ಕವನಗಳು

ವಿಧ: ಕವನ
January 22, 2024
ಮಹಾವಿಷ್ಣುವಿನ ಸಪ್ತಮಾವತಾರ ಭೂಮಿಗಿಳಿದ ಭಗವಂತನ ನರಾವತಾರ ಸರಯೂ ಪುಣ್ಯ ನದಿ ತೀರ ಸಾಕೇತದ ಪವಿತ್ರ ನೆಲ ಸಾರ//   ದಶರಥಾತ್ಮಜ ಪ್ರಿಯ ನಂದನ ಕೌಸಲ್ಯಾ ಮಡಿಲ ಕಂದನು ಚೈತ್ರಶುಕ್ಲ  ಮಾಸದಿ ಉದಿಸಿದ ನವಮಿಯ ಶುಭದಿನದಿ ಜನಿಸಿದ//   ರಾಮನೇ ಮನಸ  ಪರಿಶುದ್ಧ ಬೆಳಕು ಆತ್ಮ ಮನಸುಗಳ ಸಂಯಮದ ಸರಕು ದುಷ್ಟ ಶಕ್ತಿಗಳ ಸರ್ವನಾಶ ದೈವೀ ಶಕ್ತಿಗಳ ಉಪಾಸನೆ //   ಶಬರಿಗೆ ಮೋಕ್ಷವ ತಂದ ಮಾತೆ ಅಹಲ್ಯೆಯ ಪೊರೆದ ಹನುಮಂತ ಪ್ರೀತ ರಾಜಾರಾಮ ಶಿಷ್ಟರ ಪರಿಪಾಲಿಸಿದ ಸೋಮ   ಅಯೋಧ್ಯೆಯ ಪುಣ್ಯ ನೆಲದಲಿ ಪ್ರತಿಷ್ಠಾಪನೆ…
ವಿಧ: ಕವನ
January 21, 2024
ನನ್ನ ಕಂಬನಿ ಕಥೆಯ ನಿನ್ನಲಿ ಹೇಳಲೇನಿದೆ ಮಾತಲಿ ಸಕಲ ಬಲ್ಲವ,ಅರಿಯಲಾರೆಯ ಗುಟ್ಟು ಏನಿದೆ ನನ್ನಲಿ   ಇರುಳು ಹಗಲಿನ ತರದಿ ಬಾಳುವೆ ಕಷ್ಟ ಸುಖಗಳ ಮಿಶ್ರಣ ಕೆಲವು ಜೀವಕೆ ಸುಖ ಮರೀಚಿಕೆ ನಿತ್ಯ ಬದುಕಲಿ ತಲ್ಲಣ   ನನ್ನ ವೇದನೆ ಕೇಳ ಬಂದಿಹೆ ನಿನ್ನ ಕಣ್ಣಲಿ ಕಂಬನಿ ಅದನು ಕಂಡೆನು ನನ್ನ ಎದೆಯಲಿ ನಿನ್ನ ನೋವಿನ ಮಾರ್ಧನಿ   ಅರಿತೆ ದೇವನೆ ಕರ್ಮಫಲವಿದು ತಿದ್ದಲಾಗದು ಬರಹವ ಕಷ್ಟ ಸಹಿಸುವ ಸಹನೆ ಕರುಣಿಸು ನೀನು ಜೊತೆಯಿರು ಕೇಶವ||   -ಪೆರ್ಮುಖ ಸುಬ್ರಹ್ಮಣ್ಯ ಭಟ್  ಚಿತ್ರ ಕೃಪೆ: ಇಂಟರ್ನೆಟ್ ತಾಣ
ವಿಧ: ಕವನ
January 20, 2024
ರವಿಯು ಪಶ್ಚಿಮದೆಡೆಗೆ ಸಾಗಲು ಬುವಿಯು ಕತ್ತಲ ಸೆರಗಲಿ ಇರುಳು ಕಳೆದರೆ ಬೆಳಕು ಬರಲಿದೆ ಇರದು ಸಂಶಯ ಮನದಲಿ   ಸರಿದ ಸೂರ್ಯನು ಮತ್ತೆ ಬರುವನು ಇಳೆಯು ಮೆರೆವುದು ಬೆಳಕಲಿ ಸವೆದ ಬದುಕಿದು ಚರಿತೆಯಾಯಿತು