ಕವನಗಳು

ವಿಧ: ಕವನ
March 26, 2024
ಅಂದಿನ ಪಾಠ ಅಂದೆ ಕಲಿತಿರಬೇಕು ಹೆಚ್ಚಿನ ಪರಿಶ್ರಮ ಪಡುತ್ತಿರಬೇಕು ಕಲಿತ ವಿಷಯಗಳ ಮನನ ಮಾಡಬೇಕು ಸರಿಯಾದ ವೇಳಾಪಟ್ಟಿ ಹೊಂದಿರಬೇಕು   ಪರೀಕ್ಷೆಗಳೆಂದರೆ ಮಕ್ಕಳಿಗೆ ಉತ್ಸಾಹವಿರಬೇಕು ಭಯಪಡದೆ ಪರೀಕ್ಷೆಗಳನ್ನು ಎದುರಿಸಬೇಕು ವಿಷಯಗಳನ್ನು ಅರ್ಥೈಸಿಕೊಂಡು ಓದಬೇಕು ಉಲ್ಲಾಸದಿಂದ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕು   ತನ್ನ ಮೇಲೆ ತನಗೆ ವಿಶ್ವಾಸ ಇರಬೇಕು ವಿಷಯಗಳ ಹೆಚ್ಚಿನ ಜ್ಞಾನ ಹೊಂದಿರಬೇಕು  ಮನಸ್ಸಿನಿಂದ ವಿಷಯಗಳನ್ನು ಓದುವಂತಿರಬೇಕು ಕಠಿಣ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡಿರಬೇಕು   ಅಕ್ರಮ…
ವಿಧ: ಕವನ
March 26, 2024
ಬಣ್ಣದೋಕುಳಿ ಆಡುತಲಿ ಚಿಣ್ಣರೆಲ್ಲ ಸೇರೋಣ ಕೆಂಪು ಹಳದಿ ನೀಲ ಬಣ್ಣ ತನ್ನಿರಿ ಎಲ್ಲರು ಇಲ್ಲಿಗೆ ಅಣ್ಣ/ ಬಗೆಬಗೆ ಆಟವ ಆಡುತಲಿ ಬಣ್ಣದ ನೀರ ಎರಚೋಣ ಹಿರಿಯರು ಕಿರಿಯರು ಬೆರೆಯುತಲಿ ಹೋಳಿ ಸಂಭ್ರಮ  ಮಾಡೋಣ//   ಬಿದಿರ ಬೊಂಬೆಯ ಮಾಡುತಲಿ  ಕಟ್ಟಿಗೆ ರಾಶಿ ಹಾಕೋಣ ಹಳೆಯ ವಸ್ತ್ರವ ತೊಡಿಸುತಲಿ ಬೆಂಕಿಯನ್ನು ಹಚ್ಚೋಣ/ ಅರಿಷಡ್ವರ್ಗಗಳ ಮರೆಯುತಲಿ ಮನದ ಕ್ಲೇಶವ ತೊಳೆಯೋಣ ಸಹನೆ ಶಾಂತಿ ದಾನವೆಲ್ಲ ಬದುಕಿನ ಅಂಗ ಎನ್ನೋಣ//     ಕಾಮದೇವನ ಪ್ರೀತಿ ಪ್ರೇಮ ರತಿದೇವಿಗೆ ವರದಾನ ನೀಲಕಂಠನ ಕೃಪೆಯ  ಸಂಭ್ರಮ ಹೋಳಿ…
ವಿಧ: ಕವನ
March 25, 2024
