ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜನರನ್ನು ಕಾಡುತ್ತಿರುವ ಅನಿರೀಕ್ಷಿತ ಸಾವುಗಳು...

ಕನ್ನಡದ ಜನಪ್ರಿಯ ನಿರೂಪಕಿ ಅಪರ್ಣ ಅವರ ಸಾವಿನ ಹಿನ್ನೆಲೆಯಲ್ಲಿ ಕ್ಯಾನ್ಸರ್ ಮತ್ತು ಭವಿಷ್ಯದ ಆರೋಗ್ಯದ ಸವಾಲುಗಳು, ಸಾವನ್ನು ಘನತೆಯಿಂದ ಸ್ವೀಕರಿಸುವ ಮನೋಭಾವ. ಕೆಲವು ವರ್ಷಗಳ ಹಿಂದೆ ಮಾಧ್ಯಮದಲ್ಲಿ ಓದಿದ ಸುದ್ದಿ.

Image

ಸ್ಟೇಟಸ್ ಕತೆಗಳು (ಭಾಗ ೧೦೨೨)- ಮಳೆರಾಯ

ಸ್ವಲ್ಪವಾದರೂ ವಿಶ್ರಾಂತಿ ನೀಡೋ ಮಾರಾಯ? ಅದೆಷ್ಟು ಅಂತ ಸತತವಾಗಿ ಸುರೀತಿಯಾ? ನಿನಗೂ ಒಂದಿಷ್ಟು ವಿರಾಮ ಬೇಡ್ವೇನೋ? ನಿನ್ನೆ ರಾತ್ರಿಯಿಂದ ಶುರುವಾದದ್ದು ಇಂದು ಸಂಜೆಯಾದರೂ ನಿಲ್ಲುವ ಯಾವ ಲಕ್ಷಣವೂ ಕಾಣ್ತಾ ಇಲ್ಲ. ಹೀಗೆ ಮಳೆ ಸುರಿತಾ ಹೋದ್ರೆ  ನೀನು ತುಂಬಿಸಿಟ್ಟುಕೊಂಡಿರುವ ನಿನ್ನ ಭಂಡಾರ ಖಾಲಿಯಾಗುವುದಿಲ್ಲವೇನೋ? ಇನ್ನೆಷ್ಟು ಸಮಯದವರೆಗೆ ಹೀಗೆ ಸುರಿಯುತ್ತಾನೆ ಇರುತ್ತೀಯೋ?

Image

ಹೀರೇಕಾಯಿ ದೋಸೆ

Image

ಅಕ್ಕಿ, ಉದ್ದಿನ ಬೇಳೆ, ಕಡಲೆಬೇಳೆ, ಮೆಂತ್ಯೆ ಇವುಗಳನ್ನು ೫ ಗಂಟೆಗಳ ಕಾಲ ನೆನೆಸಿ, ನಂತರ ಅದಕ್ಕೆ ಒಣ ಮೆಣಸು, ಜೀರಿಗೆ, ಕೊತ್ತಂಬರಿ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿ. ನಂತರ ಅದಕ್ಕೆ ಬೆಲ್ಲದ ಹುಡಿ, ಉಪ್ಪು, ಹುಣಸೇ ರಸ ಸೇರಿಸಿ. 

ಬೇಕಿರುವ ಸಾಮಗ್ರಿ

ಹೀರೇಕಾಯಿ - ಸಣ್ಣ ಗಾತ್ರದ್ದು, ಅಕ್ಕಿ ೨ ಕಪ್, ಉದ್ದಿನ ಬೇಳೆ - ೨ ಚಮಚ, ಕಡಲೆಬೇಳೆ ೨ ಚಮಚ, ಮೆಂತ್ಯೆ ಅರ್ಧ ಚಮಚ, ಒಣ ಮೆಣಸು ೬, ಜೀರಿಗೆ ಅರ್ಧ ಚಮಚ, ಕೊತ್ತಂಬರಿ ೨ ಚಮಚ, ಬೆಲ್ಲ ೨ ಚಮಚ, ಹುಣಸೆ ರಸ ೫ ಚಮಚ, ರುಚಿಗೆ ತಕ್ಕಷ್ಟು ಉಪ್ಪು. ಎಣ್ಣೆ, ಬೆಣ್ಣೆ

