ತುಪ್ಪದ ಅನ್ನ (ಗೀ ರೈಸ್)

Image

ಮೊದಲಿಗೆ ಬಾಸುಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು ನಂತರ ಸ್ವಲ್ಪ ನೀರು ಹಾಕಿ ಹತ್ತು ನಿಮಿಷ ನೆನೆಯಲು ಬಿಡಿ. ನಂತರ ನೀರುಳ್ಳಿ, ಮೆಣಸನ್ನು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿರಿ. ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಗೋಡಂಬಿ ಚೂರುಗಳನ್ನು ಹಾಗೂ ಒಣ ದ್ರಾಕ್ಷಿಯನ್ನು ಹುರಿದು ತೆಗೆದು ಇಟ್ಟುಕೊಳ್ಳಿರಿ.

ಬೇಕಿರುವ ಸಾಮಗ್ರಿ

ಬಾಸುಮತಿ ಅಕ್ಕಿ ೧ ಕಪ್, ನೀರುಳ್ಳಿ ೨, ಹಸಿ ಮೆಣಸು ೨-೩, ತುಪ್ಪ, ಕರಿಬೇವಿನ ಎಲೆ ೨ ಎಸಳು, ರುಚಿಗೆ ಉಪ್ಪು, ಕೊತ್ತಂಬರಿ ಸೊಪ್ಪು, ಬಿರಿಯಾನಿ ಎಲೆ, ಚಕ್ಕೆ, ಲವಂಗ, ಗೋಡಂಬಿ ಚೂರುಗಳು, ಒಣ ದ್ರಾಕ್ಷಿ, ಏಲಕ್ಕಿ, ಸೋಂಪು, ಕಾಳು ಮೆಣಸು ೧ ಚಮಚ.

ಲಂಡನ್ ಬ್ಯಾಂಕ್ ಹುದ್ದೆಗೆ ವಿದಾಯ: ಈಗ ಹಣ್ಣಿನ ತೋಟದಿಂದ ಮೂರು ಪಟ್ಟು ಆದಾಯ

ಕೇವಲ ಐದು ವರುಷಗಳ ಮುಂಚೆ ಬ್ರಿಟನಿನ ಪ್ರಸಿದ್ಧ ಬ್ಯಾಂಕಿನಲ್ಲಿ ಲಕ್ಷಗಟ್ಟಲೆ ರೂಪಾಯಿ ವೇತನದ ಉದ್ಯೋಗ; ಗಾಜಿನ ಪುಟ್ಟ ಆವರಣದೊಳಗೆ ಹಣಕಾಸಿನ ಲೆಕ್ಕಾಚಾರದ ಬದುಕು. ೨೦೧೫ರಿಂದೀಚೆಗೆ ಹಣ್ಣಿನ ಗಿಡಗಳೊಂದಿಗೆ ಬದುಕು; ೧೨,೫೦೦ ದಾಳಿಂಬೆ ಗಿಡಗಳು, ೭,೫೦೦ ಪಪ್ಪಾಯಿ ಗಿಡಗಳು ಮತ್ತು ೨೦೦ ನಿಂಬೆ ಗಿಡಗಳೊಂದಿಗೆ ಒಡನಾಟ.
ಇದು ನವದೀಪ್ ಗೊಲೇಚಾ ಎಂಬ ೩೦ ವರುಷದ ಯುವಕ ಆರ್ಥಿಕ ಸಲಹೆಗಾರ ಉದ್ಯೋಗ ತೊರೆದು,  ತನ್ನೂರಿಗೆ ಹಿಂತಿರುಗಿ ಕೃಷಿಕನಾದ ಕತೆ. ಯಾವುದೋ ಸಿನೆಮಾನ ಕತೆಯಂತೆ ತೋರುವ ಇದಕ್ಕೆ ಕಾರಣ ಒಂದು ಫೋನ್ ಕರೆ.

Image

‘ದೀಪದ ಮಹಿಳೆ’ ಫ್ಲಾರೆನ್ಸ್ ನೈಟಿಂಗೇಲ್

ಕೊರೋನಾ ಮಹಾಮಾರಿ ಈ ಪ್ರಪಂಚಕ್ಕೆ ಅಪ್ಪಳಿಸಿದ ಬಳಿಕ ನಮಗೆ ವೈದ್ಯರ, ಅದರಲ್ಲೂ ನರ್ಸ್ ಅಥವಾ ದಾದಿಯರ ಮತ್ತು ಆಯಾಗಳ ಮಹತ್ವ ಅರಿವಾಗಿದೆ. ಇವರೆಲ್ಲಾ ಮಾಡುವ ಸೇವೆಗಳನ್ನು ಗಮನಿಸಿ ಸಾಮಾಜ ಇವರನ್ನು ‘ಕೊರೋನಾ ವಾರಿಯರ್ಸ್' ಅಥವಾ ಕೊರೋನಾ ಯೋಧರು ಎಂದು ಕರೆಯಲು ಪ್ರಾರಂಭಿಸಿದೆ. ಇದು ಸತ್ಯವಾದ ಮಾತು.