ಮತ್ತೆ ಬರುವುದೆ ಬಾಳಲಿ   ಒಡಲ ಮಕ್ಕಳ ಮಡಿಲಲಿರಿಸುತ ಕಳೆದು ಹೋಯಿತು ಯೌವನ ರೆಕ್ಕೆ ಬಲಿಯಲು ತೊರೆದ ಮಕ್ಕಳು ಸಾಕು ಎನಿಸಿದೆ ಜೀವನ   ಉದರ ಹಸಿವಿಗೆ ಉಣಲು ಹಿಟ್ಟಿದೆ ತಿನಲು ಮನವಿದು ಬಾರದೆ ಮನದ ಹಸಿವಿಗೆ ಪ್ರೀತಿಯಂಬಲಿ ಕೊಡುವ ಮಂದಿಯ ಕಾಣದೆ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ (ಚಿತ್ರ ಕೃಪೆ…
ವಿಧ: ಕವನ
January 19, 2024
ಉದುರಿದ ಹಸಿರೆಲೆ ಒಣಗಿದೆ ಬಿಸಿಲಲಿ ಸಾರಿದೆ ನೋವನು ಮೌನದಲಿ ಮರಗಳ ವೇದನೆ ಅಡಗಿದೆ ಅದರಲಿ ಬರೆದಿದೆ ಒಣಗಿದ ಎಲೆಯಲ್ಲಿ   ತನ್ನಯ ಪಾಡಿಗೆ ಮೊಳೆತಿಹ ಗಿಡವದು ಬೆಳೆದಿರೆ ಸುಂದರ ಮರವಾಗಿ ಬೆಲೆಯನು ಕಟ್ಟುತ ಕೊಳ್ಳಲು ಬಂದರೆ ನೀಡುವೆ ತಕ್ಷಣ ನೀ ಹೋಗಿ   ಜೀವಿಗೆ ಉಸಿರನು ನೀಡಿದ ವೃಕ್ಷವು ಉಸಿರನು ನಿಲ್ಲಿಸಿ ಧರೆಶಾಹಿ ಮಾಡಿದ ನೆರವನು ಮರೆಯುವ ಮಾನವ ಮನವದು ಧನದಲಿ  ವ್ಯಾಮೋಹಿ||   -ಪೆರ್ಮುಖ ಸುಬ್ರಹ್ಮಣ್ಯ ಭಟ್  ಚಿತ್ರ ಕೃಪೆ: ಇಂಟರ್ನೆಟ್ ತಾಣ
ವಿಧ: ಕವನ
January 18, 2024
ದಿನಕರ ದೇವನು ಪಥವ ಬದಲಿಸುವ ದೀರ್ಘ ರಾತ್ರಿಯು ಸರಿಯುವ ಸಮಯವು ಮಕರ ರಾಶಿಗೆ ಪ್ರವೇಶವಾಗಿರಲು ಭಾಸ್ಕರನ ಪೂಜೆಯ ಒಟ್ಟಾಗಿ ಗೈಯಲು//   ಹೆಂಗಳೆಯರ ಸಂತಸ ಮುಗಿಲು ಮುಟ್ಟುತ ಎಳ್ಳು ಬೆಲ್ಲ ಬೆರೆಸಿ ಹಂಚಿ ಮೆಲ್ಲುತ/ ಒಳ್ಳೊಳ್ಳೆಯ ಮಾತನಾಡಿ ನಲಿಯುತ ಹಳೆಯ ವೈಷಮ್ಯಸುಟ್ಟು ಬಿಡುತ//   ಅನ್ನದಾತರ ಬೆವರ ಹನಿಗಳ ಸುಗ್ಗಿ ಹಬ್ಬ ದವಸ ಧಾನ್ಯ ಸೇರಿಸಿ ರಾಶಿ ಪೂಜೆಯ ಕಬ್ಬ/ ರಾಸುಗಳ ಶೃಂಗರಿಸಿ ಪೂಜಿಸಿ ನಲಿಯುತ ಹಾಲು ಬೆಲ್ಲ ಪೊಂಗಲ್  ಅರ್ಪಿಸುತ//   ಕೆಂಡದ ರಾಶಿಯಲಿ ಹಾಯುವ  ಎತ್ತುಗಳು ಭೋಗಿಯ ಅವಸರದಿ…