 

ಭೂಮಿಯ ಮೇಲೆ ಜೇನು ನೊಣಗಳ ಪ್ರಾಮುಖ್ಯತೆ (ಭಾಗ 1)

ಬಾಲ್ಯದಿಂದಲೂ ನನ್ನದು ಭಾಗಶಃ ಜೇನು ಕೀಳುವುದೇ ಕೆಲಸ ಆಗಿತ್ತು. ಜೇನುಗಳನ್ನು ಕೀಳುವುದು ವಾಣಿಜ್ಯ ಉದ್ದೇಶದಿಂದ ಅಲ್ಲದೇ ಇದ್ದರೂ ಅದೊಂದು ಆಹಾರದ ಅಭ್ಯಾಸವಾಗಿ ಹವ್ಯಾಸವಾಗಿತ್ತು. ನನ್ನ ಐದು - ಆರನೇ ವಯಸ್ಸಿನಿಂದಲೇ ಆರಂಭವಾದ ಈ ಅಭ್ಯಾಸ ಹವ್ಯಾಸವಾಗಿ ಇಪ್ಪತ್ತು ಇಪ್ಪತ್ತೆರಡು ವರ್ಷಗಳವರೆಗೆ ಪ್ರಧಾನವಾಗಿಯೇ ಮುಂದುವರೆದಿತ್ತು. ಈಗಲೂ ಕಸುಬು ಮರೆತಿಲ್ಲವಾದರೂ ಅಭ್ಯಾಸ ಮಾಡುತ್ತಿಲ್ಲವಷ್ಟೇ...

Image

‘ಗುಡ್ಡದ ಭೂತ' ಖ್ಯಾತಿಯ ಸದಾನಂದ ಸುವರ್ಣ ನೆನಪಿನಲ್ಲಿ…

ಖ್ಯಾತ ನಿರ್ದೇಶಕ, ನಿರ್ಮಾಪಕ ಸದಾನಂದ ಸುವರ್ಣ ಇನ್ನಿಲ್ಲ (ನಿಧನ: ಜುಲೈ ೧೬) ಎಂಬ ಸುದ್ದಿ ಕೇಳಿ ನನ್ನ ಮನಸ್ಸು ೯೦ರ ದಶಕದತ್ತ ವಾಲಿತು. ಆ ಸಮಯದಲ್ಲಿ ಸದಾನಂದ ಸುವರ್ಣರು ಮಂಗಳೂರಿನಲ್ಲಿ ಹಲವು ನಾಟಕಗಳ ನಿರ್ದೇಶನ ಮಾಡುತ್ತಿದ್ದರು. ನಾನು ಪದವಿಯ ಕೊನೇ ವರ್ಷದಲ್ಲಿದ್ದೆ ಎಂದು ನೆನಪು. ರಂಗಕರ್ಮಿ ಜಗನ್ ಪವಾರ್ ಬೇಕಲ್ ಅವರ ಜೊತೆ ನನ್ನ ಒಡನಾಟವಿತ್ತು.

Image

ಭ್ರಷ್ಟಾಚಾರ ನಿಯಂತ್ರಣದಲ್ಲಿ ವಿಫಲ

ಹಿಂದಿನ ಬಿಜೆಪಿ ಸರಕಾರದ ವಿರುದ್ಧ ಭ್ರಷ್ಟಾಚಾರದ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ್ದ ಕಾಂಗ್ರೆಸ್ ಸರಕಾರ ಈಗ ತಾನೇ ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿರುವುದು ಅಣಕವೇ ಸರಿ. ದಿನಕ್ಕೊಂದರಂತೆ ಹೊಸ ಹೊಸ ಹಗರಣಗಳು ಸರಕಾರವನ್ನು ಸುತ್ತುವರಿಯುತ್ತಿವೆ. ಅದರ ಜತೆಗೇ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನಡುವಿನ ಮುಸುಕಿನ ಗುದ್ದಾಟವೂ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ.