ಮುಂಜಾನೆಯೊಳು ಮಂಜಿನ ಹನಿಗಳು ಸುಂದರ ಬಲೆಯನು ಹೆಣೆದಿರಲು ಚಳಿಯನು ಸುತ್ತಲು ಹರಡಿದೆ ಇಳೆಯೊಳು ತಂಗಾಳಿಯದು ಬೀಸಿರಲು   ಹೊನ್ನಿನ ಕಿರಣವ ಚೆಲ್ಲುತ ನೇಸರ ಮೂಡಿದ ಬಾನಿನ ಬಯಲಿನೊಳು ಬಿಸಿಲಿನ ತಾಪಕೆ ಕರಗಿದ ಇಬ್ಬಲಿ ಹೂವಿನ ದಳದಲಿ ಮುತ್ತುಗಳು   ನೀಲಿಯ ಗಗನವ ಚುಂಬಿಸಲಾಸೆಯೆ ಹಕ್ಕಿಯ ಗುಂಪಿನ ಮೆರವಣಿಗೆ ಬೆಳಗಿನ ಚೆಲುವನು ನೋಡುತ ಮೈಮನ ಮನವಿದು ಬಯಸಿತು ಬರವಣಿಗೆ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ 
ವಿಧ: ಕವನ
March 24, 2024
ಕಲ್ಲು... ವಿಚ್ಛೇದನ ನೀಡಲು ನಿರಾಕರಿಸಿದ  ಪತಿ ಮೇಲೇ  ಪತ್ನಿ- ಕಲ್ಲಿನಿಂದ ಭಾರೀ ಹಲ್ಲೆ...   ಕಲ್ಲಿನಿಂದ ಹೊಡೆದ ಮೇಲೂ ವಿಚ್ಛೇದನ ನೀಡದಿರ ಪತಿಯೇ- ನೀನೊಂದು ಸ್ಟ್ರಾಂಗ್ ಕಲ್ಲೇ! *** ಓದುವ ಸಂಸ್ಕೃತಿ  ಗ್ರಂಥಾಲಯದ ಪುಸ್ತಕಗಳು- ನಮ್ಮ ಧೂಳ ಕೊಡವುವರಿಲ್ಲವೆಂದು ಅಳುತಿಹವು ನೋಡಿರೋ...   ಮನದ ಧೂಳ ಕೊಡವಿ- ಪುಸ್ತಕಗಳ ಓದಿ ಜ್ಞಾನ ದಾಹವ ತಣಿಸಿಕೊಳ್ಳಿರೋ! *** ಕೊರಗು  ಪ್ರತೀ  ಹಂತದಲೂ ಸಮೃದ್ಧಿ ಸೌಲಭ್ಯಗಳ ಪಡೆದರೂ ಈ ಜೀವ...   ಸದಾ ಕೊರಗುತಲಿಹುದು ಮನುಷ್ಯನ ಅಸಹಜ ಅತೃಪ್ತಿಯ ಭಾವ! ***…
ವಿಧ: ಕವನ
March 23, 2024
ಬದುಕಿ ಬಾಳಿರಿ ಹೆತ್ತವರ ನೆರಳಲಿ ಬೆಳೆದು ದೊಡ್ಡವರಾಗಿ ಹಿರಿಯರ ಆಶೀರ್ವಾದದಲಿ ನಲಿದು ಆಡಿರಿ ಬಾಲ್ಯದ ಗೆಳೆಯರ ಒಡನಾಟದಲಿ ಪ್ರತಿ ಹೆಜ್ಜೆ ಇಡಿ ಗುರುಗಳ ಮಾರ್ಗದರ್ಶನದಲಿ   ತಂದೆ ಬೈದನೆಂದರೆ ಅದು ಜವಾಬ್ದಾರಿಗಾಗಿ ತಾಯಿ ಕೋಪದಿ ಮಾತನಾಡಿದರೆ ಅದು ಬದುಕಿಗಾಗಿ ಗುರು ಶಿಕ್ಷಿಸಿದನೆಂದರೆ ಅದು ಶಿಕ್ಷಣಕ್ಕಾಗಿ ಗೆಳೆಯ ಮಾತುಬಿಟ್ಟರೆ ಅದು ತಪ್ಪಿನ ಅರಿವಿಗಾಗಿ   ಸಹೋದರನ ಹೆಗಲಿಗೆ ಹೆಗಲು ಕೊಡುವವನಾಗು ಸಹೋದರಿಯ ಬದುಕಿನ ರಕ್ಷಣೆಗೆ ಕಾವಲುಗಾರನಾಗು ಮಕ್ಕಳು ಪೂಜಿಸುವ ತಂದೆ ನೀನಾಗು ಸಂಬಂಧಿಕರು ಸಂಬಂಧ…
