ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪೆಪ್ಸಿ ಕಂಪೆನಿಯ ಆಲೂಗಡ್ಡೆ ತಳಿಯ ಹಕ್ಕುಸ್ವಾಮ್ಯ ರದ್ದು

ಭಾರತದ ಕೋಟಿಗಟ್ಟಲೆ ರೈತರ ಬೀಜ ಮತ್ತು ದೇಸಿ ತಳಿ ಹಕ್ಕುಗಳ ಮೇಲೆ ದಾಳಿ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ, ಆ ಹಕ್ಕುಗಳ ಪರವಾಗಿ ಹಾಗೂ ಪೆಪ್ಸಿ ಕಂಪೆನಿಯ ವಿರುದ್ಧ “ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ ಪ್ರಾಧಿಕಾರ” ನೀಡಿದ ಚಾರಿತ್ರಿಕ ತೀರ್ಪಿನ ಬಗ್ಗೆ ಈ ಲೇಖನ.

Image

ಗಸಗಸೆ: ಚಿಕ್ಕ ಬೀಜದಿಂದ ದೊಡ್ಡ ಆರೋಗ್ಯ ಲಾಭಗಳು

ಗಸಗಸೆ – ಮನೆಯಲ್ಲಿ ಸುಲಭವಾಗಿ ಸಿಗುವ ಈ ಸಣ್ಣ ಬೀಜ, ಆರೋಗ್ಯದ ದೃಷ್ಟಿಯಿಂದ ಅಪಾರ ಶಕ್ತಿಯನ್ನು ಹೊಂದಿದೆ. ಇದರಲ್ಲಿರುವ ಪೌಷ್ಟಿಕಾಂಶಗಳು ದೇಹಕ್ಕೆ ಹಲವು ರೀತಿಯಲ್ಲಿ ಒಳಿತು ಮಾಡುತ್ತವೆ. ಜೀರ್ಣಕ್ರಿಯೆಯಿಂದ ಹಿಡಿದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುವವರೆಗೆ, ಗಸಗಸೆಯ ಲಾಭಗಳು ಅನೇಕ.

Image

ಹೃದಯದಲ್ಲಿ ಸದಾ ಗುರುವಿಗೆ ಜಾಗವಿರಲಿ

ಬದುಕಿನಲ್ಲಿ ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಗುರುವಿನ ನೆರಳು ಇದ್ದೇ ಇರುತ್ತದೆ. ಆ ಕಾರಣಕ್ಕಾಗಿ ಗುರುವಿಗೆ ಸಮಾಜದಲ್ಲಿ ಶ್ರೇಷ್ಠ ಗೌರವ ಸಲ್ಲುತ್ತದೆ.

Image

ಸ್ಟೇಟಸ್ ಕತೆಗಳು (ಭಾಗ ೧೩೭೮) - ಬಂಗಾರ

ತುಂಬಾ ಆಸೆ ಮೈಮೇಲೆ ಒಂದು ಸಣ್ಣ ಚಿನ್ನದ ತುಂಡಾದರೂ ಧರಿಸಬೇಕು ಅಂತ. ಅವನ ಆಸೆಗೆ ಜೊತೆಯಾಗಿ ನಿಂತವಳು ಮುದ್ದಿನ ಮಡದಿ, ಇಬ್ಬರೂ ಕಷ್ಟಪಟ್ಟು ಜೀವನವನ್ನು ಕಟ್ಟಿಕೊಂಡು ಜೀವನ ಬೆಳಗುತ್ತಾ ಹೋಯ್ತು. ಪ್ರತಿದಿನವೂ ಒಂದೊಂದು ರುಪಾಯಿ ಶೇಖರಿಸಿ ಹಲವು ವರುಷದ ಉಳಿತಾಯದಿಂದ ಒಂದು ಸಣ್ಣ ಚಿನ್ನದ ತುಂಡನ್ನ ಖರೀದಿಸುವ ಮಟ್ಟಕ್ಕೆ ಅವರು ಬೆಳೆದು ನಿಂತರು.

Image

ನಿಷ್ಪಾಪಿ ಸಸ್ಯಗಳು (ಭಾಗ ೧೦೮) - ಅಂತರಗಂಗೆ

ಪ್ರಕೃತಿಯಲ್ಲಿ ವರ್ಷ ಋತು ಆರಂಭವಾಗಿ ಹಲವಾರು ದಿನಗಳೇ ಸರಿದಿವೆ. ಕಣ್ಮನ ತಣಿಸುವ ಹಸಿರು ನಮ್ಮ ಸುತ್ತಲಿರುವ ಗುಡ್ಡಬೆಟ್ಟ, ಬಯಲು ತಪ್ಪಲಲ್ಲಿ ಹಬ್ಬಿವೆ. ಹಸಿರು ಈ ಸ್ಥಳಗಳನ್ನಲ್ಲದೆ ಕೆಲವೊಮ್ಮೆ ನೀರನ್ನೂ ಬಿಡದೆ ಆವರಿಸಿರುವುದನ್ನು ಕಾಣಬಹುದು.

Image

ಪುಸ್ತಕನಿಧಿ : ಅರ್ಧ ಆದಿ ಪರ್ವದ ಓದು

ಇತ್ತೀಚೆಗೆ ಗೆಳೆಯರೊಬ್ಬರು ವ್ಯಾಸನ ಬಗೆಗೆ ಒಂದು ಪ್ರಶ್ನೆ ಕೇಳಿದರು. ಆಗ ಹಿಂದೆ archive.org ತಾಣದಿಂದ ಇಳಿಸಿಕೊಂಡ ಮಹಾಭಾರತದ ಆದಿಪರ್ವ  ಓದಲಾರಂಭಿಸಿದೆ. ಈ ಆದಿ ಪರ್ವವು ಸುಮಾರು 350+ 350 ಪುಟಗಳ ಎರಡು ಭಾಗಗಳಲ್ಲಿ  ಇದ್ದು ಇದನ್ನು ಪಂಡಿತ ದೇವಶಿಖಾಮಣಿ ಅಳಸಿಂಗಾಚಾರ್ಯರು ಬರೆದಿದ್ದಾರೆ. ಮೊದಲ ಭಾಗವನ್ನು ಓದುವಾಗ ನಾನು ಮಾಡಿಕೊಂಡ ಟಿಪ್ಪಣಿಗಳು ಇಲ್ಲಿವೆ.
ನೈಮಿಷಾರಣ್ಯದಲ್ಲಿ ಶೌನಕನು ಒಂದು ಯಾಗ  ಮಾಡುತ್ತಿದ್ದನು. ಅಲ್ಲಿಗೆ ಸೂತ ಪೌರಾಣಿಕನು  ಹೋದಾಗ ಅವನು ಅಲ್ಲಿನ ಋಷಿಗಳಿಗೆ ಪರೀಕ್ಷಿತನ ಮಗ ಜನಮೇಜಯನು  ಯಾಗ ಮಾಡಿದ ಸಂದರ್ಭದಲ್ಲಿ ವೈಶಂಪಾಯನ ಋಷಿಯು ಹೇಳಿದ ವೇದವ್ಯಾಸ ಪ್ರೋಕ್ತ ಕಥೆಗಳನ್ನು - ಅವು ಮಹಾಭಾರತಕ್ಕೆ ಸಂಬಂಧಿ ಸಿದವು - ಹೇಳಿದನು.