Image

ಬಟಾಟೆ ರವಾ ಫ್ರೈ

Image

ಮೊದಲಿಗೆ ಬಟಾಟೆಯನ್ನು ಚೆನ್ನಾಗಿ ತೊಳೆದು ವೃತ್ತಾಕಾರದಲ್ಲಿ ತೆಳುವಾಗಿ ಕತ್ತರಿಸಿಟ್ಟುಕೊಳ್ಳಿ. ಅದಕ್ಕೆ ಫಿಷ್ ಫ್ರೈ /ಬೋಂಡಾ ಮಸಾಲವನ್ನು ನೀರಿನಲ್ಲಿ ಕಲಸಿ ಪೇಸ್ಟ್ ತರಹ ಮಾಡಿ ಚೆನ್ನಾಗಿ ತಾಗಿಸಿ. ಉಪ್ಪು ಬೇಕಾದಲ್ಲಿ ರುಚಿಗೆ ತಕ್ಕಷ್ಟು ಹಾಕಿ. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ ಮಸಾಲೆ ತಾಗಿಸಿಟ್ಟ ಬಟಾಟೆಯ ತುಂಡುಗಳನ್ನು ರವಾದಲ್ಲಿ ಹೊರಳಿಸಿ ಎಣ್ಣೆಯಲ್ಲಿ ಬಿಡಿ. ಚೆನ್ನಾಗಿ ಕಾದ ನಂತರ ಬಾಣಲೆಯಿಂದ ತೆಗೆಯಿರಿ.

ಬೇಕಿರುವ ಸಾಮಗ್ರಿ

ದೊಡ್ಡ ಗಾತ್ರದ ಬಟಾಟೆ ೨, ಬೋಂಡಾ ಮಸಾಲೆ ಅಥವಾ ಫಿಷ್ ಫ್ರೈ ಮಸಾಲೆ, ಬೇಕಾದಲ್ಲಿ ಉಪ್ಪು, ಎಣ್ಣೆ, ಸಜ್ಜಿಗೆ ರವಾ (ಉಪ್ಮಾ ರವಾ)

ರಾಜ್ ಲೀಲಾ ವಿನೋದ

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ಭಾವನಾ ಪ್ರಕಾಶನ, ಪದ್ಮನಾಭ ನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೨೫೦.೦೦ ಮೊದಲ ಮುದ್ರಣ: ಡಿಸೆಂಬರ್ ೨೦೧೬

‘ಮನದಾಚೆ ದೂಡಿದ ಬಯಕೆ ಕನಸಾಗಿ ಕಾಡುವುದೇಕೆ?’ ಎಂಬ ಸಾಲುಗಳು ‘ರಾಜ್ ಲೀಲಾ ವಿನೋದ' ಪುಸ್ತಕದ ಮುಖಪುಟದಲ್ಲೇ ಮುದ್ರಿತವಾಗಿವೆ. ಕನ್ನಡದ ವರನಟರಾದ ಡಾ. ರಾಜ್ ಕುಮಾರ್ ಇವರ ತೀರಾ ಖಾಸಗಿ ಬದುಕಿನ ಪುಟಗಳನ್ನು ಖ್ಯಾತ ಲೇಖಕ, ಪತ್ರಕರ್ತ ರವಿ ಬೆಳಗೆರೆಯವರು ಅನಾವರಣ ಮಾಡಿದ್ದಾರೆ. ಸ್ವತಃ ಲೀಲಾವತಿಯವರೇ ತಮ್ಮ ಬದುಕಿನ ಕರುಣಾಜನಕ ಕಥೆಯನ್ನು ಈ ಲೇಖಕರ ಬಳಿ ತೆರೆದಿಟ್ಟಿದ್ದಾರೆ.

ನೀರುಳ್ಳಿ ಪಕೋಡಾ

Image

ಮೊದಲಿಗೆ ನೀರುಳ್ಳಿಯನ್ನು ಉದ್ದಕ್ಕೆ ಸಪೂರವಾಗಿ ಕತ್ತರಿಸಬೇಕು. ಅದಕ್ಕೆ ಉಪ್ಪುಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆಗ ಅದು ನೀರು ಬಿಟ್ಟು ಕೊಳ್ಳುತ್ತೆ. ಆಗ ಅದಕ್ಕೆ ಮೆಣಸಿನ ಹುಡಿ, ಜೀರಿಗೆ, ಕರಿಬೇವು ಹಾಕಿ ಚೆನ್ನಾಗಿ ಬೆರೆಸಿ ನಂತರ ಅದಕ್ಕೆ ಹಿಡಿಯುವಷ್ಟು ಕಡಲೇ ಹಿಟ್ಟು ಬೆರೆಸಿ. ಅಗತ್ಯ ಇದ್ದಲ್ಲಿ ಮಾತ್ರ ಸ್ವಲ್ಪ ನೀರು ಹಾಕಬಹುದು. ಒಂದು ಬಾಣಲೆಗೆ ಎಣ್ಣೆ ಹಾಕಿ ಒಲೆಯಲ್ಲಿ ಕಾಯಲು ಇಡಿ.