ವಿಧ: ಕವನ
March 22, 2024
ಎಳೆಯ ಬಾಲೆಯು ಕರದಲಿರುವುದು ಎಳೆಯ ಮಾವಿನ ಮಿಡಿಗಳು ಕಿತ್ತು ತಂದಳೆ,ಹೇಗೆ ದೊರೆಯಿತು ಮಾವು ಮಿಡಿಗಳ ಗೊಂಚಲು   ಒಂದು ಮಿಡಿಯನು ಬಾಯಲಿಟ್ಟಳು ಮುದ್ದು ಮುಖದಲಿ ನಗುವಿದೆ ಮುಗ್ಧ ಬಾಲೆಯು ಮಿಡಿಯ ಕಡಿದರೆ ಮೇಣವಿರುವುದು ಅರಿಯದೆ?   ಕೊಂಚ ಸೈರಿಸು ಚೂರಿ ಜೊತೆಯಲಿ ಉಪ್ಪಿನೊಂದಿಗೆ ಬರುವೆನು ಹೋಳನಾಗಿಸಿ ಉಪ್ಪು ಬೆರೆಯಿಸಿ ನಿನಗೆ ತಿನ್ನಲು ಕೊಡುವೆನು||   -ಪೆರ್ಮುಖ ಸುಬ್ರಹ್ಮಣ್ಯ ಭಟ್ 
ವಿಧ: ಕವನ
March 21, 2024
ಒಲವ ಕುಣಿಸಿ ಪದಗಳ ಮಾಲೆ ಹಾಕಿದೆ ಕವಿತೆ ಛಲವ ಮೊಳೈಸಿ ತನುಮನ ಎಲ್ಲ ತಾಕಿದೆ ಕವಿತೆ   ಬಲ ಪ್ರಯತ್ನ ಮಾಡಿದರೆ ಕಾವ್ಯದ ಹುಟ್ಟ ಸಾಧ್ಯವೇ  ಕಾಲ ಕಳೆದಂತೆ ಉತ್ತಮ ಸಮಯ ಬೇಕಿದೆ ಕವಿತೆ   ನಲಿದು ವಾಕ್ಯ ಅರಳುವ ವೇಳೆಗೆ ಕನಸು ಬೀಳುವುದು ಸಾಲಿನ ಮಿತಿಗೆ ಅಕ್ಷರಗಳ ಜೋಡಿಸಿ ಸಾಕಿದೆ ಕವಿತೆ    ನಾಲಿಗೆ ತುದಿಯಲಿ ಇದ್ದರೂ ಹುಡುಕುವ ಕೆಲಸ ತಲೆಗೆ ಕಲಿಕೆ ನಿರತ ಹೊಸತು ಪ್ರಯೋಗ ಸೋಕಿದೆ ಕವಿತೆ   ಜಾಲಿಗೆ ಬರೆದ ಕವನ ಚಂದ್ರನ ಹೃದಯ ತಟ್ಟಿದೆ ಲಲಿತ ಪ್ರಕಾರಗಳ ಭಾವ ಲಹರಿಗೆ ನೂಕಿದೆ ಕವಿತೆ. -ಚಂದ್ರಶೇಖರ…
ವಿಧ: ಕವನ
March 21, 2024
ನೋಡಿದಿರೇನು ನದಿಯ ಒಡಲು ಬರಿದಾಗಿ ಹೋಗಿದೆ ಮಡಿಲು ಭೋರ್ಗರೆಯಬೇಕಿತ್ತು ಹಾಲ್ಗಡಲು ಮುಂದೆ ಸಾಗಿ ಸೇರಲು ಕಡಲು   ಸ್ನಾನ ಪಾನಾದಿಗಳಿಗೆ ಬೇಕು ನೀರು ವನ್ಯಜೀವಿಗಳಿಗಂತೂ ಉಳಿಸಲಿಲ್ಲ ಚೂರು ಸುತ್ತ ಮಾನವನದ್ದೇ ಕಾರುಬಾರು ಹೀಗೆ ಸಾಗಿದರೆ ಬಿಡಬೇಕಾದೀತು ಊರು   ದೈವವನು ನೀವು ಜರಿಯುತ ಮೌಲ್ಯಗಳ ಸದಾ ಮರೆಯುತ ಕುಡಿದು ಕುಣಿದು ನಲಿಯುತ ಸೋದರತೆಯ ತೊರೆದು ಬಡಿದಾಡುತ   ಆತ್ಮಸಾಕ್ಷಿ ಯನ್ನು ತೊರೆದು ಕ್ರೂರ ಕೃತ್ಯಗಳಲ್ಲಿ ಮೆರೆದು ಪ್ರಾಣಿ ಪಕ್ಷಿಗಳನ್ನು ಇರಿದು ಸತ್ಯ ಅಸತ್ಯಗಳ ಜರಿದು   ಸಾಗಿದರಾಯಿತೆ…
ವಿಧ: ಕವನ
March 20, 2024
ಮುನಿದಳೇಕೆ ಅರಿಯದಾದೆ ನಲ್ಲೆ ಇಂದು ಈತರ ದಟ್ಟ ಮುಗಿಲ ಪರದೆಯೊಳಗೆ ಉಳಿದ ಹಾಗೆ ಚಂದಿರ   ಏನು ಮರೆತೆ ಮೊಗವ ತಿರುವೆ ನೆನಪು ಮನಕೆ ಬಾರದೆ ರಮಿಸಲೆಂತು ಕಾಂತೆ ಇವಳ ಹಾದಿ ಈಗ ತೋಚದೇ   ಮೊನ್ನೆ ತಾನೆ ಜನ್ಮ ದಿನಕೆ ಬೆರಳಿಗಿಟ್ಟೆ ಉಂಗುರ ಮದುವೆ ದಿನವು ದೂರವಿಹುದೆ ಮತ್ತೆ ಏಕೆ ನಿಷ್ಟುರ   ಮಲ್ಲೆ ಹೂವ ಮಾಲೆ ತರಲು ನಡೆದೆ ನಾನು ಕ್ಷಣದಲಿ ಹೋಗಿ ತಂದು ತುರುಬಲಿಡಲು ಬಿರಿದ ಕಮಲ ಮೊಗದಲಿ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ 
ವಿಧ: ಕವನ
March 19, 2024
ಮನದೊಳಗೆ ತುಂಬಿಸಿರುವೆ ಹರೇ ರಾಮ ನಾಮ ತನುವೊಳಗೆ ಹರಡಿಸಿರುವೆ ಹರೇ  ರಾಮ ನಾಮ   ನೆಲದೊಳಗೆ ಹಬ್ಬಿಸಿರುವೆ ಹರೇ ರಾಮ ನಾಮ ಗಿಡದೊಳಗೆ ಉಳಿಸಿರುವೆ ಹರೇ ರಾಮ ನಾಮ   ನಡೆಯೊಳಗೆ ಸೇರಿಸಿರುವೆ ಹರೇ ರಾಮ ನಾಮ ನುಡಿಯೊಳಗೆ ಬೆರೆಸಿರುವೆ ಹರೇ ರಾಮ ನಾಮ   ಜ್ಞಾನದೊಳಗೆ ಇರಿಸಿರುವೆ ಹರೇ ರಾಮ ನಾಮ ಪ್ರಾಣದೊಳಗೆ ಕೂರಿಸಿರುವೆ ಹರೇ ರಾಮ ನಾಮ *** ಬಾರೆಲೆ ಹಕ್ಕಿಯೆ ಹಾರುತ ಹಾರುತ ಬಾರೆಲೆ ಹಕ್ಕಿಯೆ ಬಣ್ಣದ ಹಕ್ಕಿಯೆ ಚೆಂದದ ಹಕ್ಕಿಯೆ ಬಾನೊಳು ರೆಕ್ಕೆಯ ಬಿಚ್ಚುತ ಹಾರುವೆ ಸೂರ್ಯನ ಕಡೆಗೋ ಹಾರುತ ಹೋಗುವೆ  …