ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅರ್ಜುನ

ಪುಸ್ತಕದ ಲೇಖಕ/ಕವಿಯ ಹೆಸರು
ಐತಿಚಂಡ ರಮೇಶ್ ಉತ್ತಪ್ಪ
ಪ್ರಕಾಶಕರು
ಅಕ್ಷರ ಮಂಟಪ ಪ್ರಕಾಶನ, ಹಂಪಿನಗರ, ಬೆಂಗಳೂರು -೫೬೦೧೦೪
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೪

ಮೈಸೂರಿನ ಇತಿಹಾಸ ಪ್ರಸಿದ್ಧ ಜಂಬೂ ಸವಾರಿಯ ನೇತೃತ್ವ ವಹಿಸಿದ್ದ ಅರ್ಜುನ ಎಂಬ ಹೆಸರಿನ ಆನೆಯ ಬಗ್ಗೆ ಮರೆಯಲಾಗದ ನೆನಪಿನ ಪುಸ್ತಕವೊಂದನ್ನು ಬರೆದಿದ್ದಾರೆ ಐತಿಚಂಡ ರಮೇಶ್ ಉತ್ತಪ್ಪ. ಅರ್ಜುನ ಎಂಬ ಆನೆಯ ಬಗ್ಗೆ ಬರೆಯುತ್ತಾ ‘ನಿನ್ನ ಮರೆಯಲೆಂತು ನಾ’ ಎಂದು ರೋಧಿಸಿದ್ದಾರೆ. ಇದಕ್ಕೆ ಎ.ಪಿ. ನಾಗೇಶ್ ಅವರ ಮುನ್ನುಡಿ ಬರಹ ಹೀಗಿದೆ; “ಎಂತಹ ಕೃತಿ..! ಓದುತ್ತಾ ಹೋದಂತೆ ಭಾವುಕನಾದೆ.. ಕಣ್ಣೀರು ತುಂಬಿ ಬಂತು..

ಸಕಲ ಜೀವಾತ್ಮಗಳಿಗೆ ಲೇಸನೇ ಬಯಸು...

ಮತ್ತೆ ಬಂದಿದೆ ಬಸವಣ್ಣನವರ ಜನುಮದಿನದಾಚರಣೆಯ ಸಂಭ್ರಮ. ಆದರೆ ಈ ಬಾರಿ ಮಾತ್ರ ವಿಶೇಷ - ವಿಶಿಷ್ಟ ಎನಿಸುತ್ತದೆ. ಏಕೆಂದರೆ ಎಂಟು ಶತಮಾನಗಳ ನಂತರ ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಈ ನೆಲದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ.

Image

ಸ್ಟೇಟಸ್ ಕತೆಗಳು (ಭಾಗ ೯೬೧)- ಅಂಕಗಳು

ಇವತ್ತು ಅಂಕಗಳೆಲ್ಲವು ಸೇರಿಕೊಂಡು ಮುಂಜಾನೆ ಸೂರ್ಯ ಹುಟ್ಟುವ ಮೊದಲೇ ಸಭೆ ಸೇರಿದ್ದವು. ಸಭೆಗೊಂದು ಕಾರಣವೂ ಇತ್ತು. ಆಗಾಗ ನೆನಪಾಗುವ ನಾವು ಈ ದಿನ ಎಲ್ಲರಿಗೂ ತುಂಬಾ ಹತ್ತಿರವಾಗುತ್ತೇವೆ. ಕೆಲವರು ನಮ್ಮನ್ನ ಕಂಡು ಸಂಭ್ರಮ ಪಡುತ್ತಾರೆ, ಕೆಲವರು ಆಶ್ಚರ್ಯ ಪಟ್ಟರೆ, ಕೆಲವರು ನೋವು ಪಡ್ತಾರೆ. ನಾವು ಎಲ್ಲರಿಗೂ ಒಂದೇ ತೆರನಾಗಿರುವುದಿಲ್ಲ.