ಬೇಕಿರುವ ಸಾಮಗ್ರಿ

ನೀರುಳ್ಳಿ ೪, ಕಡಲೇ ಹಿಟ್ಟು, ರುಚಿಗೆ ಉಪ್ಪು, ಕರಿಬೇವು ೨-೩ ಎಸಳು, ಕರಿಯಲು ಎಣ್ಣೆ, ಖಾರಕ್ಕೆ ಬೇಕಾದಷ್ಟು ಮೆಣಸಿನ ಹುಡಿ, ಜೀರಿಗೆ ೧ ಚಮಚ

‘ಸಮಸ್ಯೆಗೆ ಆತ್ಮಹತ್ಯೆ ಆಯ್ಕೆಯಲ್ಲ’ ಎಂದ ಸುಶಾಂತ್ ಎಡವಿದ್ದೆಲ್ಲಿ?

ಸುಶಾಂತ್ ಸಿಂಗ್ ರಾಜಪೂತ್ ಎಂಬ ಬಾಲಿವುಡ್ ನ ಸುರದ್ರೂಪಿ, ಉದಯೋನ್ಮುಖ ನಟ ಆತ್ಮಹತ್ಯೆ ಮಾಡಿಕೊಂಡ ಎನ್ನುತ್ತಲೇ ಈ ಭಾನುವಾರವೂ ಕರಾಳ ಭಾನುವಾರವಾಯಿತಾ ಎಂದು ಮನಸ್ಸು ಚೀರಿತು. ಕಳೆದ ಭಾನುವಾರ ಕನ್ನಡ ಚಿತ್ರರಂಗದ ನಟ ಚಿರಂಜೀವಿ ಸರ್ಜಾ ನಿಧನರಾಗಿದ್ದರು. ಅವರದ್ದಾದರೆ ಆರೋಗ್ಯ ಸಮಸ್ಯೆ. ಆದರೆ ಕೇವಲ ೩೪ ವರ್ಷ ಪ್ರಾಯದ ಈ ಉದಯೋನ್ಮುಖ ನಟನಿಗೆ ಏನಾಗಿತ್ತು? ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂಬುದು ಪ್ರಾಥಮಿಕ ವರದಿ.

Image

ಭಾರತೀಯ ಚಿತ್ರಕಲೆ - ಭಾಗ 5

ಮುರಾಲ್ ಚಿತ್ರಕಲೆ
ಇವು ಗೋಡೆಚಿತ್ರಗಳು. ಈ ಚಿತ್ರಕಲೆಯ ಮೂಲ ರಾಜಸ್ಥಾನದ ಷೆಖಾವತಿ ಪ್ರದೇಶ. ರಜಪೂತ ದಳಪತಿ ರಾವ್ ಷೇಖಾನಿಂದಾಗಿ ಅಲ್ಲಿಗೆ ಈ ಹೆಸರು. ಅಲ್ಲಿನ ಶ್ರೀಮಂತ ಸಮುದಾಯದ ಜನರು ಅಲಂಕಾರಕ್ಕಾಗಿ ತಮ್ಮ ಮನೆಗಳ ಗೋಡೆಗಳಲ್ಲಿ ಚಿತ್ರ ಬರೆಸಲು ಶುರು ಮಾಡಿದರು. ಇದು ಹಲವಾರು ಪಟ್ಟಣಗಳಲ್ಲಿ ಈ ಚಿತ್ರ ರಚನೆಗೆ ನಾಂದಿ.

ಗೋಡೆಗಳು, ಚಾವಣಿಗಳು, ಕಂಬಗಳು ಮತ್ತು ಕಿಟಕಿಗಳ ಕಮಾನುಗಳಲ್ಲಿಯೂ ಕಲಾಕಾರರು ಚಿತ್ರ ಬಿಡಿಸಿದರು. ಹೂಗಳ ವಿನ್ಯಾಸ, ಪ್ರಾಣಿಗಳು, ಪಕ್ಷಿಗಳು, ಧಾರ್ಮಿಕ ಸಂಗತಿಗಳು ಮತ್ತು ಮಹಾಕಾವ್ಯಗಳ ದೃಶ್ಯಗಳು - ಇವನ್ನು ಚಿತ್ರಿಸಿದರು. ಆರಂಭದಲ್ಲಿ ಕಲಾಕಾರರು ಸ್ಥಳೀಯ ಬಣ್ಣಗಳನ್ನೇ ಬಳಸಿದರು. ಕ್ರಮೇಣ ಕೆಂಪು, ನೀಲಿ ಇಂತಹ ಬೆಳಗುವ ಕೃತಕ ಬಣ್ಣಗಳಿಂದ ಚಿತ್ರಿಸಿದರು.

