ಭವ್ಯ ಭವಿಷ್ಯದ ಕನಸುಗಳನ್ನು ಕಾಣುತ್ತಾ...

ಗಣರಾಜ್ಯೋತ್ಸವದ ಸಂದರ್ಭದಲ್ಲಿ ತಾಯಿ ನೆಲವನ್ನು ಸ್ಮರಿಸುತ್ತಾ.... ವೇದ ಉಪನಿಷತ್ತುಗಳು, ಭಗವದ್ಗೀತೆ - ಖುರಾನ್ - ಬೈಬಲ್ - ಗ್ರಂಥ ಸಾಹಿಬ್ - ಬುದ್ದ ಜ್ಞಾನ - ಜೈನ ಪಂಥ - ಬಸವ ತತ್ವ - ಶೈವ ಪಂಥ - ದ್ವೈತ -  ಅದ್ವೈತ - ವಿಶಿಷ್ಟಾದ್ವೈತ ಎಲ್ಲವನ್ನೂ ಒಳಗೊಂಡ ಆದರೆ ಎಲ್ಲವನ್ನೂ ಸಂಕಲಿಸಿದ  - ಎಲ್ಲವನ್ನೂ ಸಮೀಕರಿಸಿದ ಪರ್ಯಾಯ ಮಾರ್ಗವೇ ಸಂವಿಧಾನ.

Image

ಬ್ರೆಡ್ ಇಡ್ಲಿ

Image

ಬ್ರೆಡ್ ಸ್ಲೈಸ್ ಗಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ, ಅದನ್ನು ಮೊಸರಿನೊಂದಿಗೆ ಚೆನ್ನಾಗಿ ಬೆರೆಸಿ. ನಂತರ ಹಸಿರು ಮೆಣಸಿನಕಾಯಿ, ಉಪ್ಪು, ಕರಿ ಮೆಣಸಿನ ಹುಡಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಬೆರೆಸಿ. ಒಂದು ಸಣ್ಣ ಕಾವಲಿಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಉದ್ದಿನ ಬೇಳೆ, ಕರಿಬೇವು ಹಾಕಿ ಒಗ್ಗರಣೆ ತಯಾರಿಸಿ. ಬ್ರೆಡ್ಡಿನ ಮಿಶ್ರಣದ ಮೇಲೆ ಸುರಿಯಿರಿ.

ಬೇಕಿರುವ ಸಾಮಗ್ರಿ

ಬ್ರೆಡ್ ಸ್ಲೈಸ್ ೨, ದಪ್ಪ ಮೊಸರು ೨ ಚಮಚ, ಹೆಚ್ಚಿದ ಹಸಿರು ಮೆಣಸಿನಕಾಯಿ ೧, ಕರಿ ಮೆಣಸಿನ ಹುಡಿ - ೧ ಚಿಟಿಕೆ, ಸಾಸಿವೆ ಅರ್ಧ ಚಮಚ, ಉದ್ದಿನ ಬೇಳೆ ಕಾಲು ಚಮಚ, ಎಣ್ಣೆ ೩ ಚಮಚ, ಕರಿಬೇವಿನ ಸೊಪ್ಪು ೧ ಚಮಚ, ಕೊತ್ತಂಬರಿ ಸೊಪ್ಪು ೧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ಸ್ಟೇಟಸ್ ಕತೆಗಳು (ಭಾಗ ೧೨೧೪) - ಆಹಾರೋತ್ಸವ

ಜೆಸಿಬಿ ದೊಡ್ಡ ಯಂತ್ರದ ಕೊಕ್ಕೆ ನೆಲಕ್ಕೆ‌ ಬಡಿಯುವಾಗ ತನ್ನ‌ ಮುಂದೆ‌ ಹಲವು ವರ್ಷದಿಂದ ನಿಂತಿದ್ದ ಎಲ್ಲ ಸಣ್ಣ ಪುಟ್ಟ ಅಂಗಡಿಗಳನ್ನ ಮುರಿದು ನೆಲಸಮ ಮಾಡಿತ್ತು.ನಗರ ಸ್ವಚ್ಚವಾಗಬೇಕು, ಬೀದಿ ಬದಿಯ ವ್ಯಾಪಾರಸ್ಥರಿಗೆ ಪ್ರತ್ಯೇಕ ಸುಸಜ್ಜಿತವಾದ ಸ್ಥಳಾವಕಾಶ‌ ನೀಡುತ್ತೇವೆ ಅನ್ನೋದು ಊರಿನ‌ ದೊಡ್ಡವರಿಂದ ಬಂದ ಮಾತು, ಹೇಳಿದ‌ ನಂತರ ಊರು ಹಲವು ತಿಂಗಳ ಸೂರ್ಯೋದಯವನ್ನು ಕಂಡಿದೆ.