Image

ಪಾಳು ಬಾವಿಯಲ್ಲಿ ಸಿಕ್ಕಿದ ಜೇನು (ಭಾಗ 1)

ನನಗೆ ಜೇನು ಕೀಳುತಿದ್ದುದರಿಂದ ಅನೇಕ ತೆರನಾದ ಜೀವಕ್ಕೆ ಅಪಾಯ ಇತ್ತು. ಜೇನುನೊಣಗಳು ಕಚ್ಚುವುದು, ಕಾಡುಹಂದಿಗಳು ತಿವಿಯುವುದು, ಹಾಗೂ ಪೊದೆಗಳಲ್ಲಿ ಹಾವುಗಳು..! ಮತ್ತು ಮರಹತ್ತಿ ಜೇನು ತೆಗೆಯುವಾಗ ಜೇನಿನಧಾಳಿಗೆ ಬಂದೊದಗಬಹುದಾದ ಅಪಾಯದ ಸಾದ್ಯತೆ, ಇಳಿಯಲು ಹತ್ತಲು ಮೆಟ್ಟಿಲು ಇಲ್ಲದ ಪಾಳು ಬಾವಿಗಳಲ್ಲಿ ಇಳಿಯುತ್ತಿದ್ದು.. ಹೀಗೆ ಈ ಮೇಲೆ ತಿಳಿಸಿದವುಗಳಿಂದ ಅಪಾಯ ಇದ್ದೇ ಇತ್ತು.

Image

ಮಾನವೀಯ ಮೌಲ್ಯಗಳ ಹರಿಕಾರ : ಬಸವಣ್ಣನವರು

ಬಸವಣ್ಣ ಈ ಜಗತ್ತು ಕಂಡ ಒಬ್ಬ ಶ್ರೇಷ್ಠ ಮೌಲ್ಯಾಧಾರಿತ ದಾರ್ಶನಿಕ, ಮದ್ಯಯುಗದ ಸಾಮಾಜಿಕ ಕ್ರಾಂತಿಯ ಹರಿಕಾರ. ಭಕ್ತಿ ಮತ್ತು ಅರಿವುಗಳನ್ನು ಪ್ರತಿಪಾದಿಸಿ ಜನಸಾಮಾನ್ಯರ ಭಾಷೆಯಲ್ಲೇ ಪ್ರಬಲ ಮತ್ತು ವೈಚಾರಿಕವಾಗಿರುವ ತತ್ವಗಳನ್ನು ಬಿತ್ತಿದ ಕಾರುಣಿಕ ಮಹಾಪುರುಷ.

Image

"ಮರುಳ ಮುನಿಯನ ಕಗ್ಗ”ದಲ್ಲಿ ಬದುಕಿನ ಒಳನೋಟಗಳು

ಮಾನ್ಯ ಡಿ.ವಿ. ಗುಂಡಪ್ಪನವರು ನಮಗಿತ್ತಿರುವ ಬೆಲೆಕಟ್ಟಲಾಗದ ಮುಕ್ತಕಗಳ ಎರಡು ಸಂಕಲನಗಳು: “ಮಂಕುತಿಮ್ಮನ ಕಗ್ಗ” ಮತ್ತು “ಮರುಳ ಮುನಿಯನ ಕಗ್ಗ". ಎರಡನೆಯದು ಅವರ ನಿಧನಾನಂತರ ಅವರ ಆಪ್ತರ ಮುತುವರ್ಜಿಯಿಂದಾಗಿ 1984ರಲ್ಲಿ ಪ್ರಕಟವಾಯಿತು. ಇದರಲ್ಲಿಯೂ ಅವರ ಅಗಾಧ ಅಧ್ಯಯನ ಹಾಗೂ ಜೀವನಾನುಭವ ಭಟ್ಟಿಯಿಳಿಸಿ, ಪ್ರಚಂಡ ಪ್ರತಿಭೆಯ ಬಲದಿಂದ ರಚಿಸಿದ ಮುಕ್ತಕಗಳೇ ತುಂಬಿವೆ. ಇಲ್ಲಿನ 824 ಮುಕ್ತಕಗಳಲ್ಲಿ ನಮ್ಮ ಬದುಕಿನ ಬಗ್ಗೆ ಹೊಸ ಚಿಂತನೆಗಳನ್ನೂ ಒಳನೋಟಗಳನ್ನೂ ನೀಡುವ ಕೆಲವು ಮುಕ್ತಕಗಳನ್ನು ಪರಶೀಲಿಸೋಣ.