ವಿಧ: ಕವನ
January 17, 2024
ಸಂಕ್ರಾಂತಿ ಮಕರ ಸಂಕ್ರಾಂತಿ ಬಂತು ನಾಡಿನಗಲಕೆ ಜನರ ಪಾಲಿಗೆ ತಂತು// ಪಥವ ಬದಲಿಸುತ ಬಂತೇ ಬಂತು ಭಾಸ್ಕರನ ಹೊಂಗಿರಣ ಪ್ರಭೆಯ ಬೀರಿತು//   ರೈತ ಮಂದಿಯು ಪೈರ ಬೆಳೆಯುತ ಮನೆಯ ಮುಂದೆ ರಾಶಿ ಹಾಕುತ/ ಸುಗ್ಗಿಯ ಮಾಡುತ ಹಿಗ್ಗಲಿ ಕುಣಿಯುತ ಹುಗ್ಗಿಯ ಪಾಯಸ ಮಾಡುತ ಸವಿಯುತ//   ರಂಗು ರಂಗಿನ ರಂಗವಲ್ಲಿ ಬಿಡಿಸುತ ಎಳ್ಳುಬೆಲ್ಲ ಮೆದ್ದು ಒಳ್ಳೆಯ ಮಾತನಾಡುತ/ ಸುಖ ಶಾಂತಿ ಆರೋಗ್ಯ ಬೇಡುತ ಕಳೆ ಕೊಳೆಗಳ ಹೊರದೂಡಿ ಮೆರೆಯುತ//   ಸಕ್ಕರೆ ಅಚ್ಚು ಕಡಲೆ ಶೇಂಗ ಮೆಲ್ಲುತ ಸಂಕ್ರಾಂತಿ ಸಂಭ್ರಮ ಆಚರಣೆ ಮಾಡುತ/…
ವಿಧ: ಕವನ
January 17, 2024
ಸುರಿದಿಹ ಇಬ್ಬನಿ ಕರಗುತ ಕುಳಿತಿದೆ ಮಿರ ಮಿರ ಮಿಂಚಿ ಮುತ್ತಂತೆ ಬೆರಗಿನ ಮನದಲಿ ಕರದಲಿ ಲೇಖನಿ ಬರೆದನು ಮನದಿ ಬಂದಂತೆ   ಮುತ್ತಿನ ಫಸಲನು ಹೊತ್ತಿಹ ಪೈರಿದು ಸುತ್ತಲು ಮೊಳೆತು ಹೊಲದಲ್ಲಿ ಮತ್ತದ ಕಾಣುತ ಚಿತ್ತದಿ ಬಂದುದು ತುತ್ತಿನ ಬೆಳೆಗೆ ನೆಲೆಯೆಲ್ಲಿ   ಎಣಿಸಲು ಹಂಬಲ ಹಣವನು ಬಯಸುವ ಗುಣವದು ತುಂಬಿ ಮನದಲ್ಲಿ ಝಣ ಝಣ ಸದ್ದದು ಮನವನು ಗೆದ್ದಿದೆ ಕಣ ಕಣ ಬೆರೆತು ರಕ್ತದಲಿ||   -ಪೆರ್ಮುಖ ಸುಬ್ರಹ್ಮಣ್ಯ ಭಟ್  ಚಿತ್ರ ಕೃಪೆ: ಇಂಟರ್ನೆಟ್ ತಾಣ
ವಿಧ: ಕವನ
January 16, 2024
ಇಟ್ಟ ಧೃಡತೆಯ ಹೆಜ್ಜೆ ದಟ್ಟ ಕಾನನ ನಡುವೆ ಬಿಟ್ಟು ಸಾಗುತಲಿರುವೆ ಭಯದ ನೆರಳು ಸುಟ್ಟು ಹೋಗದ ಮೋಹ ಕಟ್ಟಿ ಸೆಳೆದಿರುವಾಗ ನೆಟ್ಟ ನೋಟದೆ ಹುಡುಕಿ ಕರೆವ ಕೊರಳು   ಭರದಲಿಡುತಿರೆ ಹೆಜ್ಜೆ ಕರದಿ ಹಿಡಿದಿಹೆ ಲಾಂದ್ರ ಕರಗಿ ಹೋಗಲಿ ನಿಶೆಯು ಮಂಜಿನಂತೆ ಅರಸಿ ಪಡೆಯುವ ಮನದೆ ಮರುಗಲೇತಕೆ ಬರಿದೆ ದೊರೆಯದುಳಿಯದು ನಿನಗೆ ಬೇಡ ಚಿಂತೆ   ಬೆರಗುಗೊಳಿಸುವ ತರದಿ ಸೆರಗು ಹಾಸಿದ ಮಂಜು ಮರೆಗೆ ಸರಿಯಲಿ ಬೇಗ ವಿಧಿಯ ಮುನಿಸು ಗುರಿಯ ಸೇರುವ ಯೋಗ ಬರಲಿ ಬಾಳಲಿ ಬೇಗ ಹರಿಯ ಮನದಲಿ ನೆನೆದು ಹೆಜ್ಜೆಯಿರಿಸು||   -…
ವಿಧ: ಕವನ
January 15, 2024
ಕಾಡಿನ ಒಳಗಡೆ ಹುಲ್ಲಿನ ಸೂರಿನ ಗುಡಿಸಲು ಇರುವುದು ನೋಡಿಲ್ಲಿ ಬಾಗಿಲು ತೆರೆಯುತ ಬಂದಳು ಸುಂದರಿ ಅಚ್ಚರಿ ತಂದಳು ನನ್ನಲ್ಲಿ   ನೀಲಿಯ ಲಂಗವ ಧರಿಸಿದ ಯುವತಿಯು ಧರಿಸಿದ ಕುಪ್ಪಸ ಕೆಂಬಣ್ಣ ಬೆಳ್ಳನೆ ಬಣ್ಣದ ದಾವಣಿಯಟ್ಟಳು ಸೆಳೆವುದು ರಸಿಕರ ಮನವನ್ನ   ನೊಸಲಲಿ ಬಿಗಿದಳು ಪದಕದ ಮಾಲೆಯ ಕಿವಿಯಲಿ ತೂಗವ ಲೋಲಾಕು ಆಕೆಯ ವೇಷವ ನೋಡುತ ಅನಿಸಿತು ಕಾಡಿಗೆ ಹೊಂದದ ಪೋಷಾಕು|| -ಪೆರ್ಮುಖ ಸುಬ್ರಹ್ಮಣ್ಯ ಭಟ್ ಚಿತ್ರ ಕೃಪೆ: ಶ್ರೀ ಬಸವರಾಜ್ ರವರ ವಾಲ್ ನಿಂದ ಸಂಗ್ರಹಿತ 
ವಿಧ: ಕವನ
January 14, 2024
ಅಪ್ಪನು ಹೋದರು ಸ್ನಾನವ ಮಾಡಲು ನಂತರ ಪೂಜೆಯ ಮಾಡುವರು ಅಣ್ಣನು ತಂಗಿಯು ಹೂಗಳ ಕೀಳಲು ಹೂವಿನ ತೋಟಕೆ ನಡೆದಿಹರು   ಘಮ್ಮನೆ ಪರಿಮಳ ಬೀರುವ ಹೂಗಳು ಮಲ್ಲಿಗೆ ಸಂಪಿಗೆ ಹೂವುಗಳ ತುಳಸಿಯ ದಳಗಳ ಕಿತ್ತಿಹ ಸಂತಸ ತುಂಬಿದೆ ಈ ಎಳೆ ಮನಸುಗಳ   ಕಿತ್ತಿಹ ಹೂಗಳ ಬುಟ್ಟಿಯಲಿರಿಸುತ ನಡೆದರು ಮನೆಕಡೆ ಜೊತೆ ಸೇರಿ ಬುಟ್ಟಿಯ ಹಿಡಿಯಲು ತನ್ನಲಿ ನೀಡಲು ಕೇಳಿದ ತಂಗಿಯು ಹಟಮಾರಿ   ಎಡವಿದ ತಂಗಿಯ ಬುಟ್ಟಿಯ ಒಳಗಿನ ಹೂಗಳು ಬಿದ್ದಿತು ಮಣ್ಣಿನಲಿ ತಂಗಿಯ ನೋವನು ಅರಿತಿಹ ಅಣ್ಣನು ಅಳದಿರು ಎಂದನು ಪ್ರೀತಿಯಲಿ||   -…