ನೀರಿನ ಸಮಸ್ಯೆಗೆ ಉತ್ತರ: ಪಾರಂಪರಿಕ ಜ್ನಾನ ಮತ್ತು ಸಂರಚನೆಗಳ ಬಳಕೆ
ಮೇ ೨೦೧೯ರಲ್ಲಿ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟ (ಎನ್.ಡಿ.ಎ.) ಕೇಂದ್ರ ಸರಕಾರದಲ್ಲಿ ಅಧಿಕಾರ ವಹಿಸಿದಾಗ ಕೈಗೊಂಡ ಮೊದಲ ನಿರ್ಧಾರಗಳಲ್ಲೊಂದು: ನೀರಿಗೆ ಸಂಬಂಧಿಸಿದ ವಿವಿಧ ಮಂತ್ರಾಲಯ ಮತ್ತು ಇಲಾಖೆಗಳನ್ನು ಜಲಶಕ್ತಿ ಮಂತ್ರಾಲಯವಾಗಿ ಒಗ್ಗೂಡಿಸಿದ್ದು.
ಈ ಮಂತ್ರಾಲಯದ ಬಹು ದೊಡ್ಡ ಜವಾಬ್ದಾರಿ: ದೇಶದಲ್ಲಿ ಬಿಗಡಾಯಿಸುತ್ತಿರುವ ನೀರಿನ ಕೊರತೆ ನಿಭಾಯಿಸುವುದು ಮತ್ತು ೨೦೨೪ರೊಳಗೆ ದೇಶದ ಪ್ರತಿಯೊಂದು ಮನೆಗೂ ಕೊಳವೆಯಲ್ಲಿ ಕುಡಿಯುವ ನೀರು ಒದಗಿಸುವುದು. ಈ ಉದ್ದೇಶ ಸಾಧನೆಗಾಗಿ ಒಂದೇ ತಿಂಗಳಿನಲ್ಲಿ ಅದು “ಜಲಶಕ್ತಿ ಅಭಿಯಾನ” ರೂಪಿಸಿತು.