ಬೇವು ಬೆಲ್ಲಗಳುಂಡೆ ದಿನದಿನದ ನಮ್ಮೂಟ / ಪೂರ್ವಕರ್ಮದ ಫಲಿತಶೇಷದಿಂದ ಕಹಿ //
ದೈವಪ್ರಸಾದದಿಂದ ಸಿಹಿಯೀ ದ್ವಂದ್ವದಲಿ / ಆವೇಶವೇತಕೋ - ಮರುಳ ಮುನಿಯ //

Image

ಕಿಡ್ನಿಯಲ್ಲಿ ಕಲ್ಲು ಆಗದಂತೆ ನಿರ್ವಹಣೆ ಹೇಗೆ?

ಕಿಡ್ನಿ ಸ್ಟೋನ್ ಅಥವಾ ಮೂತ್ರಪಿಂಡದಲ್ಲಿ ಕಲ್ಲಾಗುವುದು ಈಗ ಬಹಳ ಸಾಮಾನ್ಯ ಮಾತು. ಇಂದಿನ ಯಾಂತ್ರಿಕ ಜಗತ್ತಿನಲ್ಲಿ ಯಾರಿಗೂ ತಮ್ಮ ಆರೋಗ್ಯವನ್ನು ಗಮನಿಸುವುದಕ್ಕೆ ಪುರುಸೊತ್ತೇ ಇಲ್ಲ. ಯುವಕರಾಗಿರುವಾಗ ಬಿಡುವಿಲ್ಲ, ವಯಸ್ಸು ಕಳೆದು ಆರೋಗ್ಯ ಸಮಸ್ಯೆ ಪ್ರಾರಂಭವಾದಾಗ ಮೊದಲೇ ಜಾಗೃತೆ ಮಾಡಬೇಕಿತ್ತು ಅನ್ನೋ ಯೋಚನೆ ಸಾಮಾನ್ಯ. ಕಿಡ್ನಿ (ಮೂತ್ರ ಕೋಶ) ನಮ್ಮ ದೇಹದ ಬಹುಮುಖ್ಯ ಅಂಗ.

Image

ವಿವಾದದ ರಾಜ ಪಿತ್ರೋಡಾ

ಸಾಗರೋತ್ತರ ಕಾಂಗ್ರೆಸ್ ನ ಅಧ್ಯಕ್ಷ ಮತ್ತು ರಾಹುಲ್ ಗಾಂಧಿಯ ಪರಮಾಪ್ತ ಸ್ಯಾಮ್ ಪಿತ್ರೋಡಾ ವಿವಾದಗಳ ರಾಜನಾಗಿ ಮೂಡಿಬರುತ್ತಿದ್ದಾರೆ. ಕೆಲದಿನಗಳ ಹಿಂದಷ್ಟೇ ಅಮೇರಿಕದ ಪಿತ್ರಾರ್ಜಿತ ತೆರಿಗೆ ವ್ಯವಸ್ಥೆಯನ್ನೂ ಭಾರತದಲ್ಲೂ ಜಾರಿಗೊಳಿಸಬೇಕೆಂಬ ರೀತಿಯಲ್ಲಿ ಮಾತನಾಡಿ ವಿವಾದ ಸೃಷ್ಟಿಸಿದ್ದ ಪಿತ್ರೋಡಾ ಇದೀಗ ಭಾರತೀಯರನ್ನು ಜನಾಂಗೀಯ ಮಾದರಿಯಲ್ಲಿ ವಿಭಜಿಸಿ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ.

Image