Image

ಸಂತ ಮತ್ತು ಮನುಷ್ಯ

ಇಂದು ಸಂತರ ಬದುಕಿಗೂ ಸಾಧಾರಣ ಮನುಷ್ಯನ ಬದುಕಿಗೂ ಇರುವ ವ್ಯತ್ಯಾಸ ತಿಳಿದುಕೊಳ್ಳೋಣ. ಸಂತರು ಸತ್ಯದರ್ಶನಕ್ಕಾಗಿ ಮೀಸಲಾಗಿ ಇರುತ್ತಾರೆ. ನಾವು ಪ್ರಪಂಚಕ್ಕೆ ಬದುಕನ್ನು ಮೀಸಲಾಗಿ ಇಟ್ಟಿರುತ್ತೇವೆ. ನಾವು ಶಬ್ದ, ರೂಪ, ರಸ, ಗಂಧ ಮತ್ತು ಸ್ಪರ್ಶಕ್ಕಾಗಿ ಬದುಕನ್ನು ಮೀಸಲಾಗಿಡುತ್ತೇವೆ. ನಾವು ಈ ಪ್ರಪಂಚದ ವಸ್ತುಗಳಿಗಾಗಿ ಬದುಕನ್ನೇ ಸವೆಸುತ್ತೇವೆ. ಈ ವಸ್ತುಗಳು ಹೇಗಿದ್ದಾವೆ ?

Image

ಎಚ್ಚರಿಕೆಯ ಫಲಕಗಳು

ಉತ್ತರ ಕರ್ನಾಟಕದ ಶಾಲಾ ಶಿಕ್ಷಕರ ಮಗನೊಬ್ಬ ಅತ್ಯಂತ ಸಾಂಪ್ರದಾಯಿಕ ಮತ್ತು ಗ್ರಾಮೀಣ ವ್ಯವಸ್ಥೆಯಲ್ಲಿ ಬೆಳೆದಿರುತ್ತಾನೆ. ಆ ಯುವಕ ಒಮ್ಮೆ ಅನಿವಾರ್ಯ ಕೆಲಸದ ಕಾರಣಕ್ಕಾಗಿ ಮೊದಲ ಬಾರಿಗೆ ಬೆಂಗಳೂರಿಗೆ ಬರಬೇಕಾಗುತ್ತದೆ.

Image

ಸ್ಟೇಟಸ್ ಕತೆಗಳು (ಭಾಗ ೧೨೧೩) - ಇನ್ನೂ ಬರಲಿ

ಅಪ್ಪ ಹೇಳಿದ ಕಥೆ ಕೇಳಿ ನನಗೆ ಕಾಲ ಎಷ್ಟು ಬದಲಾಗಿದೆ ಅಂತ ಅನ್ನಿಸ್ತು. ಒಂದು ಊರಿನಲ್ಲಿ ಒಬ್ಬರು ಹೋಟೆಲ್ ಆರಂಭಿಸಿದರು. ಆರಂಭಿಸಿ ಕೆಲವು ದಿನ ನಡೆಸಿದವರಿಗೆ ಅದರಿಂದ ಲಾಭ ಉತ್ಪತ್ತಿ ಮಾಡುವುದಕ್ಕಾಗ್ಲಿಲ್ಲ. ಹಾಗಾಗಿ ಅದನ್ನ  ಯಾರಿಗಾದರೂ ಬಾಡಿಗೆ ನೀಡುವ ನಿರ್ಧಾರಕ್ಕೆ ಬಂದರು. ತಮಗೆ ಸಿಗುತ್ತಾ ಇದ್ದ ದುಡ್ಡಿನ ಮೇಲೆ ತಿಂಗಳ ಬಾಡಿಗೆ ನಿಗದಿ ಮಾಡಿ 15,000 ಅಂತ ಹೇಳಿದ್ರು.

Image

ಭರವಸೆ ಮತ್ತು ವಿಶ್ವಾಸದೊಂದಿಗೆ ಭಾರತದ ಗಣತಂತ್ರ

ಭಾರತ ಸಂವಿಧಾನವು 1949 ರ ನವೆಂಬರ್ 26 ರಂದು ಅಂಗೀಕಾರವಾಗಿ, 1950 ರ ಜನವರಿ 26 ರಂದು ಜಾರಿಗೆ ಬಂದ ಪ್ರಯುಕ್ತ ಈ ದಿನದ ಗೌರವಾರ್ಥವಾಗಿ ಪ್ರತಿ ವರ್ಷ ಜನವರಿ 26 ರಂದು ಭಾರತದಲ್ಲಿ ಗಣರಾಜ್ಯೋತ್ಸವ ದಿನವನ್ನಾಗಿ ಅದ್ದೂರಿಯಿಂದ ಆಚರಿಸಲಾಗುತ್ತದೆ. ಇದು ಬ್ರಿಟೀಷ್‌ರ ವಸಾಹತುಶಾಹಿ ಸರ್ಕಾರದ ಕಾಯಿದೆಗಳನ್ನು ಬದಲಾಯಿಸಿ ನಮ್ಮದೇ ಲಿಖಿತ ಸಂವಿಧಾನವನ್ನು ಜಾರಿಗೆ ತಂದ ದಿನ ಇದಾಗಿದೆ.

Image