Image

ದಪ್ಪ ಅವಲಕ್ಕಿ ಒಗ್ಗರಣೆ

Image

ಮೊದಲಿಗೆ ದಪ್ಪ ಅವಲಕ್ಕಿಯನ್ನು ನೀರಿನಲ್ಲಿ ತೊಳೆದು ಒಂದು ಬೌಲ್ ನಲ್ಲಿ ಹಾಕಿಡಿ. ನಂತರ ಒಂದು ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಕಾದ ಬಳಿಕ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ,ಕರಿಬೇವಿನ ಸೊಪ್ಪು, ಜೀರಿಗೆ, ಒಣಮೆಣಸು, ಸಣ್ಣದಾಗಿ ಕತ್ತರಿಸಿದ ನೀರುಳ್ಳಿ ಹಾಕಿ. ನೀರುಳ್ಳಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ. ನಂತರ ಅದಕ್ಕೆ ದಪ್ಪ ಅವಲಕ್ಕಿ, ಟೋಮೇಟೋ, ಅರಸಿನ ಹುಡಿಯನ್ನು ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ.ಚೆನ್ನಾಗಿ ಮಿಕ್ಸ್ ಮಾಡಿ.

ಬೇಕಿರುವ ಸಾಮಗ್ರಿ

ದಪ್ಪ ಅವಲಕ್ಕಿ ೧ ಕಪ್, ಟೊಮೆಟೋ ೧ , ನೀರುಳ್ಳಿ ೧, ಒಣ ಮೆಣಸು ೨-೩, ಅರಸಿನ ಹುಡಿ ಅರ್ಧ ಚಮಚ, ಸಾಸಿವೆ, ಜೀರಿಗೆ, ಕಡಲೇ ಬೇಳೆ, ಉದ್ದಿನ ಬೇಳೆ, ಜೀರಿಗೆ ತಲಾ ೧ ಸಣ್ಣ ಚಮಚ, ರುಚಿಗೆ ಉಪ್ಪು, ಎಣ್ಣೆ, ಕರಿಬೇವಿನ ಸೊಪ್ಪು, ಖಾರ ಬೇಕಿದ್ದಲ್ಲಿ ಮೆಣಸಿನ ಹುಡಿ, ಕೊತ್ತಂಬರಿ ಸೊಪ್ಪು

 

ಯಕ್ಷಗಾನ ಪುರಾಣ ಜ್ಞಾನ ದರ್ಶನ

ಪುಸ್ತಕದ ಲೇಖಕ/ಕವಿಯ ಹೆಸರು
ಕೆ.ಕೃಷ್ಣ ಶೆಟ್ಟಿ (ಕುಡು ಮಲ್ಲಿಗೆ)
ಪ್ರಕಾಶಕರು
ಪರಿಣಿತ ಪ್ರಕಾಶನ, ಶಾಂತಿನಗರ, ಕಾವೂರು ಅಂಚೆ, ಮಂಗಳೂರು-೫೭೫೦೧೫
ಪುಸ್ತಕದ ಬೆಲೆ
೨೫೦.೦೦ ಮೊದಲ ಮುದ್ರಣ: ೨೦೧೧

‘ಕುಡು ಮಲ್ಲಿಗೆ’ ನಾಮಾಂಕಿತದಿಂದ ಖ್ಯಾತಿ ಪಡೆದ ಕೆ.ಕೃಷ್ಣ ಶೆಟ್ಟಿಯವರದ್ದು ಬಹುಮುಖ ಪ್ರತಿಭೆ. ಹುಟ್ಟಿದ್ದು ಮಲೆನಾಡಿನ ಕುಡುಮಲ್ಲಿಗೆಯಲ್ಲಿ. ಇವರು ಕಲಿತದ್ದು ಕಮ್ಮಿಯಾದರೂ ಅನುಭವ ಇವರನ್ನು ಪಕ್ವರನ್ನಾಗಿಸಿದೆ. ವೃತ್ತಿ ಸಂಬಂಧ ಮುಂಬೈ, ಉಡುಪಿಗಳಲ್ಲಿ ತಿರುಗಾಡಿದರೂ ನೆಲೆ ನಿಂತದ್ದು ಮಂಗಳೂರಿನಲ್ಲಿ.