Image

ಬುದ್ದಿವಂತರಿಗಿಂತ ಹೆಚ್ಚಾಗಿ ಹೃದಯವಂತರು ಬೇಕಾಗಿದ್ದಾರೆ...

ಅನಕ್ಷರಸ್ಥರ ಬುದ್ದಿವಂತಿಕೆ ಪ್ರಶ್ನಿಸುವವರು ಅಕ್ಷರಸ್ಥರ ಮಾನವೀಯತೆಯನ್ನು ಪ್ರಶ್ನಿಸಬೇಕಲ್ಲವೇ? ಒಂದು ಎಕ್ಸ್ ತುಣುಕು… ಅಕ್ಷರ ಕಲಿಕೆ ಒಂದು ನೈಪುಣ್ಯ ಅಥವಾ ಸುಲಭವಾಗಿ ಮಾಹಿತಿ ತಿಳಿಯುವ ಒಂದು ವಿಧಾನ ಅಥವಾ  ಜೀವನ ಕೌಶಲ್ಯದ ಸಾಧನವೇ ಹೊರತು ಅದೇ ಜ್ಞಾನವಲ್ಲ, ಅರಿವಲ್ಲ, ಮೌಲ್ಯವಲ್ಲ, ಬದುಕಲ್ಲ.

Image

ಸ್ಟೇಟಸ್ ಕತೆಗಳು (ಭಾಗ ೧೦೨೧)- ಆಕೆ

ಅವಳ ಬೇಡಿಕೆಯ ಪಟ್ಟಿ ದೊಡ್ಡದೇನಿಲ್ಲ. ತುಂಬಾ ಸಣ್ಣದು, ಹಲವು ಸಮಯದಿಂದ ಕಾದುಕೊಂಡಿರುವಂತದ್ದು. ಮನಸ್ಸಿನೊಳಗೆ ಗಟ್ಟಿಯಾಗಿ ಅದುಮಿಟ್ಟು ಹೇಳಿಕೊಳ್ಳಲಾಗದ ಮಾತುಗಳೆಲ್ಲವನ್ನು ಅವಳಿಂದು ಕಣ್ಣಲ್ಲಿ ಕಣ್ಣೀರು ತುಂಬಿಕೊಂಡು ಮಾತನಾಡುತ್ತಿದ್ದಾಳೆ. ಸರ್ ನಮ್ಮದು ಬಡ ವರ್ಗದ ಕುಟುಂಬ ಒಪ್ಪಿಕೊಳ್ಳುತ್ತೇನೆ.

Image

ನಿಷ್ಪಾಪಿ ಸಸ್ಯಗಳು (ಭಾಗ ೫೭) - ಕಾಡು ಶುಂಠಿ ಗಿಡ

ಮಳೆರಾಯನ ಬಿರುಸಿನ ನಡಿಗೆಗೆ ಧರಣಿ ದೇವಿ ಹಸಿ ಹಸಿರಾದ ಜರತಾರಿ ಸೀರೆ ನೆರಿಗೆ ಚಿಮ್ಮಿಸುತ್ತಾ ಜೂನ್ ನಡಿಗೆ ಪೂರ್ಣಗೊಳಿಸಿದಳು! ಬೇಸಿಗೆಯಲ್ಲಿ ಭೂಮಿಯ ಮೇಲೆ ಕಾಣಿಸಿಕೊಳ್ಳದೇ ಅಡಗಿದ್ದ ಕೆಲವು ಸಸ್ಯಗಳು ಧುತ್ತನೆ ಪ್ರತ್ಯಕ್ಷವಾಗಿವೆ. ಅವುಗಳಲ್ಲಿ ಲಾವಣ್ಯದಿಂದ ಓರೆಯೋರೆಯಾಗಿ ಕ್ಯಾಟ್ ವಾಕ್ ನಡೆಸುವ ಬೆಡಗಿಯಂತೆ ಕಾಣಿಸಿಕೊಳ್ಳುವ ಗಿಡವೊಂದಿದೆ..!

Image