ಗದರ್ಶನ ಮಾಡಿಕೊಟ್ಟಿದ್ದಾರೆ.

ಬಿಳಿಆನೆ ಮತ್ತು ತಾಯಿಆನೆ

ನೂರಾರು ವರುಷಗಳ ಮುಂಚೆ, ಒಂದು ಕಾಡಿನಲ್ಲಿ ಒಂದು ಬಿಳಿಆನೆ ಇತ್ತು. ಭಾರೀ ಗಾತ್ರದ, ಬಲಶಾಲಿಯಾದ ಈ ಆನೆಯ ಚರ್ಮ ಹಾಲಿನಂತೆ ಬಿಳಿ.

ಬಿಳಿಆನೆ ತನ್ನ ತಾಯಿಯನ್ನು ಬಹಳ ಬಹಳ ಪ್ರೀತಿಸುತ್ತಿತ್ತು. ಈ ಪ್ರಪಂಚದ ಎಲ್ಲದಕ್ಕಿಂತಲೂ ಹೆಚ್ಚಾಗಿ, ತನಗಿಂತಲೂ ಹೆಚ್ಚಾಗಿ ಅದು ತನ್ನ ತಾಯಿಯನ್ನು ಪ್ರೀತಿಸುತ್ತಿತ್ತು.

ಆದರೆ ತಾಯಿಆನೆಗೆ ಕಣ್ಣು ಕಾಣಿಸುತ್ತಿರಲಿಲ್ಲ. ಬಿಳಿಆನೆ ತಾಯಿಯನ್ನು ಜೋಪಾನವಾಗಿ ನೋಡಿಕೊಳ್ಳುತ್ತಿತ್ತು. ಅವಳನ್ನು ಒಂದು ತಂಪಾದ ಗವಿಯಲ್ಲಿ ಇರಿಸಿತ್ತು. ಆ ಗವಿಯ ಎದುರಿನಲ್ಲೇ ಇದ್ದ ಸರೋವರದಲ್ಲಿ ಶುಭ್ರವಾದ ನೀರಿತ್ತು. ಆನೆಗಳಿಗೆ ನೀರೆಂದರೆ ಪಂಚಪ್ರಾಣ ತಾನೇ? ಬಿಳಿಆನೆ ನೀರಿನಲ್ಲಿ ಆಗಾಗ ಆಟವಾಡುತ್ತಿತ್ತು. ಸರೋವರದಲ್ಲಿ ನೂರಾರು ತಾವರೆ ಹೂಗಳಿದ್ದವು.

Image

ಭಾರತ-ಚೀನಾ ಗಡಿಯ ಗಲ್ವಾನ್ ಕಣಿವೆ ಹಾಗೂ ನದಿಗೆ ಆ ಹೆಸರು ಬಂದದ್ದು ಹೇಗೆ?

ಸುಮಾರು ೪ ದಶಕಗಳ ಬಳಿಕ ಭಾರತ-ಚೀನಾ ಗಡಿ ಪ್ರದೇಶ ಪ್ರಕ್ಷುಬ್ಧವಾಗಿದೆ. ಭಾರತದ ೨೦ ವೀರ ಯೋಧರು ಹುತಾತ್ಮರಾಗಿದ್ದಾರೆ. ೧೯೬೨ರಲ್ಲೇ ಭಾರತ-ಚೀನಾ ಯುದ್ಧವಾಗಿತ್ತು. ನಂತರದ ದಿನಗಳಲ್ಲಿ ಬಹುತೇಕ ಶಾಂತಿ ನೆಲೆಸಿದಂತಿದ್ದರೂ ಅಲ್ಲಿನ ಪರಿಸ್ಥಿತಿ ಯಾವಾಗಲೂ ಬೂದಿ ಮುಚ್ಚಿದ ಕೆಂಡದಂತೇ ಇತ್ತು. ಚೀನಾ ಒಳಗೊಳಗೇ ಕುದಿಯುತ್ತಲೇ ಇತ್ತು. ಕೆಲವೊಮ್ಮೆ ಅರುಣಾಚಲ ಪ್ರದೇಶದ ಭೂ ಭಾಗ ತನ್ನದೆನ್ನುತ್ತಿತ್ತು.

Image